ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಮಲ ಷಟ್ಚರಣನೆನಿಸೊ ಎನ್ನ ಪ ಪರಮಹಂಸಕುಲ ಸುಧಾಬ್ಧಿ ಸುಧಾಕರ ಸುಧೀಂದ್ರಯತಿಕರಜ ಅ.ಪ ಶ್ರೀವರ ಚರಣ ಸರೋರುಹ ಮಧುಕರ ಪೂತ | ಶುಭಮಚರಿತ ಭಾವಜಾದಿ ಷಡ್ವರ್ಗಸುನಿಗ್ರಹ ಶೀಲ ಕವಿಕುಲಲೋಲ ಕೋವಿದ ಕುಲ ಸಂಭಾವಿತ ಮಹಿಮ ಸ ದಾ ವಿನೋದಿ ಸತ್ಸೇವಕ ಜನ ಸಂ ಜೀವನ ಶುಭಕರ ಪಾವನರೂಪ ಪ ರಾವರೇಶ ಪದಸೇವಕ ಯತಿವರ 1 ಸಕಲ ಶಾಸ್ತ್ರ ಪಾರಂಗತ ಪರಿಣತ ಖ್ಯಾತ | ಗ್ರಂಥಪ್ರಣೀತ ಸಂವರ್ಧಕ ಧೀರ | ಸುಜನೋದ್ಧಾರ ಮುಕುತಿ ಸಾಧನೆಗೆ ಕುಟಿಲ ಮಾರ್ಗವ ನಿಖಿಲ ನಿಜಾಶ್ರಿತ ನಿಕರಕೆ ತೋರುತ ಭಕುತ ಕರೆವ ಕೋರಿಕೆಗಳ ನೀಡುತ ಸುಖವ ಕರೆವ ಸುಂದರ ಯತೀಂದ್ರ 2 ಗುಣಮಣಿ ಖಣಿಯೇ ಸುರವರನುತ ಶ್ರೀ ರಾಮಚಂದ್ರ ಚರಣಾಬ್ಜಾ | ರಾಧಿಕ ಸುಪೂಜ್ಯ ದುರಿತ ಕಳೆದು ಭವಶರಧಿಯ ದಾಟುವ ಸರಿಮಾರ್ಗವ ನಾನರಿಯೇನೋ ಗುರುವರ ಕರಿಗಿರೀಶ ಶ್ರೀ ನರಹರಿ ಚರಣವ ಪರಿ ಕರುಣಿಸು ಯತಿವರ 3
--------------
ವರಾವಾಣಿರಾಮರಾಯದಾಸರು
ಸಾರಸಾಕ್ಷಿ ಬಾ ಬಾ ಬೇಗ ಸಾರಿ ನೀಂ ಪ. ಭೇರಿತಮ್ಮಟಾದಿ ಭಾರಿವಾದ್ಯಂಗಳು ಭೋರ್ಗರೆಯುತ್ತಿರಲು ನಾರಿ ನಿನ್ನ ಕಾಣಲು ಅ.ಪ. ಭಾವಜಾದಿ ಜನನೀ ಭಾರ್ಗವೀ ಕಲ್ಯಾಣಿ ದೇವದೇವನ ರಾಣೀ ಶ್ರೀಮತೀ ಪದ್ಮಿನೀ 1 ಕ್ಷೀರವಾರಿಧಿಜಾತೆ ಮಾರವೈರಿವಿನುತೆ ವಾರಿಜಾಸನ ಮಾತೆ ಸಾರಿ ಬಾ ಸುಪ್ರಿತೇ 2 ಶೇಷಶೈಲನಿಲಯೆ ವಾಸವಾದಿಗೇಯೆ ವಾಸುದೇವಜಾಯೇ ವಸುಮತೀ ತನಯೇ3
--------------
ನಂಜನಗೂಡು ತಿರುಮಲಾಂಬಾ