ಒಟ್ಟು 9 ಕಡೆಗಳಲ್ಲಿ , 8 ದಾಸರು , 9 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕುಮಾರ ಗುಹಗೆ ಎಸಗೀ ಪ ವಾಹನನಿಗೆ ಧೀರಗೆ ಜಯವೆಂದು ಆರತಿ ಅ.ಪ ವೇದೋಕ್ತ ಮಂತ್ರದಿಂದ ಶರ್ಕರ ಮೊದ-ಲಾದ ದ್ರವ್ಯದಿಂದ ಸಾಧು ವಂದಿತನಿಗೆ ಭೂದೇವರಭಿಷೇಕ ಸಾದರದಲಿ ಮಾಡಿ ಮೋದದಿ ಜಯವೆಂದು ||ಆರತಿ|| 1 ಕಲಶೋದಕ ಮಂತ್ರಿಸಿ ಭೂಸುರರೆಲ್ಲ ನಲವಿಂದಲಭಿಷೇಕಿಸಿ ತಲೆಗೆ ಗಂಧಾಕ್ಷತೆ ತುಲಸಿ ಪತ್ರವು ವುಷ್ಪಗಳ ಮಾಲೆ ಇರಿಸುತ್ತ ನಲವಿಂದೆ ಜಯವೆಂದು ||ಆರತಿ|| 2 ಓಗರ ಜಂ- ಬೂಫಲ ಭಕ್ಷ್ಯವ ಶ್ರೀಪತಿ ಸಖಗೆ ಸ-ಮಾರ್ಪಿಸಿ ಜಯವೆಂದು ||ಆರತಿ|| 3 ಮೂರು ಪ್ರದಕ್ಷಿಣೆಯ ಭಕ್ತಿಯೊಳ್ ನಮ-ಸ್ಕಾರವ ಪ್ರಾರ್ಥನೆಯ ಮಾರಾರಿಸುತಗೆ ಅ-ಪಾರ ಮಹಿಮನಿಗೆ ಹಾರುವರೆಸೆಗುತೊ-ಯ್ಯಾರದಿ ಜಯವೆಂದು ||ಆರತಿ|| 4 ಮಂಗಳ ಶರಜನಿಗೇ ಗುಹಗೆ ಜಯ ಮಂಗಲ ಸ್ಕಂಧನಿಗೇ ಮಂಗಲ ಪಾವಂಜೆ ವಾಸ ಷಡ್ಶಿರನಿಗೆ ಮಂಗಲದಾಸರ ಕಾವಗೆ ಜಯವೆಂದು ||ಆರತಿ|| 5
--------------
ಬೆಳ್ಳೆ ದಾಸಪ್ಪಯ್ಯ
ಕೃಷ್ಣ ಕೃಷ್ಣ ಬಾಂಧವ ಸೃಷ್ಟ್ಯಾದಷ್ಟ ಕರ್ತ ಭವ ನಷ್ಟವಗೈಸೋದು ಅಷ್ಟರೊಳಗೆ ಹರಿ ವಿಷ್ಣು ಸರ್ವೋತ್ತಮ ಇಷ್ಟೆ ಪೇಳುವದಕೆ ನಿಷ್ಟಿಯನೀಯೊ ಪ ಈ ಸುದಿನವಾರಭ್ಯ ಕ್ಲೇಶದೊಳಗೆ ಬಿದ್ದಾ ಯಾಸ ಬಡುತಲಿದ್ದೆ ಲೇಶವಾದರು ಸುಖ ಲೇಶಗಾಣದಿರಲು ಏಸು ಜನ್ಮದ ಪುಣ್ಯ ಸೂಸಿತೋ ನಿನ್ನಯ ದರುಶನ ಲಾಭವಾಗೆ ದೇಶದೊಳಗೆ ನಿನ್ನ ದಾಸರ ದಾಸನೆನಿಸಿಕೊಂಬ ಈ ಸುಲಭ ವೊಂದಿಸನುದಿನ ದು ರಾಶೆಯ ಬಿಡಿಸೆಂದು ನಾಶರಹಿತ ಗುಣರಾಶಿ ರಮೇಶ 1 ವೇದಪರಾಯಣ ಸಾಧುಗಳರಸಾ ವಿ ನೋದಿಗಾ ಪಳ್ಳಿಗನೆ ಆದಿದೈವವೆ ತೀರ್ಥ ಪಾದ ಜಗತ್ಯೆಂತ ಭೇದಾ ಶೃಂಗಾರ ವೇಣು ನಾದ ಸನಕಾದಿ ಮುನಿವಂದಿತಾ ಮಾಧವ ಮಹಿಧರ ಯಾದವ ಕರುಣ ಪ ಯೋಧದಿ ಎನ್ನಪರಾಧವನೆಣಿಸದೆ ಸಾಧನ ಕೆಡಿಸುವ ಕ್ರೋಧವ ಬಿಡಿಸಾರಾಧನೆ ತಿಳಿಯದು ಭೂದೇವರೊಡಿಯಾ 2 ಕರವಾ ಬಿಡದಿರೆನ್ನ ಕರಣ ಶುದ್ಧವ ಮಾಡು ಕರದ ಮಾತಿಗೆ ಭಯಂಕರವ ಓಡಿಸಿ ಮಂದ ಕರಿಯ ಕಾಯಿದ ಶುಭಕರ ಕಾಳಿ ಮಥನ ಸಂ ನಿತ್ಯ ಕರ ಪತಿ ಕುಲ ರತುನಾ ಕರಕೆ ಉಡುಪ ಮಕರಧ್ವಜಪಿತ ತೋರಿಸೊ ಭಜಕರರೊಳಗಿಡುವುದು 3
--------------
ವಿಜಯದಾಸ
ಗುರು ವಿಜಯರಾಯರ ಪದಸರಸಿಜ ಸೇವಿಪ ನರನೇ ಜಗನ್ಮಾನ್ಯ ಧನ್ಯಾ ಪ ದುರಿತ ತರಿಯಲವತರಿಸಿ ನರಹರಿಯ ಪರಿಚರಿಸುವ ನಿಜ ಅ.ಪ ಭೂಕಾಂತನ ಬಹು ಬಾಧಿಗೆ ತಾಳದೆಈ ಕರುಣಿಕನ ತನವಾಬೇಕಿಲ್ಲೆಂದರು ತಾಕಿಕದ ಸ್ಥಿತಿಸಾಕುವ ಶ್ರೀ ದೇವಾಶ್ರೀ ಕಳತ್ರನ ಕೃಪಾ ಕಟಾಕ್ಷದಿಂ-ದೇಕ ಮನೋಭಾವಾಸ್ವೀಕರಿಸುತ ಪರಲೋಕ ಸಾಧನವನೀ ಕರಿಸಿದರಾನೇಕ ದುರ್ವಿಷಯವ 1 ಇಂತುಪಯ ನಿಶ್ಚಿಂತನಾಗಿ ಗುರು-ವಂತರಾತ್ಮ ಹರಿಯಾಸ್ವಾಂತತಿ ಭಜಿಸುತ ಚಿಂತವರೇವಲಿ ಹನು-ಮಂತನ ಪರಮದಯಾಎಂತು ಪೇಳಲಿ ಬಲು ಶಾಂತರಾಗಿ ಶ್ರೀ-ಕಾಂತನ ಪರಿಪರಿಯಾಅಂತರಂಗದೊಳನುಭವಿಸುತ ಗುಣ-ವಂತರಿವರಿಗೆ ದಿಗವಂತದಿ ಸರಿಯಾ 2 ಲೇಸು ಜ್ಞಾನವ ಬಯಸುವ ಜನರೋಲ್‍ಆ ಸೋಮಪುರದಲಿವಾಸವಾದ ರಾಮದಾಸರಿಂದುಪ-ದೇಶವ ಕೊಳ್ಳುತಲೀಹೇಸಿ ವಿಷಯದಿಂದೋಷಿಯಾದ ಶ್ರೀನಿ-ವಾಸರಾಯರಲ್ಲೀ ಯೇಸು ಜನ್ಮದ ಸುಕೃತವು ಇವರನು ನಿ-ರ್ದೊಷಿಗಳನು ಗೈದಿಸಿದರು ತ್ವರಿತದಲಿ 3 ವೇದ ವೇದ್ಯನ ಗುಣಂಗಳ ಪದ ಸು-ಳಾದಿ ಪ್ರಮೇಯವನೂ ಸಾದರದಿಂದಲಿ ಭೂದೇವರಿಗೆ ಬೋಧಿಸಿ ತತ್ವವನೂಸಾಧಿಸಿ ಭೇದವ ಜೀವೇಶ್ವರ ಮತಭೇದಿಸಿ ವಾದಿಯನೂಆದಿ ವ್ಯಾಧಿ ಅನಾದಿ ಭೂತಗಣ ಭೇದಿಸಿ ಮಾಡಿ ಪರೋದರ ಗತವನೂ 4 ಪತಿ ಅಚಲ ವ-ಸತಿಯನೆ ಮಾಡೀದಾಕೃತಿ ರಮಣನ ಒಲಿಸುತನಶನ ವ್ರತ ಪಥದಿಂದಾಗಾಧಾನುತಿಸುತ ಕಮಲಾಪತಿ ನರಸಾರಥಿ ಪ್ರತಿಮೆಯಪ್ರತಿಷ್ಠಿಯ ಹಿತದಿಂದಗೈದಾ 5
