ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆರು ಬಲ್ಲರು ಹರಿಹರಾದಿಗಳ ಮಹಿಮೆಯನು ಪ ವಾರಿಜೋದ್ಭವ ಸುರೇಂದ್ರಾದಿಗಳಿಗಳವಲ್ಲಅ ಶೌರಿ 1 ಬಲಿಚಕ್ರವರ್ತಿ ಭಕ್ತಿಗೆ ಮೆಚ್ಚಿ ಅವನ ಬಾ-ಗಿಲ ಕಾಯ್ದನಚ್ಯುತನು ಅನುಗಾಲದಿಬಲು ಭುಜನು ಬಾಣಾಸುರನ ಗೃಹ ದ್ವಾರವನುಬಳಸಿ ಕಾಯ್ದನು ಹರನು ವರವ ತಾನಿತ್ತು 2 ಭೋಗಿಶಯನನು ಆಗಿ ಭೋಗಿಭೂಷಣನಾಗಿವಾಗೀಶನಾಗಿ ಸೃಷ್ಟಿಸ್ಥಿತಿಲಯಕ್ಕಾಗು ಕಾರಣ ಕಾರ್ಯ ಕರ್ಮಾದಿ ರೂಪಕ್ಕೆಕಾಗಿನೆಲೆಯಾದಿಕೇಶವನ ಮಹಿಮೆಯನು 3
--------------
ಕನಕದಾಸ
ಯೋಗನಿದ್ರೆಯ ಮಾಡುತಿಹನು ಕ್ಷೀರಸಾಗರಮಧ್ಯದಿ ಭೋಗಿಶಯನನು ಪಏಳು ಸುತ್ತಿನ ಪುರವಿದನೂ ಎಂಟುಪಾಲಾಗಿ ರಮಣಿ ತಾ ಕಾದಿರಲದನುಬಾಲಕನೊಬ್ಬ ಪಾಲಿಪನೂ ಮಂತ್ರಿನಾಲುವರೊಪ್ಪಿರೆ ಶ್ರೀಹರಿ ತಾನು 1ಕಾಲಜ್ಞಾನಿಗಳೈವರಿಹರೂ ಅವರೂಳಿಗಕೈವರು ಕಾದುಕೊಂಡಿಹರುವೇಳೆ ವೇಳೆಯ ಬಲ್ಲ ಭಟರು ತಮ್ಮಊಳಿಗವನು ಬಂದು ಪೇಳುತ್ತಲಿಹರು 2ಸಕಲ ಲೋಕಂಗಳ ಸೃಜಿಸಿ ಅಲ್ಲಿ ಸಕಲ ಲೋಕೇಶನು ತಾನೆ ವಿಶ್ರಮಿಸಿಸಕಲವ ತನ್ನೊಳಗಿರಿಸಿುೀಗಮುಕುತಿದಾಯಕ ವೆಂಕಟೇಶ ಶ್ರೀ ವೆರಸಿ 3ಕಂ||ಹರಿ ಪವಡಿಸೆ ಹರೆದೋಲಗಸುರರೆಲ್ಲರ್ ಸ್ಥಾನಕೈದಲಾನಂದಾಂಬುಧಿತೆರೆುಳಿದು ತಿರುಪತೀಶನಚರಣವೆ ತಾನಾಗಿ ನಿಂದುದೆನ್ನೆದೆಮನೆಯೊಳ್ ಓಂ ವೇದವೇದ್ಯಾಯ ನಮಃ
--------------
ತಿಮ್ಮಪ್ಪದಾಸರು