ಒಟ್ಟು 5 ಕಡೆಗಳಲ್ಲಿ , 3 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನೀನಲ್ಲದಿನ್ನಾರು ಸಲಹುವರು ಹರಿಯೆ ಪ ನಾನನ್ಯರನು ಕಾಣೆನೆಲ್ಲಿಯೂ ಕೇಳ್ದರಿಯೆ ಅ.ಪ. ಪೋರ ಶಶಿಹಾಸನನು ತಂದೆ ತಾಯ್ಸಲುಹಿದರೆಧೀರ ಪ್ರಲ್ಹಾದನನು ತಂದೆ ತಾಯ್ ಸಲುಹಿದರೆವೀರ ಕರ್ಣನ ಹಡೆದ ತಾಯಿ ಸಲುಹಿದಳೆನಾರಿ ದ್ರೌಪದಿಯನ್ನು ಭರ್ತೃಗಳು ಸಲುಹಿದರೆ 1 ಕರ್ಣ ತಾ ಸಲುಹಿದನೆಕಡುಗಲಿಯ ವಾಲಿಯನು ಸುಗ್ರೀವ ಸಲುಹಿದನೆಗಡ ಬಬ್ರುವಾಹನನು ತಂದೆಯನು ಸಲುಹಿದನೆ 2 ಪುಸಿಯಲ್ಲದೆಲ್ಲವನು ಸಲಹುವಾತನೆ ನೀನುಪಿಸುಣರೈ ಸಲಹುವರು ತಾವೆಂದು ಗಳಹುವರುಉಸಿರು ಗದುಗಿನ ವೀರನಾರಾಯಣನೆ ನೀನು 3
--------------
ವೀರನಾರಾಯಣ
ಮತಿತಪ್ಪಿ ನಡೆದೆಯಲ್ಲ ಶ್ರೀಲಕುಮೀ ಪತಿಯನು ನೆನೆಯಲಿಲ್ಲ ಹಿತವಾದ ಪಥವು ಸಂತತ ತೋರದೆ ನೀನು ಖತಿಗೊಂಡು ವೆಂಕಟಪತಿಯನು ನೆನೆಯದೆ ಪ ಕೃತ ತ್ರೇತ ದ್ವಾಪರ ಕಲಿಯುಗ ಚತುರ್ವಿಧ ಜೊತೆಯಾಗಿ ಪೋಗಲು ಸಾವಿರ ಬಾರಿಯು ಚತುರಾಸ್ಯ ಬ್ರಹ್ಮಗೆ ಹಗಲೊಂದು ಸಲುವುದು ಗತಿಯ ಕಾಣೆನು ಶ್ರುತಿಯ ಅಯುತ ಕಾಲದೊಳು 1 ಹಿಂದಣ ಭವದೊಳಗೆ ಬಂದ ಭವದೊಳಗೆ ಸಂ - ಬಂಧವಾಗಿಹ ಸತಿಯರೆಷ್ಟು ಮಂದಿಯೋ ಕಾಣೆ ಕಂದರನು ಪಡೆದುದಕೆ ಲೆಕ್ಕ ಸಂಖ್ಯೆಗಳಿಲ್ಲ ತಿಂದ ಅನ್ನವು ಮೇರುವಿಗಿಂತ ಇಮ್ಮಡಿಯು 2 ಕಾಯ ಬಿಡಿಸಿಕೊಂಬುದು ಜೀವ ಅಡಿಗಡಿಗೆ ಹುಟ್ಟುತ್ತ ಸಾವಾಗಯೆನ್ನುವನು ಕಾಲ ಮನದಿ ಬೇಸರಗೊಳಲು ಜಡತೆಕಿಕ್ಕದೆ ಮುಂದೆ ಕಡೆ ಹಾಯು ಮನವೆ 3 ಬಲೆಯ ಕಾಣದೆ ಪಕ್ಷಿ ಮೇವಿನಾಸೆಗೆ ಪೋಗಿ ತಲೆ ಸಿಕ್ಕಿ ಪ್ರಾಣವನು ಕಳಕೊಂಬ ತೆರನಂತೆ ಕುಲವೃಕ್ಷದೊಳಗಿರ್ದ ಫಲದ ಮಮತೆಗಳಿಂದ ಜಲಜನಾಭನ ಬಿಟ್ಟು ಹೊಲಬುದಪ್ಪಿತಲ 4 ಸ್ನಾನಕ್ಕೆ ಚಳಿ ಹುಟ್ಟಿ ಧ್ಯಾನಕ್ಕೆ ಮರವೆಯು ಮೌನಕ್ಕೆ ಕೋಪದ ಬೀಜವಂಕುರಿಸಿತು