ಸಂತರೆನಬಹುದುದಯ್ಯ ಇಂತಿವರಿಗೆ
ಅಂತರಂಗಲಿ ಹರಿಯ ಏಕಾಂತ ಭಕ್ತರಿಗೆ ಧ್ರುವ
ಸುಖಕ ಮೈಯವ ಮರಿಯಾ ದು:ಖಗಳಿದಿರಿಡೆ ನೋಯಾ
ಚಕಿತನಾಗನು ಕುಮತಿ ವಿಕಳ ನುಡಿಗೆ ಪ್ರಕಟಸ್ತೋತ್ರಕ ಹಿಗ್ಗ
ನಿರಹಂಕೃತಿಯನ್ನುಳ್ಳರಿಗೆ 1
ಕ್ಲೇಶ ಕರ್ಮಗಳಿರಲು
ಈ ಶಿರಿಯ ಸುಖದ ಮನದಾಶೆವಿರಲು
ವಾಸುದೇವನ ಪದ ಧ್ಯಾಸದನುಭವ ದಿಟ
ವೇಶ ಹರಿ ಸಂಸಾರ ಲೇಶದೋರ್ವರಿಗೆ 2
ಪರಮ ಭಾಗವತೆನಿಸಿ ಪರರ ಮನಗಳಿಗ್ಹೋಗಿ
ಕರ ವಿಕರ ಪರಸತಿಯರಿಗೆ ಕೂರವು
ಪರನಿಂದೆಗೆ ಮೂಕ ಪರವಶಾದರಿಗೆ 3
ಹರಿಯ ನಾಮವ ನೆನಿದು ಹರಿದು ಕೀರ್ತನೆಯಲ್ಲಿ
ಹರುಷಗುಡಿಗಟ್ಟಿ ತನುಮರದು ನಿಂದು
ಬರುದೆ ಪ್ರೇಮಾಂಜಲಿಗೆ ಭರಿತ ಲೋಚನನಾಗಿ
ತರಿಸಿ ತಾರಿಸುವಂದ್ಯನ ಕರುಣವಂತರಿಗೆ 4
ಇಂತು ದುರ್ಗಮವಿರಲು ಸಂತರಾವು ನೀವೆಂದು
ಸಿರಿತರವ ಹೋಗಿ ಜನ ಸಿಂತರಿಸುವಾ
ಭ್ರಾಂತವೇಷಕ್ಕೆ ಸಿರಿಕಾಂತ ಮೆಚ್ಚನಲ್ಲಾ
ಶಾಂತಗುಣ ಮಹಿಪತಿ ಸ್ವಂತಗೆಂದಾ 5