624ಚಿ
ಇಂದು ಧನ್ಯವಾಯಿತು ಜನುಮ
ಬಂದು ಕೂಡಿದ ಘನ ಮಹಿಮ ಧ್ರುವ
ಏನು ಪುಣ್ಯ ಮಾಡಿದ್ದೆವೊ ಮೊದಲೆ
ಖೂನಗಂಡೆವೊ ಹರಿಯ ಮನದಲಿ
ಕಾಣದಿದ್ದೆವೊ ಏಸು ಜನ್ಮದಲಿ
ತಾನೆ ಒಲಿದು ಬಂದು ಸುಪ್ರಸನ್ನಲಿ 1
ಬ್ರಹ್ಮಾದಿಕರಿಗೆ ದಾವ ದುರ್ಲಭ
ನಮ್ಮ ನೆನವಿನೊಳಾದವ ಸುಲಭ
ತಮ್ಮ ನಿಜಸುಖದ ನೆಲೆನಿಭ
ಬ್ರಹ್ಮಾನಂದ ದೋರಿದ ಪ್ರಾಣದೊಲ್ಲಭ 2
ಖೂನದೋರಿತು ಮುನ್ನ ನಾ ಮಾಡಿದ
ಭಾನುಕೋಟಿತೇಜನ ಕೈಗೂಡಿದ
ಅನುಭವಾಮೃತಸಾರ ನೀಡಿದ
ದೀನ ಮಹಿಪತಿ ಮನೋಹರ ಮಾಡಿದ 3