ಒಟ್ಟು 7 ಕಡೆಗಳಲ್ಲಿ , 5 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಧ್ಯಾಯ ಎರಡು ಮೃಗ ಬ್ಯಾಟಯಲಿ ಹೊರಟ್ಹೋಗುವಾ ಯಕ್ಷಾನುಗರಿಂದ ತಾ ಮೃತನಾಗುವಾ ಮಗ ಬಾರಾನೆಂದು ತಾಯಿ ಮಿಡುಕುತಾ ರಾಜ್ಯ ಅಗಲಿ ಹೋಗ್ವಳು ತಾ ಹುಡುಕುತಾ 7 ಅಂತ:ಕರುಣ ತಾಪದಲಿ ಕಾಡಾಕಿಚ್ಚಿ ನಂತದೊಳಗೆ ಬೀಳೋಳು ಗಾಡಾ ಚಿಂತೆಯಾಕೆ ನೃಪಹೋಗಿನ್ನ ನಿ ಶ್ಚಿಂತೆಯಿಂದಲಿ ರಾಜ್ಯ ಮಾಡಿನ್ನ 8 ಎಂದು ಹಸ್ತವ ಶಿರದಲ್ಲಿಟ್ಟು ಆ ನಂದದಿಂದಲಿ ವರಗಳನು ಕೊಟ್ಟು ಮುಂದನಡೆದ ಪಕ್ಷಿವಾಹನನು ಜಗ ದ್ವಂದ್ಯ 'ಶ್ರೀ ಅನಂತದ್ರೀಶ' ನು 9 ಪದ ಆದಿ ಮೂರುತಿ ಶ್ರೀರಮೇಶಾ ತನ್ನ ಧಾಮಕ್ಕ್ಹೋದನು ಮೋದರಹಿತನಾಗಿ ಬಾಲದೀರ್ಘ ಉಸುರಗಳದನು ಪೋದನೆಂದು ದು:ಖದಿಂದ ತಿರುಗಿ ಪುರಕ ನಡದನು ಯಾದವೇಶ ಹಾ ಮುರಾರಿ ಎಂದು ಆಗ ನುಡದನು 1 ಪೂರ್ವ ಪುಣ್ಯದಿಂದ ನಿನ್ನ ರೂಪ ಯನಗ ತೋರಿದಿ ಶರ್ವಮಿತ್ರಯೆನ್ನಾ ವಿಷಯ ಮಡುವಿನೊಳಗ ಹಾಕಿದಿ ಸರ್ವಕಾರ್ಯ ಬಿಟ್ಟು ಕರುಣಾದಿಂದ ಆಗ ನೋಡಿದಿ ಗರ್ವಯುಕ್ತನಾಗಿ ಯನ್ನಬಿಟ್ಟು ಈಗವೋಡಿದಿ 2 ಸಿಕ್ಕಿದಂಥ ದಿವ್ಯಮಾಣಿಕ್ಯ ಕಳದಂತಾಯಿತು ಫಕ್ಕನೆದ್ದು ಕುಳಿತು ಕಂಡಾಕನಸಿನಂತಾಯಿತು ಮಿಕ್ಕ ವಿಷಯ ಭೋಗ ಬೇಡಿ ಜನ್ಮ ವ್ಯರ್ಥವಾಯಿತು ತಕ್ಕ ಮುಕ್ತಿ ಬೇಡಲಿಲ್ಲಾ ಯನ್ನ ಬುದ್ಧಿ ಹೋಯಿತು 3 ಕ್ಲೇಶ ಬಿಟ್ಟು ಈಗ ಬಹಳ ವಿಷ್ಯ ಸೌಖತು” ಏಸು ಜನ್ಮ ಪೂಜೆ ಮಾಡಿದಾರು ದೇವ ದೊರಕನು ಮಾಸ ಪಂಚದಿಂದ ಯನ್ನ ದೃಷ್ಟಿ ವಿಷಯ ನಾದನು 4 ಆಶಿಇಂದ ಆಗ ವಿಷಯ ಸËಖ್ಯವನು ದೈವಕೆ ಮಾಡಿಕೊಂಡು ಹೀಂಗ ಮನಸ್ಸಿನಲ್ಲಿ ಬಂದ ಪಟ್ಟಣಕೆ ಕೊಂಡ ಪುರಸಮೀಪಕೆ 5 ಶ್ಲೋಕ ಆಗ ನೋಡಿದ ಒಬ್ಬ ಧ್ರುವನ್ನಾ ವೇಗ ಪುಟ್ಟಿತು ಮನಸಿಗೆ ತನ್ನ ಬ್ಯಾಗ ಪೇಳಿದ ಅರಿಸಿನ ಮುಂದಾ ಬಾಗಿ ಬಿನ್ನಯಿಸಿ ತಾನಯ ದಿಂದಾ 1 ಪದ ರಾಜಭೂಪಾನೆ ನಿನ ಕಂದ ಬಂದಾ|| ಪೂಜಿಸಿ ದೇವೇಶನ ಛಂದದಿಂದ || ಪರಿಪರಿಯಿಂದಾ ಗುರುಕೃಪೆಯಿಂದಾ | ತಿರುಗಿ ಇಲ್ಲಿಗೆ ಕ್ಷೇಮದಿಂದಲಿಂದಾ 1 ಪುಣ್ಯಗಳಿಂದಾರಣ್ಯದಲಿಂದಾ ಸಣ್ಣಬಾಲನು ಭಾಳನಂದದಿಂದಾ 2 ಅನಂತರದಿಂದಾ ಅನಂತ ಸÉೀವಿಂದಾ 'ನಂತ್ರಾದೀಶನಾ’ ದಯದಿಂದ ಲಿಂದಾ 3 ಆರ್ಯಾ ಕಾಂಬೆನು ಯಂದಾ ಹುಟ್ಟಿತು ಆನಂದಾ1 ಪದ ರಾಗ :ಶಂಕರಾಭರಣ ಆದಿತಾಳ ಸುದ್ದಿ ಹೇಳಿದಾತಾಗೆ ಬೇಕಾದ್ದು ಕೊಟ್ಟು ಹರುಷದಿಂದ ಯದ್ದು ರಥವಾನೇರಿ ತಾ ಸನ್ನದ್ಧ ನಾದನು 1 ಇಬ್ಬರ ಹೆಂಡಿರ ಕೂಡಿ ಒಬ್ಬ ಪುತ್ರನಿಂದ ಕೂಡಿ ಅಬ್ಬರದಿಂದಲಿ ತಾ ಉಬ್ಬುಬ್ಬಿ ನಡದಾನು 2 ಮಂತ್ರಿಗಳು ವಿಪ್ರಾರು(ಗಳು) ಮಂತ್ರಜ್ಞಾರು ಮಾನವಾರು ಸಂತ್ರೋಧಾರ ನಡದಾರು ಬಜಂತ್ರಿ ಘೋಷಾದಿ 3 ಮೃದಂಗ ಘೋಷ ಸಾರಿಸಾರಿ ನುಡದಾವು ಅಬ್ಬಾರದಿಂದಲಿ 4 ತಂಬೂರಿಘೋಷಾ ಜಾಣೆ ರಾಮಂಜುಳಗೀತಾವಾಣಿ ಘೋಷಾವು 5 ಅಂಗಾನೇರು ಕುಂಕುಮಾದಿ ಮಂಗಲ ಭೂಷಾದಿಂದ ಶೃಂಗಾರಿಸಿ ಕೊಂಡಾರು ಕುರಂಗ ನೇತೆÀ್ರರು 6 ಧಟ್ಟಿ ಪೀತಾಂಬರನುಟ್ಟ ಬಟ್ಟಾ ಕುಚದಲ್ಯೊಪ್ಪುವಾ ಕಠ್ಠಾಣಿ ಮೋಹನ ಮಾಲೆನಿಟ್ಟು ಕೊರಳಿಗೆ 7 ರಂಬೇರು ವೀಳ್ಯವ ಮೆದ್ದು ತಾಂಬೂಲಗಲ್ಲಾದಲ್ಯೊತ್ತಿ ತುಂಬಿ ಹರುಷದಿಂದ ಚಂದ್ರ ಬಿಂಬ ಮುಖಿಯರು 8 ಮೀರಿದಾ ಸಂಭ್ರಮದಿ ಶೃಂಗಾರವನು ಮಾಡಿಕೊಂಡು ಥೋರಾಗನ್ನಡಿಲಿ ತಮ್ಮ ಮಾರಿ ನೋಡೋರು 9 ಕುಡಿಗಣ್ಣ ನೋಟಾದವರು ನಡಸಣ್ಣಾದಿ ಬಳಕುವರು ಮಂದ ನಡಗಿ ವಂತರು 10 ಪಟ್ಟಾಣದಿಂದಲಿ ವಳ್ಳೇ ಧಿಟ್ಟನಾರಿಯರು ಕಾಲಾ ಬಟ್ಟಿನಲಿ ಕಾಲುಂಗುರ ಮೆಟ್ಟಿ ನಡದಾರು11 ಪರಿಪರಿ ವಿಲಾಸದಿಂದ ಕರದಲ್ಲಿ ಕರತಳಾನಿಕ್ಕಿ ಕಿರಿನಗಿಯಿಂದಲ್ಲೆ ನಗುತಾ ಬರುವುತೀಹರು 12 ಹಿಂಡುಜನರಾಗಳ ಕೂಡಿಕೊಡು ರಾಜಾಬಂದು ಮಗನಾರಥವಾನಿಳುದು ಅಪ್ಪಿಕೊಂಡಾ ಹರುಷದಿ 13 ಮೂಸಿ ನೋಡಿತನ್ನ ಜಲಜಾ ಲೋಚನಗಳಿಂದ ಜಲವಾಧರಿಸಿದ 14 ಛಂದಾದಿ ಬಾಲಾನು ತನ್ನ ತಂದಿ ಪಾದಾದೊಳು ಯರಗಿ ಪಾದ ಬಂದು ಯರಗಿದ 15 (ತಾಯಿಯರ ಪಾದಗಳಿಗೆ ಪೋರ ಬಂದು ಯರಗಿದ) ಸಾಧುತಂದಿತಾಯಿ ಆಶೀರ್ವಾದ ಯುಕ್ತನಾಗಿ ತನ್ನ ಮೋದ ಬಟ್ಟಾಳು 16 ಏಳಯ್ಯಾ ಎಳಯ್ಯಾಯೆಂದು ಭಾಳಾನಂದಾದಿಂದ ಲ್ಯಪ್ಪಿ ಭಾಳಾಯುಷ್ಯಾವಂತನಾಗೊ ಬಾಲಾಯೆಂದಾಳು 17 ಉತ್ತಮ ಧ್ರುವನು ತಾತಾ ಗುಣೋತ್ತಮ ಇಬ್ಬರು ಕೂಡಿ ಅತ್ಯಂತ ಹರುಷಗೊಂಡಾರಂತ:ಕರುಣದಿ 18 ಇಂದಿಗೆ 'ಅನಂತಾದ್ರೀಶಾ’ ಹೊಂದಿಸಿದಾ ನಮ್ಮಿಬ್ಬರಾ ನೆಂದು ಮಾತನಾಡಿದರು ಕಂದರಿಬ್ಬಾರು 19 ಛಂದ ಹೆತ್ತ ತಾಯಿಗೆ ಚಿತ್ತಸಂಭ್ರಮಾ ಮತ್ತ ಜನರಿಗೆ ಚಿತ್ತ ವಿಭ್ರಮಾ ಪುತ್ರನಷ್ಟಿ ತಾ ಯೆತ್ತಿಕೊಂಡಳು ಸುತ್ತ ಚಿಂತಿಯಾ ಮರ್ತುಬಿಟ್ಟಳು 1 ಸುಂದರಾಂಗಿಯ ಆನಂದ ಬಾಷ್ಪದಾ ಬಿಂದು ಸ್ನಾನವು ಕಂದ ಮಾಡಿದಾ ಮುಂದ ರಥದಲ್ಲಿ ಬಂದು ಕುಳಿತನು ಮುಂದಿರುವ ಬಾಲನ ಒಲಿದು ನೋಡುತಾ ಮೊಲಿಯ ಪಾಲು ಚೆಮ್ಮಿ ತಲಿಯಲಿ ಹರುತಾ ಹಲವು ರಾಜ್ಯಕೆ ಮುಂದ ಸೂಚನಾ2 ಕುದರಿಸೈನ್ಯದಿಂದ ನಡದನು ಭಾಳ ಬಿರುದಿನಾ ಕಾಳಿ ಊದುತಾ ತಾಳ ವಾದ್ಯವು ಭಾಳ ನುಡುವುತಾ ಕೇಳಿಪುರದಲ್ಲಿ ಬಾಲಪುರುಷರು ಮಾಳಿಗಿಯಲಿ ಭಾಳ ನಿಂತರು 3 ಉತ್ತಮಾರ್ಯರು ಮತ್ತ ಸ್ತ್ರೀಯರು ಹತ್ತಿ ಮಾಳಿಗಿ ಸುತ್ತ ನಿಂತರು ಯೆತ್ತ ನೋಡಲು ರತ್ನ ಭೂಷಿತಾ ಉತ್ತುಮಾ ಪುರಿ ಭರ್ತ ಪಾಲಿತಾ 4 ಸಾಲು ಸಾಲಕೆ ವಿಶಾಲ ಮಂಟಪಾ ಸಾಲ ದೀಪದಿ ಭಾಳ ಶೋಭಿಪಾ ಸೆಲ (ಚೆಲ್ವ?) ಮುತ್ತಿನ ಸಾಲಯಳಿಗಳು ಮ್ಯಾಲ ಮಲ್ಲಗಿ ಮಾಲಕಿಗಳು 5 ಆರ್ಯಾ ಮಂದ ಮಾರುತಾನಿಂದ ಭಾಳಮಕರಂದ ಪುಷ್ಟದಾ ವಾಸನವು ಮುಂದ ಪತಾಕಿಗಳಿಂದ ಕಣ್ಣಿಗೆ ಛಂತ ತೋರಿಪಾ ಪಟ್ಟಣ್ಣವು 1 ವೇಗದಿಂದ ರಥ ಸಾಗಿಸಿ ಧ್ರುವ ಛಂ ದಾಗಿ ನಡೆದನು ಪುರದೊಳಗೆ ಬ್ಯಾಗ ಗೋಪುರದ ಬಾಗಿಲದಾಟಿ ಪೋಗಿ ಕುಳಿತನು ಸಭಿಯೊಳಗೆ 2 ಬಾಲನ ಕಂಡು ಭೂಪಾಲನು ಹಿಗ್ಗುತಾ ಭಾಳಪುಟ್ಟಿ ಮನದುದ್ರೇಕಾ ಕಾಲ ಮೂಹೂರ್ತದ ವ್ಯಾಳಯವು ಸಾಧಿಸಿ ಬಾಲಗ ಮಾಡಿದ ನಭಿಷೇಕಾ3 ಕೊಟ್ಟರಾಜ್ಯವನು ಪಟ್ಟಗಟ್ಟಿ ಮುಂ ದಿಟ್ಟ ಶಿಖಾ ಮುದ್ರಿಕಿಯನ್ನು ಅಷ್ಟ ವಿಭೂತಿಗ¼ಷ್ಟು ಕೊಟ್ಟು ಸಂ ತುಷ್ಟನಾದ ಭೂಪತಿ ತಾನು 4 ಛಂದದಿ ದೇವರಿಗೊಂದಿಸಿ ಧ್ರುವ ಆ ನಂದದಿ ಬ್ರಾಹ್ಮರಿಗೆರಗಿದನು ತಂದಿ ತಾಯಿಗಳಿಗೊಂದಿಸಿ ಬಹುತ್ವರ ದಿಂದ ಏರಿದಾ ಪೀಠವನು 5 ಸುಂದರ ಸಭಿಯಲಿ ಬಂದು ಕೂಡಲು ದೇ ವೇಂದ್ರನಂತೆ ಬಹು ಶೋಭಿಸಿದಾ ಬಂಧು ಜನರಿಗ್ಯಾನಂದವ ತೋರುತ ಚಂದ್ರಮನಂತೆ ಶೋಭಿಸಿದ 6 ಝಗಿಝಗಿ ತೋರುವ ಬಗಿಬಗಿ ಕುಪ್ಪುಸ ಬಿಗಿಬಿಗಿ ಇಂದಲಿ ತೊಟ್ಟವರು ಲಗು ಬಗೆಯಿಂದಲಿ ನಗಿನಗಿ ಮಾತಿನ ಸೊಗಸು ಗಾರಿಕೆ ಬಲ್ಲವರು 7 ಥೊರಮುತ್ತು ಜರತಾರ ಮಯದ ಉಡ ಗೊರಿ ತಂದರು