ಧನ್ಯನಾದೆನು ಗುರು ನಿಮ್ಮಯ ದಯದೀ ಪ
ಹಿಂಗಿತು ಮುನ್ನಿನಂಗವದೋಷವು
ಮಂಗಲವಾಗಲು ಇಂಗಿತ ಸುಖದಾ 1
ಸಾರಾಸಾರ ವಿಚಾರದ ತತ್ವದ
ದಾರಿಯ ಸುಜನಕ ದೋರುತ ಕರುಣದಿ
ಪ್ರೇರಿಸಿ ಸುಮತಿಯ ಶ್ರೀ ರಘುಪತಿ ಸಾ
ಕಾರವ ತೋರಿಸಿ ತಾರಿಸಲಾಗಿ 2
ಕರುಣಿ ಅಭಿನವ ತೀರ್ಥ ಮುನಿಕರ
ವಾರಿಧಿ ಶ್ರೀ ಸತ್ಯ ಪೂರಣ ಚಂದ್ರರ
ಸಾರಲು ಹೋಯಿತು ಮೂರು ತಾಪಗಳು
ದೋರಲು ಕಂದಗ ಪಾರದ ಸುಖವು 3