ನೋಡಮ್ಮಾ ಶ್ರೀ ವಾಸುದೇವನಾ ನಮ್ಮ
ಬೇಡಿದಿಷ್ಟಾರ್ಧವ ನೀವನಾ ಪ
ಪರ ಬ್ರಹ್ಮ
ರೂಢಿಗೆ ನರಲೀಲೆಯಾಡುವ ಬಗೆಯಾಅ.ಪ
ದೇವರ ಅನುಮತ ನೋಡಿದಾ ಅಂವ
ದೇವಕಿ ಉದರದಿ ಮೂಡಿದಾ
ಪಾವನ ಗೋಕುಲ ಮಾಡಿದಾ ಸುಖ
ದೇವಿ ಯಶೋದೆಗೆ ನೀಡಿದಾ
ಆವಾವ ಪರಿಯಲಿ ನೋವ ಬಗೆಯ ಬಂದು
ಗಾಲಿಲ ಅಸುರರ ಜೀವನ ವಳಿದಾ 1
ಗೊಲ್ಲತೆಯರ ಮನಮೋಹಿಸಿ ಕದ್ದು
ಅಲ್ಲಿಹ ಪಾಲ್ಬಣ್ಣೆ ಸೇವಿಸಿ
ಬಿಲ್ಲ ಹಬ್ಬದ ನೆವತೋರಿಸಿ ಪೋಗಿ
ಮಲ್ಲಚಾಣರರಾ ಭಂಗಿಸೀ
ಬಲ್ಲಿದ ಕಂಸನ ಮಲ್ಲಯದ್ಧಗಳಿಂದ
ಘಲ್ಲಿಸಿದನು ಜನಚಲ್ಲಿ ಬಡಿದನಾ 2
ನೀರೊಳು ಕಟ್ಟಿಸಿ ಮನೆಯನು
ಬಂಗಾರದ ದ್ವಾರಕಾ ಪುರವನು
ಸೇರಿಸಿ ಯದುಕುಲದವರನು ರುಕ್ಮಿ
ಣೀ ರಮಣಲ್ಲಿಗೆ ಮರೆದನು
ಸಾರಿದ ಶರಣರಾ ತಾರಿಸಿ
ಹೋದನು ಮಹಿಪತಿ ನಂದನ ಪ್ರೀಯನಾ 3