ಒಟ್ಟು 12 ಕಡೆಗಳಲ್ಲಿ , 7 ದಾಸರು , 9 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಂಡೆ ನಾನೊಂದು ಸುವಸ್ತ ಮಂಡಲದೊಳು ಸದ್ಗುರು ದಯದಲಿ ಸಾಭ್ಯಸ್ತ ಧ್ರುವ ನೆನವಿನ ಕೊನೆಯಲಿ ಅನುವಾಗಿ ದೋರತದೆ ಘನ ದೀಪ್ತಿಯಲಿ ಬೀರುತಿದೆ ಮನದ ಮುಗುಟ 1 ಪ್ರಣವನ ಮೂಲಾಗ್ರಹಲಿ ಪರಿಪೂರ್ಣತಾನಾಗೆÀದ ಘನವೆ ಘನವಾಗ್ಹೊಳೆಯುತದೆ ಪ್ರಾಣಪದಕ 2 ಮಹಿಪತಿ ಬಾಹ್ಯಾಂತ್ರದೊಳು ವಸ್ತು ವಿರಾಜಿಸುತದೆ ಮಹಿಮರೆ ಬಲ್ಲರೀಸುಖ ನಾಮಾಮೃತದ ಸ್ವಾನುಭವದ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಆತನೇ ಪರಮಾತ್ಮ ಪರತತ್ತ್ವ ಪ್ರಣವನೆಂ-ದರಿತು ಪೂಜಿಸಬಾರದೆಆತನಾ ಪದತೋಯ ಶಿರಸಾ ವಹಿಸಿ ಪಾನ-ದಿಂದಧಿಕರಾದರು - ಜೀವಿಗಳು ಮನುಜ ಪ ದಾನಮುಖದಲಿ ಬಲಿಯ ಬೇಡಿ ಭುವನವನೊಂದುಪದದಿ ಅಳೆದವನಾವನುಮಾನದಾನವನ ನಾಲ್ಮೈಯ ಮುಡಿಗಟ್ಟಿವನಮಾನ ಉಳುಹಿದನಾವನುಮಾನ ಮರುಳಾದವನ ಮರ್ದಿಸಿದ ಬ್ರಹ್ಮಹತ್ಯೆಮಹಿಗೆ ಇಳುಹಿದನಾವನುಭಾನು ಮೊದಲಾದಖಿಳ ಬ್ರಹ್ಮಾಂಡಗಳಿಗೊಂದುಪಾದ ಹೊದಿಸಿದನಾವನು ? 1 ಕೊಟ್ಟ ವರಗಳನೆಲ್ಲ ಕೊಡಹಿ ಬಹು ದನುಜರನುಕುಟ್ಟಿ ಹಾಕಿದನಾವನುದಿಟ್ಟವರ ಕಾಲಾಂಣ(?) ಕಟ್ಟಿ ಮುನಿ ದೈವಗಳ ಪಟ್ಟದರಸು ಅದಾವನುಬೆಟ್ಟದಾತ್ಮಜೆ ಬೆನಕ ಪೆಸರ್ಗೊಂಡು ತನ ನಾಮಗುಟ್ಟಿನಲಿ ನೆನೆಸಿದುದಾವನುಗಟ್ಟಿಯಾಗಿ ಮುನಿಪೆಣ್ಗೆ ಕೊಟ್ಟಿದ್ದ ಶಾಪವನುಬಿಟ್ಟೋಡಿಸಿದನಾವನು ? 2 ಅಖಿಳ ಮಹಿ ನಟಿಸುವ ಮಹಾತ್ಮಕನಾದ ಸಾತ್ತ್ವಿಕನಾವನುಆದಿಯಲಿ ಜಗಂಗಳಿರದಂದು ವಟಪತ್ರಶಯನನಾದ ಮೂಲವದಾವನುಆದಿಕೇಶವ ದೈವವಲ್ಲದಿನ್ನಿಲ್ಲವೆಂದುಆಗಮವು ನುಡಿವುದಾವನನು ? 3
--------------
ಕನಕದಾಸ
