ಏನು ವಿನೋದವಿದು ನಮ್ಮ
ಶ್ರೀ ನಿಲಯನ ಗುಣಗಾನ ಮಾಡುವುದು ಪ
ಮಾನಸ ಮಂದಿರದಲಿ ಶ್ರೀ ಕೃಷ್ಣನ
ಕಾಣಲು ಬಯಸುವ ಜನಕೆ ವಿಧಾನ ಅ.ಪ
ಶಾಸ್ತ್ರ ವಿಚಾರ ಶ್ರೋತೃ ವಿಹಾರ
ಶ್ರೋತೃ ಜನಕೆ ಇದು ಪರಮಾಧಾರ1
ಶ್ರೀಶನ ನೋಟ ಭೂಸುರ ಕೂಟ
ದಾಸ ಜನಕೆ ಇದು ಭೂವೈಕುಂಠ 2
ವೇದ ಸುಘೋಷ ವಾದ್ಯದ ಹರ್ಷ
ಸಾಧುಜನಕೆ ಇದು ಬಲು ಸಂತೋಷ 3
ಸಿಕ್ಕಿತು ಕಾಂತಿ ಹೊಕ್ಕಿತು ಶಾಂತಿ
ಭಕ್ತ ಪ್ರಸನ್ನನು ಬಿಡಿಸಿದ ಭ್ರಾಂತಿ4