ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆವ ಕಾರಣ ಮೊಗವ ತಿರುಗಿಹಿದ್ಯೊ ಪೇಳು ಭೂವರಹ ಸ್ವಾಮಿ ಪುಷ್ಕರಣಿ ತೀರಗನೆ ಪ ರಥ ಸಮೂಹಗಳೇರಿ ನೀ ಪ್ರಕಾಶಿಪ ಬಗೆಯೇ ಸತಿಯ ಲಾವಣ್ಯಾತಿಶಯವ ನೋಡುವ ಬಗೆಯೋ ಮಿತಿಯಿಲ್ಲದಸುರರ ಉಪೇಕ್ಷೆ ಮಾಡುವ ಬಗೆಯೋ ಪತಿತ ಪಾವನ ಪೂರ್ಣಕಾಮ ನಿನಗೆ ನುತಿಸಿ ಬಿನ್ನೈಸುವೆನು ಪೇಳೋ ಗುಣಧಾಮಾ 1 ಭಜಕರೆನ್ನನು ಬಿಡರೆಂಬ ಮನಸಿನಾ ಬಗೆಯೇ ಅಜಭವಾದಿಗಳ ಸಂಸ್ತುತಿಗಳಾಲಿಪ ಬಗೆಯೋ ರಜನೀಚರರ ಸದೆಯ ನಾಟ್ಯವಾಡುವ ಬಗೆಯೇ ಭುಜಗ ಭೂಷಣ ಪೂಜ್ಯ ಚರಣ ತ್ರಿಜಗದ್ವಿ ಲಕ್ಷಣ ಸುರೂಪಾ ನಿರ್ಲೇಪ 2 ಅನುಗರೊಶ ನೀನಾದಡೆಮ್ಮನ ಮರೆವರೆಂದು ವನತಿಗಾರರಿಯದಂತುಪದೇಶಿಸು ಬಗೆಯೋ ಘನಲಕ್ಷಣ ಮುಖಾಬ್ಜವನು ಚುಂಬಿಸುವ ಬಗೆಯೋ ವನಜ ಸಂಭವನ ನಾಸಜನೆ ಜಗ ಜ್ಜನಕ ಜಗನ್ನಾಥವಿಠ್ಠಲ ಕೃಪಾಸಾಂದ್ರಾ 3
--------------
ಜಗನ್ನಾಥದಾಸರು
ಬಾರನ್ಯಾತಕೆ ಕೃಷ್ಣ ಬಾರನ್ಯಾತಕೆ ಪ ಹರಿಯ ಮನಕೆ ಹರುಷಪಡಿಸಿ ಹರಿಯ ಕರೆಸಿ ಮನದೊಳಿರಿಸಿ ಹೊರಗೆ ಬಿಡರೆಂಬೊ ಭಯಕೆ ಮರೆಯೊಳಿದ್ದುಕಾಲ ಕಳೆಯುವ 1 ಮದಗಜಗಮನೆಯರೆಲ್ಲ ಮದನಕದನ ದೊಳಗೆ ಸೋಲಿಸಿ ಮುದದಿ ಎನ್ನಬಿಡದೆ ಮನೆಯೊಳು ಸದರದಿಂದ ನೋಡುವರೆಂದು 2 ಆಣಿ ಮುತ್ತಿನ ಮಾತನಾಡಿ ಜಾಣ ಪ್ರಾಣನಾಥ ವಿಠಲನ ವಿನಯದಿಂದ ಕರೆದು ತಂದರೆ ವನಜಮುಖಿಯೆ ಹರುಷ ಪಡುವೆ 3
--------------
ಬಾಗೇಪಲ್ಲಿ ಶೇಷದಾಸರು