ವಂದಿಪೆ ನಾ ಭಗವಾನ್ ಪೂರ್ಣಘನಾ
ನೀ ಮುಕುತಿನಿದಾನಾ ಜ್ಞಾನಘನಾ ಆನಂದಘನಾ
ನಿತ್ಯಾನಂದನು ನೀ ಚೈತನ್ಯ
ಮೂಲಪದ ಮಾಯಾರಹಿತ ಸದಾ
ಆ ನಿರ್ವಿಕಲ್ಪಾತ್ಮಾ ಸತ್ಯನು ನೀ
ಹೇ ಸರ್ವಾಂತರ್ಯಾಮೀ ಪ್ರೇಮಘನಾ ಆನಂದ
ಕಣ್ಣು ಮನಗಳಿಗೆ ನಿಲುಕದಲೇ
ನೀ ಸಾಕ್ಷಿಸ್ವರೂಪಾ ಇವುಗಳಿಗೇ
ಕಲ್ಪಿತವ್ಯೆ ಮಾಯಾಮೋಹಿತವೈ
ಈ ಜಗವೆಲ್ಲಾ ನಿನ್ನೊಳ್ ಸತ್ಯಘನಾ ಆನಂದ
ಎಂತು ಬಣ್ಣಿಸಲೈ ನಿನ್ನನು ನಾ
ಈ ವಾಣಿಯಿಂ ದೂರಾ ನಿಜಸಾರಾ
ಯೋಗಿವರಾ ಗುರು ಶ್ರೀ ಶಂಕರಾ
ಹೇ ಸರ್ವಾತ್ಮಪೂರ್ಣಾನಂದಘನಾ ಆನಂದ