ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜ್ಞಾನಕಿದೇ ನಡಿ ಕುರುಹು | ಶ್ರೀ ರಮಾನಾಥಾಂಘ್ರಿಯ ಕಾಣುವದರಿತು ಪ ಕೋಪ ತಾಪವ ಬಿಡಬೇಕು ಪಶ್ಚಾ | ತ್ತಾಪದಿ ವೈರಾಗ್ಯ ಘನ ಬಲಿಬೇಕು | ಪಾಪವಿರಹಿತಾಗಬೇಕು | ಗತಿ | ಸೋಪಾನವಾದಾ ಶಾಂತಿಯ ಜಡಿಬೇಕು 1 ಕರುಣ ಮೂರುತಿ ಆಗಬೇಕು ಸರ್ವ | ಧರೆಯು ಜನಕ ಪ್ರಿಯವಾಗಿರಬೇಕು | ನೆರೆ ಲೋಭವನು ಜರಿಬೇಕು ತನ್ನ | ತೆರನರಿ ತನ್ನವ ನೀಡಲಿಬೇಕು 2 ದುರಿತ ಭಯವ ಬಿಡಬೇಕು | ದುಃಖ | ದುರ್ವಾಣಿಯಲಿ ತಾ ಬಳಲದಿರಬೇಕು | ಹರಿಭಕ್ತಿ ದೃಢಗೊಳ್ಳಬೇಕು ಗುರು | ಬೋಧ ನಿಜವೆನಬೇಕು 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನರನಾದ ಮ್ಯಾಲ ಹರಿನಾಮ ಜಿವ್ಹೆದಲಿರಬೇಕು ಪ ಗುರುವಿನ ಬರಣಕ ನಂಬಿರಬೇಕು| ತರಣೋಪಾಯವನರಿಯಲಿ ಬೇಕು| ವಿರತಿಯ ಮಾರ್ಗದಿ ನಡೆಬೇಕು 1 ಪರ ಬೇಕು| ಪಾತಕ ತನವನು ಜರಿಯಲಿಬೇಕು| ಮಾತು ಮಾತಿಗೆ ಹರಿಯೆನಬೇಕು 2 ಶಾಂತಿಯ ಶಮೆದಮೆ ಹಿಡಿಯಲಿಬೇಕು| ಭ್ರಾಂತಿಯ ಕ್ರೋಧವ ನಳಿಯಲಿಬೇಕು| ಸಂತರ ಸಂಗದಲಿರಬೇಕು 3 ತಂದೆ ಮಹಿಪತಿ ದಯ ಪಡಿಬೇಕು| ಬಂದದನುಂಡು ಸುಖದಿರಬೇಕು| ಎಂದೆಂದು ಭಕ್ತಿ ಬಲಿಬೇಕು4
--------------
ಕಾಖಂಡಕಿ ಶ್ರೀ ಕೃಷ್ಣದಾಸರು