ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಂದ್ರಾದಿಸುರರಾರಾಧಿತ ಇನವಂಶಸಂಜಾತಾ ಚಂದ್ರಧರ ಪ್ರಿಯ ಶ್ರೀರಾಮಚಂದ್ರಾ ಎಚ್ಚರಿಕೆ 1 ಅರುಣಾತ್ಮಜ ಮುಕ್ತಿಪ್ರದ ಕರುಣಾಸಮುದ್ರಾ ಭರತಾಗ್ರಜ ಭವಹರರಾಮಭದ್ರಾ ಎಚ್ಚರಿಕೆ 2 ಘಟಸಂಭವಮಖಸಮ್ಯಮಿ ಕಟಕಾರ್ಚಿತ ಚರಣಾ ಕುಟಲಾರಿ ಶ್ರೀ ಗುರುರಾಮವಿಠಲಾ ಎಚ್ಚರಿಕೆ 3
--------------
ಗುರುರಾಮವಿಠಲ
ನಾರಾಚ ಕೋದಂಡಧರ ಧೀರ ಪಾಹಿ ಪ ಧರಣೀಸುತಾನಂದ ಸುವಿಹಾರಿ ಪಾಹಿ ಅ.ಪ ಸಾಮಿತ್ರಿ ಭರತಾಗ್ರಜಾತ ಮಾಂಪಾಹಿ ಮೌನಿಜನಸಂಪ್ರೀತ ಶ್ರೀಲೋಲ ಪಾಹಿ ಸೇವ್ಯ ಪಾದಾಬ್ಜಪಾಹಿ ಧೀಮಂತ ಘನ ಪುಣ್ಯನಾಮ ಮಾಂಪಾಹಿ 1 ಭುವನಾಭಿರಾಮಾ ತ್ರಿಮುನಿನುತ್ಯಪಾಹಿ ಭವನಾಶ ಸತ್ಕೀರ್ತಿಕಾಮ ಮಾಂಪಾಹಿ ನವಮೋಹನಾಂಗ ರಾವಣವೈರಿ ಪಾಹಿ ಸುವಿಲಾಸದಾತ ಮಾಂಗಿರಿವಾಸ ಪಾಹಿ2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಪಾಲಿಸೋ ರಘುರಾಯಾ ಪ ಜಾನಕಿ ಮನೋಹರಾ| ಇನಕುಲ ಶೇಖರಾ 1 ಭರತಾಗ್ರಜವರ| ಸುರಸಂಕಟ ಹರ 2 ದಶರಥ ನಂದನ| ಋಷಿಮುಖ ಪಾಲನಾ 3 ಪ್ರಮಥಾಧೀಪ ಧ್ಯೇಯ| ವಿಮಲ ಗುಣಾಲಯಾ 4 ತಂದೆ ಮಹಿಪತಿ| ನಂದನ ಸಾರಥಿ5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಬಾರೋ ಭವದೂರಾ ರಂಗಾ ನಾರಾಯಣಪ ಆ ರಾವಣ ಭೀಕರ ಜಯ ಸರೋಜದಳಾಂಗ ಅ.ಪ ಚರಣಶ್ರಿತ ಪರಿಪಾಲಿತ ಮರಳೀಧರ ದೇವ ಪರಮಾತ್ಮನೆ ಪಾಂಡವಮಣಿ ತರವೇ ನಿರುತರಕೇಂದ್ರ 1 ಉಭಯ ವೇದಾಂತಾರ್ಯನೆ ಅಭಯಾಕರ ಶೌರೀ ಅಭಿಮಾನಯೇನದು ಕಾರಣ ಶುಭದಾಯಕನಾಗಿ ಬೇಗಾ 2 ಪರತಂತ್ರನೆ ಪಾಪಾಂತಕ ನರವೇಷ ಭಾಷೆ ಸುರನಾಯಕವಿನುತನಾಗುರು ಭರತಾಗ್ರಜ ತುಲಶೀರಾಮಾ3
--------------
ಚನ್ನಪಟ್ಟಣದ ಅಹೋಬಲದಾಸರು