ಏನ ಮಾಡಲಿ ಎನ್ನ ರೋಗಕೆ ರಾಮ
ಧ್ಯಾನದಮೃತವುಂಡು ಪೋಗ ಬೇಕಲ್ಲದೆ ಪ
ಗೂಡಿನೊಳಗೆ ಜರೆ ಮುತ್ತಿತು ಅದಕೆ ಬಲ
ಗೂಡಿ ರೋಗವು ಮತ್ತೆ ಪುಟ್ಟಿತು ಕಾಡಿನೌಷಧಿಯ
ನಿತ್ಯ ಮಾಡುವ ಜಪತಪ ನಿಂತಿತು 1
ಯಾರಾರೇನೆಂದುದೆಲ್ಲವ ಮಾಚಿತು ಅದು
ನಡೆಯೆಕಾಲುಬತ್ತಿತು
ಶರೀರದೊಳಗೆ ಕ್ಷೀಣವಾಯಿತು 2
ವಾಂತಿ ಭ್ರಾಂತಿಗಳೆರಡಾಯಿತು ರೋಗ
ಕಮಲಕಂಡಿತು ಕಾಲ
ಬಂತೊ ಎಂಬಂತೆ ಮನವಾಯಿತು 3
ಹಿಂದೆ ಮಾಡಿದ ಪಾಪ ಬಂದಿತು ಈಗ
ಮನದಿಹಂಬಲವಾಯಿತು ಇನ್ನು
ಎಂದನೆಂದರೆ ದನಿ ಕುಂದಿತು 4
ಕಾಮನಯ್ಯನ ಚಿಂತೆ ಬಂದಿತು ರೋಗ
ನಾಮಸ್ಮರಣೆಯಿಂದ ಹೋಯಿತು ಕ್ಷೇಮ ಕುಶಲಕೆಲ್ಲ
ಭೀಮನ ಕೋಣೆ ಲಕ್ಷ್ಮೀರಮಣನಪ್ಪಣೆಯಿದ್ದಂತಾಯಿತು 5