ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹರನಕುಮಾರನ ಚರಣಕಮಲಗಳಿಗೆರಗಿ ಶಾರದೆಗೆ ವಂದಿಸುತ ಶರಧಿಶಯನಗೆ ಸೆರಗೊಡ್ಡಿ ಬೇಡಿಕೊಂಬೆ ಶರಧಿಸುತÉಯ ಕತೆಗ್ವರವ 1 ಸಾಕ್ಷಾತ ಶ್ರೀಹರಿ ವಕ್ಷಸ್ಥಳ ವಾಸಿಯೆ ಇಕ್ಷುಚಾಪದವನ ಪಡೆದ ಮೋಕ್ಷದಾಯಕಳೆ ಮಾಲಕ್ಷುಮಿ ಕರುಣಾಕ- ಟಾಕ್ಷದಿ ನೋಡಬೇಕೆನ್ನ 2 ಶ್ರಾವಣಮಾಸದಿ ಮೊದಲ ಶುಕ್ಕುರುವಾರ ಮಾ- ಧವನರಸಿ ಮಾಲಕ್ಷ್ಮಿ- ದೇವೇರ ಮಹಿಮೆ ಕೊಂಡಾಡುವೋದೀ ಕಥÉ ಕಿವಿಗೊಟ್ಟು ಕೇಳೋದು ಜನರು 3 ಬಡವ ಬ್ರಾಹ್ಮಣನೊಂದು ಪಟ್ಟಣದೊಳಗಿದ್ದ ಮಡದಿ ಮಕ್ಕಳ ಸಹಿತಾಗಿ ಹಿಡಿದು ತಂಬೂರಿ ತಂಬಿಗೆಯ ಗೋಪಾಳಕ್ಕೆ ಬಿಡದೊಂದು ಮನೆಯ ತಿರುಗುತಲಿ 4 ಸೊಸೆಯರು ನಾಲ್ಕು ಮಂದಿಯು ಗಂಡುಮಕ್ಕಳು ಹಸುಗೂಸುಗಳು ಮನೆತುಂಬ ಅಶನ ವಸನವಿಲ್ಲ ಹಸಿದ ಮಕ್ಕಳಿಗ್ಹಾಲು ಮೊಸರು ಅನ್ನವು ಮೊದಲಿಲ್ಲ5 ಅತಿಗುಣವಂತರು ಗತಿಯಿಲ್ಲ ಗ್ರಾಸಕ್ಕೆ ಮಿತಭೋಜನವ ಮಾಡುವರು ವ್ರತ ನೇಮ ನಿಷ್ಠೆ ನಿರುತ ದರಿದ್ರವನು ಶ್ರೀಪತಿ- ಸತಿ ದಯದಿ ನೋಡಿದಳು 6 ಒಂದು ದಿನದಿ ಬಂದ ಮಂದಿ ಮಂದಿರದಲ್ಲಿ ಚೆಂದಾದ ಸುಣ್ಣ ಸಾರಣೆಯು ರಂಗವಲ್ಲಿ ಚಿತ್ರ ಬಣ್ಣಕಾರಣೆ ಮಣಿ- ಮುಂದೆ ತೋರಣ ಕಟ್ಟುತಿರಲು 7 ಮನೆಮನೆಯಲ್ಲಿ ಮಾಲಕ್ಷ್ಮಿದೇವಿಯರ ಚಟ್ಟಿಗೆ ಬರೆವು- ದನು ತಾ ಕಂಡು ಇದು ಏನು ನೋವಿ (ನೋಂಪಿ?) ಎನಗೆ ಹೇಳಬೇಕೆಂದು ಘನ ಭಕ್ತಿಯಿಂದ ಕÉೀಳಿದನು 8 ಕ್ಷೀರಸಾಗರದಲ್ಲಿ ಹುಟ್ಟಿದ ಮಾಲಕ್ಷ್ಮಿದೇವಿ ದೇವರ ಪಟ್ಟದರಸಿ ಶ್ರಾವಣಮಾಸ ಸಂಪತ್ತು ಶುಕ್ಕುರುವಾರ ನಾವು ಪೂಜೆಯ ಮಾಡಬೇಕು9 ಎನಗೊಂದು ಚಟ್ಟಿಗೆ ಬರೆದುಕೊಟ್ಟರೆ ಎನ್ನ ಮನೆಯಲ್ಲಿ ಇಟ್ಟು ಪೂಜೆಪೆನು ವಿನಯದಿಂದ್ಹೇಳಿಕೊಂಡರೆ ಒಂದು ಚಟ್ಟಿಗೆ ಬರೆದÀುಕೊಟ್ಟರು ಬಲಗೈಲಿ 10 ಸಿರಿದೇವಿಚಟ್ಟಿಗೆ ಹಿಡಿದು ಗೋಪಾಳಕ್ಕೆ ಹೋದನು ಮನೆ ಮನೆಯಲ್ಲಿ ಗೂಡೆ ಅಕ್ಕಿ ಬ್ಯಾಳೆ ಬೆಲ್ಲತುಪ್ಪವ ತಂದು ನೀಡೋರು ಹಿಡಿ ಹಿಡಿರೆಂದು 11 ಕುಸುಮ ಮಲ್ಲಿಗೆ ಪತ್ರಫಲಗಳು ಪೂಜಾ ಸಾಧನ ಪದಾರ್ಥಗಳು ಆದಿಲಕ್ಷ್ಮಿದಯ ಆದಕಾರಣದಿಂದ ಆದರದಿಂದ ಕೊಡುವರು 12 ತಂದ ಪದಾರ್ಥ ತನ್ನ್ಹೆಂಡತಿ ಕರೆದು ಮುಂದಿಟ್ಟು ವಾರ್ತೆಗಳ ಹೇಳಿದನು ಇಂದು ಪೂಜೆಯ ಮಾಡು ಆ- ನಂದವ ಕೊಡುವಳು ನಮಗೆ13 ಕಬ್ಬು ಬಿಲ್ಲ್ಹಿಡಿವೋ ಕಾಮನ ಮಾತೆ ಮಾಲಕ್ಷ್ಮಿ ಉರ್ವಿಯೊಳುತ್ತಮಳೀಕೆ ಹಬ್ಬದೂಟಕÉ ಹೇಳಿ ಬಂದೆ ಬ್ರಾಹ್ಮಣಗÉ ಮ- ತ್ತೊಬ್ಬ ಮುತ್ತೈದೆಗ್ಹೇಳೆಂದ14 ಚಿಕ್ಕಸೊಸೆ ಎಣ್ಣೆ ಕುಂಕುಮ ಕೈಯಲ್ಲಿ ತಕ್ಕೊಂಡು ನಡೆದಳ್ಹಾದಿಯಲಿ ಚೊಕ್ಕ ಚಿನ್ನದ ಗೊಂಬೆಯಂಥ ಮುತ್ತೈದೆ ತಾ ಗಕ್ಕನೆ ಬಂದು ಕೇಳಿದಳು 15 ಹುಡುಗಿ ನೀ ಎತ್ತ ಪೋಗುವಿಯೆ ನಿಮ್ಮನೆಯೆಲ್ಲೆ ಅಡಿಗೆಯೇನೇನು ಮಾಡುವರು ಹಿಡಿದೆಣ್ಣೆ ಕುಂಕುಮ ಕೊಡುವೋದಿನ್ನ್ಯಾರಿಗೆ ಕೊಡಬಾರದೇನೆ ನೀಯೆನಗೆ 16 ದಾರಾದರೇನಮ್ಮ ದಾರಿ ನೋಡದ ಮುಂಚೆ ನೀನೇ ಬಾ ನಮ್ಮ ಮಂದಿರಕÉ ಹೇಳಿ ಮುತ್ತೈದೆಗೆ ಹಿಗ್ಗಿಲೆ ಬಂದತ್ತೆ ಮಾವನ ಮುಂದರುಹಿದಳು 17 ಮನೆಯ ಸಾರಿಸಿ ಸುಣ್ಣ ಕಾರಣೆ ರಂಗೋಲಿಯ ಬರೆದು