ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏನೆಂದು ಬಣ್ಣಿಸುವೆನೊ ನಾನು | ಶ್ರೀನಾಥ ಪ್ರಿಯಳಾದ ಶ್ರೀ ತುಳಸಿ ಮಹಿಮೆಯನು ಪ ಅಮೃತ ಕಲಶ ಬರೆಕಂಡು ಅತಿ | ಜಲಜಾಂಬಕನ ಪ್ರೇಮಾಂಜಲ ಉದರಲು | ಇಳಯೊಳದಿರಿಂದುದಿಸಿ ಬೆಳೆದು ನಿಂದಿರೆ ನೋಡಿ | ಒಲಿದು ಕೋಮಲ ಮುಗುಳು ತಳೆದ ಶ್ರೀಹರಿ ತಾನು 1 ಹರಿಯು ಧರಿಸಿದ ಕಂಡು ಸುರರೆಲ್ಲ ವಂದಿಸುತ | ಶಿರದಲಾಂತರು ಪರಮ ಹರುಷದಿಂದ | ಸಿರಿಸರಸ್ವತಿ ಗಿರಜೆ ನಿರುತ ನಿನ್ನಯ ವ್ರತದಿ | ಧರೆಯೊಳಗೆ ತಮ್ಮ ತಮ್ಮ ಅರಸರೊಲಿಸಿದರೆಂದು 2 ದುರಿತ ಕುಲ ಓಡುವವು ತನುವ ನೀ ಡಾಡಿ ಜಲನೀಡಿ ಕೊಂಡಾಡಿ ನಿಂದು | ಕೂಡೆ ಮೃತ್ತಿಕೆ ಫಣಿಗೆ ತೀಡಿದರೆ ಭಕುತಿಯಲಿ | ಬೇಡಿದಿಷ್ಟಾರ್ಥ ಕೈಗೂಡಬಹುದಿಳೆಯೊಳಗೆ 3 ತುಲಸಿ ಭಕುತಿಲ್ಲದವ ಕಲಿವಂಶದನುಜನವ | ತುಲಸಿ ಧರಿಸಿದ ತನುವು ಸಲೆಮುಕ್ತಿ ಮಂಟಪವು | ತುಲಸಿ ಬೆಳೆಹದಿ ಮನೆಯು ಬಲಿದ ಪುಣ್ಯದ ಖಣಿಯು | ತುಲಸಿ ಇಲ್ಲದ ಗೇಹ ಕಲುಷಾಲಯ 4 ಮೂಲದಲಿ ಬ್ರಹ್ಮ ತಾ ನೀಲಕಂಠನು ನಡುವೆ | ಮೇಲುತುದಿಯಲಿ ವಿಷ್ಣು ಲೋಲಾಡುವಾ | ಸಾಲಕೊಂಬೆಗಳಲಿ ವಿಶಾಲದೇವತೆಗಳಿಹರು | ತಾಳಿ ಪ್ರೇಮವನು ಮಹೀಪತಿ ನಂದನಾಜ್ಞೆಯಲಿ5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಬಾರೋ ಬೇಗನೆ ಶ್ರೀಧರ ಗುಣಾಕರ ಪ ಬಾರೋ ಬೇಗನೆ ಪಾದವಾರಿಜಕೆರಗುವೆ ಚಾರು ಪರಿಯಂಕಕ್ಕೆಅ.ಪ ಶೌರಿ ಅಗ್ರಜನಾಗಿ ಕ್ರೂರರ ಸದೆದು ಭೂ ಭಾರವನಿಳುಹಿದ ಶೌರ್ಯದ ಮಂಚಕೆ1 ರಾಮನ ಶೇವಿಸಿ ಪ್ರೇಮವನು ಪಡೆದಂಥ ಸೌಮಿತ್ರಿಯೆಂಬ ಸುನಾಮದ ಹಾಸಿಗೆಗೆ 2 ಸಾಸಿರವದನದಿ ಶ್ರೀಶನೆ ತವಗುಣ ಲೇಶ ವರ್ಣಿಸುವಂಥ ಭಾಸುರ ತಲ್ಪಕೆ 3 ಇಂದಿರದೇವಿಯು ನಿಂದಿರುವಳು ತವ ಸುಂದರ ಚರಣಾರವಿಂದವ ತೋರಿಸು 4 ಶರಣರ ಪೊರೆವ ಕಾರ್ಪರನರಶಿಂಹನೆ ಹರಗೆ ಭೂಷಣವಾದ ಉರಗಪರ್ಯಂಕಕೆ5
--------------
ಕಾರ್ಪರ ನರಹರಿದಾಸರು
ಮಾನವ ನೀನು ತಿಳಿ ಮಮಕುಲವ ಪೇಳುವೆನು ತಿಳಿದು ಭವದ ನೆಲೆ ಪ ಒಳಹೊರಗೊಂದಾಗಿ ನಳಿನಿನಾಭನ ಪ್ರೇಮ ಗಳಿಸುವ ಕುಲ ನಂದು ಅ.ಪ ಸೊಲ್ಲು ತಿಳಿಯುವಂಥ ಖುಲ್ಲ ಜನರ ಬಳಿ ನಿಲ್ಲದಂಥ ಬಲ್ಲಿದ ಕುಲ ನಂದು 1 ಹರಿಯ ಜರೆಯುವಂಥ ಪರಮ ದುರುಳರನೊದೆವಂಥ ಹರಿಹರಿಯೆಂದೆಂಬ ವರಸುಧೆಯಮೃತಭರಿತ ಪರಲೋಕದ ಅರಿವಿನ ಕುಲನಂದು 2 ತಾಮಸವನು ತ್ಯಜಿಸಿ ದಾಸರ ಪ್ರೇಮವನು ಬಯಸಿ ಭೂಮಿಯೊಳು ಶ್ರೀರಾಮರಹೀಮೆಂದು ನೇಮಿಸಿಕೊಂಡ ನಿಸ್ಸೀಮಕುಲವು ನಂದು 3
--------------
ರಾಮದಾಸರು
ಶ್ರೀನಿವಾಸನೆ ನಿನ್ನ ಧ್ಯಾನದಲಿ ನಾನಿದ್ದೆ ಕರವ ಪಿಡಿದೆ ಪ ಭಾನುಶತತೇಜ ನಿನ್ನಾನನಾಬ್ಜದ ಮಧುವ ಪಾನ ಮಾಡುತ ತೃಪ್ತಿ ಕಾಣದಿರುವೆ ಅ.ಪ ಕಾಮನಂತಹ ರೂಪ ಸೋಮನಂತಹ ಕಾಂತಿ ರಾಮನಂತಹ ಸತ್ಯ ಧರ್ಮ ನಡತೆ ಈ ಮಹಾ ಸುಗುಣಶಾಲಿಯು ನೀನು ನಿನ್ನಯ ಪ್ರೇಮವನು ಕಾಮಿಸುವ ಹಸುಳೆ ನಾನು 1 ಗಂಧ ಫಲಪುಷ್ಪ ತಾಂಬೂಲಗಳನು ಅಂದದ ಹೇಮದ ತಬಕದಲ್ಲಿ ತಂದು ಕೊಡುವೆನು ಪ್ರೇಮ ಕಾಣಿಕೆಯನು ಮಂದಹಾಸದಿ ನಿನ್ನ ಪಾಂಗದಿಂದ ನೋಡೋ 2 ಒಂದು ದಿನ ಕನಸಿನಲಿ ಕಂಡೆನಚ್ಚರಿ ದೃಶ್ಯ ಮುಂದೆ ನಿಂತಳು ಯುವತಿ ನಸುನಗುತಲಿ ಗಂಧ ತಾಂಬೂಲ ಫಲಪುಷ್ಪ ಪರಿಮಳದ್ರವ್ಯ ತಂದಿಹಳು ಚಿನ್ಮಯದ ತವಕದಲ್ಲ್ಲಿ ಕಂದನಿದ ನಿನಗಾಗಿ ತಂದಿರುವೆನೆಂದು ಮೃದು ಮಂದಹಾಸದಿ ತಲೆಯ ಸವರಿ ನುಡಿಯೆ ಸುಂದರಿಯೆ ನೀನಾರು ಬಂಧುವರ್ಗಗಳಲ್ಲಿ ಹಿಂದೆ ನಾ ನೋಡಿಲ್ಲವೆಂದು ನುಡಿಯೆ ನಂದಗೋಕುಲದಲ್ಲಿ ನಂದನಕುಮಾರನಿಗೆ ಅಂದ ರಾಣಿಯು ನಾನು ಸತ್ಯಭಾಮೆ ಇಂದ್ರದೇವನ ದಿವ್ಯ ನಂದನವನದಿಂದ ತಂದಿರುವೆ ನಿನ್ನ ವರಕುಲವನರಿತು ಸುಂದರಾಂಗನ ಸೇರಿ ಸುಖಪಡುವ ಸೌಭಾಗ್ಯ ಮುಂದಿಹುದು ನಿನಗೆ ಬಲು ತ್ವರಿತದಲ್ಲಿ ಅಂದು ನೀ ಈ ಸ್ವರ್ಣಮಯ ತವÀಕದಲ್ಲಿರುವ ಗಂಧ ಪುಷ್ಪಾದಿಗಳ ಫಲವನರಿವೆ ಚಂದದಲಿ ದಾಂಪತ್ಯ ಸುಖಶಾಂತಿ ಪಡೆಯುವೆ ಕಂದ ನೀ ಸ್ವೀಕರಿಸು ಪೋಗಿ ಬರುವೆ ಎಂದು ನುಡಿಯಲು ತರುಣಿ ಎಚ್ಚರಿತೆನು ಶುಭ ಸುದ್ದಿಯು ತಂದಿರುವೆ ತಬಕವ ಪ್ರಸನ್ನ ವದನ
--------------
ವಿದ್ಯಾಪ್ರಸನ್ನತೀರ್ಥರು