ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಘಟನೆಯನು ಮಾಡಿಸೈ ಘಟೋತ್ಕಚ ಜನಕಾ ಪ ಘಟದೊಳಗೆ ಸುಧೆಯಿಟ್ಟು ಮದ್ಯವೆಂತೆಂದು ಪೇಳಿದರೆ ಮಧ್ವದೂತರು ಒಡಂಬಡುವರೇ ಮಧ್ಯಮಾಧಮರಿಗಿದುಅಲ್ಲದೇ 1 ಪರಮ ಪುರುಷನೆ ಕೇಳು ಪರಮತದ ಮತಿಯ ಕೆಡಿಸು ನಿನ್ನ ಪ್ರೇಮಾಖ್ಯ ಕರುಣಕವಚ ತೊಡಿಸು ಜನುಮ ಜನುಮಕ್ಕೆ ಇದೇ ಬೇಡಿಸು 2 ಕಾಯನೇ ನಾನೆಂಬಂಥ ಅಜ್ಞಾನ ಪಟು ಬಿಡಿಸೊಸುಜ್ಞಾನವಿತ್ತು ಸಲಹೊ ತಂದೆವರದಗೋಪಾಲವಿಠ್ಠಲನಪ್ರೀಯಾ 3
--------------
ತಂದೆವರದಗೋಪಾಲವಿಠಲರು
ನರ ಹರಿನಾಮವ ನೀ ನೆನೆದರೆ| ಧರಿಯೊಳು ಸಾಲದೇ ಇಹಪರ ದೋರದೆ| ಬರದೇ ಸಾಯಾಸ ಬಡುವರೇ ಪ ಆದಿ ಯುಗಂಗಳಲಿ ತಾಪಸರು| ಸಾದರ ಬಹುದಿನದಿಂದಾ| ಸಾಧಿಸುವಗತಿ ಕೊಡುವ ನೊಂದೆ ಕ್ಷಣದಿ| ಶ್ರೀಧರ ತಾ ದಯದಿಂದಾ1 ಸಂತರ ಸಂಗದಿ ಶ್ರವಣವ ಮಾಡಿ| ಆಂತರ್ಭಾವನೆ ಬಲಿಸೀ| ಭ್ರಾಂತ ನೀನಾಗದೆ ಅನ್ಯ ಸಾಧನದಲಿ| ಸಂತತ ಕೀರ್ತನೆ ಬೆರೆಸೀ2 ಸಾವಿರಕೊಂದೆ ಈ ನುಡಿ ನಿಜವೆಂದು| ಸಾವಧವನಾದವ ಮನುಜಾ| ಭಾವಿಸು ಗುರುಮಹಿಪತಿ ಪ್ರಭು|ನುಡಿಸಿದ| ಆವನಂಬವನೇ ದನುಜಾ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು