ಎನಗೊಬ್ಬರು ಇಲ್ಲಾ ನೋಡಿ
ಸಿರಿನಲ್ಲ ಪ
ಮನದಿ ಯೋಚಿಸಲು ತಂದೆ ತಾಯಿಸತಿ
ತನಯ ಸಹೋದರ ಮಿತ್ರರೆಂಬುವರು ಅ.ಪ
ಒಬ್ಬರಾದರೂ ಇವರಲಿ ಇದ್ದರೆ
ಹಬ್ಬವಾಗಿ ಸಂತೋಷ ಪುಟ್ಟುವುದು
ತಬ್ಬಲಿಯಾದೆನು ಸಂಸ್ಮರಣವೆಂಬ
ಹೆಬ್ಬುಲಿಯಕೈಗೆ ಸಿಕ್ಕಿರುವೆನು ನಾಂ1
ಯಾರಿಗೆ ಮೊರೆಯಿಡಲೀ ಕಷ್ಟ ಕಿವಿ-
ಯಾರ ಕೇಳಿ ಪರಿಹರಿಸುವರಾರು 2
ರಾಯ ತಂದೆ ಧರ್ಮವೆ ಸೋದರರು
ಸತಿ ನೋಯಿಸದಿರುವುದು ಮಿತ್ರನು ಇವರೊಳು 3
ಈ ಬಂಧುಗಳುಳ್ಳವಗೆ ನಿರುತವು ಮ-
ಹಾಭಾಗ್ಯವುಯಿಹಪರ ಸೌಖ್ಯವು
ನಾ ಭ್ರಾಂತಿಯೊಳೆಲ್ಲೆಲ್ಲಿ ತಿರುಗಿದರು
ವೋ ಭಗವಂತ ಮಹಂತಾನಂತನೆ 4
ಹೊರಗಿನವರ ಬಾಲ್ಯದಿ ಕಾಣದೆ ಕರೆ
ಗುರುರಾಮವಿಠಲ ಹೊರವೊಳಗೂನೀ
ನಿರುವೆ ಕರುಣಿಸೈ ಸರ್ವವು ನೀನೆ 5