ಒಟ್ಟು 64 ಕಡೆಗಳಲ್ಲಿ , 27 ದಾಸರು , 57 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಯಸೋದು _ ಉತ್ತಮ ಸಂಗ - ಬಯಸೋದು ಪ ಬಯಸೂವುದುತ್ತಮ ಸಂಗ | ಭವಭಯ ಪರಿಹರಿಸೂವ ಸಂಗ | ಆಹಭಯ ದೂರಾಭಯಪ್ರದ | ದಯ ಪೂರ್ಣ ಹರಿಯ ಹೃ-ದಯ ವ್ಯಾಪ್ತವಾದಂಥ | ವಿಯದೊಳು ಕಾಂಬಂಧ ಅ.ಪ. ವಿಭವ | ಹೇತು ಇವರೆಂದು ಖ್ಯಾತಿಲಿ ಇರುವ | ಬೊಮ್ಮದಿವಿಜೇಡ್ಯ ವೈಕುಂಠನವ | ಮೃಗ್ಯನವರಿಂದನಾಗುತಲಿರುವ | ಆಹಅವನ ಪದ ಕಮಲದಿ | ಧೃವ ಚಿತ್ತ ಉಳ್ಳವರವರಿಗೆಂಬರು ವೈ | ಷ್ಣವಾಸ್ಯರೆಂದೆನುತಲಿ 1 ತಾಪ ಶಮನ | ಸೇವಿಪರ ಹೃದಯಾಂತಃಕರಣ | ಆಹದಿರುತ ತೋರಿಕೊಳ್ಳೆ | ತಾರೇಶನಂದದಿಪರಿತಾಪವಿನ್ನುಂಟಿ | ಮರಳಿ ಅಂಥವನಿಗೆ 2 ಶುದ್ಧಾಂತಃಕರಣರ ಭಕ್ತಿ | ಪಾಶಬದ್ದನಾಗಿಹ ಹರಿಮೂರ್ತಿ | ಇಂಥಶುದ್ಧರ ವಸ ಹರಿಕೀರ್ತಿ | ಇಂದದಗ್ದ ಪಾಪದ ಮೂಟೆ ಭರ್ತಿ | ಆಹಊಧ್ರ್ವ ಪುಂಡ್ರವು ಶಂಖ | ಮುದ್ರಾದಿ ಚಿನ್ಹಿತಶಬ್ದರಿವರು ಪ್ರ | ಸಿದ್ಧ ಭಾಗ್ವತರೆಂದು 3 ಕಾಮ ಕಾರ್ಮಾಅವಿದ್ಯದಿಂದ | ದೇಹಭೂಮಿಯೊಳುತ್ಪನ್ನದಿಂದ | ಜಾತಿಬ್ರಾಹ್ಮಣಾಹಂಭಾವದಿಂದ | ಶೂನ್ಯಶ್ರೀಮನೋಹರ ಜೀವರಿಂದ | ಆಹಸಾಮಸನ್ನುತ ಭಿನ್ನ | ನೇಮ ತಿಳಿದು ತಾರ-ತಮ್ಯವ ತಿಳಿದವ | ಪ್ರೇಮ ಭಕ್ತನವನು 4 ನೋವು ಸಂತೋಷಗಳೆಂಬ | ದ್ವಯಭಾವಗಳ್ಸಮತೇಲಿ ಉಂಬ | ಜ್ಞಾನಿದೇವ ದೇವಗೆ ಪ್ರಿಯನೆಂಬ | ಬುದ್ಧಿಲೋಪಿ ಅವರ ಭಜಿಸೆ ತುಂಬ | ಆಹಗೋವ ಪಾಲಕ ಗುರು | ಗೋವಿಂದ ವಿಠ್ಠಲಕಾವನು ಬೆಂಬಿಡದೆ | ಈ ವಿಧ ಭಕುತರ 5
--------------
ಗುರುಗೋವಿಂದವಿಠಲರು
[ಶ್ರೀ ಪ್ರಾಣದೇವರ ಅನುಗ್ರಹವಿಲ್ಲದೆ ಶ್ರೀ ಹರಿಯು ಎಂದಿಗೂ ಒಲಿಯನೆಂಬ ಪ್ರಮೇಯ. ಪೂರ್ವಜನ್ಮದಲ್ಲಿ ವಾಲಿ ಹನುಮಂತನ ಅನುಗ್ರಹವಿಲ್ಲದ ಕಾರಣ ರಾಮನು ನಿಗ್ರಹಿಸಿದ. ಅರ್ಜುನನಾದಾಗ್ಗೆ ಭೀಮನು ಅಗ್ರಜನಾಗಿ ದಯ ಮಾಡಿದುದಕ್ಕೆ ಕೃಷ್ಣನು ಸಖನಾದ. ಮೂರನೆ ಜನ್ಮ ಜಯತೀರ್ಥರಾದಾಗ್ಗೆ ಜ್ಞಾನವಿತ್ತು ಕುಮತಗಳ ನಿರಾಕರಿಸಿದಿ ಪ್ರಾಣನ ಕೃಪೆಯಿಂದ ಎಲ್ಲ ಸೌಖ್ಯ ಗಂಟು. ಈಗಾದರು ಹಿಂದಿನಂತೆ ಪೊರೆಯೊ ಎಂದು ಪ್ರಾರ್ಥನೆ.] ಧ್ರುವತಾಳ ಹಿತಮಾಳ್ಪ ಜನಕನಾಗಿ ರಕ್ಷಸು ಎಂದೆಂಬೆನೆಪಿತೃ ಸಮಾನ ಜೇಷ್ಠನೆಂದೆಂಬ ವಿಧದಿ ಪಿತನೆ ಸರಿ ಎನಗೆ ಉಪಕಾರವ್ಯಾತಕಿನ್ನುಮಾತರಿಶ್ವನೆ ದೂರ ನೋಳ್ಪದೇನೊಭಾತೃನಾಗಿ ಎನ್ನ ಪಾಲಿಸು ಎಂದೆಂಬೆನೆನೋತ ಪುಣ್ಯಗಳಿಂದ ಹರಿಯು ತಾನೆ ಸ್ವತ ಏವ ಮಾಡಿದ ಈಗ ನುಡಿವದೇನೊಮಾತೃ ನೀನೆ ದೇಹ ಪೊರೆಯುವಲ್ಲಿಅತುಳ ಗುರುವಾಗಿ ಬೋಧಿಸು ಎಂದೆಂಬೆನೆಆತ್ಮ ಗುರುವಿಗೆ ನಿಜ ಗುರುವೆನಿಸಿದೆ ನಿತ್ಯನೂತನವಾಗಿ ಯಿದನು ಬೇಡಿಕೊಂಬುವದೇನುವೀತಿ ಹೋತ್ರನೆ ದೈತ್ಯ ಸಂತತಿಗೆಪ್ರತ್ಯಂತರ ಜನುಮದ್ವಯದಿ ನಿಜ ಮುಖದಿಂದಲೆಮತಿಯು ನೀಡಿದ ಮುಖ್ಯ ಗುರು ನೀನೆ ಪ್ರತಿಯಿಲ್ಲದೆ ಇದ್ದ ಇಷ್ಟನೇನೊ ಎನಗೆಗತಿ ಪ್ರದಾತನು ನೀನೆ ಆವಕಾಲಆಪ್ತನಾಗಿ ನೀನು ಸಲಹಬೇಕೆಂಬೆನೆ ಗತ ಜನ್ಮಗಳಲಿ ನೀನು ಮಾಡಿದುಪ-ಕೃತಿಗಳೆಣಿಸೆ ಈಗ ನಿನಗಿಂದಧಿಕವಾದಆಪ್ತನಾವನು ಎನಗೆ ಅರಸಿ ನೋಡಾಮತಿಯು ರಹಿತವಾದ ಜನುಮಗಳು ಬರಲಿಅತಿ ಹಿತ ನೀನೆ ಎನಗೆ ಇಹ ಪರದಿಅತಿಶಯ ಕೃಪಾನಿಧೆ ಗುರು ವಿಜಯ ವಿಠ್ಠಲರೇಯಅತಿ ಪೀಯನಾಗುವನು ನಿನ್ನ ದಯದಿ 1 ಮಟ್ಟತಾಳ ಬಾಂಧವನು ನೀನೆ ಎರಡು ಬಗೆಯಿಂದ ತಂದೆ ನಿನ್ನುಪಕಾರ ಅನಂತ ಜನುಮದಲಿಮಂದನಾದವ ನನು ತೀರಿಸಬಲ್ಲೆನೆಬಂಧು ಅನಿಮಿತ್ಯ ಗುರು ವಿಜಯ ವಿಠ್ಠಲ ನಿ-ನ್ನಿಂದಲಿ ಎನಗೆ ಅನುಗ್ರಹ ಮಾಡುವನೊ 2 ತ್ರಿವಿಡಿತಾಳ ನಿನ್ನ ಕರುಣಪೇಕ್ಷ ಮಾಡದಲೆ ಒಂದುಜನುಮ ಹರಿ ಕರುಣವಿಲ್ಲದಲೆ ಕಳದೇಅನಂತರದಿ ಎನ್ನ ಪುಣ್ಯ ಸಾಸಿರದಿಂದಅನುಜನಾದೆ ನಿನ್ನ ಕೃಪೆಯಿಂದಲಿಮನುಜ ಕೃತಿಯಾದರು ಪ್ರತಿಮದಲ್ಲಿ ಘನ್ನ ಚೇಷ್ಟಾದಿಗಳು ತೋರಿದಂತೆ ಎನ್ನ ನಾಮಕನಾಗಿ ಎನ್ನ ರೂಪದಿಂದಎನ್ನ ಕೃತ್ಯಗಳೆಲ್ಲ ನೀನೆ ಮಾಡಿಉನ್ನತವಾದ ಕೀರ್ತಿ ತಂದು ಇತ್ತು ಎನ್ನಜನ್ನರ ಮಧ್ಯದಲಿ ಶ್ರೇಷ್ಠನೆನಸಿಪನ್ನಗ ತಲ್ಪನ್ನ ಕರವಶನೆನನಿಸಿದಿನಿನ್ನ ಕರುಣಕೆ ಎಣೆ ಆವದಯ್ಯಾಎನ್ನ ಸ್ವಭಾವದಿಂದ ಹರಿ ತಾನು ಇನಿತಾದ ಮನ್ನಣೆ ಮಾಡುವನೆ ಎಂದಿಗನ್ನನಿನ್ನುಪಕಾರವೆಂಬ ವನ್ನಧಿಯೊಳಗೆ ನಿರುತಮುಣಗಿ ಇಪ್ಪೆನಯ್ಯಾ ತೆರವಿಲ್ಲದೆ ಚನ್ನ ಪ್ರಸನ್ನ ಗುರು ವಿಜಯ ವಿಠ್ಠಲರೇಯನಿನ್ನಿಂದಲೆ ಎನಗೆ ಬಂಧುನಾದಾ 3 ಅಟ್ಟತಾಳ ದುರುಳ ಮತಗಳೆಂಬೊ ಮಾಯಿ ಗೋಮಾಯಿಗಳುಶಿರವೆತ್ತಿ ನೋಡದೆ ಪಲಾಯಧ್ವರಾದರು ಈತೆರವಾದ ಮಹತ್ಮಿ ನಿನ್ನದು ನಿನ್ನದುಮರಳೆ ಮಾತುಗಳನ್ನು ತೋರದಿದ್ದರನಿಗೆ (ರೆನಗೆ)ಕರುಣವಲ್ಲದೆ ಅನ್ಯಾಲೋಚನೆ ಇದಕ್ಕಿಲ್ಲಸುರಲೋಲ ಮಹಧೃತಿ ಗುರು ವಿಜಯ ವಿಠ್ಠಲರೇಯಪೊರೆವನು ನಿನ್ನಯ ಬಲದಿಂದಲಾವಾಗ 4 ಆದಿತಾಳ ಮೂರ್ತಿ ಗುರು ವಿಜಯ ವಿಠ್ಠಲರೇಯನಿನ್ನಿಂದ ಮಾಡಿಸುವ ವಸುಧಿಯ ವ್ಯಾಪಾರ 5 ಜತೆ ನಿಖಿಳ ಸೌಖ್ಯವೆ ಉಂಟುಉನ್ನತ ಮಹಿಮ ಗುರು ವಿಜಯ ವಿಠ್ಠಲ ಒಲಿವ || [ನಳ ನಾಮ ಸಂ|| ಚೈತ್ರ ಬ|| 12 ಆದಿತ್ಯವಾರ]
