ನೀನೆ ಜಗದೀಶ ಶ್ರೀ ವೆಂಕಟೇಶಾ ಪ.
ಪೂರ್ವ ವೈರ ವಹಿಸಿರ್ವ ತಮೋಗ್ರಹ
ಪರ್ವ ಕಾಲದೊಳು ಶರ್ವರೀಶನಿದಿ-
ರಿರ್ವದರಿತು ಸುರ ಸಾರ್ವಭೌಮ ಶತ-
ಪರ್ವದೊಳಸುರನ ಗರ್ವವ ಕಳಿವಿ 1
ಧರಣಿಗೆ ಭಾರವ ನೆರಹುವ ದೈತ್ಯರು
ಸುರರ ಮಹಾದ್ಬುತ ಧುರದೊಳು ಗೆಲಿತಿರೆ
ತಿರಿಯ ಜನರ ಸುರವರತನುವಾಗುತ
ತಿರಿವಿ ಮದಾಂಧರ ಸರಸೀಜನಯನ 2
ಹೊಂದಿದ ಭಕ್ತರನೆಂದಿಗು ಕಾಯುವ
ನೆಂದು ವೇಡಮುನಿ ವೃಂದ ಪೊಗಳುವುದು
ಸುಂದರ ಪೂರ್ಣಾನಂದ ಶೇಷಗಿರಿ
ಸಿರಿ ಗೋವಿಂದ ಮುರಾರೆ 3