ಚಾರು ಚರಣವ ಸಾರಿದೆ ಶರಣ ಮಂದಾರ ಕರುಣವ ಬೀರಿ ಭವವನಧಿ ತಾರಿಸು ತವಕದಿ ಸೂರಿ ಸುಧೀಂದ್ರ ಕುಮಾರ ಉದಾರ ಪ ಪಾದ ವನರುಹ ಧ್ಯಾನ ಪ್ರಣವನ ಸ್ತವನ ಅರ್ಚನೆ ಮಾಳ್ಪ ನಾನಾ ಜನರ ವಾಂಛಿತವೀವಗುಣ ಪೂರ್ಣ ಜ್ಞಾನ ಧನಪ ಪಾಲಿಸೆನಗೀಕ್ಷಣ ನಿನ್ನಾಧೀನ ಮನುಜನ ನೀ ಪ್ರತಿದಿನದಿ ದಣಿಸುವುದು ಘನವೆ ಗುರುವೆ ಪಾವನತರ ಚರಿತ 1 ಪಾದ ಕೀಲಾಲಜ ಮಧುಪಾ ಬಾಲಕನ ಬಿನ್ನಪವ ಲಾಲಿಸೋ ಮುನಿಪ ತಾಳಲಾರೆನೊ ತಾಪತ್ರಯದ ಸಂತಾಪ ಕೇಳೋವಿಮಲಜ್ಞಾನ ಶೀಲ ಸ್ವರೂಪ ಭೂಲಲನಾಧವ ಕೋಲನಂದನಾ ಕೂಲಗವರ ಮಂತ್ರಾಲಯ ನಿಲಯ 2 ಕಲಿಕಲ್ಮಷವಿದೂರ ಕುಜನ ಕುಠರಾ ನಳಿನಾಕ್ಷ ವಿಮಲ ಶ್ರೀ ತುಲಸಿಯ ಹಾರ ಗಳ ಸುಶೋಭಿತ ಕಮಂಡಲ ದಂಡಧರಾ ಜಲಧಿ ವಿಹಾರಾ ಸುಲಲಿತ ಕರುಣಾಂಬುಧಿಯೆ ಜಗನ್ನಾಥ ವಿ ಠಲನೊಲಿಮೆಯ ಪಡೆದಿಳೆಯೊಳು ಮೆರೆದಾ 3
--------------
ಜಗನ್ನಾಥದಾಸರು
ದೇವ ನೀ ದಯಮಾಡಿ ಕರುಣಿಪುದೂ ಪ ಮಮದುರಿತಹರಣ ಜೀಯ ಅ.ಪ ಕಾಲ ಪಾವಕಾಸನನೇ ದೇವ ಪ್ರತ್ಯಂಗನದ್ಯಾರೊ ತೋರೋ ಸಾವಧಾನ ಸರ್ವಾತ್ಮಕ ತ್ರಿಗುಣನೆಬಾರೊ ಬಾವ ಜಾರಿ ಸಖ ಭಜಕ ಜನ ವಿಹತ ಸರ್ವಜನರಿಗಾದರದಿ ಸಂಪದವು ನೀವ ಸುಂದರನೆ ನಿಜಪರ ಬ್ರಹ್ಮನೆ 1 ಪ್ರಣವನಾದ ಪಂಡಿತಜನ ಶಿಖರನೆ ಫಣಿಪಾಸನ ಹರಿಯೆ ಧೊರೆಯೆ ಅಣಿದು ಬರುವ ದುರ್ನಡೆಗಳ ಕಡಿಯದೆ ಯೆಣಿಪುದು ನಿನಗಿದು ಸರಿಯೇ ತ್ರಿಣೆಯೆಸಖನೆ ತ್ರಿಗುಣೇಶನೆ ಕೇಶವ ಅಣಿದು ಬಾರೊ ದಯಕೋರೆಲೊ ಮಹಾ 2 ದ್ವಿಜಗಣ ಮಣಿಯಹುದೋ ಅಜ ಮಹರಾಜನೆ ದು:ಖವ ನೀ ತ್ಯಜಿಸಬೇಕಹುದಹುದೋ ವಿಜಯಸಾರಥಿಯೆ ನಿಜ ಭಗವಂತನೆ ಸುಜನರೊಡನೆ ಸುಖಿಸುವದೆನಗದು ಕೊಡೊ 3 ನಿಗಮವಿನುತ ನಿಖಿಲಾಂಡಕೋಟಿ ಬ್ರಹ್ಮಾಂಡ ಜಗದಾದಿ ನಾಯಕ ಕನ್ಯಾರೊ ಬಾರೊ ಸುಗುಣರೂಪ ಸಾಕ್ಷಾತ್ ಪರಮಪದ ತೋರೋ ಅಗಣ ಸಹಜ ಮತ್ಕುಗುಣ ಕಾಲನೆ ಕಲಿ ನೆಗುರು ಮಂಗಳಪುರಿಧಾಮಾ 4