ಬಾಗಿಲಿಗೆ ಬಣ್ಣವನು ಎರೆದು ಕೊಂಡೆಲ್ಲರು ಬ್ಯಾಗ 18 ಕಮಲ ಕ್ಯಾದಿಗೆ ಕಬ್ಬು ಕದÀಳಿ ಕಂಬವು ಬಾಳೆಗೊನೆ ಕಟ್ಟಿ ಚಿತ್ರ ಮಂಟಪವ ನಡುವ್ಯ್ಹಾಕಿ ಪದ್ಮ ಪೀಠಗಳ 19 ಚಟ್ಟಿಗೆಯೊಳಗಕ್ಕಿ ಐದು ಫಲವ ತುಂಬಿ ಮುತ್ತೈದೇರೆಲ್ಲ ನೆರೆದು ಕಟ್ಟಿದರ್ ಕೊರಳ ಮಾಂಗಲ್ಯ ಮಾಲಕ್ಷ್ಮಿ ಪ್ರತಿಷ್ಠೆ ಮಾಡಿದರು ಸಂಭ್ರಮದಿ 20 ಅರಿಷಿಣ ಕುಂಕುಮ ಗಂಧ ಬುಕ್ಕಿ ್ಹಟ್ಟು ಗೆಜ್ಜೆ- ವಸ್ತ್ರವು ಪಾರಿಜಾತ ಸಂಪಿಗೆಯು ಮುಡಿಸಿ ಮಲ್ಲಿಗೆದಂಡೆ ಒಡೆಸೆ ತೆಂಗಿನಕಾಯಿ ಉಡಿ ತುಂಬುತ್ತತ್ತಿ ಫಲಗಳು 21 ಭಕ್ಷ್ಯಶಾವಿಗೆ ಪರಮಾನ್ನ ಚಿತ್ರಾನ್ನ ಸಣ್ಣಕ್ಕಿ ಶಾಲ್ಯಾನ್ನ ಸೂಪಗಳು ಚಕ್ಕುಲಿ ಗಿಲಗಂಜಿ ಚೆಂದ ಚಿರೋಟಿ ಹಪ್ಪಳ ಸಂಡಿಗೆ ಆಂಬೊಡೆಗಳು22 ಘೃತ ಕ್ಷೀರ ಸಕಲ ಪಕ್ವಾನ್ನ ಮಂಡಿಗೆ ಬೀಸೋರಿಗೆ ಗುಳ್ಳೋರಿಗೆಯು ಚಂದ್ರನಂತ್ಹೊಳೆವೊ ಶಾವಿಗೆಯ ಫೇಣಿಯು ದಿವ್ಯ ಬುಂದ್ಯ ಬುರುಬುರಿ ಅನಾರಸವು23 ಬೇಕಾದ ಬೇಸನ್ನು ಬಿಳಿಯದಳಿಯದುಂಡೆ (?) ಮೋತಿಚೂರು ಚೂರ್ಮಲಾಡು
--------------
ಹರಪನಹಳ್ಳಿಭೀಮವ್ವ
ಭಾರ ನಿನ್ನದು ತಂದೆ ಸಿಂಧು ಎಂದೆಂದು | ಗುರುವರ್ಯ ಬಂದು ಕರುಣಿಸುವನು ಮದ್ಬಂಧೊ 1 ಮಂಗಳಾತ್ಮನೆ ಎನ್ನ ಅಂಗದಲಿ ನೀನಿಂದು ಪೊಂಗಳಧರನ ತೋರಯ್ಯ | ಅಜರಾಯ ಭಂಗಬಡಲಾರೆ ಭವದೊಳÀು 2 ನಾರಾಯಣನ ಪುತ್ರ ನಾರಾಯಣಗೆ ಮಿತ್ರ ನಿರವದ್ಯ | ನೀಡಭಯ ಕರುಣಾತ್ಮ ಗುರುವೆ ಒಲಿದಿಂದು 3 ಕಾಮರೂಪನೆ ಹರಿಯನೇಮದಲಿ ಕಪಿಯಾಗಿ ಆ ಮಹಿಮೆಗುಂಗುರ ಅರ್ಪಿಸಿ | ಅಗ್ನಿಯಲಿ ತಾಮಸರ ಹುರಿದೆ ಪುರದಲ್ಲಿ 4 ಮರಳಿ ಶರಧಿಯ ದಾಂಟಿ ಭರದಿ ರಘುಪತಿ ಚರಣ ಸರಸಿಜದಿ ಚೂಡಾಮಣಿಯನ್ನು | ಒಪ್ಪಿಸಿ ಹರಿ ಅಂಗ ಸಂಗ ಪಡೆದಯ್ಯ 5 ಸಿಂಧÀುವನು ಬಂಧಿಸಿ ಬಂದ ವಿಭೀಷಣಗೆ ಕುಂದದೆ ಅಭಯ ಕೊಡಿಸಿದೆ | ದಯಸಿಂಧು ನಿಂದೆನ್ನ ಒಳಗೆ ಮುದವೀಯೊ 6 ದೇವೇಶನಾಜ್ಞೆಯಲಿ ಜೀವೇಶ ಸಂಜೀವ ಪರ್ವತ ತಂದು ಕಪಿಸೈನ್ಯ | ಎಬ್ಬಿಸಿ ಮೊದಲೆಡೆಗೆ ಬಗೆದ ಕುಶಲಾತ್ಮ 7 ದಶಶಿರನ ಕೊಲ್ಲಿಸಿ ವಸುಧಿಪುತ್ರಿಯ ತಂದು ನಸುನಗುತ ರಾಮಚಂದ್ರಾಗೆ | ಒಪ್ಪಿಸಿ ವಿ ಭೀಷಣಗೆ ರಾಷ್ಟ್ರ ಕೊಡಿಸಿದೆ 8 ಪ್ರೇಮದಿ ಭರತನು ಸ್ವಾಮಿ ಬರಲಿಲ್ಲೆಂದು ಕಾಯ ಬಿಡುತೀರೆ | ಉಳುಹಿದೆ ಶ್ರೀ ರಾಮನಾಗಮನ ತಿಳುಹೀಸಿ9 ತುಷ್ಟನಾದೆನು ಹನುಮ ಇಷ್ಟ ನೀ ಬೇಡೆನಲು ಪಾದ ಪಿಡಿಯಲು | ಭಕ್ತಿಯಲಿ ಪಟ್ಟಾಭಿರಾಮ ತನ್ನಿತ್ತ 10 ಆಖಣಾತ್ಮಕಾಯನೆ ಅಕಳಂಕ ಗುಣಧಾಮ ನಿಖಿಲಾತ್ಮ ಹರಿಯ ಪೂಜಿಪ | ದೃಢಮಹಿಮ ಶ್ರೀಕೃಷ್ಣ ಭಕ್ತಾ ಕಲಿಭೀಮ 11 ಶಿಶುಭಾವದಲಿ ನೀನು ಶತಶೃಂಗ ಗಿರಿವಡೆದು ನಸುನಗುತ ಜನನಿಗಭಯವ | ನಿತ್ತಂಥ ಪಶುಪಾಲ ಪರನೆ ಪೊರೆಯೆನ್ನ 12 ದುರ್ಯೋಧನನ ತ್ರಾಣ ತಂತುಗಳ ಹರಿದಾಡಿ ಸರ್ವೇಶ ಹರಿಗೆ ಪ್ರಿಯಮಾಡಿ | ನಲಿದಂಥ ಸರ್ವಜ್ಞ ಭೀಮ ಬಿಡೆ ನಿನ್ನ 13 ದುಶ್ಯಾಸನನ ಮಹಾದುಶ್ಯೀಲ ಸ್ಮರಿಸುತ್ತ ಪಶುವಂತೆ ವಧೆಯ ಮಾಡಿದಿ | ರಣದೊಳು ಸುಸ್ವಾದ ಗುಣಸಾರ ಮಹವೀರ 14 ಮಾನಿನಿಯ ಸಂಕಲ್ಪ ತ್ರಾಣನೀ ಪೂರೈಸಿ ಪ್ರಾಣಸಖನಾಗಿ ಸಲಹಿದೆ | ಜಯಭೀಮ ಪಾಣೆ ಪಿಡಿಯೆನ್ನ ಮಹಘನ್ನ 15 ದುರಾರಾಧಕ ದುಷ್ಟ ಜರಸಂಧನ ಸೀಳಿ ಮುರಾರಿ ಮತ್ಪ್ರೀತಿ ಬಿಡಿಸಿದೆ | ದೀಕ್ಷೆಯಲಿ ತ್ರಿ ಪುರಾರಿ ವಂದ್ಯಾಗತಿ ನೀನೆ 16 ನಾರಾಯಣಾಸ್ತ್ರವನು ವೀರ ಗುರುಸುತ ಬಿಡಲು ಚೀರಿ ನಮೋಯೆನ್ನೆ ನೃಪರೆಲ್ಲ | ಸ್ಮøತಿ ತಪ್ಪೆ ಧೀರ ಎದುರಾಗಿ ನೀ ನಿಂತೆ 17 ಗರಡಿಯಲಿ ಕೀಚಕನ ಮುರಿದು ಮುದ್ದೆಯ ಮಾಡಿ ಮರಿಯದೆ ಅವನ ಅನುಜರ | ಸದೆಬಡಿದು ಮೋದ ನೀನಿತ್ತೆ 18 ಉರಗ ಬಂಧವ ಹರಿದು ಕರಿ ಮುಂದೆ | ನೀನಿಂತೆ ಸರ್ವನಿತ್ಯಾತ್ಮ ಕೃಷ್ಣಾತ್ಮ 19 ಮಧುವೈರಿ ಧ್ಯಾನದಲಿ ಕುದುರೆ ಆಟವನಾಡಿ ಮುದದಿಂದ ಕುರುಪನ್ಹೆಗಲೇರಿ | ಹುದುಗ್ಯವನ ಮುದದಿಂದ ನಲಿದೆ ಕಮಲಾಕ್ಷ 20 ಅರಗಿನ ಮನೆಯಲ್ಲಿ ವೈರಿಜನರ ಕೊಂದು ಪೊರೆದೆ ನೀ ಜನನಿ ಅನುಜರ | ಪಂಜರನೆ ಧರೆಯೊಳಗೆ ಎನ್ನ ಸಲಹಯ್ಯ 21 ಹಿಡಿಂಬನ ಕೊಂದು ವರ ಹಿಡಿಂಬಿಯ ಕೈಪಿಡಿದು ನಡೆದೇಕ ಚಕ್ರಪುರದಲ್ಲಿ | ಬಕನೊರಸಿ ನಡಕ ಬಿಡಿಸೀದಿ ಸುಜನರ 22 ವ್ಯಾಸದೇವನ ಕಂಡು ಸೂಸಿದ ಸದ್ಭಕ್ತಿ ಪಾಶದಲಿ ಕಟ್ಟಿ ಒಳಗಿಟ್ಟು | ಪೂಜಿಸುತ ಲೇಸಾಗಿ ಮುಂದೆ ನಡೆದಯ್ಯ 23 ನೀ ಸ್ವಯಂವರ ಸಭೆಯ ವೇಷಾಂತರದಿ ಪೊಕ್ಕು ವಾಸುದೇವನ ಕಂಡು ಆನಂದ | ತುಳುಕುತ್ತ ಆ ಸತಿಯ ತಂದೆ ವಿಜಯಾತ್ಮ 24 ರಾಜರೆಲ್ಲರ ಹಿಡಿದು ರಾಜಸೂಯಯಾಗವನು ಪೂಜೆಯನು ಮಾಡಿ ಮೆರದಯ್ಯ 25 ಲಕ್ಷ್ಮೀವನಕ್ಹೋದಂತೆ ಪಕ್ಷಿಯರ ಒಡಗೂಡಿ ದಕ್ಷನೆ ನೀನು ವನವಾಸ | ಅಜ್ಞಾತ ಪಕ್ಷವ ಕಳೆದು ಮರಳಿದೆ26 ಸಂಗರವ ನೀ ಹೂಡಿ ಭಂಗಿಸಿ ಕೌರವನ ರಂಗನ ಮುಂದೆ ಅರ್ಪಿಸಿ | ವಂದಿಸಿ ಮಂಗಳಾತ್ಮಕನೆ ಸಲಹೆಮ್ಮ 27 ನಿರ್ಮಲ ರಾಜ್ಯವನು ಧರ್ಮಂಗೆ ನೀನಿತ್ತೆ ನಿರ್ಮೂಲಗೈದು ಅರಿಗಳ | ಕೊಂದ ಪರ ಧರ್ಮಪರರನ್ನು ಪೊರೆದಯ್ಯ 28 ಮಧ್ವಾಖ್ಯ ಮಹವೀರ ಶುದ್ಧ ಸತ್ವ ಶರೀರ ಉದ್ಧರಿಪುದೊಂದೆ ವ್ಯಾಪಾರ | ಕೈಕೊಂಡ ವಿದ್ಯಾಧಿಪತಿಯೆ ಸಲಹೆನ್ನ 29 ಶ್ವಾಸ ನಿಯಾಮಕ ಪ್ರಭುವಾಸವೆ ನಿನ್ನಿಂದ ಉಸರಲೇನಯ್ಯ ನಿನ್ನಲ್ಲಿ | ಜೀವೇಶ ಸೂಸುವ ಭಕ್ತಿ ನೀಡಯ್ಯ 30 ವೇದ ಚೋರನ ಮಡುಹಿ ಸಾದರದಿ ಸುಜನಕ್ಕೆ ಬೋಧ ಮಾಡೆಂದು ಶ್ರೀ ವಿಷ್ಣು | ಕಳುಹಿದ ಮಧ್ವಾಖ್ಯ ಗುರುವೆ ಪರಿಪಾಹಿ 31 ಸುರರು ದುಂದಭಿ ಮೊರೆಯೆ ದುರುಳರ ಎದೆಯು ನಡುಗಲು | ಹರುಷದಲಿ ಮೆರೆದು ನೆರೆದರು ಸುಜನರು 32 ಕೈವಲ್ಯ ನೀನಿತ್ತೆ ಶ್ರೀವಲ್ಲಭನ ಪ್ರಥಮಾಂಗ | ಪ್ರಸನ್ನ ನೀವಲಿದು ಹರಿಯ ತೋರಯ್ಯ 33 ಹುಣಿಸೆ ಬೀಜದಿ ಪಿತನ ಘನೃಣವ ತೀರಿಸಿದಿ ಅಣಿಮಾದಿ ಸಿದ್ಧಿ ತೃಣವಯ್ಯ | ನಿನಗಿನ್ನು ಗುಣಪೂರ್ಣ ಹರಿಯ ಪ್ರತಿಬಿಂಬ 34 ಶಿವಭಟ್ಟನನು ಗೆದ್ದು ಜಯಾಂಕ ರಸ ತೋರೆ ವಿಪ್ರ ಸುರರು ಪೂಜಿಸೆ | ನಲವಿಂದ ಅವನಿಯೊಳು ಪೊಳೆದೆ ರವಿಯಂತೆ 35 ವಿದ್ಯಾಧಿಪತಿ ಗುರುವೆ ವಿದ್ಯೆ ಪೇಳಿದ ದ್ವಿಜಗೆ ಸದ್ಭಕ್ತಿ ದಕ್ಷಿಣೆ ನೀನಿತ್ತೆ | ಕರುಣಾತ್ಮ ಉದ್ಧರಿಸು ಎನ್ನ ದ್ವಿಜರತ್ನ 36 ಜನನಿ ಜನಕರು ತಡಿಯೆ ಅನುವಾದ ಸುತನಿತ್ತು ಘನವಾದ ತುರ್ಯ ಆಶÀ್ರಮ | ಕೈಗೊಂಡು ಸುನವ ಪದ್ಧತಿಯ ತೋರಿದೆ 37 ಅಚ್ಯುತ ಪ್ರೇಕ್ಷಕರಿಗೆ ಹೆಚ್ಚಾದ ದಯದಿ ಹರಿ ನಿನ್ನ | ವೊಯ್ದಿತ್ತ ಅಚ್ಚುಮೆಚ್ಚುವ ನೀ ಹರಿಗೆಂದು 38 ವಾದಿಗಳ ಭಂಗಿಸಲು ಸಾದರದಿ ಯತಿ ಕರಿಯೆ ಛೇದಿಸಿ ಖಳರ ಮದವನ್ನು | ಹರಿಸಿದೆ ಸ್ವಾದ ಗುಣಸಿಂಧು ಮದ್ಬಂಧು 39 ಬಾಳೆಗೊನೆಗಳ ಮೆದ್ದು ಬಾಡಲೇತಕೆ ಉದರ ಪೇಳೆಂದ ಯತಿಗೆ ಜಠರಾಗ್ನಿ | ಬ್ರಹ್ಮಾಂಡ ಕೊಳ್ಳುವದುಯೆಂದು ವರದಯ್ಯ 40 ವಾದಗಳ ಪರಿಹರಿಸಿ ಬೋಧಿಸಲು ಆ ದ್ವಿಜರು ಪಾದಕ್ಕೆ ಎರಗಿ ನಮೋ ಎಂದು ಅಮರರಿಗೆ ಆ ಬೋಧವೊ ಮಹಿಮೆಯೆಂದಾರು 41 ಬದರಿಯಾತ್ರೆಯಲಿ ಸುರನದಿಯು ತಾ ಮಹಿಪಡೆದು ಮುದದಲ್ಲಿ ಬಂದು ನಮಿಸಲು | ಶಿಷ್ಯಜನ ಯೈದಿ ಭಕ್ತಿಯನು ನಮೋ ಎಂದು 42 ಹರಿಯಂತೆ ನರಿಗಳನು ತುರಕ ದೂತರ ಜರಿದು ನರಪನಿಂದರ್ಧ ಮಹಿಮೆಯನ್ನು | ಪಡೆದಂಥ ಯರಡೇಳು ಭುವನ ಅಧಿಪತಿ 43 ಸತ್ಯತೀರ್ಥರ ಬಳಿಗೆ ದೈತ್ಯ ವ್ಯಾಘ್ರನು ಬರಲು ಮೃತ್ಯುವಿನ ಪುರಕೆ ಕಳುಹಿದೆ | ಲೀಲೆಯಲಿ ಭೃತ್ಯತ್ವಯೆನಗೆ ನೀಡಯ್ಯ 44 ಸೂಸುವಾ ಭಕ್ತಿಯಲಿ ವ್ಯಾಸದೇವನ ಕಂಡು ಈಶ ಸಲಹೆಂದು ಎರಗಲು | ಮನವುಬ್ಬಿ ಬಾ ಸುತನೆ ಎಂದು ತಬ್ಬಿದ 45 ಆನಂದ ಮೂರ್ತಿಯ ಆನಂದ ಸಂಗವನು ಆನಂದದಿಂದ ನೀ ಯೈದಿ | ನಂದ ಆನಂದ ತೀರ್ಥ ಕೊಟ್ಟೆಯೊ 46 ನಾರಾಯಣನಲಿ ಕರೆದೊಯ್ಯೆ ಬದರಿಪನ ಚರಣಾಬ್ಜಕೆರಗಿ ಹರಿಲೀಲೆ | ಸ್ಮರಿಸಿದ ಗುರುರತ್ನ ಸಲಹೊ ಧನ್ಯಾತ್ಮ 47 ಅಚ್ಯುತನ ಸಂಗದಲಿ ಚಿತ್ಸುಖವ ಉಂಡುಬ್ಬಿ ಹೆಚ್ಚಿನ ಪದವಿ ಇಲ್ಲೆಂದು | ನಲಿದಂಥ ಅಚ್ಯುತಾತ್ಮಾನೆ ಸಲಹೆನ್ನ 48
--------------
ಜಯೇಶವಿಠಲ