--------------
ಗುರುವಿಜಯವಿಠ್ಠಲರು
ಆದಿಯುಗದಿ ಮಹ ಆದಿದೈತೇಯನೊಬ್ಬ ಮೇದಿನಿಯೊಳ್ ಸ್ವರ್ಣಕಶ್ಯಪು ನಾಮದಿ ಸಾಧಿಸಿ ಬಂದವಗೊಬ್ಬ ಸೋದರ ಸ್ವರ್ಣಾಂಬಕನೆನಿಸಿ ಮೇದಿನಿ ಚೋರನಾಗಿ ಹತನಾದನು ಆದಿಶೇಷನೆ ವಿಷ್ಟಕ್ಸೇನ ತಾ- ನಾದ ಪ್ರಹ್ಲಾದ ಪ್ರಾಣಾವೇಶದಿಂದ ಸೋದರ ಜೀವಾಂಶಾಪಾನಾವಿಷ್ಟ ಸ- ಲ್ಹಾದನಾಮಕ ಮಿತ್ರನಾದ ಕ ಹ್ಲಾದ ವ್ಯಾನಾವೇಶದಿಂದ ಮೋದದಿ ಸೋಮಾಂಶೋದಾನಾಯುತ ನು- ಹ್ಲಾದ ನಾಮಕ ಸಂಭೂತನಾದ ಆದರೈವರಾದೈತ್ಯಗೆ ಪುತ್ರರು ಮೇದಿನಿ ಸುರರುದ್ಧಾರಗೋಸುಗ ಆದಿದೈವ ನಾರೇಯಣ ತಾ ನಾದಿಕಾರಣ ವಿಶ್ವಕರ್ತಾ ಮೋದಾನಂದ ಮೂರುತಿ ಸುಗುಣ ಭೋಧಪೊರ್ಣ ಸರ್ವಜ್ಞ ಸ್ವಾತಂತ್ರ ವೇದಪುರುಷಾದಿ ಜಡಾದಿ ಜಗಕೆ ಆಧಾರ ಹರಿ ಎಂಬ ಜ್ಞಾನವ ಭೋದಿಸಿ ಬೊಮ್ಮಮುಖರು ಹರಿ ಪಾದಸೇವಕರೆನುತ ನಿತ್ಯ ವಾದದಿ ವಾದಿಗಳ ಜಯಸಿದರವರ ಪಾದಸೇವಿಸಿ ಕರುಣಾಪಡೆದು ಆದಿ ಗುರು ಜಗನ್ನಾಥವಿಠಲನ್ನ ಆದರದಲಿ ಭಜಿಪೆ ಪರಮ ಸುಖ ರಾಗ :ಕಲ್ಯಾಣಿ ಅಸುರರ ಜನ್ಮದಿ ಪುಟ್ಟಿದ ಇವರಿಗೆ ಶ್ವಸನನ ಆವೇಶ ಸುರರಾವೇಶ ಬಲದಿ ಅಸಮಙÁ್ಞನ ಭಕುತಿ ವಿರಾಗವು ವಸುಧಿಯ ತಳದಿ ದಿನದಿನದಲ್ಲಿ ಪಸರಿಪ ಸೂರ್ಯನ ಪ್ರಭೆಯಂದದಲಿ ಮಿಸುಪದಕಿದೇ ಕಾರಣ ಉಂಟು ಬಿಸಜಾಂಬಕ ಹರಿಪೇಳಿದ ಇವರಿಗೆ ಅಸುರೇಶ ಹಿರಣ್ಯಕಶಿಪುವಿನಲ್ಲಿ ಶಿಶುಭಾವದಿಂದ ಜನಿಸಲು ಪೋಗಿರಿ ಪುಸಿಯಲ್ಲ ಮಚ್ಛಾಪÀ ಅಸುರಭಾವ ಪ್ರಲ್ಹಾದಾದ್ಯ ರಸಮಮಹಿಮರಾಗೀ ಜನಿಸಿರೆಂದು ಉಸುರಿದ ವಾಕ್ಯವು ಪ್ರಮಾಣ ಸಿದ್ಧವೆನ್ನಿ ವ್ಯಸನzಲೈವರು ಹರಿಯನೆ ಮತ್ತೆ ಬೆಸಗೊಂಡರೀಪರಿ ಪರಿಯಾ ಅಸುರನ ಪತ್ನಿಯ ಬಸಿರೊಳು ಪುಟ್ಟುವುದು ವಶವಲ್ಲವೋ ಸ್ವಾಮಿ ಕುಸುಮನಾಭನೆ ನಿನ್ನ ಅಸಮಲೋಕದ ಸುಖ ವಸುಧಿತಳಾದಲ್ಲಿ ಎಸಗದು ಎಸಗದು ಎಂದಿನಕಾಲಕ್ಕೂ ಮುಸುಕುವದಙÁ್ಞನ ದುಃಖದ ಭವದಲ್ಲಿ ಕಸವಿಸಿಗೊಳುತಾ ಙÁ್ಞನವನೀಗಿ ಬಿಸನಿಲಯನೆ ನಿನ್ನ ದರುಶನವಿಲ್ಲದೆ ಅಸುನಿಲ್ಲುವ ಬಗೆ ಯಾವುದು ಪೇಳೋ ಶಶಿಧರವಂದ್ಯ ಗುರುಜಗನ್ನಾಥ ವಿಠಲ ನಮ್ಮ ವ್ಯಸನವನು ಕಳೆದು ಸುಖವನು ಸಲಿಸೋ ರಾಗ - ಕಾಂಭೋದಿ ತಾಳ - ತ್ರಿವಿಡಿ ಭಕುತವಾಕ್ಯವ ಲಾಲಿಸಿ ತಾನಾಗ ಪರಿ ನುಡಿದನು ವಿಕಳ ಪೊಂದದೆ ನೀವು ತ್ವರಿತಾದಿ ಧರೆಯೊಳು ಸಕಲರು ಜನಿಸಲು ಮುಸಕದಙÁ್ಞನ ಲಕುಮಿ ಭೂಮಿಯ ಸಹಿತ ಇರುವೆನು ನಿಮ್ಮೊಳು ನಿತ್ಯ ಪರಿಪರಿ ಮಹಿಮವ ಪ್ರಕಟಮಾಡುವೆ ಮುಖ್ಯಪ್ರಾಣನಿಪ್ಪನು ಸತತ ಕಕುಲಾತಿ ಯಾಕಿನ್ನು ನಡಿರೆಂದು ಹರಿಯೆಂದ ಉಕುತ ವಾಕ್ಯದಲಿಂದ ದಿತಿಜನಲ್ಲಿ ಸುಕೃತಿಗಳೈವರು ಉದಯವೈದಿದರಾಗ ಮುಕುತಿದಾಯಕ ಗುರುಜಗನ್ನಾಥ ವಿಠಲನೆಂಬ ಭಕುತಿ ಪೂರ್ವಕ ಙÁ್ಞನವೃದ್ಧಿಯೈದಿದರು ರಾಗ - ಆರಭಿ ತಾಳ - ಅಟ್ಟ ಪಿರಿಯ ಪ್ರಲ್ಹಾದನ್ನ - ಕರದು ತೊಡೆಯ ಮೇಲೆ ಇರಿಸಿ ಪ್ರೇಮದಿ ನಿಮ್ಮ - ಗುರುವೇನು ಪೇಳ್ಯಾನೆ ಮರಿಯಾದೆ ಎನಮುಂದೆ - ಅರಹು ಎನಲು ಬಾಲ ಕಿರಿನಗೆ ಮುಖದಿಂದ - ಹರಿಯೆ ಸರ್ವೋತ್ತಮ ಹರಬೊಮ್ಮ ಮುಖರೆಲ್ಲ - ಪರಿವಾರಭೂತರು ಅರಿದಿಪ್ಪೆ ಎನ್ನಯ್ಯ ಸರಸಿಜಜಾಂಡಕ್ಕೆ ಅರಸು ತಾನಾಗಿದ್ದು ಇರುವಾದಿ ಚೇತನ ತರುವಾದಿ ಜಡಮಯ ಸರ್ವಸ್ಥಳದಲ್ಲಿ ನಿರುತದಿ ವ್ಯಾಪಿಸಿ ಇರುತಿಹ ಹರಿ ಎಂದು ಅರಿತ ಮಾನವÀÀನಿಗೆ ದೊರೆವೋನು ನಿಶ್ಚಯ ಅರಿತು ಪೇಳಿದ ತನ್ನ ತರಳಾನ ನುಡಿಕೇಳಿ ಭರದಿಂದ ಕಂಬವ ಕರದಿಂದ ಬಡಿಯಾಲು ನರಮೃಗಾಕಾರದಿ ಹೊರಗೆ ಬಂದಾದೈತ್ಯನು ದರವ ಬಗೆದು ಕರುಳಮಾಲೆಯತಾ ಕೊರಳೊಳು ಧರಿಸಿದ ಚರಜನ ಪರಿಪಾಲ ಬಿರುದು ಬೀರಿದ ನಮ್ಮ ಗುರುಜಗನ್ನಾಥವಿಠಲ ಶರಣರ ಮರೆಯನೋ ಧರಿತಳದೊಳಗೆ ರಾಗ :ಇಚ್ಛಾ :ತಾಳ - ಆದಿ ಈ ತೆರ ಪ್ರಹ್ಹಾದ ಹರಿಪಾದವ ಭಜಿಸಿ ಪ್ರೀತಿಯ ಪಡೆದು ಭೂಸುರಗಣಕೆ ಭೂತಳದೊಳಗೆ ಯತಿಗಳ ಕುಲಕೆ ನಾಥನು ವ್ಯಾಸಮುನಿ ಎನಿಸಿ ಮರಳಿ ಖ್ಯಾತ ಶ್ರೀ ರಾಘವೇಂದ್ರನೆಂದೆನಿಸಿ ಪ್ರೀತಿಯಿಂದಲಿ ಭಕ್ತರ ಪೊರೆಯಲು ನೀತಿ ಭಾವದಲಿ ಯತಿಯಾಶ್ರಮ ಪೊಂದಿ ಸೀತಾಪತಿರಾಮ ಯದುನಾಯಕ ಕೃಷ್ಣ ಭೀತಿಹರ ನರಸಿಂಹ ವ್ಯಾಸರ ಭಜಿಸಿ ದೂತರ ಮನೋರಥ ಪೂರ್ತಿಸಿ ಪೊರೆವನು ದಾತಗುರುಜಗನ್ನಾಥ ವಿಠಲನ್ನ ನೀತ ವಿಭೂತಿಯ ಪಡೆದು ನಿರ್ಭೀತನಾಗಿಹನು ಜತೆ ದೂತಜನರ ಮಹಾಪಾತಕ ಹರನೆನ್ನಿ ಪ್ರೀತಗುರುಜಗನ್ನಾಥವಿಠಲನೊಲಿವ ರಾಗ :ಶಂಕರಾಭರಣ :ತಾಳ :ಏಕ
--------------
ಗುರುಜಗನ್ನಾಥದಾಸರು
ಆನಂದ ಆನಂದ ಪ್ರದವೋದಾಶರಧಿ ಧ್ಯಾನಾ ಪ ಭಕ್ತಿಯುಕ್ತನಾಗಿ ಮನದಿ ನಿತ್ಯಪಾಡೋ ರಾಮಚರಣ ಅ.ಪ ಕಾಲನಪುರ ಭಯವಿಲ್ಲವೋ | ವಾಲ್ಮೀಕಿಯು ಸಾಕ್ಷಿ ಇದಕೆ ಮೇಲುನಭದಿ ಮೆರೆವಾ ನೋಡೋ 1 ಶ್ರೀರಾಮನಾಮದಿಂದ ಮಾರುತಿಯು ಬ್ರಹ್ಮನೆ ನಿಪ ಮಾರಹರನು ತನ್ನ ಸತಿಯಾ ಸೇರಿ ಸತತ ಭಜಿಪ ಕೇಳೋ 2 ಹಿಂದೆ ಮಾಡಿದ ನಿನ್ನ ದುರಿತವೃಂದವೆಲ್ಲ | ಛೇದಿಸುವದು ಒಂದೆ ಭಾವದಿಂದ ಶಾಮಸುಂದರನ ನಾಮ ಪಾಡೋ 3
--------------
ಶಾಮಸುಂದರ ವಿಠಲ