ಆ ಜನರು ಸಾರ ಸಿಂಹಾಸನಯೇರಿದ ಧ್ರುವನಿಗೆ ಆರುತಿ ತಂದರು ನಾರಿಯರು 8 ಮುತ್ಹಚ್ಚಿದ ಹೊಸ ನತ್ತುಗಳಿಂದಲಿ ಮತ್ತಿಷ್ಟೊಪ್ಪುವ ಮುಖದವರು ಪುತ್ಥಳಿ ಸರಘುನ ಮುತ್ತಿನ ಸರಗಳು ಉಳ್ಳವರು9 ಹತ್ಹೊರಷುದ ಮ್ಯಾಲ್ಮತ್ತೆರಡೊರ್ಷದ ಉತ್ತಮ ಪ್ರಾಯದ ಬಾಲಿಯರು ಮತ್ತ ಕಾಲುಂಗರ ವತ್ತೊತ್ತಿ ನಡುವುತ ಗತ್ತಿನಿಂದಲೆ ನಡುವುವರು 10 ಪದ ತಂದ್ರು ಆರುತಿ ಚಂದ್ರ ಮುಖಿಯಾರು ತಂದ್ರು ಆರುತಿ ಬಹು ಸುಂದರ ಸುಗುಣೇರು ಪ ಚಂದುಟಿ ಕಚ್ಚುತ ನಿಂದ್ರದ ಮದದ ಗ ಜೇಂದ್ರ ಗಮನಿಯರು ಬಂದ್ರಾಗಲೇ ದೇ ವೇಂದ್ರನ ಸಮರಾಜೇಂದ್ರನÀ ಸುತಗೆ ಅ.ಪ ಬಣ್ಣಗಾರಿಕೆಯಲಿ ಸಣ್ಣಕುಂಕುಮನಿಟ್ಟ ಕಣ್ಣಕುಡಿ ಹುಬ್ಬು ಕುಣಿಕುಣಿಸ್ಯಾಡುತ ಹೆಣ್ಕೋಕಿಲ ಸ್ವರ ಸಣ್ಕಂಠದಿ ನುಡಿ ಸಣ್ಕದಿ ಪಾಡುತ 1 ಕೈ ಬೆರಳಿಗೊಪ್ಪುವ ಹರುಳಿನುಂಗುರ ಇಟ್ಟವರು ಯರಳಿಯಂತೆ ಹೊರಹೊರಳಿ ನೋಡಿ ಮುಂ ಗುರುಳ ಗೂದಲಾ ತೀಡುವರು ಜಾಣಕಾಂತಿಯರು 2 ಮೇಲ್ಮಾಟದ ಬಗಿಯುಲ್ಮಾತಾಡುತ ಬಲ್ಮೋಹದಿ ಬಹು ಮೆಲ್ಲಮೆಲ್ಲನೆ ಹೆಜ್ಜೆ ನೆಲ್ಲ ಮ್ಯಾಲಿಕ್ಕುತ ಸೊಲ್ಮುಡಿನೇವರಿಸಿ ಮ್ಯಾಲ್ಮಲ್ಲಿಗಿ ಸರಗಳ ಮುಡಿಯವರು 3 ಸದ್ರಸ ಕುಂಕುಮ ಮುದ್ರಾಂಕಿತ ಕುಚ ಘದ್ರಿಸುತಲಿ ಬಹು ಉದ್ರೇಕದಿ `ಅನಂತಾದ್ರೀಶನ ' ಮುದ್ರಿಕಿ ಪದಗಳು ಘದ್ರಿಸಿ ನುಡಿವುತಾ ಭದ್ರಾಂಗಿಯರು 4 ಪದ ಮಂಗಳ ಮೂರುತಿ ಬಾಲಾಗೆ ಶ್ರೀ ನೃಪಾಲಾಗೆ ಮಂಗಳ ಗುಣಶೀಲಾಗೆ ಮಂಗಳಮೂರುತಿ ಛಂದಾ ಬಗಿಯಿಂದಾ ಪ ಶುಭದಿಂದಾ ಆನಂದದಿಂದಾ ಅಂಬೂಧಿಯೊಳಗಾಡಿ ಗಂಭೀರಾಗಿರಿಪೊತ್ತಾ ಜಾಂಬುನದಾಕ್ಷಾರಿ ವರ ಪ್ರಿಯಾಗೆ ಗಂಭೀರಾ ನೃಸಿಂಹಾನ ನೆಂಬಿ ರಕ್ಷಿತ ನೀಗೆ ರಂಭೇರು ಕರುಣಾದಿ ನೋಡಿ ಒಡಗೂಡಿ ಕೊಂಡಾಡಿ ತ್ವರಗೂಡಿ ಪಾಡಿ 1