--------------
ಕಮಲಪತಿವಿಠ್ಠಲರು
ದೇವರ ಪೂಜೆಯ ಮಾಡಿರೋ ಮಾಡಿ ಬಿಟ್ಟರು ಬಿಡಿ ಭೂದೇವರ ಪೂಜೆ ಮಿಗಿಲು ಬಿಡಬೇಡ ಪ ಉಂಬೋ ದೇವರ ನೋಡಿ ಕರೆತಂದೊಯ್ಯನೆ ಶಂಭು ಶ್ರೀಹರಿ ಎಂದು ಮನತಂದು ಕರು ಪಾದ ತೊಳೆದು1 ಮಾತನಾಡುವ ದೇವನಿವನೆಂದು ಸಂಪ್ರೀತಿಯಿಂದಲೆ ಈತ ಶಿವನೆಂದು ಜಾತಿ ಶ್ರೀ ಗಂಧ ಪುಷ್ಪವ ತಂದುಮನ ವೊತು ಪೂಜೆಯನು ಮಾಡಿರೋ ಎಂದು 2 ಎಡೆಮಾಡಿ ಷಡುರಸಾನ್ನವ ನಂದು ಉಣ ಬಡಿಸೆ ನಾರಿಯರಟ್ಟುದನುತಂದು ಕಡುಬು ಕಜ್ಜಾಯ ಘೃತವನಂದು ಜಗ ದೊಡೆಯ ನುಂಡನು ಸಾಕು ಬೇಕೆಂದು 3 ಹಸ್ತವ ತೊಳೆದ ಮೇಲ್ವೀಳ್ಯವ ಕೊಟ್ಟು ಮತ್ತೇನಾ ಪೋಪೆನೆಂದರೆ ಪೊಡಮಟ್ಟು ಚಿತ್ತೈಸಿ ಮರಳಿಬರಬೇಕು ದಯವಿಟ್ಟು ಎಂದು 4 ಪ್ರತಿಮೆಗಿಕ್ಕಿದರಲ್ಲೆ ಇಹುದು ಮತ್ತೆ ಕ್ಷತಿಗೆ ಹಾಕಲುಬೇಕು ಬೇಡೆನ್ನಾದಿಹುದು ಅತಿಥಿಗಿಕ್ಕಲು ಸಾಕು ಬೇಕೆನ್ನುತಿಹನು ಲಕ್ಷ್ಮೀ ಪತಿಗಿದು ಪೂಜೆ ಸಂಪೂರ್ಣವಾಗಿ 5
--------------
ಕವಿ ಪರಮದೇವದಾಸರು
ಪಾದ ಕ್ಕೆರಗಿ ಯಾಚಿಸುತಲೆ ಮುಗಿವೆನು ಕೈಯ್ಯಾನೆರೆ ನಂಬಿದವರನು ಎರವು ಮಾಡಲು ನಿನಗೊಳತೇನಯ್ಯಾ ಪಿಡಿ ಬೇಗನೆ ಕೈಯ್ಯ ಕರದಶಿಗಳರಸನೆ ಕಾಮಿತ ಫಲದನೆ ಕರಿರಾಜನ ಭೀಕರ ಹರ ವೆಂಕಟ ಪ ಆಪಾರ ಮಹಿಮಾ ಆಪದ್ಬಂಧೋ ಆಪನ್ನರ ಪಾಲಿಪ ವ್ಯಾಪಾ ನಿನಗಲ್ಲದೆ ಮತ್ತೊಂದು ಕಾಣೆನೊ ಜಗದೀ ಭೂಪಾನೆ ಭೂಮ್ನ ಗುಣಗಣಸಿಂಧೋ ಸ್ವಾಮಿಯೆ ಎನಗಿಂದು ಪರಿಪಾಲಿಸು ಶ್ರೀಪತಿ ಅಂಜನ ಗಿರಿರಾಜ 1 ಕಲಿಯುಗದೊಳಗೀ ಪರ್ವತಕೆಲ್ಲಿ ಸರಿಗಾಣೆನು ಯೆಂದು