ಇಂದು ಧರಿಯೊಳು ಬ್ರಹ್ಮಾನಂದವನು ತುಂಬಿ ತುಳುಕತಿಹ್ಯಾನಂದಮಯ ಕಾಯದೊಳು ಕೌತುಕವು ನಾದಬಿಂದು ಕಳಿಯಲಿ ಸ್ತುತಿಸಲೆನ್ನಳವಲ್ಲ ಕ್ಷಿತಿಯೊಳು ಘನಮಹಿಮೆ ಅತಿಹರುಷವನು ದೋರುತಿಹ್ಯ ಸದ್ಗತಿ ಸುಖವು ಗುರುದಾಸರು 1 ಓಂಕಾರ ಮೊದಲಾದ ಶ್ರುತಿವೇದ ಘೋಷಗಳು ಧಿಮಿಧಿಮಿಸುವ ಮಹಾಶಬ್ದಗಳು ವಾದ್ಯಗಳು ಕೇಳುವದು ನೀದೃಶ್ಯೆಲಿ ಗರ್ಜಿಸುವ ಭೃಂಗಿಶಂಖನಾದ ಧ್ವನಿಯಗಳು ಭೋರಿಡುವ ಭೇರಿ ಮೃದಂಗ ವೇಣಿಯಗಳು ಚಿಣಿ ಚಿಣಿ ತಂತ್ರ ಮೊದಲಾದ ಸಂಕಾರಗಳು ಕೇಳಿ ಪಾವನವಾದೆನು 2 ಬೆರೆದು ನೋಡಲು ಅಂತರಾತ್ಮದೊಳು ಪ್ರಭೆಯಗಳು ಥಳಥಳಿಸುವಾ ಮಹಾತೇಜಗಳು ಪುಂಜಗಳು ಹೇಳಲಿನ್ನೇನದ ಹೊಳವಗಳು ಸುಳವಗಳು ನೋಡುವದು ಅನಿಮಿಷದಲಿ ರವಿ ಶಶಿ ತಾರೆಗಳು ಸೂಸುತಿಹ್ಯ ಕಿರಣಗಳು ಭಾಸಿಸುವ ನಾನಾವರ್ಣಗಳು ಛಾಯಗಳು ಬೆರಗಾದೆÀನಿಂದ 3 ವರ್ತಿಸುತ್ತಲಿಹ ಪ್ರವೃತ್ತಿ ನಿವೃತ್ತಿಗಳು ಅಂತರಾತ್ಮದ ವಾಯುಸ್ತುತಿಯಗಳು ಗತಿಯಗಳು ತಿಳಿವದೀ ಪ್ರಣಮ್ಯಲಿ ಸೂಸುತಿಹ ಶ್ವಾಸವುಚ್ಛ್ವಾಸನಿಯ ಭಾಸಿಗಳು ಶೋಭಿಸುವ ಜೀವನದ ಮಂತ್ರ ಸರ ಮಾಲೆಗಳು ಪಾವನವಾದೆನು 4 ಕರದ್ವಯಂ ಮುಗಿದು ವರಗುರುಚರಣಕಮಲಕಿ ನ್ನೆರಗಿ ಪರಮಾನಂದ ಹರುಷದಿ ಶಿರಸದಿ ಶ್ರೀಗುರುಮೂರ್ತಿಯ ನೆನೆವೆನು ಸದ್ಭಾವದಿಂದ ಸದ್ಗುರು ಪಾದಮಂಪಿಡಿದು ಸದ್ಬ್ರಹ್ಮರಸದೊಳು ಮುಳುಗಿ ಸದ್ಭಕ್ತಿಯಲಿ ಸದ್ಗತಿ ಸಾಧನವು ಸಾಧಿಸಿಹ್ಯ ಮಹಿಪತಿಯು ] ಶ್ರೀ ಗುರುಕೃಪೆಯಲಿನ್ನು 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಒಂದಾನೊಂದು ದಿವಸದಲ್ಲಿ ಗುರುವ್ಯಾಸರಾಯರು | ಪ ಅಂದದಿಂದ ಪುರಂದರದಾಸರಿ | ಗಿಂದು ಭೋಜನಕ್ಕೆ ಬನ್ನಿರೆಂದು ಕರೆದರೂ ಅ.ಪ ಪೇಳಿತೆಂದು ದಾಸರು ಪೋಗಿ ತಾವು ನಿರ್ಮಲ ಸ್ನಾನ ಜಪಮಂತ್ರ ಹರಿಪೂಜೆಯನೆ ಮಾಡಿ || ಧಳಥಳಿಸುವ ವಿಠಲನ ದಿವ್ಯ ಪಾದ ಗಳ ಧ್ಯಾನಿಸಿ ಕುಳಿತರು ಜನಗಳೆಲ್ಲ ಕೇಳಿ 1 ವಿಠಲನ ದಿವ್ಯ ಮೂರ್ತಿಯ ಪಾಡಿ ದೃಷ್ಟಿಯಿಂದಲಿ ನೋಡಿ | ಮುಟ್ಟಿ ಮುಂದೊಲಿದು ಕುಣಿಕುಣಿದಾಡಿ || ಥಟ್ಟನೆ ವೇದಕ್ಕೆ ಸಮನಾದ ಪದಗಳು | ನಿಷ್ಠೆಯಿಂದ್ಹೇಳಿ ಅಭೀಷ್ಟವ ಪಡೆದರು2 ಎಡೆಯೊಳು ಷಡ್ರಸದನ್ನವ ನೀಡೆ | ಕಡು ಮಮತೆಗಳಿಂದ | ಬಿಡದೆ ದಾಸರ ದಾರಿಯ ನೋಡಿ || ಯೆಡ ಬಲದಷ್ಟ ದಿವ್ಯದಿಂಡೆಯರೆಲ್ಲಾ | ಕಡೆಯದೆಶೆ ಧರಿಸಿದರು ದಾಸರಾ 3 ಹಗಲು ಒಂಭತ್ತು ತಾಸಾಗಿರಲು | ಆಗೆದ್ದು ಬೇಗ ಗುರುಗಳ ಸಮೀಪಕ್ಕೆ ಬರಲು || ಮುಗಿದು ಕರಯುಗ್ಮವ ಬಗೆ ಬಗೆ ಸ್ತುತಿಸುತಾ | ಜಗದೊಳು ನಾನಪರಾಧಿಯೆಂದರೂ 4 ಭೋಜನವ ಮಾಡಿ ಗುರುಗಳಂದು ಸಿಂಹಾಸನದಲ್ಲಿ | ರಾಜಿಸುತ್ತ ಬಂದು ಕುಳಿತಿರಲಂದೂ || ಆ ಜನದೊಡಗೀ ದಾಸರು ಕರೆಯಲು | ನೈಜಭಾವದಿಂದು ಬಂದು ಕುಳಿತರೂ 5 ಪದಗಳು ಬರದ ವಹಿಯಕೊಂಡು ಪೋಗಿ | ಮಧ್ವಶಾಸ್ತ್ರದ ಮೇಲೆ ಕುಳ್ಳಿರಲಾಗ || ಅದನರಿಯದೆ ದಿಂಡೆಯನೊಬ್ಬನು ಆ | ಪದವಹಿಯ ತೆಗೆದು ಬಿಸುಟನಾಗಾ 6 ಯೆರಡಾವರ್ತಿ ತೆಗೆಯಲು ಆಗ | ತಿರುತಿರುಗಿ ಬಂದು ವರಪುಸ್ತಕದ ಮ್ಯಾಲೆ ಕುಳ್ಳಿರಲಂದೂ || ಗುರು ವ್ಯಾಸರಾಯರು ನೋಡಿ ಹರುಷದಿಂದ | ಕರೆದು ಬೈದರವಗೆ ಕಡು ಮೂರ್ಖನೆಂದೂ 7 ಪದದೊಹಿ ತೆಗೆದು ಬಿಸಾಡಿದರೆ ತಿರುತಿರು ಗ್ಯದರಮ್ಯಾಲೆ ವರನಾಲ್ಕು ವೇದಾರ್ಥದರೊಳಗುಂಟು || ನರರುತ್ತಮರೆಲ್ಲ ನೋಡಿ ಹರುಷದಿಂದ | ಪುರಂದರ ಉಪನಿಷತ್ತೆಂದರೂ 8 ಗುರುರಾಯರು ದಾಸರ ನೋಡಲಾಗ ಭರದಿಂದ ಯೆದ್ದು | ಅರಿವೆಯ ಕೈಯಿಂದೊರಸಲು ಆಗ || ತ್ವರಿತದಿ ಕೇಳಲು ವಿಠಲನ ಗುಡಿಯೊಳು | ಪಡದಗುರಿ ಹತ್ತವು ವರಿಸಿದೆವೆಂದರು 9 ಹಾಗೆಂದು ನುಡಿದಾಕ್ಷಣದಲಿ ಬೇಗ ಶಿಷ್ಯರಿಗೆ | ಹೋಗಿ ನೋಡಿ ಬಾರೆಂದೆನಲಾಗಿ || ಬೇಗದಿಂದಲಿ ಬಂದು ಕೇಳಲು ಅವರು | ಈಗ ದಾಸರು ಬಂದು ಪರಿಹರಿಸಿದರೆಂದು 10 ಆ ಮಾತು ಕೇಳಿದಾಕ್ಷಣದಿ ಬೇಗ | ಪ್ರೇಮದಿ ಬಂದು ಸ್ವಾಮಿರಾಯರಿಗೆ ಪೇಳಲು ಆಗ || ನಾಮವ ಸ್ಮರಿಸುತ ಪ್ರೇಮಾಲಿಂಗನವಿತ್ತು | ಕಾಮಿತಾರ್ಥ ಫಲವೀವ ಕಲ್ಪತರುವೆಂದರೂ 11 ಇಂತು ಅನುಭವ ಮಾತುಗಳನಾಡಿ ಲಕ್ಷ್ಮೀಕಾಂತನ | ಅಂತರಂಗದಲಿ ಅತಿಮಾನವ ಮಾಡಿ || ಮೂರ್ತಿ | ಶಾಂತತ್ವದಿ ನೋಡುತ ಶರಣು ಮಾಡಿದರೂ 12 ಗಜಪುರದಲ್ಲಿ ಇರುವರು ಕೂಡಿ ವಿಜಯವಿಠ್ಠಲನ್ನ | ಭಜನೆಯಿಂದ ದಿನ ದಿನ ಪೊಗಳಿ || ತ್ರಿಜಗದೊಡೆಯ ಗುರು ಪುರಂದರವಿಠಲನ | ನಿಜ ವೈಕುಂಠದ ಮುಕ್ತಿಯೈದಿದರೂ 13
--------------
ವಿಜಯದಾಸ
ಕರ್ಮ ದೊಡ್ಡದೊ ಸ್ವಾಮಿ ನಿನ್ನ ಮಹಿಮೆ ದೊಡ್ಡದೊ ಮುನ್ನಿನ ದೃಷ್ಟಾಂತದಿಂದ ನಿರ್ಣಯಿಸುವ ನಿತ್ಯಾನಂದ ಪ. ಅಡವಿಯಲ್ಲಿ ನಿಂತು ಮೃಗವ ಬಡಿದು ತಿಂಬ ಬ್ಯಾಡ ಕಡೆಗೆ ಗಿಡವ ಕೂಡಿಸೆಂದ ನುಡಿಯ ದೃಢಕೆ ಮೆಚ್ಚಿ ಕಡೆಹಾಯಿಸಿದೆ 1 ಉಗ್ರಭಾವದಿಂದ ತಮ್ಮ ಅಗ್ರಜರನ್ನು ಕೊಲಿಸಿದಂಥ ಸುಗ್ರೀವ ವೈಶ್ರವಣರ ಭಕ್ತಾಗ್ರಣ್ಯರೆಂದು ಕಾಯ್ದೆ 2 ಕರ್ಮ ಬಾಧೆ ಕಳದು ಕರುಣದಿಂದ ಮಾಧವ ನೀ ಸಲಹೊ ಶೇಷ ಭೂಧರೇಂದ್ರ ಶಿಖರವಾಸ 3
--------------
ತುಪಾಕಿ ವೆಂಕಟರಮಣಾಚಾರ್ಯ
ಕೃತ್ಯವನು ತಿಳಿಸಯ್ಯ ಕೃತ್ತಿವಾಸನ ಪ್ರೀಯಾ ಪ ಭೃತ್ಯವತ್ಸಲ ಭಾಗ್ಯ ಸಂಪನ್ನ ಮೋಹನ್ನಾ ಅ.ಪ ಹಾಸರಲಿ ನಿಂತು ಕ್ಲೇಶಪಡಿಸುವ ವಾಕ್ಯ ಅಕ್ಲೇಶಪಡಿಸುವಾ 1 ಭಾವದಿಂದೊಮ್ಮೆ ಭಯನಿತ್ತಭಯ ಪಾಲಿಪ ಭಕ್ತ ಬಂಧೊ 2 ಕಾಲಕಾಲಕೆ ಕಾಲೋಚಿತದ ಮರ್ಮ ಸೂಚಿಸೆನಗೆ 3 ವಚನ ಸತ್ಯವ ಮಾಡು ವಾಚನಸ್ವತಿಯ ಸಖಚಾಚುವ್ಯನೋಕರ 4 ವಾಚಾಮಗೋಚರ ತಂದೆವರದಗೋಪಾಲವಿಠಲನ ಚರಣ ಭಜಕ ಸುಖೇಚರೇಂದ್ರಾಧಿಪ 5
--------------
ತಂದೆವರದಗೋಪಾಲವಿಠಲರು
ಕೇಳು ಕಂಡ್ಯಾ ಒಂದು ಮನವೇ | ಕೇಳು ಕಂಡ್ಯಾ ಪ ಕೇಳು ಕಂಡ್ಯಾ ವಂದ | ಪ್ರೇಮ ಭಾವದಿಂದ ಬಾಳು ದೀಪರಿಂದ ನಿನಗೆ ಬಂದಕೀದೆ ಛಂದ 1 ವಿಡಿದು ಗುರುಪಾದಾ ಪಡಿಯೋ ನಿಜಬೋಧಾ | ಕಡಿದು ಕಾಮ ಕ್ರೋಧ | ನೀಗು ವ್ಯವಾಧಾ 2 ಅನ್ಯ ಮಾರ್ಗ ನೋಡಾದಿರುವ ಬಲಿದೃಢಾ | ಘನಗುರು ಗೂಢಾ | ವಿದ್ಯೆ ಸಾಧಿಸೆಲೋ ಮೂಢ 3 ದೊಡ್ಡವ ನಾನೆಂಬ ದೋರದೆÉ ನೀಡಂಭ | ಜಡ್ಡಾಗದೇ ಗುಂಭಿ | ನಿಜ ನೋಡಿ ನಿರಾಲಂಬ 4 ಮಹಿಪತಿ ಜನಸೊಲ್ಲ ಹಾದಿಯಂತಿದಲ್ಲ ಮಹಿಮನೇ ಬಲ್ಲನಿದರ ಸವಿಸುಖವೆಲ್ಲ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕೋಲ ಕೋಲನ್ನ ಕೋಲ ಕೋಲ ಕೋಲನ್ನ ಕೋಲಕೋಲ ಹೊಯ್ದುಪಾಡಿ ನಮ್ಮ ಜಾಣರಂಗಗೆ ಪ. ಲೋಕನಾಯಕ ವ್ಯಾಸ ಮುನಿಗಳಿಗೆ ಏಕೋ ಭಾವದಿಂದ ನಮಿಸಿಹಾಕಿರೆಮ್ಮ ಕೋಲ ಹೊಯ್ದುವಾಕ್ಯಗೆಲಿಸೆಂದು1 ಮಿತ್ರೆ ರುಕ್ಮಿಣಿದೇವಿ ಕರೆದುಮಿತ್ರಾದಿಗಳಿಗೆ ಹೇಳಿದಳುಮುತ್ತಿನ ಕೋಲ ತೊಳಿಯಿರವ್ವಉತ್ತಮ ಜಲದೊಳು 2 ರಾಸ ಕ್ರೀಡೆಯಲ್ಲಿ ವನಿತೆಯರುವಾಸುದೇವ ಪಿಡಿದ ಕೋಲ ಸೋಸಿಲೆ ಪೂಜಿಸಿರಮ್ಮಲೇಸು ಕೊಡಲೆಂದು 3 ಮಂದಗಮನೆಯರೆಲ್ಲ ಕೋಲಿಗೆ ಗಂಧ ಅಕ್ಷತೆ ಏರಿಸಿರೆ ಮುಂದಾಗಿ ಬಲಗೊಳ್ಳಿರೆಲ್ಲವೃಂದಾರಕರನ್ನ4 ನಲ್ಲೆಯರು ಮುತ್ತಿನ ಕೋಲಿಗೆ ಮಲ್ಲಿಗೆ ಸಂಪಿಗೆ ಏರಿಸಿರೆಎಲ್ಲಾ ಫಲಗಳಿಟ್ಟು ಕೈಯ್ಯನಲ್ಲೆಯರು ಮುಗಿದಿರೆ 5 ಜಾಣೆಯರು ನೀವೆಲ್ಲ ಮೊದಲೆವಾಣಿಯ ಬಲಗೊಳ್ಳಿರೆ ಕಲ್ಯಾಣವಾಗಲೆಂದು ಕೈಯ್ಯಮಾಣಗೆ ಮುಗಿದಿರೆ 6 ಮೃಡನ ಮಗನ ಮೊದಲೆ ನೆನೆದುಪಿಡಿಯಿರಮ್ಮ ಕೋಲ ನಿಮ್ಮನುಡಿಯಗೆಲಿಸಲೆಂದು ದ್ರವ್ಯವಕೊಡಿರೆ ದಾನವ 7 ಇಂದು ಗೆಲಿಸೆಂದು 8
--------------
ಗಲಗಲಿಅವ್ವನವರು
ಗಣಾಧೀಶ ಗೌರೀಶ್ ವಾಗೀಶ ಶ್ರೀಶಾನ'ುಸಿ ಬೇಡುವ ಪ್ರಸಾದವನು ಜಗದೀಶಾನೆಲಸಿ ಹೃದಯದಿ ಬಂದು ನುಡಿಸು ದಯದಿಂದಾನೀ ನುಡಿಸಿದಂತೆ ನುಡಿಯುವೆ ಸ್ಪೂರ್ತಿುಂದಾ 1ದೇಹ ದೇವಾಲಯವು ದೇವರೊಳಗಿಹನುಮನದ ಗರ್ಭಾಲಯದಿ ಮಲಗಿಕೊಂಡಿಹನುನಾಲಿಗೆಯ ನಾಮಗರ್ಜನೆಯ ಬಲದಿಂದಾಮನದ ಕದ ತೆಗೆಯೆ ಕಾಣುನನು ಗೋ'ಂದಾ 2ಮನವೆ ಕಾರಣವು ಬಂಧಮೋಕ್ಷಗಳಿಗೆಮನವೆ ಕಾರಣ'ಲ್ಲಿ ಸುಖದುಃಖಗಳಿಗೆಮನಸು ಬಿಗಿ'ಡಿದ್ಹಿಡಿದು 'ಷಯಗಳ ತ್ಯಜಿಸುಮನತು ನಾಮಸ್ಮರಣೆಯೊಳು ಸದಾ ಇರಿಸು 3ಯಾವಾಗಲೂ ರಾಮ ನಿನ್ನೊಳಗೆ ಇರುವಾಭಾವದಿಂದಲಿ ಕರೆಯೆ 'ಒ' ಎಂದು ಬರುವಾದೇವರನು ನಂಬಿದರೆ ಸರ್ವದಾ ಕಾವಾಯಾವ ಅಂಜಿಕೆಯು ನಿನಗಿಲ್ಲ ತಿಳಿ ಜೀವಾ 4ನಿನ್ನೊಳಗೆ ನೀ ನಿನ್ನ ರಾಮನನು ನೋಡುನಿನ್ನ ಬೇಡಿಕೆಗಳನು ರಾಮನಲಿ ಬೇಡುಅನ್ಯರನು ಅಲಕ್ಷಿಸದೆ ಭಜನೆಯನು ಮಾಡುಪುಣ್ಯವಂತರ ಸಂಗದೊಳು ಸದಾ ಕೂಡು 5ಶ್ರವಣ ಭಕ್ತಿಯು ಬೇಕು ಮೊದಲು ಚೆನ್ನಾಗಿಶ್ರವಣವಾಗುವವರೆಗೆ ನಾದತಾನಾಗಿಭವ ಸಮುದ್ರವನು ದಾಟುವಡೆ ಸುಖವಾಗಿಶ್ರವಣವೇ ಮುಖ್ಯ ಸಾಧನವು ನಿಜವಾಗಿ 6ನಾದ ಹುಟ್ಟಿದ ಮೇಲೆ ನಾಮ ಕೀರ್ತನವುನಾಮ ಕೀರ್ತನದಿ ಅಸ್ಪಷ್ಟ ದರುಶನವುನೇಮ ಹೆಚ್ಚಾದಂತೆ ಸ್ಮರಣೆ ಶಾಶ್ವತವುಸ್ಮರಣೆಯೊಳು ಸಂಪೂರ್ಣ ವಸ್ತುದರುಶನವು 7ಅನನ್ಯ ಭಕ್ತಿಯ ಬಲವ ಬಣ್ಣಿಸುವದೇನುಕಣ್ಮುಂದೆ ಸರ್ವದಾ ಹರಿಯು ಕುಣಿಯುವನುಕಣ್ಣು ಮುಚ್ಚಣಿಕೆಯಾಟವನು ಆಡುವನುಅಣುರೇಣು ಪರಿಪೂರ್ಣನಾಗಿ ತೋರುವನು 8ಕುಣಿಯುವನು ಕುಣಿಸುವನು ನಗುತ ನಲಿಸುವನುದಣಿಯುವನು ದಣಿಸುವನು ಉಣುತ ಉಣಿಸುವನುಜನರಿಗದ್ಭುತ ಚಮತ್ಕಾರ ತೋರುವನುಕ್ಷಣ ಬಿಡದೆ ಕೆಳಗಿಳಿಯದಂತೆ ಕಾಯುವನು 9ದೇವರನು ನಂಬಿ ಕೆಡಕಾದವರು ಇಲ್ಲಜದೇವರನು ಬಿಟ್ಟು ಸುಖಹೊಂದಿದವರಿಲ್ಲಾದೇವರನು ಒಲಿಸುವೆಡೆ ಭಾವ'ರಬೇಕುಭಾವ'ಲ್ಲದ ಢೋಂಗಿನರ್ಚನೆಯು ಸಾಕು 10ಚಿನ್ನ ಬೆಳ್ಳಿಗಳ ಮಂಚಪವು ಬೇಕಿಲ್ಲಾಸಣ್ಣಕ್ಕಿ ಅನ್ನ ಪಕ್ವಾನ್ನ ಬೇಕಿಲ್ಲಮಣ್ಣು ಕುಳ್ಳಿಯೊಳು ಒಣ ಅಂಬಲಿಯು ಸಾಕುಘನ್ನ ಮ'ಮನಿಗೆ ನಿರ್ಮಲ ಭಕುತಿ ಬೇಕು 11ಶ್ರವಣ ಭಕ್ತಿಯ ದಾಟದವನು 'ಸಾಧಕ' ನುಪಾದಸೇವನದಿಂದ 'ಸಾಧು' ಆಗುವನುದಾಸ್ಯ ಭಕ್ತಿಯ ಮುಂದೆ 'ಸಿದ್ಧ' ನಾಗುವನುಸಖ್ಯಭಕ್ತಿಯ ಮುಂದೆ 'ಗುರು'ವು ಆಗುವನು 12ಭಕ್ತಿ ಮಾರ್ಗವು ಬಹಳ ಸುಲಭ ಸಾಧನವುಭಕ್ತಿ ಸರ್ವರಿಗೆ 'ಷಯದೊಳು ಪರಿಚಿತವು'ಷಯದೊಳಗಿನ ಪ್ರೀತಿ ಎಳೆದೆಳೆದು ತೆಗೆದುಪರಮಾತ್ಮನೊಳು ಇಡಲು ಭಕ್ತಿಯಾಗುವದು 13ಉಂಡದ್ದು ಶ್ರೀ ಹರಿಗೆ ನೈವೇದ್ಯವೆನ್ನುಕಂಡದ್ದು ಶ್ರೀ ಹರಿಯ ಪ್ರತಿರೂಪವೆನ್ನುಮಲಗಿದ್ದು ಶ್ರೀ ಹರಿಗೆ ಸಾಷ್ಟಾಂಗವೆನ್ನುಸುಲಭ ಪೂಜೆಯ ಮರ್ಮವೆನು ತಿಳಿದು ನೀನು 14ಸಾಲವನು ಮಾಡಿ ಹೋಳಿಗೆ ಹೊಡಿಯಬೇಡಾಜೇಲಿಗಂಜುತ ದೇಶಕಾರ್ಯ ಬಿಡಬೇಡಾಆಲಸ್ಯದಲಿ ಕಾಲವನು ಕಳಿಯಬೇಡಾಕೆಲಸದಲಿ ಕೀಳು ಮೇಲೆಂದು ಅನಬೇಡಾ 15ಸ್ವಚ್ಛ'ರಬೇಕು ಮನಬುದ್ಧಿ ದೇಹದೊಳುಅಚ್ಚುಕಟ್ಟಿರಬೇಕು ಸರ್ವಕಾರ್ಯದೊಳುಎಚ್ಚರಿರಬೇಕು ಜನಪಾತ್ರೆ ರಾತ್ರಿಯೊಳುಬಿಚ್ಚು ಮನ'ರಬೇಕು ಸ್ವಜನ 'ುತ್ರರೊಳು 16ಬಡತನವು ಬಂದಾಗ ಧೈರ್ಯ ಬಿಡಬೇಡ'ಡಿದು ನೆಂಟರ ಮನೆಯ ನೀ ಕೂಡಬೇಡದುಡಿದು ತಿನ್ನಲು ಸ್ವಲ್ಪ ಸಹ ನಾಚಬೇಡಮಡದಿ ಹುಟ್ಟಿದ ಮನೆಯ ನೀ ಸೇರಬೇಡಾ 17ಗಾಜಕಾರಣದೊಳು ' ಮುಚ್ಚುಮನ' ಬೇಕುಧರ್ಮಕಾರಣದೊಳಗೆ 'ಸ್ವಚ್ಛಮನ' ಬೇಕುಅರ್ಥಕಾರಣದೊಳಗೆ ' ಮೆಚ್ಚುಮನ'' ಬೇಕುಕಚ್ಚೆಕೈಗಳು ಸದಾ ಸ್ವಚ್ಛ'ರಬೇಕು 18ಸಂಸಾರ ಮಾಡುವಡೆ ಧನವ ಸಂಗ್ರ'ಸುಸನ್ಯಾಸಿಯಾಗುವೆಡೆ ವೈರಾಗ್ಯ ಬೆಳೆಸುಸರ್ವಕರ್ಮಗಳಲ್ಲಿ ಶ್ರೀಹರಿಯ ಸ್ಮರಿಸುಸರ್ವದಾ ಸಂತ ಸಂಗದೊಳು ಸಂಚರಿಸು19ಸಂತ ಸಂಗದೊಳು ಸಂಚರಿಸುವುದು ಸ್ನಾನಾಸಂತ ವಚನಾಮ್ರತದ ಪಾನವೇ ಸ್ನಾನಾಸಂತರನು ಸಂತೋಷಪಡಿಸುವುದು ಸ್ನಾನಾಶಾಂತಮನದಿಂ ಹರಿಯ ಚಿಂತಿಪುದ ಸ್ನಾನಾ 20ಬಾಲ್ಯದಲಿ ಬ್ರಹ್ಮಚರ್ಯದಿ ಬಲವ ಬೆಳೆಸುತಾರುಣ್ಯದಲಿ ದುಡಿದು ಧನವ ನೀ ಗಳಿಸುವೃದ್ಧಾಪ್ಯದೊಳು ಸದಾ ಶ್ರೀಹರಿಯ ಸ್ಮರಿಸುಶ್ರೀಹರಿಯ ಸ್ಮರಣೆಯೊಳು ಆಯುಷ್ಯ ಸವೆಸು 21ಮೊದಲು ನಿನ್ನ ಪ್ರಯತ್ನ ತಪ್ಪದೆಲೆ ಮಾಡುಅದು ನೀಗದಿರೆ ಮುಂದೆ ದೈವವನು ನೋಡುಮದುವೆಯಾಗುವ ಮೊದಲು ತಿಳಿತಿಳಿದು ನೋಡುದುಡಿದು ಧನ ಗಳಿಸಿ ಸುಖದಿಂದ ಬಾಳುವೆ ಮಡು 22ಧನ'ಲ್ಲದವನ ಸಂಸಾರ ಸುಖವಲ್ಲಾಮನೆಯೊಳಗೆ ನಿತ್ಯ ಕಿರಿಕಿರಿಯು ತರವಲ್ಲಾದನದಂತೆ ಹೆಣ್ಣು ನುಡಿಯುವುದು ಸರಿಯಲ್ಲಾಎಣಿಕೆುಲ್ಲದೆ ಮಕ್ಕಳಾಗುವುದು ಸಲ್ಲಾ23ನೆಂಟರೊಳು ಬಹುದಿನ ಕೆಳಗಿರಬೇಡಾ'ಫ್ರಂಟಸೀಟಿ'ನ ಮೇಲೆ ನೀ ಕೂಡಬೇಡಾಒಂಟಿಯಲಿ ಹೆಂಡತಿಯ ಬಿಟ್ಟು ಇರಬೇಡಾಗಂಟು ಒಬ್ಬರ ಕೈಗೆ ಕೊಟ್ಟು ಆಳಬೇಡಾ 24ನಿನ್ನಂತೆ ತಿಳಿ ಪರರ ಸುಖ ದುಃಖಗಳನುಅನ್ಯಥಾ ನೋಡದಿರು ಅಣ್ಣ ತಮ್ಮರನುಸರ್ವಥಾ ಸ'ಸದಿರು ಅನ್ಯಾಯಗಳನುತಿಳಿಯದೇ ಹಳಿಯದಿರು ಭಿನ್ನ ಮತಗಳನು 25ಅತಿ ಮತುಗಳು ಬೇಡ ಅತಿ ಮೌನ ಬೇಡಾಅತಿ ತಿನಸು ಬೇಡ ಅತಿ ಉಪವಾಸ ಬೇಡಾಅತಿ 'ಹಾರವು ಬೇಡ ಅತಿ 'ನಯ ಬೇಡಾಅತಿ ಉದಾರತೆ ಬೇಡ ಜೀನತನ ಬೇಡಾ 26ಭೂ'ುಂಗೆ ಭಾರವಾಗುತ ತಿರುಗಬೇಡಾಕೂಳಿಂಗೆ ಕಾಳಾಗಿ ನೀ ಕೂಡಬೇಡಸಾಲ ಸಿಗುವಾಗ ಸಂತೋಷ ಪಡಬೇಡಾಸಾಲವೇ ಶೂಲವೆಂಬುದು ಮರೆಯಬೇಡಾ 27ಹನಿಗೆ ಹನಿ ಕೂಡಿದರೆ ಹಳ್ಳದಾಗುವುದುತೆನಿಗೆ ತೆನಿ ಕೂಡಿದರೆ ರಾಶಿಯಾಗುವುದುಕ್ಷಣಬಿಡದೆ ಕಂಡಲ್ಲಿ 'ದ್ಯೆಯನು ಗಳಿಸುಕಣಬಿಡದೆ ಧನ ಧಾನ್ಯಗಳನು ಸಂಗ್ರ'ಸು 28ಮಾತು ಕೃತಿಗಳಿಗೆ ಬಲು ಮೇಳ'ರಬೇಕುನೀತಿಯೊಳು ತನ್ನ ಮನಸಾಕ್ಷಿ ಇರಬೇಕುಮಾತು ಬಲು ಸ'ುದ್ದು ಸತ್ಯ'ರಬೇಕುಸತ್ಯ'ಲ್ಲದ ಸುಳ್ಳು ಸ' ಮಾತು ಸಾಕು 29ಐಕ್ಯ'ದ್ದರೆ ಸೌಖ್ಯ ಭೇದದೊಳು ಬೇದಾಐಕ್ಯ'ದ್ದರೆ ಬಲವು ಕ್ಷಯಬೇನೆ ಭೇದಾಐಕ್ಯ'ದ್ದರೆ 'ಗ್ಗು ಭೇದದೊಳು ಕುಗ್ಗುಐಕ್ಯದಿಂದ ಸ್ವಾತಂತ್ರ್ಯ ರಥವನ್ನು ಜಗ್ಗು 30ತನ್ನ ಅಭಿಮಾನ ತನ್ನವರ ಅಭಿಮಾನತನ್ನ ಕುಲಗೋತ್ರ ಜಾತಿಯ ಸ್ವಾಭಿಮಾನತನ್ನ ಭಾಷಾರಾಷ್ಟ್ರ ಧರ್ಮಾಭಿಮಾನಮಾನವನಿಗಿರಬೇಕು ಇಲ್ಲದವ 'ಶ್ವಾನಾ' 31ತನ್ನತನ ಬಿಡಬೇಕು ತನ್ನವರಿಗಾಗಿತನ್ನವರ ಕುಲಗೋತ್ರ ಜಾತಿಗಳಿಗಾಗಿ ಕುಲಗೋತ್ರ ಜಾತಿಗಳ ತಾಯ್ನಾಡಿಗಾಗಿತಾಯ್ನಾಡು ನುಡಿಧರ್ಮ ಪರಮಾತ್ಮಗಾಗಿ 32ತನ್ನ ಉದ್ಯೋಗ ಮನಮುಟ್ಟಿ ಮಾಡುವರುಉಣಲು ಅಧಿಕಾರ ಆಮೇಲೆ ದೊರಕುವದುಉಣುವಾಗ ಶ್ರೀಹರಿಯ ಸ್ಮರಣೆ ಮಾಡುವದುಮನೆಯೊಳಗೆ ಶಿಸ್ತು ಶಾಂತಿಗಳ ಕಾಯುವದು33ಹರಿಕಥಾ ಕೀರ್ತನ ಪುರಾಣ ಪಠಿಸುವದುಸರಸ ವಾಙ್ಮಯದ ಅಭ್ಯಾಸ ಮಡುವದುತರು ಬರುವ ತನ್ನ ವ್ಯವಹಾರ ನೋಡುವದುಪರ ಪರಿಸ್ಥಿತಿಗಳನು ತೂಗಿ ನೋಡುವದು 34'ಶ್ರಾಂತಿ ಅಭ್ಯಾಸಿ ಸರಸ ಸಲ್ಲಾಪನಿಶ್ಚಿಂತೆುಂದ ನಿದ್ರೆಯು ಸೌಖ್ಯರೂಪನಿತ್ಯ ಮಾನವನ ದಿನಚರಿಯ ಈ ರೂಫನಿಶ್ರೇಯಸಕೆ ಸುಲಭ ಸಾಧನವು ಭೂಪಾ 35ಸ್ವಚ್ಛ ಹವೆ ನೀರು ವ್ಯಾಯಾಮ 'ಶ್ರಾಂತಿಸಾತ್ವಿಕ ಸಸತ್ವಾನ್ನ ಪಾನಗಳ ಪ್ರೀತಿಉಚ್ಚತಮ ಧ್ಯೇಯ ಆಚರಣೆಗಳ ರೀತಿಮೋಕ್ಷಕ್ಕೆ ಸಾಧನವು ಇಹದಿ ಸಂತೃಪ್ತಿ 36ದೇಹ ಬಿದ್ದರೆ 'ಂದೆ ಕೀರ್ತಿುರಬೇಕುಕೀರ್ತಿ ಬರುವಂಥ ಕಾರ್ಯವ ಮಾಡಬೇಕುಕಾರ್ಯದೊಳು ಕುಶಲತನ ದಕ್ಷತೆಯು ಇರಬೇಕುಫಲವು ಪರಮಾತ್ಮನಾಧೀನವೆನಬೇಕು 37ಸರ್ವದಾ ಸುಖವೆ ಇದ್ದವರು ಯಾರುಂಟುಅವರವರ ಕರ್ಮ ಫಲವೇ ಅವರ ಗಂಟುಬೆಳತು ಕತ್ತಲೆಯಂತೆ ಚಕ್ರ ಆರುಗುವದುಸುಖ ದುಃಖ ಬರುವಾಗ ಬಂದು ಹೋಗುವುದು 38ಅನುಭವದಿ ಹೆಚ್ಚು ಸಾಧನ ಬೆಳೆಯಬೇಕುಅನುಭವದ ಮಾತುಗಳು ಬಚ್ಚಿಡಲು ಬೇಕುಅನುಭವವು ಬಂತೆಂದು ಗರ್ವ ಪಡಬೇಡಾಗರ್ವದಿಂದಲಿ ಮತ್ತೆ ಕೆಳಗಿಳಿಯ ಬೇಡಾ 39ಅಡಗಿ ಅಂಬಲಿ ಅರ' ಅಂಚಡಿಯ ಕಡೆಗೆಹುಡುಗರ ಬಲಾರೋಗ್ಯ ನಡೆನುಡಿಯ ಕಡೆಗೆಕಡು ಚಾಣ್ಮೆುಂದ ನೋಡುವದು ಸತಿ ಪತಿ ಕೆಲಸಾ 40ಪತಿುಂದಲೇ ಸತಿಯು