ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹರಿ ನಿನ್ನ ರೋಮ ಕೂಪದಲಿ ಜೀವಿಪಸರಸಿಜ ಭವಾಂಡ ಕೋಟಿಯಲಿ ಪ ತುರುಗಿಪ್ಪ ಬ್ರಹ್ಮರುದ್ರಾದಿ ಜೀವರುಗಳುಹರಿ ನಿನ್ನ ಮಹಿಮೆಯ ಪೇರ್ಮೆಯ ಬಲ್ಲರೆ ಅ.ಪ. ಅತ್ತಿಯ ಮರದಿಂದುದುರುವ ಫಲಂಗಳಮೊತ್ತದಲಿರುತಿಪ್ಪ ಮಶಕಂಗಳುಕತ್ತೆಯ ಬಳಗಗಳೆಲ್ಲವು ಕೂಡಿಕೊಂಡುಅತ್ತಿಯ ತರುವಿನಾದ್ಯಂತವ ಬಲ್ಲವÉ 1 ಐವತ್ತು ಕೋಟಿ ಯೋಜನ ವಿಸ್ತರವಾದಭೂವಲಯದ ತಮ್ಮ ಗೂಡಿನಲಿಆವಾಸವಾಗಿಪ್ಪ ಕ್ಷುದ್ರ ಪಿಪೀಲಿಕಜೀವರು ಧರಣಿಯ ಮೇರೆಯ ಬಲ್ಲರೆ 2 ನೊರಜು ಮೊದಲಾಗಿ ಗರುಡ ಪರಿಯಂತಪರಿಪರಿ ಜಾತಿಯ ಪಕ್ಷಿಗಳು ತೆರದಲಿ ಹಾರುವರಲ್ಲದೆ ಗಗನದ ಪರಿಣಾಮವೆಂತೆಂದು ಬಲ್ಲವೆ ಶ್ರೀ ಕೃಷ್ಣ3
--------------
ವ್ಯಾಸರಾಯರು