ನೆಲಸಿದೀ ನೀನೆ ಈ ಸ್ಥಳದಲ್ಲಿ ವೈಕುಂಠಕಿಂತ ನೆಲೆಯು ವೆಗ್ಗಳವೆಂದು ನೀ ಬಲ್ಲೀ ಅದಕಾರಣ ಇಲ್ಲೀ ತಲೆಯಾಗುವರಯ್ಯಾ ಭಳಿರೆ ಕಾಂಚನ 2 ತರುಜಾತಿ ಮೃಗಪಕ್ಷಿಗಳಾಕಾರ ಮೊದಲಾದ ರೂಪದಿ | ನೂರಾರು ಕಿನ್ನರು ತಮ್ಮ ಪರಿವಾರ ಒಡಗೂಡಿ ನಿನ್ನ ಚರಣಾರಾಧನೆ ಮಾಡಿದ ವಿಸ್ತಾರ ಈ ಬಗೆ ಶೃಂಗಾರ ಸರಿಗಾಣೆನೊ ಹೇ ತಿರುಪತಿ ವೆಂಕಟ ಗಿರಿರಾಜ3 ಹದಿನಾಲ್ಕು ಲೋಕದ ಭಾಗ್ಯಗಳಲ್ಲಿ ಅಮರತತಿಗೆ ಕೊಟ್ಟ ವಿಧವೆಲ್ಲಾ ಪ್ರತ್ಯಕ್ಷವು ಪುಸಿಯಲ್ಲ ನಾನವರ ನೋಡೆ ಅಧಮಾಧಮನು ನೀನೆ ಬಲ್ಲೆಲ್ಲಾ ಎನ್ನ ಯೋಗ್ಯತಯ ಫಣಿ 4 ಸುವರ್ಣ ಮುಖರಿತೀರ ನಿವಾಸ ನವರಾತ್ರಿಯಲ್ಲೀ ಆವ ಬ್ರಹ್ಮೋತ್ಸವ ನೋಡಲು ಶ್ರೀಶ ಸಂಪದವನಿತ್ತು ಪೊ ರವಾನು ಕಲುಷದ ಭಯ ಬರಲೀಸ ಶ್ರೀನಿವಾಸ ಭೂದೇವರ ವರದ5
--------------
ವಿಜಯದಾಸ
ಬದುಕಿಸೀ ಪಶುಗಳನೂ ಭಗವಂತ ನೀನು ಪ ಕದಲಿಸೀರೋಗವ-ಕರುಣಿಗಳರಸನೆ ಅ.ಪ. ಗೋವುಗಳೆಲ್ಲಾ ಹೊಟ್ಟೆ-ನೊವಿನಿಂ ಕಂಗೆಟ್ಟು ಮೇವನುಬಿಟ್ಟ ವಿದಾವರೊಗವೋ ಕಾಣೆ 1 ಹೊಟ್ಟೆ ಕಳೆದು ಕಂಗೆಟ್ಟುಧಾತುಗಳೆಲ್ಲಾ ಕೆಟ್ಟು ಜೀವಂಗಳ ಬಿಟ್ಟುಬಿಡದಮುನ್ನ 2 ನಾಲಿಗೆ ನೀಡವು ಕಾಲು ಕೆಟ್ಟವು ಕಂ ಣಾಲಿ ಕೆಂಣಾಲಿ ಕೆಂಪಾದವು ಮೂಲವೆ ತಿಳಿಯದು3 ಗೋವುಗಳಿಗೆ ಭೂದೇವರುಗಳಿಗೆಲ್ಲ ದೇವ ನೀನಲ್ಲವೆ-ದೇವಕೀ ತನಯನೆ 4 ಸತ್ತವರಿಗೆ ಜೀವವಿತ್ತು ಬದುಕಿಸಿದೆ ಮೃತ್ಯುದೇವತೆ ನಿನ್ನ ತೊತ್ತಹಳಲ್ಲವೆ 5 ದಾಸನು ನಾನೆಂಬ ವಾಸಿಯುಳ್ಳರೆ ಬೇಗ ವಾಸಿಯ ಮಾಡಯ್ಯ ನೀ ಮೋಸವ ಮಾಡದೆ 6 ಇಷ್ಟದಿನೆನೆವರ ಕಷ್ಟವ ಕಳೆವ ಪುಲಿ ಬೆಟ್ಟದೊಳಿಹ ವರದ ವಿಠಲ ಕೃಷ್ಣನೀ 7
--------------
ಸರಗೂರು ವೆಂಕಟವರದಾರ್ಯರು
