ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತತ್ವ ಚಿಂತನೆ ಮಾಡು ಮನುಜಾ ವ್ಯರ್ಥಕಾಲವು ಕಳೆಯದೆ ಪ ಮೂರುಬಾರಿಗೆ ಸಾರಿದೆ ಅ.ಪ ಮನೆಯು ಉರಿಯುವಾಗ ಭಾವಿ- ಯನು ತೆಗೆವ ನರನಂದದಿ ಕೊನೆಗೆ ಯಮನವರೆಳೆವ ಕಾಲದಿ ಕೋರಿದರೆ ಸುಖ ಬಾರದು 1 ಈಷಣತ್ರಯದಾಸೆಯಿಂದಲಿ ಮೋಸಹೋಗದೆ ಸಂತತ ರೋಷದೋಷಕೆ ಕಾರಣವು ಸಂ- ತೋಷದಿಂದರು ನಲಿಯುತ 2 ಎಲ್ಲಿ ನೋಡಿದರಲ್ಲಿ ಹರಿಯನು ಸೊಲ್ಲು ಸೊಲ್ಲಿಗೆ ತುತಿಸುತ ವೆಲ್ಲ ಕಳೆ ದೃಢವಾಗುತ 3 ನಾನು ನನ್ನದು ಎಂಬುವ ದುರಭಿ- ಮಾನ ನಿನಗೆ ಬೇಡೆಲೊ ಸ್ವಾನುಭವಕಿದು ಹಾನಿ ತರುವದು ನೀನೆ ನಿನ್ನೊಳು ನೋಡೆಲೊ4 ನೇಮಗಳನು ಪರಿಸುತ 5
--------------
ಗುರುರಾಮವಿಠಲ
ಸೋದಾಕ್ಷೇತ್ರವೆ ದಿವ್ಯ ಕ್ಷೇತ್ರ ಬಂದ ಜನರಿಗಿಷ್ಟವನೀವ ಕ್ಷೇತ್ರ ವೀರಶೈವರ ಗೆದ್ದ ಕ್ಷೇತ್ರ ಪ ಒಂದು ಭಾಗದಿ ರೂಪ್ಯಪೀಠ ಮ- ತ್ತೊಂದು ಭಾಗದಿ ಸೋದಾಕ್ಷೇತ್ರ ಕುಂದು ಎಳ್ಳಷ್ಟಿಲ್ಲದೆ ತೋರ್ಪು ದೆಂದು ಹರಿಭಕ್ತರಾದರಿಸುವರು 1 ವೈಕುಂಠನಂತಾಸನಗಳು ಚೆಂದವೇನೆಂದು ಪೇಳಲಿ ಮನವೆ 2 ರಾಜೇಶ ಹಯಮುಖ ಚರಣ ಕಂಜ ಮಧುಪನಂತಿರುವ ಶ್ರೀಭಾವಿ- ಕಂಜಜಾತನ ಪದಕರುಹ ವಾದಿರಾಜರಾಯರ ದಿವ್ಯ ಕ್ಷೇತ್ರ 3
--------------
ವಿಶ್ವೇಂದ್ರತೀರ್ಥ