--------------
ಅನಂತಾದ್ರೀಶ - ಕಥನಕಾವ್ಯಗಳು
ನೀರೆ ದ್ವಾರಕೆಯ ಸೊಬಗು ಬ್ರಹ್ಮರಾಯ ಬಟ್ಟಾನು ಬೆರಗು ನೀರೆಪ. ಚದುರೆ ಬಾಜಾರದಿ ಕುದುರೆ ಸಾಲುಗಳೆಷ್ಟುಎದುರಿಗೆ ಬಾಹೋ ರಥಗಳೆಷ್ಟುಎದುರಿಗೆ ಬಾಹೋ ರಥಗಳೆಷ್ಟು ಅಂಬಾರಿಸದರಿನ ಆನೆ ಸೊಬಗೆಷ್ಟು1 ಹಿಂಡು ಗೆಳತಿಯರೆಲ್ಲ ತಂಡ ತಂಡ ನೆರೆದುದುಂಡು ಮಲ್ಲಿಗೆಯ ತುರುಬಿನದುಂಡು ಮಲ್ಲಿಗೆ ತುರುಬಿನ ಕುವರಿಯರು ಚಂಡನಾಡುವÀರು ಕಡೆಯಿಲ್ಲ 2 ನೀಲಮಾಣಿಕ ಬಿಗಿದ ಮೇಲಾದ ಮನೆಗಳುಮ್ಯಾಲೆ ಕನ್ನಡಿಯ ನಿಲ್ಲಿಸ್ಯಾವಮ್ಯಾಲೆ ಕನ್ನಡಿಯ ನಿಲ್ಲಿಸಿದ ಮನೆಯೊಳುಸಾಲು ದೀವಟಿಗೆ ಸೊಬಗೆಷ್ಟು 3 ಬಟ್ಟ ಮುತ್ತಿನ ತೋರಣ ಕಟ್ಟಿದ ಮನೆಯೊಳುಅಟ್ಟಳ ಮ್ಯಾಲೆ ಧ್ವಜಗಳುಅಟ್ಟಳ ಮ್ಯಾಲೆ ಧ್ವಜಗಳು ಗಗನಕ್ಕೆಮುಟ್ಟಿವೆಂಬಂತೆ ನಿಲ್ಲಿಸ್ಯಾವೆ4 ದೊರೆಗಳ ಮನೆಯಿಂದ ಬರೆದ ಚಿತ್ರದÀ ಬೊಂಬೆಗಳುಕರೆದಾವ ಕೈ ಬೀಸುತೆಕೈ ಬೀಸಿ ನಮ್ಮ ಎದುರಿಗೆಬರತಾವೆಂಬಂತೆ ನಿಲ್ಲಿಸ್ಯಾವ 5 ಏಳಂತಸ್ತಿನ ಮಾಳಿಗೆ ಮ್ಯಾಲಿನ ಗೊಂಬೆಗಳು ಬಾಳೆ ಎಲೆಯಂತೆ ಬಳಕುತ ಬಾಳೆ ಎಲೆಯಂತೆ ಬಳಕುತಕಿವಿಮಾತು ಹೇಳ್ಯಾವೆಂಬಂತೆ ನಿಲ್ಲಿಸ್ಯಾವೆ6 ಮದನ ಜನಕನು ಸುಳಿಯೋನೆಒಮ್ಮೊಮ್ಮೆ ಮುದದಿ ಭಕ್ತರನ ಸಲುಹಲಿ 7
--------------
ಗಲಗಲಿಅವ್ವನವರು
