ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿನ್ನ ಮಹಿಮೆಗಿಂಥವರು ಹೊಣೆಯೆ ? ಪ ಚಿನ್ಮಯನೆ ಸಕಲಭುವನಾಧಾರವೆಂಬುದನುಬಣ್ಣಿಸಲು ಎನ್ನಳವೆ ಪನ್ನಗೇಂದ್ರನು ಹೊಣೆಯೆ ? ಅ ವಿಧಿ ಕೌಸ್ತುಭ ರತ್ನವರ ಪೀತ ವಸನ ಕ್ಷೀರಾಬ್ಧಿ ಹೊಣೆಯೊಶರಣರಿಚ್ಛೆಯಲಿ ನೀನಿದ್ದುದಕೆ ದ್ರೌಪದಿಯುಕರಿರಾಜ ಶಂಭು ಅಂಬರೀಷ ಹೊಣೆಯೊಕರುಣಿಯು ಉದಾರಿ ನೀನೆಂಬುದಕೆ ಧ್ರುವರಾಯಮರುತಸುತ ಸಾಂಧೀಪ ಹೊಣೆಯೊ ಕೃಷ್ಣ 1 ಸುಲಭ ಭಕುತರ ಕಾಯ್ವನೆಂಬುದಕ್ಕೆಲೊ ದೇವಫಲುಗುಣನು ವಿದುರ ಅಕ್ರೂರ ಹೊಣೆಯೊಛಲದಂಕನೆಂಬುದಕೆ ಬಾಣನು ಹಿರಣ್ಯಕನುಜಲಧಿ ದಶಮುಖ ಕಾರ್ತವೀರ್ಯ ಹೊಣೆಯೊಒಲಿಸಿ ನಿನ್ನನು ತುತಿಸಿ ಮುಕುತಿಯನು ಪಡೆದುದಕೆಸಲೆ ಶ್ರುತಿಯು ಗಿರಿಜೆ ಅಜಮಿಳನು ಹೊಣೆಯೊನಳಿನಾಕ್ಷ ಸತ್ತ್ವಗುಣ ನಿನಗೆ ಉಂಟೆಂಬುದಕೆಸಲಿಲಜೋದ್ಭವ ಭೃಗುಮುನೀಂದ್ರ ಹೊಣೆಯೊ 2 ವಾತ ಸತ್ತ್ವಗುಣ ಹೊಣೆಯೊಶ್ರೀಕಾಂತ ನೀನಿತ್ತ ವರವು ಸ್ಥಿರವೆಂಬುದಕೆನಾಕೇಶಜಿತನ ಪಿತನನುಜ ಹೊಣೆಯೊಲೋಕದೊಳು ಕಾಗಿನೆಲೆಯಾದಿಕೇಶವ ಭಕ್ತಸಾಕಾರನೆಂಬುದಕೆ ಸಕಲ ಭುವನವೆ ಹೊಣೆಯೊ 3
--------------
ಕನಕದಾಸ
ಹರಿ ಪರಮಪುರುಷ ಮಿಕ್ಕಾಮರರೆಲ್ಲ ಅಚ್ಯುತನ ಚರಣಸೇವಕರೆಂದು ನೆರೆ ನಂಬಿರೊ ಪ. ಒಂದುಮನೆಯೊಳೆರೆಡು ಕೇಣಿಯಲ್ಲಿಪ್ಪುವರ ಒಂದಾದರೆಂದು ಬಗೆಯೆ ಬುಧರಿಗುಚಿತವೆ ಇಂದಿರೇಶನು ಭಾಗಭಾಗವ ತಾಳಿ ಒಂದು ಪ್ರತಿಮೆಯೊಳಿದ್ದರೊಂದಾಹರೆ 1 ಒಬ್ಬನಿಂದಲಿ ಸಾಯನೆಂಬೋ ರಕ್ಕಸರೊಲ್ಲರೊಬ್ಬರ ರ್ಧಭಾಗವ ತಾಳಿ ಐತಂದು ಕೊಬ್ಬಮುರಿವರು ಖಳನ ಹರಿಹರರು ತಾವೀಗ ಒಬ್ಬನಿಂದಲಿ ದನುಜನೆಂತಳಿದನು 2 ನರಸಿಂಹನಂತೆ ಕೃಷ್ಣನು ತನ್ನ ಲೀಲೆಯಲಿ ಹರನಂದವ ತಾಳಿ ಗುಹನ ಗೆಲಿದನು ಗಡಾ ಪರಿಪರಿ ವೇಷದಲಿ ನಟನಂತೆ ನಲಿವ ದೇ- ವರದೇವನಿರವನಾವನು ಬಲ್ಲನು 3 ಆವನಂಘ್ರಿಯ ತೀರ್ಥ ಗಂಗೆಯಾದಳು ಭಸ್ಮ ದÉೀವರಿಪುವನು ಗೆಲಿದ ಭೃಗುಮುನೀಂದ್ರನು ಆವವನು ಮೂರ್ಲೋಕದೊಳಧಿಕನೆಂದೊರೆದ ಆ ವಿಷ್ಣು ಹಯವದನ ಹರಿಯಂತೆ 4
--------------
ವಾದಿರಾಜ