ರಾಮಚಂದ್ರನು ಶೋಭಿಪನಿಂದು ಸದ್ಭಕ್ತಬಂಧು ಪ
ಸಾರಸಾಕ್ಷನು ಸಾಮಜವರದನು
ಭೂರಿಫಲಪ್ರದ ಭೂಮಿಜೆಯುತನು ಅ.ಪ
ಧರೆಯಭಾರವ ತಾಕಳೆಯಬಂದು ಕಾರುಣ್ಯಸಿಂಧು
ನರರೂಪವ ಧರಿಸುತ್ರ ನಿಂದು ಕೋದಂಡವ ಪಿಡಿದು
ದುರುಳ ದೈತ್ಯರ ಶಿರವನೆ ತರಿದು
ಪರಿಪರಿ ವಿಧದಲಿ ಶರಣರಿಗೊಲಿಯುತ
ದುರಿತ ಸಂಕುಲವ ಪರಿಹರಿಸಿ ಪೊರೆವ ಶ್ರೀ 1
ಸೂರ್ಯಸುತನ ಸೈನ್ಯದವರ ಸುಮನಸರ
ಧೈರ್ಯದಿಂ ಸಮರಗೈದವರ ವೀರಾಧಿವೀರರ
ಕಾರ್ಯವ ಸಾಧಿಸಿದಾ ವಾನÀರರ
ಪಾರವಶ್ಯರನು ಪರಮೇಷ್ಠಿಯಿಂದ
ಧಾರೆಯನೆರೆದಮೃತದಿ ಬದುಕಿಸಿದ ಶ್ರೀ 2
ಘನವಂತ ವಿಭೀಷಣಂಗೆ ಅನುವನು ತೋರಿ ಸಾರಿ
ಅನುಜಾತ ಭಕುತಂಗೆ ಅನುಗ್ರಹಬೀರಿ ಆನಂದವೇರಿ
ಜನನಿಯರಾಶೀರ್ವಚನವ ಪಡೆದು
ಸನುಮತದಿಂ ಪುರಜನರೊಲುಮೆಯೊಳು
ದಿನಕರಪ್ರಕಾಶ ಜಾನಕಿನಂದ ಜಾಜೀಶ್ರೀಶ ಶ್ರೀ 3