ಸತಿುಂದ ಪತಿಯುಸತಿಪತಿಯ ಪ್ರೇಮದಿಂದಾತ್ಮದುನ್ನತಿಯುಪತಿಯ ಕೋಪದಿ ಕಲ್ಲು ಆಗುವಳು ಸತಿಯುಸತಿಯ ಶಾಪದಿ ಕತ್ತೆಯಾಗುವನು ಪತಿಯು 41ಸಾ'ಗಂಜಲು ಬೇಡ ಸಾ'ಗಳಬೇಡಾಸಾವು ಅಂದರೆ ಭಯಂಕರ ತಿಳಿಯಬೇಡಾದೇಹಕ್ಕೆ ಬಾಲ್ಯ ಯೌವನ ಮುಪ್ಪಿನಂತೆದೇಹಾಂತರ ಪ್ರಾಪ್ತಿಯೇ ಮರಣಗೀತೆ 42'ದ್ಯಾರ್ಥಿ ಬಡವನಿದ್ದರೆ ಭಿಕ್ಷೆನೀಡುಅಶನಾರ್ಥಿ ಟೊಣಪನಿದ್ದರೆ ದೂರ ಮಾಡುಹಸಿವೆ ಚೆನ್ನಾಗಿ ಇದ್ದರೆ ಊಟ ಮಾಡುಹಸಿಯು ಸಾಕಷ್ಟು ಇದ್ದರೆ ಬಿತ್ತಿನೋಡು43ಶುದ್ಧ ಆಚರೆಣೆುದ್ದರೆ ಮಾತನಾಡುಬುದ್ಧಿ ಬಲು ಚುರುಕು ಇದ್ದರೆ ವಾದ ಮಡುದುಡ್ಡು ರಗಡಿದ್ದರೆ ಘಡಾಮೋಡ ಮಾಡುಜಡ್ಡು ಇದ್ದರೆ ಪಥ್ಯದುಪವಾಸ ಮಾಡು 44ಹಾಳುಹರಟೆಯ ಬಿಟ್ಟು ಶ್ರೀ ಹರಿಯ ಸ್ಮರಿಸುಕಾಲುವನು ನೋಡಿ ಸತ್ಕರ್ಮ ಆಚರಿಸುನಾಳೆ ಮಾಡುವೆನೆಂಬ ಮಾತು ದೂರಿರಿಸುನಾಳೆ ಮಾಡುವ ಧರ್ಮ ಇಂದು ನೀ ಮುಗಿಸು 45ಮನ ಮುಟ್ಟಿ ಸ್ಮರಣೆ ಸಂತತ ಮಾಡಬೇಕುಮನಸು ಓಡಲು ಮತ್ತೆ ಜಗ್ಗಿ ತರಬೇಕುಅನುಭವವು ಬಂದಂತೆ ಮನಸು ಕರಗುವದುಮನಸು ಕರಗಿದರೆ ವಾಸನೆಯು ಅಳಿಯುವದು 46ಎಲ್ಲ ಕಡೆಯಲಿ ಇರುವನೊಬ್ಬನೇ ದೇವಎಲ್ಲ ನಾಮಗಳಿಂದಲೂ ಕರೆಸಿಕೊಳುವಾಯಾವ ಬೇಕಾದ ಹೆಸರಿನ ದೇವರನ್ನುಭಕ್ತಿುಂ ಭಜಿಸಿದರೆ ಬಂದು ಪೊರೆಯುವನು47ಧನಕನಕದಾಶೆಯನು ತೊರೆದವನು ಸಂತವನಿತೆಯರ ಬಲೆಯೊಳಗೆ ಸಿಗದವನು ಸಂತಮನದಿ ಮಹಾದೇವನನು ಕಂಡವನು ಸಂತಜನರೊಳು ಜನಾರ್ಧನನ ನೋಡುವನು ಸಂತ 48ಘೋರ ಯುದ್ಧದಿ ನರನ ರಥವ ನಡೆಸಿಹನುಸೀರೆಯಾಗುತ ಸತಿಯ ಮಾನ ಉಳಿಸಿದನುನೀರಿನವನಾಗಿ ಎಂಜಲವ ಬಳಿದಿಹನುಪರಮ ಪುರುಷನ ಕರುಣೆಗೆಣಿಯು ಉಂಟೇನು 49ಹೃದಯ ದೊಳಗಿದ್ದ ಶ್ರೀಹರಿಯ ಮರೇತುಕಡುದ್ಯೆನ್ಯ ಬಿಡಬೇಡ 'ಷಯದೊಳು ಬೆರೆತುಕಾಮಧೇನು'ನ ಕೆಚ್ಚಲೊಳಿದ್ದ ನೀನುಅಮೃತವನು ಬಿಟ್ಟು ರತ್ನವನು ಕುಡಿವೆಯೇನು 50ಸರ್ವ ದುಃಖಗಳು ನಿರ್ಮೂಲವಾಗುವದುಸಂಸಾರ ಪರಮಾರ್ಥ ಕೂಡಿ ನಡೆಯುವವುಪ್ರಭು ರಾಮಚಂದ್ರನ ಪ್ರಸಾದ ಮ'ಮೆಯನುಪಠಿಸಿ ಆಚರಿಸಿದರೆ ಸುಖದಿ ಬಾಳುವನು 51ಜಯಜಯತು ಆರ್ಯ ಭೂಮತೆ 'ಖ್ಯಾತೆಜಯತು ಭಾರತಮಾತೆ ಸರ್ವಜನ ತ್ರಾತೆಜಯಜಯತು ಜಯ'ಂದ ಜನನಿ ಕಡು ಕರುಣಿಜಯ ಜಯತು ಸರ್ವ ಸಂಸ್ಕøತಿಯ ಮುಕುಟಮಣಿ 52ಅತಿಥಿ ಬಂದರೆ ಮನ ದೊಡ್ಡದಿರಲಿಒಣಹೆಮ್ಮೆ ಬೇಡ ಆದರದ ಮಾತಿರಲಿಮಾತು ಕೃತಿ ನಿಜ ಪ್ರೇಮ ತುಂಬಿರಲಿಊಟ ಉಪಚಾರದಿಂದ ಸಂತೋಷಗೊಳಲಿ 53ಗುಡಿಯೇಕೆ ಬೇಕು ಮನದೊಳಗೆ ಹರಿಯುಂಟುಅದರ ಕದ ತೆಗೆಯ ಪ್ರತಿಬಂಧವೇನುಂಟುಗುಡಿಯೊಳಗೆ ಹೊಗಿಸಬೇಕೆಂಬುವುದು ಛಲವುಛಲ 'ದ್ದರೇನದಕೆ ಆಧ್ಯಾತ್ಮ ಬೆಲೆಯು54ಮನ ಪ'ತ್ರ'ದ್ದರೆ ದೇವ ಒಲಿವಾಮನಸು ಅಪ'ತ್ರ'ದ್ದರೆ ದೇವ ಕುದಿವಾಮನ ಸುಪ್ರಸನ್ನ'ದ್ದರೆ ದೇವ ಒಲಿವಾಮನಸು ಧುಸುಮುಸು ಇದ್ದರೆ ದೇವ ಕುದಿವಾ 55ಮನಸು ನಿರ್ಭಯ'ದ್ದರಾ ದೇವ ಒಲಿವಾಮನಸು ನಿರ್ಮಲ'ದ್ದರಾ ದೇವ ಒಲಿವಾಮನಸು ನಿರಹಂಕಾರವಾದಾಗ ಬರುವಾಮನಸು ನಿಷ್ಕಪಟವಾದರೆ ಬಂದು ಪೊರೆವಾ 56ಅನ್ಯರಿಗೆ ನಿನ್ನ ಭಾರವ ಹಾಕಬೇಢನಿನ್ನ ಯೋಗ್ಯತೆ'ುೀರಿ ಭಾರ ಹೊರಬೇಡನಿನ್ನ ಮನೆತನದ ಜಗಳ ಬೈಲಿಗಿಡಬೇಡಹೆಣ್ಣು ಮಕ್ಕಳ ಮೇಲೆ ಕ್ಕೆ-ಎತ್ತಬೇಡ 57ನಿನ್ನ 'ರಿಮೆಯನು ನೀ ಹೇಳಬೇಡಅನ್ಯರನು ಕೀಳೆಣಿಸಿ ಮಾತಾಡಬೇಡಕಣ್ಮುಚ್ಚಿ ಇನ್ನೊಬ್ಬರನುಕರಣೆ ಬೇಡನಿನ್ನ ಸಂಸ್ಕøತಿಯ ವೈಶಿಷ್ಟ್ಯ ಬಿಡಬೇಡ 58ಸು'ಚಾರದಿಂದ ಧ್ಯೇಯವ ಗೊತ್ತುಪಡಿಸುಗೊತ್ತುಪಡಿಸಿದ ಧ್ಯೇಯವನ್ನು ನಿತ್ಯಸ್ಮರಿಸುಮುಟ್ಟಲಾ ಧ್ಯೇಯವನು ಶಕ್ತಿ ಸಂಗ್ರ'ಸುಶಕ್ತಿಯನು ಚಾತುರ್ಯದಿಂದ ನೀ ಬಳಿಸು 59ಸಮಯ ಪ್ರತಿಕೂಲ'ರೆ ವೈರಿಗಳ ನ'ುಸುನ'ುಸಿ ಒಳಹೊಕ್ಕವರ ಬಲವ ಹದಗೆಡಿಸುಶ್ರಮಪಟ್ಟು ಅ'ುತಬಲ ಗುಪಿತದಿಂ ಬೆಳಿಸುಸಮಯ ಸಾಧಿಸಿ ದುಷ್ಟಜನರನು ಸಂಹರಿಸು60ದೇಹದೊಳು ನೀನುಂಟು ದೇಹ ನೀನಲ್ಲನಾ ಎಂಬ ಜ್ಞಾನ ನಿನಗುಂಟು ಆದಕಿಲ್ಲನೀನು ಈ ದೇಹದಿಂದ ಹೊರಬೀಳಲಾಗಹೆಣವೆಂದು ಕರೆಯುವರು ದೇಹವನು ಬೇಗ 61ಹುಟ್ಟುವವ ನೀನಲ್ಲ ಹುಟ್ಟುವದು ದೇಹಬೆಳೆಯುವವ ನೀನಲ್ಲ ಬೆಳೆಯುವದು ದೇಹಸಾಯುವವ ನೀನಲ್ಲ ಸಾಯುವದು ದೇಹರೂಢಿಯೊಳು ನಿನಗಿದನು ಹಚ್ಚುವದು ಮೋಹ62ಖೋಡಿ ಮನವನು 'ಡಿದು ಸಾಧು ಮಡುವದುಸಾಧು ಮಾಡುತ ನಾಮ - ಘೋಷ ಹಚ್ಚುವದುಓಡಿ ಹೋಗಲು ಮತ್ತೆ ಎಳೆದೆಳೆದು ತಂದುಬೋಧಿಸುತ ನಾಮ ಜಪದೊಳು ಸೇರಿಸೆಂದು 63ಒಮ್ಮೆ ಹರಿನಾಮದೊಳು ಮನಸು ಸೇರಿದರೆಅದಕೆ ಆಗುವ ಸುಖವು ಆ ರುಚಿಯು ಬೇರೆಆ ರುಚಿಯ ಆ ಸುಖವು ಹತ್ತಿದರೆ ಮನಕೆತಿರುಗಿ ಎಂದಿಗೂ ಅದು ಹೋಗದದು 'ಷಯಸುಖಕೆ64ಚಿತ್ತ ಸ್ಥಿರ'ಲ್ಲದಿರೆ ಬುದ್ಧಿ ಸ್ಥಿರ'ಲ್ಲಬುದ್ಧಿ ಸ್ಥಿರ'ಲ್ಲದಿರೆ ಭಾವನೆಯು ಇಲ್ಲಭಾವನೆಯು ಇಲ್ಲದಿದ್ದರೆ ಶಾಂತಿುಲ್ಲ ಶಾಂತಿಯೇ ಇಲ್ಲದವ ಸುಖವೇನು ಬಲ್ಲ 65ಅನುಕೂಲ ಮತ ಮಾತ್ರ ನೀ ಎಣಿಸಬೇಡಪ್ರತಿಕೂಲ ಮತ ಉಪೇಕ್ಷೆಯ ಮಾಡಬೇಡಅನುಕೂಲ ಪ್ರತಿಕೂಲಗಳನು ತಿಳಿ ತಿಳಿದುಏನಾದರೊಂದು ಸಾಹಸ ಕಾರ್ಯ ಮಾಡು 66ಉದ್ಯೋಗದೊಳು ಸದಾ ಆನಂದ ಉಂಟುಉದ್ಯೋಗದೊಳಗೆ ಲಕ್ಷ್ಮಿಯ ವಾಸವುಂಟುಉದ್ಯೋಗವನು ಮಾಡಿ ದೇವರನು ಬೇಡುಉದ್ಯೋಗ ಬಿಟ್ಟು ಕುಳಿತರೆ ನಿನಗೆ ಕೇಡು 67ದೀರ್ಘ ಯೋಚನೆಯ ಮಾಡುತ ನೀ ಕೂಡಬೇಡಯೋಗ್ಯ ಮುಂಬೆಳಕು ಇಲ್ಲದೆ ಧುಮುಕಬೇಡ'ಗ್ಗಿ ಮೈಮರೆಯದಿರು ದೈವ ತೆರೆದಾಗಕುಗ್ಗಿ ಎದೆ ಒಡೆಯದಿರು 'ಧಿ ಕಾಡುವಾಗ 68ದೈವವನಕೂಲ'ದ್ದಾಗ ಎಚ್ಚರಿಕೆಗರ್ವ ಸೇರುವದು ತಿಳಿಯದಲೆ ಎಚ್ಚರಿಕೆಗರ್ವದಿ ಸ್ಮøತಿಗೆ ಸಮ್ಮೋಹವೆಚ್ಚರಿಕೆಸಮ್ಮೋಹದಿಂದ ಸರ್ವನಾಶ ಎಚ್ಚರಿಕೆ 69ದೈವ ಯತ್ನಗಳ ಗತಿ ಗಹನವಾಗಿಹುದುಒಬ್ಬೊಬ್ಬರನುಭವವು ಒಂದೊಂದು ಇಹುದುವಾದದಿಂ ಬಗೆಹರಿಯದಂಥ 'ಷಯ'ದುಇದರ ಹದ ತಿಳಿದು ಯತ್ನವಂ ಮಾಡುವದು 70ಜೋಲು ಮೋರೆಯ ಹಾಕಿ ನೀ ಕೂಡಬೇಡಕಾಲು ಅಪ್ಪಳಿಸಿ ಕೆಲಸಕೆ ಹತ್ತಬೇಡಸ್ಟೈಲು ಉಡುಗೆಯ ಉಟ್ಟುಕೊಂಡೋಡಬೇಡಮೈಲಿಗೆಯ ಮನದಿಂದ ಜಪ-ಮಾಡಬೇಡ 71ಕಾರ್ಯ ಮಾಡುವ ಜನಕೆ ಮರ್ಯಾದೆ ಮಡುಬಾಯಬಡುಕ ಜನರ ಕೃತಿಯನು ತಿಳಿದು ನೋಡುಧೈರ್ಯದಿಂ ದುರ್ಜನರ ಕೂಡ ಹೋರಾಡುಆರ್ಯ ಸಂಸ್ಕøತಿಯ ಸಂರಕ್ಷಣೆಯ ಮಾತು 72ಗುಣ ಕರ್ಮಗಳ ನೋಡಿ ಮಾನವನು ಮಾಡುಒಣ ಜನ್ಮ ಜಾತಿ ತುಸು ದುರ್ಲಕ್ಷ ಮಾಡುಗುಣ ಕರ್ಮದಿಂದ ಅತಿ ನೀಚನಾದವನುಜನುಮ ಮಾತ್ರದಿ ಹೇಗೆ ಶ್ರೇಷ್ಠನಾಗುವನು73ತಪ್ಪು ಇಲ್ಲದೆ ಕ್ಷಮೆಯ ಬೇಡುವವ ಮೂರ್ಖತಪ್ಪಿದರು ಒಪ್ಪಿದವನು ಕಡುಮೂರ್ಖತಪ್ಪು ಆಗುವದು ಮಾನವನ ಸಹಜಗುಣತಪ್ಪು ಒಪ್ಪುತ ತಿದ್ದಿಕೊಳ್ಳುವದು ಸುಗುಣ 74ನಿನ್ನ ಬಂಧುಗಳೆ ನಿನಗಾಗುವರು ಕೊನರೆಗೆಅನ್ಯರಿಗೆ ಆ ಕರುಳು ಬರುವದು ಹೇಗೆನಿನ್ನ ಬಂಧುಗಳೆಲ್ಲ ಮೂರ್ಖರೆನಬೇಡಅನ್ಯರಿಂದ ನೀ ಮೂರ್ಖನೆನಿಸಿಕೊಳಬೇಡ 75ಜನರ ಮನೆಗಳು ಬಹಳ ದಿವಸ ಇರಬೇಡಇರುವದೇ ಆದರವರಿಗೆ ಭಾರ ಬೇಡಅರಿತವರ ಕೆಲಸಗಳ ಮನೆಯಂತೆಮಡುಗೃಹದ ರೀತಿರಿವಾಜು ಕೆಡದಂತೆ ನೋಡು 76ದುಡ್ಡು ಇದ್ದಾಗ ಎಲ್ಲರ ಪ್ರೀತಿಯುಂಟುದುಡ್ಡು ಕಳಕೊಂಡು ಹೋದರೆ ಮೋರೆಗಂಟುದುಡ್ಡಿನಿಂದಲೆ ಜನರ ಬೆಲೆ ಕಟ್ಟಬೇಡದೊಡ್ಡ ಗುಣಗಳನರಿತು ನ'ುಸದಿರಬೇಡ 77ಧನದ 'ಷಯದಿ ಖಂಡ ತುಂಡ ಇರಬೇಕುಮನಬಿಚ್ಚಿ ಮೊದಲಿಗೆ ಮಾತಾಡಬೇಕುಒಣ ಮಬ್ಬುತನ ಮನದಮಂಡಿಗೆಯು ಬೇಡಕೊನೆಗೆ ಗುಣಗುಟ್ಟುತಲಿ ಹಳಹಳಿಸಬೇಡ 78ಯಂತ್ರಮಯ ಜೀವನದ ಯುಗವು ನಡೆದಿಹುದುಸ್ವಾತಂತ್ರ್ಯವೆಲ್ಲಿ ಬಡವರಿಗೆ ಉಳಿದಿಹುದುದ್ರವ್ಯಮಯವಾದ ವ್ಯವಹರ ಸಾಗಿಹುದುದೇವ ಧರ್ಮಕೆ ಅರ್ಧಚಂದ್ರ ಬಂದಿಹುದು 79ತಾಯ್ತನದ ಸುಖಕೆ ಸರಿಯಾದ ಸುಖ'ಲ್ಲತಾಯ್ತನದ ಕರುಳಿಂಗೆ ಬೆಲೆಯಂಬುದಿಲ್ಲತಾುಗಿಂದಧಿಕ ದೈವತವು ಬೇರಿಲ್ಲತಾಯ್ - ಸೇವೆಗಿಂದಧಿಕ ಪುಣ್ಯಾವೆ ಇಲ್ಲ 80ಚನ್ನಾಗಿ ಸಂಸಾರ ಮಾಡಬಲ್ಲವನುಸುಲಭದಿಂ ಪರಮಾರ್ಥವನು ಸಾಧಿಸುವನುಸಂಸಾರದೊಳಗಿದ್ದು ಸನ್ಯಾಸಿಯೆನಿಸುಸನ್ಯಾಸಿಯಾಗಿ ಸಂಸಾರದೊಳು ಈಸು81ಮನೆಯಲ್ಲಿಯೇ ಸ್ವರ್ಗ ಮನೆಯಲ್ಲಿಯೇ ನರಕಜಾಣರಿಗೆ ತಿಳಿಯುವದು ನೋಡಿದರೆ ಗಮಕಜಾಣ ಪ್ರೇಮಳ ಪತಿಯಮನೆ ಸತಿಗೆ ಸ್ವರ್ಗಕೋಣ ಕರ್ದಮ ಕಟುಕ ಪತಿುರಲು ನರಕ 82ಪತಿಯ ಮನ ಒಲಿಸಿ ಕೋತಿಯ ತೆರದಿ ಕುಣಿಸಿಅತ್ತೆ ಮಾವರು ಬಂಧುಬಳಗವನು ಹೊರನುಗಿಸಿಸ್ವೇಚ್ಛೆುಂ ಎದೆಮೆಟ್ಟಿ ಬೇರಿರುವ ಸೊಸೆಸೊಸೆಯಲ್ಲ ರಕ್ಕಸಿಯು ಕಿ'ಹೊಕ್ಕ ತೊಣಸಿ83ಸರ್ವದಾ ಸತ್ವಗುಣಿ ಶಾಂತ ನಿರುತಿಹನುರಾಜಸನ ಶಾಂತಿುಂ ಧಡಪಡಿಸುತಿಹನುಕಿರಿಕಿರಿಯು ತಾಮಸಿಗೆ ಬಿಟ್ಟುರುವದಿಲ್ಲಾತ್ರಿಗುಣಗಳ ದಾಟದಿದ್ದರೆ ಮೋಕ್ಷ'ಲ್ಲಾ 84ಅನ್ನದೊಳು ಮುಖ್ಯ ಸಾತ್ವಿಕ ಗುಣವು ಬೇಕುಸಂಪಾದನೆಯ ಮಾರ್ಗ ಸರಳ'ರಬೇಕುಸಂಸರ್ಗ ಸಂಸ್ಕಾರ ಸುಷ್ಟ'ರಬೇಕುಸಾತ್ವಿಕಾನಂದ ಮನದಿಂದ ಉಣಬೇಕು 85ಮೂಲ ಮನ'ಹುದು ಮೂರರೊಳೊಂದು ಪಾಲುಸನ್ನಿವೇಶಗಳಿಂದ ಮತ್ತೊಂದು ಪಾಲುತಿನ್ನುವಾ ಅನ್ನದಿಂದ ಉಳಿದೊಂದು ಪಾಲುಮೂರು ಕೂಡಿದ ಮನವೆ ನಿನಗೆ ಹರಿಗೋಲು86ಪ್ರಾರಬ್ಧವನುಭ'ಸಿ ತೀರಿಸಲು ಬೇಕುಅಪರೋಕ್ಷದಿಂದ ಸಂಚಿತ ಕಳಿಯಬೇಕುಸರ್ವದಾ ನಿರಪೇಕ್ಷ ಸತ್ಕರ್ಮ ಬೇಕುನಿರಭಿಮಾನದಿ ಕರ್ಮದ ಬೀಜ ಸುಡಬೇಕು87ದಯೆಯು ಧರ್ಮದಮೂಲ ದಯವಂತನಾಗುಭಯವು ದುಃಖದಮೂಲ ನಿರ್ಭಯನು ಆಗುಲೋಭ ಪಾಪದ ಮೂಲ ನಿರ್ಲೋಭಿಯಾಗುತ್ಯಾಗ ಪುಣ್ಯದ ಮೂಲ ತ್ಯಾಗಿ ನೀನಾಗು 88ನಿನ್ನ ಉದ್ಧಾರವನು ನೀ ಮೊದಲ ಮಾಡುಮನೆತನದ ಉನ್ನತಿಯಕಡೆಗೆ ನೀ ನೋಡುನಿನ್ನ ನೆರೆಹೊರೆ ಜನರ ಕಲ್ಯಾಣಮಾಡುಆಮೇಲೆ 'ಶ್ವದದ್ಧಾರ ಮಾತಾಡು 89ಹಳೆಯದಿದ್ದರೆ ಎಲ್ಲ ಒಳಿತು ಎನಬೇಡಹೊಸದೆಂಬ ಮಾತ್ರದಿಂದಲೆ ಹಳಿಯಬೇಡಒಳಿತು ಕೆಡಕುಗಳು ಎಲ್ಲದರಲ್ಲಿ ಇಹವುತಿಳಿದು ಉಪಯೋಗಿಸಿದರದು ಜಾಣತನವು 90ಕಾಲಮ'ಮೆಯ ಕಷ್ಟ ಬಂದಿತೆನಬೇಡಕಾಲಕ್ಕೆ ಹೆಚ್ಚಿನ ಮಹತ್ವ ಕೊಡಬೇಡಕಾಲ ನಿರ್ಮಾಣ 'ರಿಯರ ಕೈಯ್ಯೊಳಿಹುದುಎಂಥ 'ರಿಯರು ಅಂಥ ಕಾಲ ಬರುತಿಹುದು 91'ರಿಯರಾಚರಣಿಯಂ ಮನೆತನದ ಬೆಳಕು'ರಿಯರಾಚರಣೆುಂ ಮನೆತನಕೆ ಹುಳುಕು'ರಿಯರೇ ಕಾರಣರು ಮನೆಯ ಸುಸ್ಥಿತಿಗೆ'ರಿಯರೇ ಕಾರಣರು ಮನೆಯ ದುಸ್ಥಿತಿಗೆ 92ದೇಹವೇ ರಥವು ಸಾರಥಿಯು ಪರಮಾತ್ಮಜೀವ ಅರ್ಜುನ ಧರ್ಮ ಸಮ್ಮೂಡ ಆತ್ಮಸರ್ವ ಭಾವದಿ ಶರಣುಹೊಗು