ಸಂಸಾರದೊಳು ಸುಖವಿಲ್ಲ ಪ ದುಂಡನೆ ಬಂದಿಹೆ ದುಂಡನೆ ಹೋಗುವೆ ಹೆಂಡಿರು ಮಕ್ಕಳ ನಡುವೆಯಲಿ ತಂಡ ತಂಡದಿ ಹುಟ್ಟಿ ಕೊಂಡವರು ನಚ್ಚಿ ಕೊಂಡಿವರನು ಪರಗತಿಯ ಕೆಡಿಸದಿರು 1 ಹುಟ್ಟುತ ತರಲಿಲ್ಲ ಹೋಗುತ ವೈಯೊಲ್ಲ ನಟ್ಟ ನಡುವೆ ಬಂದ ಸಿರಿಯಿದು ಕಟ್ಟ ಕಡೆಗೆ ನೀನು ಮಡಿಯಲಿ ಕರುವೆಯ ಬಟ್ಟೆಯ ಶವ ಕಿತ್ತಲಿದು ಬಳ್ಳಿತೆಂಬರು 2 ಎನ್ನಮನೆಯು ಎನ್ನತೋಟ ತುಡಿಗೆಯಿದು ದೆನುತ ಹಿಗ್ಗದಿರು ಇದರೊಳಗೊಂದು ಚಿನ್ನ ಬಾರದು ಕಾಲನವರೆಳೆದೊಯ್ವಾಗ 3 ಘಟ್ಟದ ಕೆಳಗುಷ್ಟು ಬೆಟ್ಟದ ಮರಗಾಯಿ ಹುಟ್ಟಿದ ಬಯಲ ಸೀಮೆಯ ಮೆಣಸು ಬಟ್ಟಾದ ಲವಣ ಶಾಕದ ವೋಲು ಸಂಸಾರ 4 ಜಾಣನಾದರೆ ಪರಗತಿಯ ನೀ ನೊಲುವೊಡೆ ತ್ರಾಣ ವಿರಲಿಕೆ ತೊಡಕಬಿಟ್ಟು ಕಾಣುಸಂಸಾರವ ವಿಷವೆಂದು ತ್ಯಜಿಸಿ ಗೀರ್ವಾಣವಂದಿತ ಲಕ್ಷ್ಮೀರ ಮಣನ ಮೊರೆಹೋಗು 5
--------------
ಕವಿ ಪರಮದೇವದಾಸರು
ಆಡ ಹೋಗಲು ಬೇಡವೊ-ರಂಗಯ್ಯ |ಬೇಡಿಕೊಂಬೆನು ನಿನ್ನನು ಪಆಡ ಹೋಗಲುಬೇಡ ಗಾಡಿಕಾರ್ತಿಯರೊಳು |ಕೂಡಿ ಕೆಡಲು ಬೇಡವೊ-ರಂಗಯ್ಯ ಅ.ಪನೀರೊಳು ಮುಳುಗೆಂಬರೊ-ನಿನ್ನನು ದೊಡ್ಡ |ಭಾರವ ಹೊರು ಎಂಬರೊ ||ಕೋರೆದಾಡೆಗಳಿಂದ ಸೀಳಿ ರಕ್ಕಸನೊಡಲ |ಹಾರವ ಹಾಕೆಂಬರೊ-ರಂಗಯ್ಯ 1ಪೊಡವಿಯನಳೆಯೆಂಬರೊ-ನಿನಗೆ ದೊಡ್ಡ |ಕೊಡಲಿಯ ಪಿಡಿಯೆಂಬರೊ ||ಕಿಡಿಗಣ್ಣ ರುದ್ರನ ವರದ ದಶಕಂಠನ |ಮಡುಹಿ ನೀ ಬಾರೆಂಬರೊ-ರಂಗಯ್ಯ 2ಬೆಟ್ಟವನೆತ್ತಂಬರೊ-ನಿನ್ನನು ಬರಿ-|ಬಟ್ಟಾಗಿ ತಿರುಗೆಂಬರೊ ||ಪುಟ್ಟ ತೇಜಿಯನೇರಿ ನಲಿನಲಿದಾಡುತ |ದಿಟ್ಟ ಪುರಂದರವಿಠಲ-ರಂಗಯ್ಯ3
--------------
ಪುರಂದರದಾಸರು
