ಸುದಯನೆ ಮಲಗಿದ್ಯಾ ತಂದೆ ಗೋವಿಂದ
ಇದು ಏನು ಮಾಡಿದ್ಯೋ ಭಕುತರಾನಂದ ಪ
ಗಳಿಗೆಬಿಡದೆ ಹೊನ್ನು ಅಳೆದಳೆದು ಬೇಸತ್ತು
ಮಲಗಿದಿ ಸುಮ್ಮನೆ ಕಲಿಜನರ ಗತಿಯೇನು 1
ಮಹಂತರ ಅಧಿಕಾರ ಭ್ರಾಂತರೊಶಕೆ ನೀಡಿ
ಚಿಂತೆ ಪರಹಿತ ಮರೆದು ಸಂತಸದ್ಹಾವಿನ ಮೇಲೆ 2
ಪ್ರತಿ ವರುಷದುತ್ಸವಕೆ ಅತಿಭಕುತಲಿ ಬರುವ
ಸುತರೊಳು ದಯತಪ್ಪಿ ಅತಿ ಆನಂದದಲಿ 3
ರೂಢಿಯ ಮೇಲೆ ಗಾಢನಿದ್ರೆಯೊಳು 4
ಕಾಮಿತಜನರ ಸುರಕಾಮಧೇನಲ್ಲವೆ ನೀನು
ಭೂಮಿಪಾಲಿಸು ಏಳು ಸ್ವಾಮಿ ಶ್ರೀರಾಮಯ್ಯ 5