ಯಾತಕೀಹಂಕಾರವು ಸರ್ವವು ಜಗನ್ನಾಥನ ಪರಿವಾರವು ಪ.
ಸ್ವಾತಿಯ ಮಳೆಯೊಳು ಸುರಿವಂಥ ನೀರನು
ಜಾತಕ ಪಕ್ಷಿಗೆ ದೊರಕುವ ತೆರದೊಳಿಂನ್ಯಾತಕೀ ಅ.ಪ.
ಈಶ ಪ್ರೇರಣೆಯಿಲ್ಲದೇಸು ಮಿಡುಕಿದರು
ಶ್ವಾಸ ಬಿಡಲು ಸಲ್ಲದು
ಘಾಸಿಗೊಂಡರೆ ನುಂಗಲೋಸುಗ ಮನುಜಗಿ-
ನ್ನೇಸು ನಂಬಿಕೆ ಇಹದು ಮೂರ್ಖತ್ವ ಸರಿದು
ಘಾಸಿಗೊಳದೆ ರಮೇಶನಿತ್ತದೆ ಲೇಸೆನುತ ಅವನಂಘ್ರಿಕಮಲದ
ದಾಸಜನರೊಡನಾಡಿಕೊಳದೆ ದುರಾಸೆ ಕಡಲೊಳಗೀಸಲಾರದೆ 1
ತಾನೆಂಬ ಹಂಕೃತಿ ತಾಳ್ವ ಮನುಜಗಿಂತ
ಹೀನರ ಕಾಣೆನಿನ್ನು ಯಾ-
ಕೆನಲನ್ನಪಾನದೊಳಿಚ್ಛೆಯನು ತಡೆಯಲನು-
ಮಾನಗೊಳುವನಾತನ ಸ್ವಾತಂತ್ರ್ಯವೇನು
ಶ್ರೀನಿಕೇತನ ಮನದೊಳನುಸಂಧಾನಗೊಳಿಸುವ ತೆರವಹುದು ಪವ
ಮಹಿಮೆಯರಿಯದೆ 2
ವಾರುಧಿಯೊಳಗೆ ಸಂಚಾರಮಾಡುತ ಪರಿ-
ವಾರವ ಸೇರಿರುವ
ಯೋಚಿಸುವ ನಿತ್ಯದಿ. . . .
ಶ್ರೀ ರಮಣ ಚರಣಾರವಿಂಧಾಧರವೆ ಗತಿಯೆಂದು ನಂಬು ಖ-
ತನ್ನಿರವ ಮನದಲಿ 3