ದಾರುದಾರಿಲ್ಲೆಲೆ ರಂಗದಾರುದಾರಿಲ್ಲ ಸಂಗನೀರಜಾಕ್ಷನೀನೆ ಭವಸಾಗರತಾರಿಸಿ ಕೀರ್ತಿ ಪಡೆಯೊ ದಾತಾರ ಪ.ಮೀನವಾಮಿಷವುಂಡಂತೆ ಸುಖಮಾನಿನಿಯರ ತಡಿಯುಧೇನುಜರಿಯಾದಂತೆ ಏಳಿಲುಸೂನುಗಳ ಬಿರುನುಡಿಯುಏನು ಬಳಗಾಮೃಗ ದಗ್ಧ ವಿಪಿನದ ಸ್ನೇಹದೆ ಕಡಿಯುಪ್ರಾಣ ಪಯಣಕೆ ಬುತ್ತಿಲ್ಲಭವಸಂಧಾನ ಹರಿದರೆ ಆರಿಲ್ಲ ಒಡೆಯಾ 1ಏಸೋ ದಿನ ನೆಚ್ಚಿದಕಾಯಹೇಸಿಕೆಘನವಾಯಿತುಆಸೆಬಟ್ಟಾರ್ಥ ವೃಥಾವ್ರಯಕಾಸು ನಾಶಾಯಿತುಲೇಶ ಮಾತ್ರವು ಹಿತ ಹೊಂದದೆ ಮನದ್ವೇಷಿ ತಾನಾಯಿತು ಆಯುಷ್ಯ ಸೂತ್ರವು ಹರಿದರೆ ಭವರೋಗಭೇಷಜರಿಲ್ಲದಂತಾಯಿತು 2ಕುನ್ನಿ ಸಂತೆಗೆ ಹೋದಂತೆ ಬಹುಜನ್ಮ ನೋವಾದವುಮಣ್ಣಿನೊಳು ಹಾಲ ಕೊಡ ಒಡೆದಂತೆನನ್ನ ಧರ್ಮಕರ್ಮವುನನ್ನೆಚ್ಚರ ನನಗಿಲ್ಲವುನಿನ್ನೆಚ್ಚರವೆಲ್ಲಿಯದು ಪ್ರಸನ್ನವೆಂಕಟ ನಿನ್ನ ಯಾತ್ರೆಗೆ ನೀನೆಬೆನ್ನಾದರೆನಗೆಲ್ಲ ಗೆಲುವು 3
--------------
ಪ್ರಸನ್ನವೆಂಕಟದಾಸರು
ನಕ್ಕರಮ್ಮ ಕೆಲದೆಯರುಸಖ್ಯದಿಂದ ಕೈ ಹೊಯ್ದು ಪ.ಚಿಕ್ಕ ಸುಭದ್ರೆ ಬರೆಸಿದ ಚಿತ್ರಕ್ಕೆಅಕ್ಕಜಬಟ್ಟಾರವರುಭಾಳಅಪಶೌರಿಕೃಷ್ಣನರಸಿಯರು ಗೌರಿಯ ಕಂಡರುತೋರುತಿರೆ ಬರೆಸಿದ ಚಿತ್ರ ನೀರೆ ನೀನು ವರ್ಣಿಸಲೆಂದು 1ನಾರಿ ಬರೆಸಿದ ಗೊಂಬೆನೋಡೆ ನೀರೊಳು ಹರಿದಾಡತಾವೆಮಾರಿಸಣ್ಣದು ಮಾಡಿ ಭಾಳೆ ಭಾರಪೊತ್ತು ಭೋರ್ಯಾಡುತಾವೆ2ನಲ್ಲೆನೆಲವ ಕೆದರೋದೊಂದು ಹಲ್ಲು ತೆರೆದು ಬೇಡೋದೊಂದುಕಲ್ಲು ಮನದಿಕೊಡಲಿ ಎತ್ತಿ ನಿಲ್ಲಗೊಡದೆ ಜನನಿಯ 3ಮಡದಿಯ ಒಲ್ಲದ್ದೆÉೂಂದು ಕಿಡಿಗೇಡಿ ಪುರುಷನೊಂದುಕಡುಬತ್ತಲೆಯಾದದ್ದೊಂದು ಹಿಡಿದೇಜಿ ಏರೋದೊಂದು 4ವೀರತನವೆಲ್ಲನೀಗಿನಾರಿರೂಪ ಆದದ್ದೊಂದುಆ ರಾಮೇಶನ ಹಾಡಿಪಾಡಿ ಸಾರಿ ಸಾರಿ ಹೊಗಳೋದೊಂದು 5
--------------
ಗಲಗಲಿಅವ್ವನವರು