ದೀನರಕ್ಷಕ ದೈತ್ಯ ಶಿಕ್ಷಕ ಏನ ಪೇಳಲಿ ಎಂತು ತಾಳಲಿ ಪ.
ಹಗಲು ರಾತ್ರೆಯು ಹಲವು ಚಿಂತೆಯು
ದ್ವಿಗುಣವಾಯಿತು ಧೈರ್ಯ ಕುಂದಿತು
ನಗುವ ವಿಧಿಯನು ನೆನೆಯದಾಸೆಯ
ಬಿಗುವಿನಿಂದ ಬೆಂಡಾದೆ ಕೇಶವ 1
ಸಂದ ಕಾಲವು ಸುಮ್ಮಗ್ಹೋಯಿತು
ಮುಂದಿನವಧಿಯ ಮರವು ಮುಸುಕಿತು
ಸುಂದರ ಸ್ಮಿತಾನಂದ ಮೂರುತಿ
ಇಂದಿರೇಶ ನೀ ಎಂದು ತೋರುತಿ 2
ಗಣನೆಯಿಲ್ಲದಗಾಧ ತಪ್ಪನು
ಎಣಿಸಲಾರೆನು ಎಂತು ನುಡಿವೆನು
ವನಜನಾಭ ನೀನಾವ ಯುಕ್ತಿಯ
ನೆನಸಿ ಸಲಹುವೆ ಎಂಬುದರಿಯೆನು 3
ಅಂತವಿಲ್ಲದಾ ಚಿಂತೆ ಎನ್ನನು
ಭ್ರಾಂತಿಗೊಳಿಪುದು ಭಂಡು ಮಾಳ್ಪುದು
ಕಂತುಜನಕ ಭೂಕಾಂತ ಕರುಣಿಸು
ಸ್ವಾಂತರಂಗದಿ ನಿಂತು ನಿಯಮಿಸು 4
ನಿತ್ಯ ಸಲಹುವ-
ನೆಂಬ ಬಿರುದ ನಾನರಿತು ನುಡಿದೆನು
ಶಂಭುವಂದ್ಯ ಶೇಷಾದ್ರಿನಾಥ ಪಾ-
ದಾಂಬುಜಾಶ್ರಿತನೆನಿಸು ಎನ್ನನು 5