ಅಪರಾಧ ಕ್ಷಮಿಸಿ ನೀ ಕೃಪೆಯಿಂದ ಸಲಹಯ್ಯ
ಗಾತ್ರ ಸಾರಸ ನೇತ್ರ ಪ
ಉಪಕಾರವಾಯಿತು ನೀ ಗೈದ ಶಿಕ್ಷೆಯು
ವಿಪರೀತ ಮತಿ ಭ್ರಾಂತಿ ಪರಿಹಾರವಾಯಿತು ಅ.ಪ.
ಜಗವ ಸೃಷ್ಟಿಪೆ ನೀನು ಜಗದ ನಿಯಾಮಕ
ಬಗೆಯಲು ಸೂತ್ರಧಾರಿಯು ನೀನೆ
ತೊಗಲು ಬೊಂಬೆಗಳಂತೆ ನೀ ಕುಣಿಸುವೆ ಜಗವ
ಬಗೆ ತಿಳಿಯದೆ ಜನರು ಬಯಲು ಭ್ರಾಂತಿಯಿಂದ
ಮಿಗೆ ಕರ್ತೃತ್ವವ ತಮ್ಮಲಿ ತಿಳಿಯುತ
ಹಗರಣ ಪೊಂದುವುದ ನೀಗಿಸುವುದು
ಬಗೆಯೆ ನಿನ್ನ ಪರಮಾನುಗ್ರಹವು
ಮುಗಿವೆ ಕರಗಳನು ಕರಿಗಿರಿನಿಲಯ 1