ನೋಡಿದೆ ಮನದಣಿಯೆ ಶ್ರೀನಿವಾಸನ
ನೋಡಿದೆ ಮನದಣಿಯೆಪ.
ನೋಡಿದೆನು ಶೇಷಾದ್ರಿಯಿಂದೊಡ-
ಗೂಡಿ ಭಕ್ತರ ಬೀಡಿನೊಳು ನಲಿ
ದಾಡಿ ಮೆರೆವ ಸಗಾಢ ದೈತ್ಯವಿ
ಭಾಡ ಶ್ರೀಹರಿ ರೂಢಿಗೊಡೆಯನ ಅ.ಪ.
ಶರಣರಪೇಕ್ಷೆಯನು ಕೊಟ್ಟುಳುಹಲು
ಕರುಣಾಳು ನಿಜದಿ ತಾನು
ಸ್ಥಿರತೆಯೊಳು ಸ್ವಪ್ನದಲಿ ತಾ ಗೋ
ಚರಿಸಿ ಭರವಸೆಯಿತ್ತು ವೆಂಕಟ
ಗಿರಿಯವೋಲ್ ಸಾನ್ನಿಧ್ಯ ವದನಾಂ-
ಬುರುಹದಲಿ ಮೆರೆದಿಹನ ಚರಣವ 1
ಲಲನೆ ಲಕ್ಷ್ಮಿಯು ಬಲದಿ ಶೋಭಿಪ ವಾಮ
ದೊಳಗೆ ಗಣಪ ಮುದದಿ
ಒಲವಿನಿಂ ಗರುಡಾಂಕ ಮೃದುಪದ
ನಳಿನದಾಶ್ರಯದಿಂದ ವಾಯುಜ
ಬಳಗ ಚಾತುರ್ದೇವತೆಯರಿಂ-
ದೊಳಗೆ ಪೂಜೆಯಗೊಂಬ ದೇವನ 2
ಕುಂಡಿಲಕೊಳದೊಳಿಹ ಪ್ರಾಣೇಶ ಮುಂ-
ಕೊಂಡು ಪಟ್ಟಣಕೆ ಬಹ
ಕೆಂಡದಂದದೊಳುರಿವ ಶತಮಾ-
ರ್ತಾಂಡದೀಪ್ತಾ ಮುಖಂಡ ಭೃತ್ಯನ
ಕೊಂಡುಯಿದಿರಲಿ ಮಂಡಿಸಿದನಖಿ
ಳಾಂಡಕೋಟಿ ಬ್ರಹ್ಮಾಂಡನಾಥನ 3
ನೀಲಮೇಘಶ್ಯಾಮಲ ಕೌಸ್ತುಭವನ
ಮಾಲಕಂಧರಶೋಭನ
ವಜ್ರ ಮುತ್ತಿ
ಸಾಲ ಸರ ಪೂಮಾಲೆಗಳ ಸುಖ
ಲೀಲೆಯಿಂದೊಪ್ಪಿರುವ ಭಕ್ತರ
ಕೇಳಿಯಲಿ ನಲಿದಾಡುತಿಹನನು 4
ಕಾಣೆನು ಪ್ರತಿನಿಧಿಯ ನಮ್ಮೊಡೆಯ ಲ-
ಕ್ಷ್ಮೀನಾರಾಯಣ ಹರಿಯ
ಕಾಣಿಕೆಯ ಕಪ್ಪಗಳ ತರಿಸುತ
ಮಾನಿಸುತ ಭಕ್ತಾಭಿಮತವನು
ತಾನೆ ಪಾಲಿಸಿ ಮೆರೆವ ಕಾರ್ಕಳ
ಶ್ರೀನಿವಾಸ ಮಹಾನುಭಾವನ 5