ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಯಾಕೆ ಕರುಣ ಬಾರದ್ಹರಿಯೆ ಲೋಕನಾಯಕ ನಿನಗೆ ಸರಿಯೆ ಪ ವ್ಯಾಕುಲದಲಿ ಮುಳುಗಿ ಬಹಳ ಶೋಕಪಡುವ ಜನರ ಕಂಡು ಅ.ಪ ತಂದೆ ತಾಯಿ ಬಂಧು ಬಳಗ ಇಂದು ಮುಂದು ಗತಿ ನೀನೆಂದು ಪೊಂದಿ ನಿನ್ನ ಭಜಿಸದಿರುವ ಮಂದ ಮತಿಗಳನ್ನೆ ಕಂಡು 1 ಕಾಮ ಕ್ರೋಧ ಲೋಭ ಮೋಹ ಮದ ಮತ್ಸರದಿ ಮುಳುಗಿ ಮುಳುಗಿ ಕಾಮಜನಕ ನಿನ್ನ ಮರೆತ ತಾಮಸ ಜನರುಗಳ ಕಂಡು 2 ಜ್ಞಾನಿಗಳನೆ ಕಂಡು ಪರಮ ಸಾನುರಾಗದಿಂದ ಪೊರೆವೆ ಜ್ಞಾನ ಶೂನ್ಯರಾದ ಪರಮ ಅ- ಜ್ಞಾನಿ ಜನರುಗಳನೆ ಕಂಡು 3 ಪರಮಪುರಷ ನಿನ್ನ ಮಹಿಮೆ ನಿರುತ ಧ್ಯಾನಿಸುವವರ ಸಂಗ ಕರುಣದಿಂದ ಪಾಲಿಸಯ್ಯ ಪರಮ ಕರುಣಾನಿಧಿಯೆ ದೇವ4 ನೊಂದೆ ಭವದ ಬಂಧನದೊಳು ತಂದೆ ಕಮಲನಾಭ ವಿಠ್ಠಲ ಬಂಧನಗಳ ಬಿಡಿಸಿ ಸಲಹೊ ಮುಂದೆ ಶ್ರಮವ ಹರಿಸೊ ಬೇಗ5
--------------
ನಿಡಗುರುಕಿ ಜೀವೂಬಾಯಿ
ಹೊಲೆಯ ಹೊಲತಿ ಇವರವರಲ್ಲಹೊಲಗೇರಿಯೊಳು ಹೊಲೆಯ ಹೊಲತಿಯಿಲ್ಲ ಪ.ಸತಿಯಳ ವಶನಾಗಿಜನನಿ - ಜನಕರಿಗೆಅತಿ ನಿಷ್ಟುರ ನುಡಿವವ ಹೊಲೆಯಸುತರ ಪಡೆದು ವಾರ್ಧಿಕ್ಯ ಮದವೇರಿಪತಿದ್ಟೇಷ ಮಾಡುವಳೆ ಹೊಲತಿ 1ಗುರುಗಳಲ್ಲಿ ವಿದ್ಯೆಗಳನು ಕಲಿತುಹಿರಿಯರ ಬಳಲಿಸುವವ ಹೊಲೆಯಪರಪುರಷಗೊಲಿದು ತನ್ನ ಪುರುಷನವಿರಸವ ಮಾಡುವ ಕುಲಕೇಡಿತೆ ಹೊಲತಿ 2ಒಡೆಯನನ್ನವನುಂಡು ಅಡಿಗಡಿಗೆ ಬಾಯ್ಬಿಡದೆ ತರ್ಕಿಸುವ ಜಡ ಹೊಲೆಯಬಡತನ ಬಂದರೆ ಪುರುಷನ ರಚ್ಚೆಗೆಬಿಡದೆ ತಹಳೆ ಶುದ್ಧ ಹೊಲತಿ 3ನೂರೊಂದು ಕುಲ ಕುಂಬಿಪಾಕಕಟ್ಟುವಪರನಾರಿಯಲ್ಲಿ ವೀರ್ಯವಿಟ್ಟವ ಹೊಲೆಯಆರೊಳು ಕಲಹಾಪಸ್ಮಾರಿ ದುರ್ಮುಖಿಯು - ಕಠೋರಕುಮತಿ ಶುದ್ಧ ಹೊಲತಿ 4ಅಜನುತ ಪುರಂದರವಿಠಲನ ದಾಸರಭಜನೆಯ ದಾರಿಯ ಬಿಟ್ಟವ ಹೊಲೆಯನಿಜವರ್ಯರಾದ ಸಜ್ಜನರ ಪಾದಪದ್ಮವಭಜಿಸದಿರುವಳೆ ಶುದ್ಧ ಹೊಲತಿ 5
--------------
ಪುರಂದರದಾಸರು