ಬರಿದೆ ಬಯಸಲು ಬರುವುದೇನೆಲೆ
ಮರುಳು ಯೋಚನೆ ಬಿಡೆಲೆ ಮನಸೆ ಪ
ಹರಿಯ ಬಳಿಯಲಿ ಪಡೆದಷ್ಟಲ್ಲದೆ
ದೊರಕದೆಂದಿಗೆ ಬೇರೆ ತಾನು ಅ.ಪ
ಶಾಂತಿತಾಳತಿಭ್ರಾಂತಿ ನೀಗಿ
ಸಂತಜನ ಕೃಪಾಪಾತ್ರನಾಗಿ ಕರು
ಣಾಂತರಂಗ ಸಿರಿಕಾಂತನಂಘ್ರಿಯ
ಅಂತರಂಗದಿ ಭಜಿಸದೆ 1
ಶಮೆಯಗೂಡಿಹ್ಯ ಭ್ರಮೆಯನಳಿದು
ಸುಮನದೋಳಿರ್ದು ಕ್ರಮದಿ ಅನುದಿನ
ವಿಮಲ ಹರಿಕಥೆ ಶ್ರವಣದಿಂ
ರಮಾರಮಣನಂಘ್ರಿಗೆ ನಮಿಸದೆ 2
ದಮೆಯ ಪಡೆದು ದಾಸನಾಗಿ
ವಿಮಲನಾಮದ ಬಲವಗಳಿಸಿ
ಅಮಿತಮಹಿಮ ಶ್ರೀರಾಮನಂಘ್ರಿ
ಕಮಲವೊಲಿಸಿ ಭವತುಳಿಯದೆ 3