ಬದುಕಿಸೀ ಪಶುಗಳನ್ನು ಭಗವಂತ ನೀನು ಪ ಬದುಕಿಸೀ ಪಶುಗಳ ಭವರೋಗ ವೈದ್ಯನೆ ಕದಲಿಸೀ ರೋಗವ ಕರುಣಿಗಳರಸನೆ ಅ.ಪ ಗೋವುಗಳೆಲ್ಲಾ ಹೊಟ್ಟೆ ನೋವಿಂ ಕಂಗೆಟ್ಟು ಮೇವನು ಬಿಟ್ಟವಿದಾವ ರೋಗವೋ ಕಾಣೆ 1 ಹೊಟ್ಟೆ ಕಳೆದು ಕೆಂಗೆಟ್ಟಧಾತುಗಳೆಲ್ಲಾ ಕೆಟ್ಟು ಜೀವಂಗಳ ಬಿಟ್ಟ ಬಿಡದ ಮುನ್ನ 2 ನಾಲಿಗೆ ನೀಡವು ಕಾಲು ಕೆಟ್ಟವು ಕಂ ಣ್ಣಾಲಿ ಕೆಂಪಾದವು ಮೂಲವೆ ತಿಳಿಯದು 3 ಗೋವುಗಳಿಗೆ ಭೂದೇವರುಗಳಿಗೆಲ್ಲ ದೇವ ನೀನಲ್ಲವೆ ದೇವಕೀ ತನಯನೆ 4 ಸತ್ತವರಿಗೆ ಜೀವವಿತ್ತ ಬದುಕಿಸಿದೆ ಮೃತ್ಯು ದೇವತೆ ನಿನ್ನ ತೊತ್ತಹಳಲ್ಲವೆ 5 ದಾಸನು ನಾನೆಂಬ ವಾಸಿಯುಳ್ಳರೆ ಬೇಗ ವಾಸಿಯ ಮಾಡಯ್ಯ ನೀ ಮೋಸವ ಮಾಡದೆ 6 ಇಷ್ಟದಿ ನೆನೆವರ ಕಷ್ಟವ ಕಳೆವ ಪುಲಿ ಬೆಟ್ಟದೊಳಿಹ ವರದ ವಿಠಲ ಕೃಷ್ಣನೀ 7
--------------
ವೆಂಕಟವರದಾರ್ಯರು
ರಾಯರ ನೋಡಿರೈ ಶ್ರೀ ಗುರು |ರಾಯರ ಪಾಡಿರೈ |ಶ್ರೀ ಯರಸನ ಪ್ರಿಯಕಂಜಾಪ್ತಾಭಸು |ಕಾಯ ಕವಿಜನಗೇಯಾ ಪ ಶ್ರೀ ಸುಧೀಂದ್ರ ಕರಕಮಲದಲಿ ಸಂಭೂತಾ |ಬಹು ವಿಖ್ಯಾತಾ |ಶ್ರೀಶನ ಗುಣಗಳ ತುತಿಸುವ ಯತಿ ಶಿರೋಮಣಿಯೊ | ಚಿಂತಾಮಣಿಯೊ |ಈ ಸುಜನರ ಮನಸಿಗೆ ತೋರುವದಹಲ್ಲಾದಾ |ಶಿರಿ ಪ್ರಲ್ಹಾದಾ 1 ದಂಡಕಮಂಡಲ ಕಾಷಾಯವು ಸೂವಸನಾ |ವೇದ ವ್ಯಸನಾ |ಪುಂಡರೀಕ ಪದಭೃಂಗಾ ಮುನಿಕುಲೋತ್ತುಂಗಾ |ಕರುಣಾಪಾಂಗಾ |ಮಂಡಲದೊಳು ಬಹುತೋಂಡರ ಪರಿಪಾಲಕಾ |ವರ ಬಾಹ್ಲೀಕಾ 2 ತುಂಗಾ ತೀರದಿ ಮಂತ್ರಾಲಯದೊಳಗಿರುವೊ |ಕಲ್ಪ ತರುವೊ |ಗಂಗಾಜನಕ ವಿಹಂಗವಾಹನ ಇಲ್ಲಿಹನು |ನತ ಸುರದೇನು |ಮಂಗಳ ಮಹಿಮರ ದರುಶನ ಮಾತ್ರಾ ಫನಾಶಾ |ಶ್ರೀ ಗುರುವ್ಯಾಸಾ 3 ಪರಿಮಳ ವಿರಚಿಸಿ ಬುಧರಿಗೆ ಬೀರಿದದೀಶಾ |ಗುಣಗಂಭೀರಾ |ಪರಿಪರಿ ಚರಿತೆಯ ತೋರ್ದಭೂದೇವರ ದೇವಾ |ದೇವ ಸ್ವಭಾವಾ |ನರ ಇವರನು ಕ್ಷಣಬಿಡದಲೆ ಭಜಿಸಲು ಸುಖವೊ |ಅಹಿಕಾಮುಕವೊ (ಅಘ ಪರಿಹರವೊ) 4 ದುಷ್ಟ ಮತವ ಖಂಡಿಸಿ ಹರಿಪರನೆಂದೊರೆದಾ |ಭೀಷ್ಟಿಯಗರದಾ |ಸೃಷ್ಠಿಯೊಳಗೆ ಶ್ರೀಶ ಪ್ರಾಣೇಶ ವಿಠ್ಠಲನದಾಸಾಮುನಿಕುಲೋತ್ತಂಸಾ |ಎಷ್ಟು ಪೊಗಳಲಾಶಕ್ಯವು ಸದ್ಗುಣ ಸಾಂದ್ರಾ |ಶ್ರೀ ರಾಘವೇಂದ್ರಾ 5
--------------
ಶ್ರೀಶಪ್ರಾಣೇಶವಿಠಲರು
ಶ್ರೀ ಸತ್ಯ ವಿಜಯತೀರ್ಥ ಚರಿತ್ರೆ ನಮೋ ಸತ್ಯ ವಿಜಯಾರ್ಯ ತೀರ್ಥರೇ ಸುಮಹ ಕಾರುಣ್ಯದಿಂ ಎನ್ನ ಪಾಪಗಳ ಮನ್ನಿಸಿ ವಿಮಲ ವಾಙ್ಮನೋಕಾಯದಲಿ ಶ್ರೀ ರಾಮ ಯದುಪತಿ ಸ್ಮರಣೆ ಇತ್ತು ಪಾಲಿಪುದು ಪ ಅಶೇಷ ಗುಣಗಣಾಧಾರ ವಿಭು ನಿರ್ದೋಷ ಹಂಸ ಶ್ರೀಪತಿಯಿಂದುದಿತ ಗುರುಪರಂಪರೆಗೆ ಬಿಸಜಭವ ಸನಕಾದಿ ದೂರ್ವಾಸ ಮೊದಲಾದ ವಂಶಜರು ಸರ್ವರಿಗೂ ಶರಣು ಶರಣೆಂಬೆ 1 ಅಚ್ಯುತ ಪ್ರೇಕ್ಷರಿಗೂ ಪರವಾಯು ಅವತಾರಾನಂದ ತೀರ್ಥರಿಗೂ ಉತ್ಕøಷ್ಠ ಗುರುತಮ ಮಧ್ವ ಆನಂದ ಮುನಿಗಳ ಕರಕಂಜಭವ ಸರ್ವ ಯತಿಗಳಿಗು ಶರಣು 2 ಮಾಧವ ಅಕ್ಷೋಭ್ಯ ಅದ್ವಿತೀಯ ಸುಸ್ಪಷ್ಟ ಟೀಕಾಗಳಿತ್ತ ಮೇಧಾಪ್ರವೀಣ ಜಯತೀರ್ಥಾರ್ಯರಿಗೂ ವಿದ್ಯಾಧಿರಾಜರಿಗೂ ನಮೋ ನಮೋ ಶರಣು 3 ವಿದ್ಯಾಧಿರಾಜರ ಶಿಷ್ಯರು ಈರ್ವರಲಿ ಮೊದಲನೆಯವರು ರಾಜೇಂದ್ರ ತೀರ್ಥರಿಗು ನಂತರ ಕೋವಿದೋತ್ತಮ ಕವೀಂದ್ರರಿಗೂ ತತ್ವಜ್ಞ ಶಿಷ್ಯವಾಗೀಶ ತೀರ್ಥರಿಗು ಶರಣು 4 ವಾಗೀಶ ತೀರ್ಥರು ಕವೀಂದ್ರ ಕರಜರು ವಾಗೀಶ ಕರಜರು ರಾಮಚಂದ್ರಾರಾರ್ಯರು ಈ ಗುರುಗಳಿಗೆ ಈರ್ವರು ಶಿಪ್ಯರು ಇಹರು ಬಾಗಿ ಶರಣಾದೆ ಈ ಈರ್ವರಿಗೂ 5 ಮೊದಲನೆಯವರು ವಿಭುದೇಂದ್ರತೀರ್ಥಾರ್ಯರು ವಿದ್ಯಾನಿಧಿ ತೀರ್ಥಾರ್ಯರ ಅನಂತರವು ವಿದ್ಯಾನಿಧಿ ಸುತರು ರಘುನಾಥತೀರ್ಥರು ವಂದಿಸಿ ಶರಣೆಂಬೆ ಇವರಿಗು ಇವರ ವಂಶಕ್ಕು 6 ರಘುನಾಥ ಕರಕಮಲಜಾತರಘುವರ್ಯರಿಗೆ ರಘೂತ್ತಮ ವೇದವ್ಯಾಸ ವಿದ್ಯಾಧೀಶ ವೇದನಿಧಿ ಸತ್ಯವ್ರತ ಸತ್ಯನಿಧಿ ಸತ್ಯನಾಥ ಸತ್ಯಭಿನವ ಸತ್ಯಪೂರ್ಣರಿಗೆ ನಮಿಪೆ 7 ಸತ್ಯಾಭಿನವತೀರ್ಥರ ಮಹಿಮೆ ಬಹುಬಹುವು ಸುತಪೋನಿಧಿಯು ಶ್ರೀನಿವಾಸನ್ನೊಲಿಸಿಕೊಂಡಿಹರು ಸತ್ಯಪೂರ್ಣರಿಗೆ ಶಿಷ್ಯರು ಈರ್ವರು ಸತ್ಯವರ್ಯರು ಸತ್ಯವಿಜಯರು ಎಂದು 8 ಸತ್ಯ ಪೂರ್ಣಾರ್ಯರು ತಮ್ಮ ಗುರು ಸತ್ಯಾಭಿನವರ ಪದ್ಧತಿ ಅನುಸರಿಸಿ ಶ್ರೀಮಠ ಆಳುತ್ತ ಸತ್ಯವರ್ಯರನ್ನು ಗೋದಾವರಿ ಕ್ಷೇತ್ರ ವಿಜಯ ಮಾಡೆಂದು ಸತ್ಯವಿಜಯರನ್ನ ಕಳುಹಿದರು ಪೂರ್ವದಿಸೆಗೆ 9 ಸತ್ಯವರ್ಯರು ಗೋದಾವರಿ ಪಂಚವಟಿ ನಾಸಿಕ ತ್ರಿಯಂಬಕಾದಿ ಕ್ಷೇತ್ರ ಸಮೀಪ ವಿಜಯಮಾಡೆ ಸತ್ಯವಿಜಯರು ತೋಂಡದೇಶ ಚÉೂೀಳ ಪಾಂಡ್ಯಾದಿ ನಾಡಲ್ಲಿ ವಿಜಯ ಮಾಡಿದರು 10 ಜಯಶೀಲರಾಗಿ ದಿಗ್ವಿಜಯಮಾಡಿ ತೋಯಜಾಕ್ಷನಪಾದಐದಿದರು ನಿಯಮೇನ ಸತ್ಯವಿಜಯರು ಅಲಂಕರಿಸಿದರು ಪೀಠ 11 ಸತ್ಯಾಭಿನವ ಆರ್ಯರ ಸತ್ಯಪೂರ್ಣ ಗುರುಗಳ ಪದ್ಧತಿಯಲಿ ಸತ್ಯವಿಜಯಾರ್ಯರು ವೇದಾಂತವಾಖ್ಯಾರ್ಥ ದುರ್ವಾದ ಖಂಡನ ಅಧಿಕಾರಿಗಳಿಗು ಉಪದೇಶ ಮಾಡಿದರು 12 ಸೇತುಯಾತ್ರೆ ಮಾಡಲು ದಿಗ್ವಿಜಯ ಕ್ರಮದಲಿ ಬಂದರು ಆರಣಿಗೆ ತೋಂಡದೇಶದಲಿ ವಿಪ್ರ ಆರಣಿ ರಾಜನು ಸಂತಾನ ವೃದ್ಧಿಗೆ ಕೊರಗುತ್ತಿದ್ದ 13 ಯುಕ್ತಮರ್ಯಾದೆಗಳ ವೈಭವದಿಂದಲಿ ಸತ್ಯವಿಜಯರಿಗೆ ಮಾಡಿ ದೇವಾರ್ಚನೆ ಭೂದೇವರಿಗೆ ಭೋಜನಮಾಡಿಸಿದ ರಾಜನು ವೇದ್ಯವಾಯಿತು ಗುರುಗಳಿಗೆ ರಾಜನ ಕೊರತೆ 14 ಸತ್ಯವಿಜಯತೀರ್ಥಾರ್ಯರ ಗುರುವರ್ಯರು ಸಪ್ತದಶ ಅಕ್ಷರ ಮಂತ್ರ ಪ್ರತಿಪಾದ್ಯಹರಿದಯೆಯಿಂದ ಒದಗಿಸುವ ವಂಶವೃದ್ಧಿ ಎಂದು ಅನುಗ್ರಹಿಸಿ ಪೋದರು ದಿಗ್ವಿಜಯಕೆ ವರವು ಪೂರ್ಣವಾಯಿತು 15 ಸೇತುಯಾತ್ರೆ ದಿಗ್ವಿಜಯ ಪೂರಯಿಸಿ ಆ ಗುರುಗಳು ಮತ್ತು ಬಂದರು ಆರಣಿ ಕ್ಷೇತ್ರಕ್ಕೆ ಕೃತಜ್ಞ ಆ ರಾಜನು ಎದುರುಗೊಂಡು ಗುರುಗಳ ಪಾದದಲಿ ಶಿರವಿಟ್ಟು ಸ್ವಾಗತವನಿತ್ತ 16 ಸಂಸ್ಥಾನ ಮೂರ್ತಿಸ್ಥ ಹರಿಪೂಜಾ ವೈಭವವು ನಿತ್ಯ ಪ್ರವಚನ ಪಾಠಕೀರ್ತನೆ ಏನೆಂಬೆ ಸತ್ಯವಿಜಯರನ್ನ ರಾಜ ಅಲ್ಲಿಯೇ ಇರಬೇಕು ಎಂದು ಕೋರಿ ಒದಗಿಸಿದ ತಕ್ಕ ಸೌಕರ್ಯ 17 ಸತ್ಯವಿಜಯಾರ್ಯರಿಗೆ ದೇಹ ಅಧಾರೂಢ್ಯ ವೇದ್ಯವಾಯಿತು ಆರಣಿರಾಜನಿಗೆ ಭಕ್ತಿಶ್ರದ್ಧೆಯಿಂದಲಿ ಉಪಚಾರ ಮಾಡಿದನು ಮಾಧವಗೆ ಅರ್ಪಿಸುತಕೊಂಡರು ಗುರುಗಳು 18 ಶ್ರೀ ಸತ್ಯವಿಜಯತೀರ್ಥರ ಮಹಿಮೆ ಬಹು ಉಂಟು ಒಂದು ಮಾತ್ರ ಸ್ಥಾಲಿಪುಲಿಕನ್ಯಾಯದಲಿ ಈ ದಿವ್ಯ ಸಣ್ಣ ನುಡಿಗಳಲಿ ಪೇಳಿಹುದು ಮಾಧ್ವಯತಿ ಹರಿದಾಸ ಮಹಿಮೆಗಳಿಗೆ ಅಳವುಂಟೆ 19 ತಮ್ಮ ತರುವಾಯ ಸಂಸ್ಥಾನ ಆಡಳಿತವ ಶ್ರೀ ಮನೋಹರ ಹರಿ ಪ್ರಿಯರು ಸತ್ಯವರ್ಯ ಸುಮನೋಹರ ಸತ್ಯಪ್ರಿಯ ತೀರ್ಥನಾಮದಲಿ ರಮಾರಮಣಸೇವೆಗೆ ವಹಿಸಬೇಕೆಂದು 20 ಭಕ್ತಿಮಾನ್ ಆರಣಿ ರಾಜನಿಗೆ ಹೇಳಿ ಹಿತದಿ ಅನುಗ್ರಹಿಸಿ ಗುರುವರ್ಯ ಸತ್ಯವಿಜಯರು ಧ್ಯಾನದಿಂ ಐದಿದರು ಹರಿಪುರ ಚೈತ್ರ ಕೃಷ್ಣಪುಣ್ಯದಿನ ಏಕಾದಶಿ ದ್ವಾದಶಿಲಿ 21 ಮತ್ತೊಂದು ಅಂಶದಲಿ ಸತ್ಯವಿಜಯ ನಗರಾಖ್ಯ ಕ್ಷೇತ್ರ ಆರಣಿ ಸಮೀಪ ವೃಂದಾವನದೀ ಇದ್ದು ಸೇವಿಸುವ ಸುಜನರಿಗೆ ವಾಂಛಿತ ಒದಗಿಸುತ ಕುಳಿತಿಹರು ಹರಿಧ್ಯಾನ ಪರರು 22 ಸತ್ಯಲೋಕೇಶಪಿತ ಶ್ರೀಪ್ರಸನ್ನ ಶ್ರೀನಿವಾಸ ಪ್ರಿಯ ಸತ್ಯಾಭಿನವತೀರ್ಥ ಕರಕಂಜ ಜಾತ ಕರ ಕಾಯವಾಙ್ಮನದಿ ನಮೋ ಶರಣು ಮಾಂಪಾಹಿ 23
--------------
ಪ್ರಸನ್ನ ಶ್ರೀನಿವಾಸದಾಸರು