--------------
ಚನ್ನಪಟ್ಟಣದ ಅಹೋಬಲದಾಸರು
ಭಾರತೀಶನ ಸೇರಿರೋ ಭವವಾರಿಧಿ ದಾಟುವರೆ ಸಾರ ತೋರುವ ಪ. ತುಂಗ ವಿಷಯಾಂಗಜನಿತೋತ್ತುಂಗ ತರಂಗದೊಳು ಅಂಗಜಾತ ತಿಮಿಂಗಿಲನು ತಾನುಂಗುವ ನಿಮಿಷದೊಳು ಮಂಗಳಾತ್ಮಕ ಮಾರುತನ ಸದಪಾಂಗಲೇಶವನೈದೆ ಸುಲಭದಿ ರಂಗನಿರವನು ತೋರಿ ಸಲಹುವ 1 ತ್ರೇತೆಯೊಳಗಿನ ಜಾತನಿಗೆ ರಘುನಾಥನ ತೋರಿಸಿದ ಕಾತುರದ ಪುರಹೂತನನು ಯದುನಾಥನಿಗೊಪ್ಪಿಸಿದಾ ಭೂತನಾಥನ ವಾಕ್ಯಬಲದಿಂದಾತ್ಮ ಜೀರಿಗೈಕ್ಯಪೇಳುವ ಪಾತಕಿಗಳನು ಗೆದ್ದು ತ್ರಿಜಗನ್ನಾಥ ಮುತ್ತಿದನೆಂದು ಮೆರಸಿದಿ 2 ಸೂತ್ರನಾಮಕ ಪ್ರಣವನಾಯಕ ಕ್ಷತ್ರಪುರದೊಳಿರುವಾ ಶತ್ರುತಾಪನ ಶೇಷಗಿರಿ ಪತಿಪುತ್ರನೆನಿಸಿ ಮೆರೆವಾ ಚಿತ್ರಕರ್ಮ ಚಿರಂತನಾಣುಗ ಪುತ್ರಮಿತ್ರಕಳತ್ರ ಭಾಗ್ಯದ ನೇತ್ರ ವಿಷಯ ಪರತ್ರ ರಕ್ಷಕ ಧಾತ್ರಪದಸತ್ಪಾತ್ರನೆನಿಸುವ 3
--------------
ತುಪಾಕಿ ವೆಂಕಟರಮಣಾಚಾರ್ಯ
ಮರವೆ ಮರವೆ ಮಾಡಿತೋಅಂತರಂಗದಲಿ ಭೋರೆಂದು ತುಂಬಿಅಂತು ಅಂತೆನಲು ಕೂಡದು ಪ್ರಣವನಾದ ಪ ಹೊಟ್ಟೆಗುಣ್ಣುವುದನೆ ಮರೆಸಿತು ಈ ಪ್ರಣವನಾದಮುಟ್ಟು ಚಟ್ಟನೆ ಮರೆಸಿತುಕೆಟ್ಟಕೇಡನೇನ ಹೇಳಲಿಉಟ್ಟ ಬಟ್ಟೆಯ ಅರಿವೇ ಇಲ್ಲ 1 ಆಸೆಯೆಂಬುದ ಮರೆಸಿತು ಈ ಪ್ರಣವನಾದದ್ವೇಷವೆಂಬುದು ತೊರೆಸಿತುನಾಶವಾಯಿತು ಜಪತಪವೆಲ್ಲಮೋಸವೆನಗಿಂತು ಮಾಡಿತು2 ಧ್ಯಾನವೆಂಬುದು ಮರೆಸಿತು ಈ ಪ್ರಣವನಾದಓಂಕಾರವೆಂಬುದು ಕಲಿಸಿತುಜ್ಞಾನಮೂರುತಿ ಚಿದಾನಂದತಾನೆ ತಾನೆ ತಾನೆ ಎಂಬ 3
--------------
ಚಿದಾನಂದ ಅವಧೂತರು