ಸಾರಥಿಗೆಸಾರಧಿಯು ಮುಟ್ಟಿಸುವ ನಿನ್ನ ಸದ್ಗತಿಗೆ 93ಜ್ಞಾನಪೂರ್ವಕ ''ತ ಕರ್ಮಗಳ ಮಾಡುಚಿತ್ತಶುದ್ಧಿಗೆ ಕರ್ಮಸಾಧನವು ನೋಡುಉದ್ದೇಶ ಪರಿಣಾಮಗಳ ತೂಕ ಮಾಡುಮೂಢತನ ರೂಢಿಗಳನರಿತು ಬಿಟ್ಟುಬಿಡು 94ಬಾಲಭಾವದಿ ದೇವರೊಳು ಹಟವಮಾಡುಬಾಲಭಾವದಿ ದೇವರೊಳು ಮಮತೆಮಾಡುಬಾಲಭಾವದಿ ದೇವರಿಗೆ ಬೇಡಿಕಾಡುಬಾಲಭಾವದಿ ನಿನ್ನ ಸರ್ವಸ್ವ ನೀಡು 95ಮಾತೃಭಾವದಿ ಅವನ ತೊಡೆಯ ಮೇಲಾಡುಮಾತೃಭಾವದಿ ನೀನು ವಾತ್ಸಲ್ಯ ಮಾಡುಮತೃಭಾವದಿ ತೂಗಿ ತೊಟ್ಟಿ ಮುದ್ದಾಡುಮಾತೃಭಾವದಿ ಬಿದ್ದು ಕಿರಿಕಿರಿಯಮಾಡು 96ಸಖ್ಯಭಾವದಿ ಹಾಲು ಮೊಸರೆರೆಯ ಬೇಕುಸಖ್ಯಭಾವದಿ ಬೆಣ್ಣೆ ಬಾಯ್ತುಂಬ ಬೇಕುಸಖ್ಯಭಾವದಿ ಕೊಳಲಿನೊಳು ಕುಣಿಯಬೇಕುಸಖನೆಂದು ಗೋಪಿಯಂದದಿ ಕುಣಿಸಬೇಕು 97ನಿನ್ನೊಳಗೆ ಆತನನು ನೀ ನೋಡಬೇಕುಅವನೊಳಗೆ ಸರ್ವವನು ನೀ ಕಾಣಬೇಕುತನ್ನತನ ಮರೆತು ಅವನೊಳು ಬೆರೆಯಬೇಕುಅವನ ಸೂತ್ರದ ಬೊಂಬೆ ನೀನಾಗಬೇಕು 98'ುೀನನಾದರೆ ಅವನ ಕಣ್ಣು ನೀನಾಗು ಕೂರ್ಮನಾದಾಗವನ ಬೆನ್ನು ನೀನಾಗುವರಾಹರೂಪದ ಹರಿಯ ಕೋರೆ ನೀನಾಗುನರಹರಿಗೆ ನೀ ಹದನವಾದ ನಖವಾಗು 100ವಟುವಾಮನಗೆ ಪಾದರಕ್ಷೆ ನೀನಾಗುದುಷ್ಟ ಸಂಹಾರಕನ ಪರಶು ನೀನಾಗುಅಟ'ವಾಸಗೆ ಬಿಲ್ಲುಬಾಣ ನೀನಾಗುದಿಟ್ಟ ಗೊಲ್ಲನ ಕರೆದ ಕೊಳಲು ನೀ ನಾಗು 101ಬುದ್ಧನಾದರೆ ಬುದ್ಧಿವಂತ ನೀನಾಗುಕಲ್ಕಿಯಾದರೆ ಚಲುವ ಕುದುರೆ ನೀನಾಗುಎಲ್ಲಿದ್ದರೂ ಅವನ ನೆರಳು ನೀನಾಗುಪ್ರಹ್ಲಾದ ದ್ರುವ ಅಂಬರೀಷ ನೀನಾಗು 102ಧನದೊಳಗೆ ಧನ ತವೋಧನನು ನೀನಾಗುಭಾಗ್ಯದೊಳು ವೈರಾಗ್ಯ ಭಾಗ್ಯವಂತನಾಗುಇಂದ್ರಿಯಂಗಳ ಜಯದಿ ನೀ ಶೂರನಾಗುಪಂಡಿತನು ತತ್ವದಾಚರಣೆಯೊಳು ಆಗು103ಸ್ವಾತಂತ್ರವೇ ಸ್ವರ್ಗ ಪರತಂತ್ರ ನರಕಮಾತೃಭೂ'ುಯ ಸೇವೆ ಮಡದವ ಶುನಕಪತಿತರುದ್ಧಾರ ಮಾಡುವದು ಸದ್ಧರ್ಮಪತಿತರನು ತುಳಿಯುವದು ಸೈತಾನಕರ್ಮ 104ಸಂಸಾರ ಸಾಗರವ ದಾಟಿಸಲು
--------------
ಭೂಪತಿ ವಿಠಲರು
ಗಣೇಶಸ್ತುತಿ ಕರುಣಿಸೋ ಗೌರೀಕರಜ ಪ ಕರುಣಾಳು ಕ್ಷಿಪ್ರ ಮನದ ಕಾಯ ಬೇಗದಿ ಅ.ಪ ಕಾಯ ಜಾತ ಅರಿವರ್ಗಗಳಿಗೆ ವಿಘ್ನವ ತ್ವರದಲ್ಲಿ ಇತ್ತು ಶುಭಕೆ ಮಾರ್ಗವ 1 ನರಭಾವದಿಂದ ನಿನ್ನ ಮರೆತರೆ ನೀನು ಎನ್ನನು ಜರಿದರೆ ಪೊರೆವೊರ್ಯಾರೊ ನಿರುತದಿ 2 ಮರುದಂಶ ಮಧ್ವಮುನಿಯ ವರಶಾಸ್ತ್ರ ಪೇಳ್ವ ಬುದ್ಧಿಯ ವರವಿತ್ತು ಬಂದ ವಿಘ್ನವ ಕಳೆಯುತ 3 ವರಪಾಶಪಾಣಿ ಎನ್ನ ದುರಿತಾಶಪಾಶ ಛೇದಿಸಿ ಹರಿ ಭಕ್ತಿ ಪಾಶದಿಂದ ಬಿಗಿಯುತ 4 ಕರಿವಕ್ತ್ರಶಂಕೆ ಎಂಬ ಕರಿಯನ್ನು ಅಂಕುಶದಲಿ ಮುರಿಬಿಂಕ ಶಂಕಿಸದೆ ವಿದ್ಯವ 5 ಸಿರಿ ವಾಣಿ ಚಂಡಿಕಾದ್ಯರು ನಿರುತದಿ ಇದ್ದು ವರವ ಬೀರ್ವರು 6 ನರವಾಹ ವಾಯುಜರಿಗೆ ಸರಿ ಎಂಬೋ ಜ್ಞಾನದಿ ಪಾದ ತೋರಿ ಬೇಗನೆ 7
--------------
ಪ್ರದ್ಯುಮ್ನತೀರ್ಥರು
ಗಾಂಜ ಸೇದುವ ಬನ್ನಿ, ತಿಳಿವಿನ ಗಾಂಜ ಸೇದುವ ಬನ್ನಿಗಾಂಜ ಸೇದಿದರೆ ನಿಮಗೆ ಭವವಿಲ್ಲ ವೆನ್ನಿ ಪ ಅವಗುಣವೆಂಬ ಭೂಮಿ ಶೋಧಿಸಿ ಅಗೆತ ಮಾಡಿದ ಗಾಂಜಸವನಿಸಿದ ಖೂರಾಕು ಹಾಕಿದ ಸತ್ವವಾದ ಗಾಂಜ1 ಸಾಧನೆ ಎಂಬ ನೀರು ಕಟ್ಟಿದ ಸಡಕು ಆದ ಗಾಂಜಭೇದವೆಂಬ ಕಳೆಯ ಕೆತ್ತಿದ ಬೋಧವೆಂಬ ಗಾಂಜ 2 ಭಜನೆ ಭಾವದಿಂದ ಬೆಳೆದ ಬಡಕು ಆದ ಗಾಂಜಕುಜನವೆಂಬ ಎಲೆಗಳ ಚಿವುಟಿದ ಕಡಕು ಆದ ಗಾಂಜ 3 ನಾನು ಎಂಬ ಹೂವು ಉದುರಿದ ನೊಣ ಹಾರದ ಗಾಂಜಜ್ಞಾನವೆಂಬ ಗೊಂಡೆಗಳಳಿದ ಘನ ತಾನಾದ ಗಾಂಜ 4 ಏನೇನ ಅರಿವು ಎಲ್ಲ ಅಡಗಿದ ಏಕವಾದ ಗಾಂಜತಾನೆ ಚಿದಾನಂದ ಸದ್ಗುರು ವಾದ ತಾನೆ ತಾನಾದ ಗಾಂಜ5
--------------
ಚಿದಾನಂದ ಅವಧೂತರು
ಘನ್ನ ಮಹಿಮನೆ ನಿನಗೆ ಇವನು ಅನ್ಯನಲ್ಲವೊ ಸ್ವಾಮಿ ನಿನ್ನ ವರವನು ಜನ್ಮಜನ್ಮದಿ ಮನ್ನಿಸಿ ಪಾಲಿಸಬೇಕಾ ಪÀನ್ನ ಜನರ ಪಾಲಾ ನಿನ್ನುಳಿದು ಮತ್ತಾರಿಲ್ಲವೆಂಬುವದು ಎನ್ನ ಮಾತಲ್ಲ ದೇವ ಯನ್ನ ಪಿರಿಯರ ಮಾತು ನಿನ್ನಯ ದಿವ್ಯ ಮನಕೆ ಚನ್ನಾಗಿ ನೀತಂದು ನಿನ್ನಯ ಜ್ಞಾನ ಭಕುತಿ ವೈರಾಗ್ಯಗಳನ್ನು ಅನ್ನ ವಸÀನ ಧನ - ಧಾನ್ಯವೇ ಮೊದಲಾದ ಘನ್ನ ಸಂಪತ್ತುವಿತ್ತು ಅನ್ಯಜನಕÀ ಭಾವದಿಂದ ಮುನ್ನ ಧನ್ಯನಮಾಡು ಸೊನ್ನೊಡಲ ಪಿತ ಸರ್ವದಾ ತಾ ಚಿನ್ನಗೊಲಿದ ವರದೇಶ ವಿಠಲನೆ ಮನ್ನದೊಳಗೆ ಪೊಳೆಯೊಯನ್ನನುಡಿ ಲಾಲಿಸು
--------------
ವರದೇಶವಿಠಲ
ತತ್ವಚಿಂತನೆ ಮತವೆಂದರೆ ಮಧ್ವ ಮತವೇ ಮತವು ಶ್ರುತಿ ಸ್ಮøತಿ ತತಿಗೆ ಸಮ್ಮತವಾದುದರಿಂದ ಪ ಮಧುವೆಂದರಾನಂದ ಒದಗಿ ಬರುವುದು ಸತ್ಯ ಮಧುವೈರಿ ಒಲಿದು ಪಾದವ ತೋರುವ ಸದಮಲ ಭಾವದಲಿ ಮೇದಿನಿಯೊಳಗಿನ್ನು ಮದಮತ್ಸರಿಲ್ಲದೆಲೆ ಮುದದಿಯೋಚಿಸಲಾಗಿ 1 ವ ವರ್ಣವೆಂದರೆ ಶ್ರೀ ವರನ ಜ್ಞಾನವು ಪವನಪಿತ ತಾ ಒಲಿದು ಈವನದನು ಹೇವವಿಲ್ಲದೆ ಶುದ್ಧ ಭಾವದಿಂದಾಚರಿಸೆ ಭವ ದೂರಗೈಸಿ ಪಾವನಮಾಳ್ಪೊದದರಿಂದ 2 ಪತಿ ಪಿತಭಾವ ಸತತ ಸಮ್ಮತಿಯಿತ್ತು ಖತಿಯಳಿವದೈ ಕ್ಷಿತಿಯೊಳಗೆ ಪಿತ ಶ್ರೀ ನರಹರಿಯ ಪದಪದುಮ ಅತಿ ತೀವ್ರದಲಿ ತೋರಿ ಖ್ಯಾತಿ ತಂದೀವುದಕೆ 3
--------------
ಪ್ರದ್ಯುಮ್ನತೀರ್ಥರು