ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಂಬಾ ಮೈದೋರು ಶಾರದಾಂಬಾನಂಬಿದೆ ನಿನ್ನ ಅಂಬಾ ಮೈದೋರು ಶಾರದಾಂಬಾಪತಾಯೆ ಕಮಲಾಸನಜಾಯೆ ನ'ುಸಿದೆ ನಿನ್ನತಾಯೆ ಬಿಡದೆನ್ನನಸೂಯೆ ರಾಗಾದಿಗಳಿಂನೋಯೆ ನೋಡದಿಹರೆ ಮಾಯೆ ಬೇಡಿದವರ'ೀಯೆ ಪಾಪಕರ್ಮಗಳು ಬೇಯೆ ದಾರಿದ್ರವುಸೀಯೆ ಸರ್ವಲೋಕಪ್ರಿಯೆ ಕೃಪಾಲಯೆ 1ಮರತು ನಿನ್ನ ಧ್ಯಾನವ ಬೆರತು ಸತಿಸುತರೊಳು ಕರ್ಮಕಾಮ್ಯವ ಮಾಡಿ ಮರೆತು ಪೋಗಿ ಸುಖವುನರತು ಮೈಯೆಲ್ಲ ಮೋಹತೊರದ ನೊಂದೆನಿದಕೆಹೊರತು ನಾನಿನಿಸು ಪಾಪ ಬರತು ಪೋಗಲಿದರಿತು ಭಕ್ತಿಯ ಭಕ್ತ ಸರಿತೂಕದವನೆ ನೀನು2ಬಂದು ಚಿಕನಾಗಪುರದಿ ನಿಂದು ವರವೆಂಕಟಗಿರಿಚಿಬಂಧು ವಾಸುದೇವಾರ್ಯನೆಂದು ಜನರ ದುರಿತದಂದುಗವಳಿದು ಬಾರೆಂದು ಕರೆದು ಜ್ಞಾನಸಿಂಧು'ನೊಳು ಗೀತಾರ್ಥ'ದೊಂದು ನಿನಗೆ ಸಾಕೆಂದು ಧನ್ಯತೆಯನು ಹೊಂದುಯೆನಿಸಲೆಂದೆಂದೂ 3
--------------
ತಿಮ್ಮಪ್ಪದಾಸರು
ಏಸು ಜನ್ಮದ ಸುಕೃತವದು ಬಂದು ಒದಗಿತೋದೇಶಿಕೋತ್ತಮನ ದಯದಿಆಸೆಗಳು ಮರೆಯಾಗಿ ಆಷ್ಟ ಪಾಶಗಳಳಿದುಈಶ ಸರ್ವೇಶನಾಗಿ ಹೋದೆ ಪ ಕಂಗಳ ಮುಚ್ಚಿ ದೇಹದೊಳು ದಿಟ್ಟಿಸಿ ನೋಡೆಮಂಗಳವೆ ತೋರುತಿಹುದು ಅಹುದುತಿಂಗಳಿನ ಕಳೆಯಂತೆ ಬೆಳಕಬೀರುತ ಬೆಳು-ದಿಂಗಳನೆ ಹರಡಿದಂತೆ ಅಂತುಕಂಗೊಳಿಸುತಿಹುದು ಬಗೆಬಗೆಯ ವರ್ಣಛಾಯೆಅಂಗ ವರ್ಣಿಸುವರಾರೋ ಆರೋಬಂಗಾರ ಪುಟದಂತೆ ನಡುಮಧ್ಯೆ ಹೊಳೆಹೊಳೆದುಹಿಂಗದನುದಿನ ತೋರುವ ಗುರುವಾ 1 ಅಮೃತ ಕಳದಿ ಝಳದಿ 2 ನಿತ್ಯವಹ ಪರಮಾತ್ಮ ನಿಶ್ಚಲದಿ ತೋರುತಿದೆಚಿತ್ತವೆಂಬುದು ಸಾಯೇ ಬೇಯೆಮತ್ತೆ ಮನ ದೃಗ್ ದೃಶ್ಯ ಧಾರಣರವರುಎತ್ತ ಹೋದರೋ ಎಲ್ಲರೂಸತ್ಯವಾಗಿಹ ಪರಮ ಬಾಹ್ಯಾಂತರೀಯ ಹೆಸರುಎತ್ತುವರು ಇಲ್ಲದಾಯ್ತು ಹೋಯ್ತುಪ್ರತ್ಯಗಾತ್ಮನು ಚಿದಾನಂದ ಗುರು ತಾನಾದಅತ್ಯುಕ್ತಿ ಹೇಳ್ವುದೇನು ಏನು 3
--------------
ಚಿದಾನಂದ ಅವಧೂತರು