ಸಕಲಾಗಮ ಪೂಜಿತ ಏಕೋ ದೇವನೀತ ಏಕಾಕ್ಷರ ಬ್ರಹ್ಮೀತ ಹಂಸನಾಥ 1 ರವಿಕೋಟಿ ತೇಜನೀತ ಸಂವಿತ ಸುಖ ಸಾಕ್ಷಾತ ಪವಿತ್ರ ಪ್ರಣವನೀತ ಹಂಸನಾಥ 2 ಯತಿ ಮುನಿವಂದಿತ ಪಿತಾಮಹನ ಪಿತ ಅತಿಶಯಾನಂದನೀತ ಹಂಸನಾಥ 3 ಸನ್ಮಾತ್ರ ಸದೋದಿತ ಉನ್ಮನ ವಿರಹಿತ ಚಿನ್ಮಯನಹುದೀತ ಹಂಸನಾಥ 4 ಅನುದಿನ ಸಾಕ್ಷಾತ ಘನಗುರು ಶ್ರೀಕಾಂತ ಹಂಸನಾಥ 5 ವಿಶ್ವ ವ್ಯಾಪಕನೀತ ವಿಶ್ವರೂಪ ನಿರ್ಮಿತ ವಿಶ್ವಾತ್ಮನಹುದೀತ ಹಂಸನಾಥ 6 ಇಡದು ತುಂಬಿಹನೀತ ಮೂಢಮಹಿಪತಿ ದಾತ ಒಡಿಯನಹುದೀತ ಹಂಸನಾಥ7
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಲಹರಿಕೊಂಡಿತು ಜ್ಞಾನ ಲಹರಿಕೊಂಡಿತುಮಿಹಿರಕೋಟಿ ಚಿದಾನಂದ ಮಿಹಿರಲೋಕ ಸೇರಲಾಗಿಪನಿತ್ಯಗುರುವ ಧ್ಯಾನ ಮಾಡೆ ನಿಗಮಧರೆಗೆ ಕೈಗೆ ಕೂಡೆನಿತ್ಯಆನಂದ ತುಳುಕಾಡುವ ನಿಜಬೋಧವೆಡೆಯಾಡೆ1ಪ್ರಣವನಾದಗೀತೆ ಪಾಡೆ ಪಾಡುಪಂಥ ಸರಿದು ಆಡೆಎಣಿಸಿ ಬಾರದ ದುಃಖ ಕೇಡೆ ಏಕವೆಂಬು ಘಟ್ಟಿಮಾಡೆ2ಚಿದಾನಂದ ಗುರುವ ನೋಡೆ ಚಿತ್ತ ಮುಳುಗಿ ಮುಳುಗಿ ಆಡೆಪದಸರೋಜವನ್ನು ಕೂಡೆ ಪರಿಣಾಮವ ದೋವಿಯಾಡೆ3
--------------
ಚಿದಾನಂದ ಅವಧೂತರು
ಶ್ರೀ ಪ್ರಣವನಾರಾಯಣ ಕೃಷ್ಣ ಆಗಮನ ಸ್ತೋತ್ರ45ಬಾರೋ ಬಂದಿರೋ ಶ್ರೀಶ | ಶ್ರೀಧರಾ ಸಮೇತ ಬಂದಿರೋ ಈಶ ||ವಿಭುವೇ ಗುಣಾರ್ಣವ ಅಮಿತ ಪೌರುಷ ಸ್ವವಶ | ಅಮಿತಾರ್ಕ ಕಾಶ ||ಸರಸಿಜಾಸನ ಶಿವ ವಿಷಾದಿ ಅಮರವಂದ್ಯನೆಪರಮಭಾಗವತೇಷ್ಟ ಚಿಂತಾಮಣಿಯೇ ಜಯ ಜಯಶರಣು ಪಾಲಿಪ ಪ್ರಭುವೇ ನಾರಾಯಣನೇ ಕೃಷ್ಣನೇ || ಬಾರೋ|| ಪಪ್ರಣವಾಷ್ಠಾಕ್ಷರ ದಿವ್ಯ | ಆರುಅಕ್ಷರಮಂತ್ರ ಸುಪ್ರತಿಪಾದ್ಯವಿಶ್ವಾದಿ ಎಂಟು ರೂಪಚಿನ್ಮಯಕಾಯ|ಅರಿದರಧೃತಹಸ್ತಹಸ್ತವರದಅಭಯ| ಜಯ ಜಯತುಜೀಯಶ್ರೀಧರಾ ಸಮೇತನಾಗಿಹ ಪ್ರೋದ್ಯ ಪೂಷ ಸ್ವಕಾಂತಿ ತೇಜನೇಕೃದ್ಧವೀರ ಮಹಾದ್ಯುಸಹಸ್ರ ಉಲ್ಕ ನಿಜ ಸಚ್ಛಕ್ತ ಲೀಲೆಯಿಂಸರ್ವದಾ ಸರ್ವತ್ರ ಸರ್ವರೋಳ್ ಇದ್ದು ನಿಯಮಿಪ ವಿಭುವೇ ಪರತರ|ಕೃಷ್ಣರಾಮ ನೃಸಿಂಹ ವರಹನೇ ವಿಷ್ಣುವೇ ಪರಂಜ್ಯೋತಿ ಪರಂಬ್ರಹ್ಮ |ವಾಸುದೇವನೆ ಏಕದಶ ಶತಾನಂತರೂಪನಿರ್ದೋಷಗುಣನಿಧೇ |ಎನ್ನ ಪಾಲಿಪ ಪ್ರಭುವೇ ಶ್ರೀಶನೇ ವೇದಹನುಮಶಿವಾದಿ ವಂದ್ಯನೇ || ಬಾರೋ 1ಪ್ರಚುರಅಮಿತ ಆನಂದ ಅವಿಕಾರ ಚಿನ್ಮಯ ಸರ್ವಚೇಷ್ಟಕಕರ್ತಚೇತನಾಚರ ಸರ್ವವಶಿ ಜಗದ್ಭರ್ತಾ ಸೌಂದರ್ಯಸಾರನೆಇಂದ್ರಮಣಿ ದ್ಯುತಿವಂತ ಸೌಭಾಗ್ಯದಾತ |ಚಕ್ರಧರವರ ಅಭಯಹಸ್ತನೇ ಅಜಿತಅಜಜಗದೇಕವಂದ್ಯನೆಉರುದಯಾನಿಧೆ ಭೈಷ್ಮೀ ಸತ್ಯಾರೊಡನೆ ಬಂದು ನಿಂತಿದ್ದಿಲ್ಲಿಪರಮಲಾಭವು ಎನಗೆ ಸುಹೃದನೆ ಭೀಮದ್ರೌಪದಿ ಪಾಂಡವ ಪ್ರಿಯವಿದುರಗೊಲಿದನೆ ದೇವಕೀಸುತ ಸರ್ವಾಭೀಷ್ಟಪ್ರದ ಉದಾರನೆಉತ್ತರಾಸುಧಾಮಉದ್ಧವಗೋಪಿಜನ ಅಕ್ರೂರ ವರದನೇಹಲಧರಾನುಜ ಸುಭದ್ರೆ ಅಣ್ಣ ಷಣ್ಮಹಿಷಿರಮಣನೆ ಶರಣು ಸಂತತ || ಬಾರೋ 2ಸ್ವಾಮಿವೇಂಕಟರಮಣ | ಕುಲದೇವ ಸರ್ವೋತ್ತಮನೆ ಭಕ್ತಪ್ರಸನ್ನಪದ್ಮಾವತೀಶ ಕರುಣಿ ಪಾಲಿಸೋ ಎನ್ನ | ಶ್ರೀವತ್ಸ ಅರಿದರಾಅಭಯವರಕರ ಘನ್ನ | ಅಮಲೇಂದು ವದನಂ ||ಮುಗುಳುನಗೆ ಕಾರುಣ್ಯ ನೋಟವು ಜಗವನಳೆದ ತೀರ್ಥಪದಯುಗತಿರುಮಲೇಶ ಮದ್ಗೇಹನಿಲಯನೆ ರಂಗ ವರದ | ಲಕ್ಷ್ಮೀನೃಸಿಂಹನೆಪೂರ್ಣ ಪ್ರಮತಿಗಳಿಂದ ಪೂಜಿತ ಬೆಣ್ಣೆ ನರ್ತನ ಕೃಷ್ಣರಾಮನೇಇನನಿಗಮಿತ ಸ್ವಕಾಂತಿ ತೇಜನೇ ಕರ್ಣಕುಂಡಲೋಜ್ವಲ ಕಿರೀಟಿಯೆ |ಅನ್ನವಾಹನತಾತಪ್ರಸನ್ನ ಶ್ರೀನಿವಾಸನೆ ಪೂರ್ಣಕಾಮನೇ |ಘನದಯಾಂಬುಧೇ ದೇವ ದೇವಶಿಖಾಮಣಿಯೆ ಬಾ ||ಬಾರೋ ಬಂದಿರೋ ಶ್ರೀಶ|| 3
--------------
ಪ್ರಸನ್ನ ಶ್ರೀನಿವಾಸದಾಸರು