ಆಡುವ ಬನ್ನಿರಿ ಬಾಲಕರೆ ಪ
ರೂಢಿಗಚ್ಚರಿಯಾಗಿ ಬಲುಲೀಲೆಗಳಿಂ ಅ.ಪ
ಜನನ ಮರಣವÉಂಬ ಚೆಂಡು ಬುಗುರಿಯಿಂ
ಮನದ ವೃತ್ತಿಗಳೆಂಬ ಗೋಲಿಗಜ್ಜುಗದಿಂ
ಜನಸಂಘವೆಂಬುವ ಚಿಳ್ಳೆಕೋಲುಗಳಿಂ
ಅನುದಿನ ಭ್ರಾಂತಿಯೆಂಬ ಕವಣೆ ಕಲ್ಲುಗಳಿಂ 1
ಏಳುತಲೀ ಮುಖ ತೊಳೆದು ನೀವೆಲ್ಲ
ಕರ್ಮ ಭಕ್ಷಗಳೆಲ್ಲ
ಲೀಲೆಯಿಂ ಮೆಲ್ಲುತಲಿದರೊಳು ಬಲ್ಲ
ಶೀಲ ಸದ್ಗುಣವುಳ್ಳ ಬಾಲಕರೆಲ್ಲ 2
ಶ್ರವಣ ಮನನವೆಂಬ ಸಾಧನೆಯಿಂದ
ಭವಹರ ಗುರುರಾಮ ವಿಠಲ ಮುಕುಂದ 3