--------ನೆ ಮಾಡುವೆಯಂದರೆ ಅರಸುಳ್ಯ
ದ್ವಂದ್ವಪಾದಕೆ ನಾ ವಂದನೆ ಪ
ಅಂದು ಜಲದೊಳಾಡಿ ಕೊಂದ ಸೋಮಕನ
ವೇದತಂದೂ ------ಗಿತ್ತಾಗೊಂದನೆ
ಮಂದರಗಿರಿಯ ನೆತ್ತಿ ಚಂದದಿ ---------
ಭೂಮಿ ಮೂಗಿನಿಂದ ಸೀಳಿದ ದೇವಗೆ ವಂದನೆ 1
ತರುಳನಿ ಗೋಸ್ಕರ ಸ್ತಂಭದೊಳಗೆ ಬಂದಾ
ನರಹರಿ ರೂಪಗೆ ವಂದನೆ
ಮುರುಡನಾಗಿ ದಾನ ಮೂರು ಪಾದವು ಕೇಳಿ
ಧರುಣಿಯ ಗೆದ್ದವಗೆ ವಂದನೆ 2
ಪ್ರೇಮಸಲ್ಲದೆ ಪಿತೃವಾಕ್ಯವು ಮನ್ನಿಸಿ
ಪಡೆದಮ್ಮನ ಹೊಡೆದಾತಗೆ ವಂದನೆ
ತಾಮಸ ದಾನವರಗಳ ಖಂಡಿಸಿದ
ಶ್ರೀರಾಮ ದೇವರಿಗೆ ವಂದನೆ 3
ಗೊಲ್ಲರ ಸ್ತ್ರೀಯರ ಕೂಡಿ ಮೆರೆದಾಡುವಂಥ
ನಲ್ಲ ಕೃಷ್ಣಗೆ ವಂದನೆ
ಎಲ್ಲಾನೂ ತೊರೆದು ಬತ್ತಲಲ್ಲಿ ಇರುವ
ನಮ್ಮ ಬೌದ್ಧಾವತಾರಗೆ ವಂದನೆ 4
ಚಲುವ ಅಶ್ವವನೇರಿ ಚರಿಸಿದ ಮಹಾಮಹಿಮ
ಕಲ್ಕಿ ಸ್ವರೂಪಗೆ ವಂದನೆ
ಸುಲಭದಿ ಭಕ್ತರ ಚನ್ನಾಗಿಸಲಹುವ
ಶ್ರೀ ಹೆನ್ನೆ ವಿಠ್ಠಲಗೆ ವಂದನೆ 5