ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮನಸಿನ ಮಾಯವೆ ಗೂಢದೋರದು ನಿಜ ಗೂಢ ಧ್ರುವ ಮರವಿನೊಳಾಡಲು ಆಯಿತು ಮನವು ಅರಿವಿನೊಳಾಡಲು ತೋರಿತುನ್ಮನವು ಅರಹು ಮರುಹ ಎರಡನೆ ಮೀರಿದರೆ ಆಯಿತು ತನ್ನೊಳು ತಾನೆ ಚಿದ್ಘನವು 1 ಅರುಹಿತು ಸ್ಥೂಲಕೆ ಜಾಗ್ರತಿಯಾಗಿ ಬ್ಯಾರೆದೋರಿತು ಸ್ವಪ್ನ ಸೂಕ್ಷ್ಮಕೆ ಹೋಗಿ ಕಾರಣದಲಿ ಸಷುಪ್ತಿಯು ಆಗಿ ತೋರಿತು ತಾನೆ ಮೂರು ಪರಿಯಾಗಿ 2 ದೊರಕುದು ಬ್ರಹ್ಮಾಧಿಕರಿಗೆ ಖೂನ ಮರುಳ ಮಾಡ್ಹೆಚ್ಚಿತು ವಿಷಯದ ಧ್ಯಾನ ತರಳ ಮಹಿಪತಿಗಾಯಿತುನ್ಮನ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು