ರಾಮಚಂದ್ರನೇ ಪರದೈವನೋ ನಮ್ಮ |
ಶಾಮ ಸುಂದರ ಕೃಷ್ಣ ಪರದೈವನಯ್ಯ ಪ
ರಾಮಭಕ್ತ ನಿದ್ದೆಡೆಗಾಗಿ ಯದುಕುಲ |
ಸ್ವಾಮಿಯ ಶರಣನು ಬಂದ ಕೀರ್ತಿಸುತ |
ಪ್ರೇಮದಲೀರ್ವರ ಭಕ್ತಿಯವಾದವು |
ನೇಮದಿ ಬೆಳೆಯಿತು ಕೇಳಿ ಸಜ್ಜನರು1
ಚಿಕ್ಕ ತನದಿ ತಾಟಿಕೆಯನು ಕೊಂದು ಮುನಿಮುಖ |
ಅಖರದಲಿ ಕಾಯದನಾರು ಹೇಳಯ್ಯ |
ಠಕ್ಕಿಸಿ ಬಂದ ಪೂತನಿಅಸುಹೀರಿಜ |
ನಕ್ಕಭಯ ನಿತ್ತ ಕೃಷ್ಣ ನೋಡಯ್ಯ2
ಚರಣ ಸೋಕಿಸಿ ಶಿಲೆ ಹೆಣ್ಣವ ಮಾಡುತ |
ಹರಧನು ಮುರಿದವ ನಾರು ಹೇಳಯ್ಯಾ |
ಮರಗಳಾದವರ ನುದ್ಧರಿಸುತ ಕಂಸಾ |
ಸುರಧನು ಹಬ್ಬವ ಗೆದ್ದ ರಂಗೈಯ್ಯಾ3
ನೆರದಿಹ ದೇವ ದಾನವರೋಳುದ್ದಂಡದಿ |
ಧರಣಿ ಜೆಯ ತಂದನಾರು ಹೇಳೈಯ್ಯಾ |
ವರಚೈದೈ ಘೋಷರ ಭಂಗಿಸಿ ರುಕ್ಮಿಣಿ |
ಕರವಿಡಿದೊಯ್ದಿದ ಕೃಷ್ಣ ನೋಡಯ್ಯಾ 4
ವನದೊಳು ಹಣ್ಣವ ನಿತ್ತಂ ಶಬರಿಗೆ |
ಚಿನುಮಯ ಪದವಿತ್ತ ನಾರು ಹೇಳಯ್ಯಾ |
ಅನುವರದಲಿ ದ್ರೌಪದಿಯ ಶಾಕದಳ |
ವನೆ ಕೊಂಡು ಸುಖವಿತ್ತ ಕೃಷ್ಣ ನೋಡಯ್ಯಾ5
ಜಲ ನಿಧಿಯೊಳಗ ಸೇತುಗಟ್ಟಿಸಿ ವಾನರ |
ದಳನಡಿಸಿದ ವೀರನಾರು ಹೇಳಯ್ಯಾ |
ಗಳಿಗಿಯೊಳರಿಯದಂದದಿ ಮಧುರ ಜನ |
ನೆಲೆಮಾಡಿ ನೀರೋಳಗಿಟ್ಟ ರಂಗೈಯ್ಯಾ6
- ಅಪೂರ್ಣ