ದಾನಕ್ಕೆ ಲೋಭವು ಮಾನಕ್ಕೆ ಪಿಸುಣರು ಏನ ಮಾಡಿದರಿವರು ಬಿಡರಲ್ಲೊ ಮನವೆ 5 ಸಂಗಡದಿ ಬರುತಿಪ್ಪ ಶುಭಗಳನು ಕಡೆಗಿಟ್ಟು ಅಂಗಸುಖವ ತಾಳ್ದು ಗೊಂಗುಡಿಯ ಹೊದ್ದು ಕಂಗಳಿಗೆ ಚೆಲುವಾದ ಅಂಗನಾಮೋಹದಿ ಶ್ರೀ- ರಂಗನ ನಾಮದ ಅಂಗಿಯ ಸಡಲಿಸಿದೆ 6 ಹರಿಧ್ಯಾನ ಹರಿಪೂಜೆ ಹರಿನಾಮ ಕೀರ್ತನೆಯು ಹರಿಭಕ್ತಿ ನರ್ತನೆಯು ಹರಿಯ ಸೇವೆಗಳು ಎರವುದೋರದೆ ನೀನು ವರಾಹತಿಮ್ಮಪ್ಪನನು ಸ್ಥಿರವಾಗಿ ನಿಲುವಂತೆ ಕರಕೊಳ್ಳೊ ಮನವೆ 7
--------------
ವರಹತಿಮ್ಮಪ್ಪ
ದಾಟು ಭವಾಟವಿಯನ್ನು ಮನುಜ ನೀದಾಟು ಭವಾಟವಿಯನ್ನುಕೈಟಭಾಂತಕನಾಮಪಾತಕರೊಡಗೂಡಿನೀಟಾಗದಂದದ ಪಾಟಿಯ ಕೇಳಿನ್ನು ಪ.ಹೆಣ್ಣೆಂಬ ಹೆದ್ದೋಳ ತಿರುಗುತಿವೆ ಬಲುಪುಣ್ಯಮಾರ್ಗವ ನಡಿಗುಡವುಬಣ್ಣ ಬಣ್ಣದ ಮೃತ್ಯುಗಳೆಂಬ ಹೆಬ್ಬುಲಿಕಣ್ಣಲಿ ಕಂಡರೆ ಬಿಡವುಸಣ್ಣಮಕ್ಕಳು ನೆಂಟರಿಷ್ಟ ನರಿಗಳರ್ಥಪೆಣ್ಣಿನ ನಾತಕೆ ಓಡ್ಯಾಡುವುವುಹಣ್ಣುಕಾಯಿಗಳೆಲ್ಲ ವಿಷಮಯವಾಗಿಹ ಅರಣ್ಯದ ಖಳರೆಂಬ ಗಿಡವು 1ಆರಿಂದ್ರಿಯ ಕಳ್ಳರೆಂಬ ಕಾಮವೆಂಬಚೋರನಾಯಕನುಪಟಳವುಭೂರಿಕಾಲದ ಧರ್ಮವೆಂಬ ದ್ರವ್ಯವೆಲ್ಲಸೂರ್ಯಾಡಿಸುಲಕೊಂಬ ಹಯವುಮೂರು ಬಗೆಯಿಂದ ಸುಡುತ ಕಂಗೆಡಿಸುವದಾರುಣತರ ದಾವಾನಳವುಚೀರುವ ನಿಂದಕ ಝಲ್ಲಿಕದುಶಾಸ್ತ್ರ ನಿಸ್ಸಾರ ಘೂಕಗಳ ರವವು 2ಅಡ್ಡಡ್ಡ ಬಂದು ಅಜ್ಞಾನ ಕಾಳೋರಗವೆಡ್ಡುಗೊಳಿಸಿ ಕಚ್ಚುತಿವೆದೊಡ್ಡೆಂಟು ಮದವೆಂಬೊ ಮದ್ದಾನೆ ಎದೆಯೆಂಬಗುಡ್ಡದೊಳಗೆ ಸುತ್ತುತಿವೆಹೆಡ್ಡನೆಂದು ಚುನ್ನವಾಡಿ ಮನೋಬುದ್ಧಿಗಡ್ಡದ ಕಪಿ ಕಾಡುತಿವೆ 3ಜನ್ಮಮರಣ ಹಸುತೃಷೆಜರಾವ್ಯಾಧಿಯೆಂಬುಮ್ಮಳಿಕೆಯ ಪೊರೆಯುಂಟುಹಮ್ಮುಮಮತೆ ಎಂಬ ತಲೆಹೊರೆ ಭಾರಾಗಿಒಮ್ಮೆಗಿಳಿಯಲಿಲ್ಲ ಗಂಟುಸ್ವರ್ಮಂದಿರವೆ ಹೆಬ್ಬೆಟ್ಟನಾಯಕನರ್ಕಕಮ್ಮರಿಗಳು ಇಪ್ಪತ್ತೆಂಟುಸನ್ಮಾನ ರಾಗಭೋಗಗಳೆಂಬ ಬಯಲಾಸೆಯ ಮೃಗತೃಷ್ಣೆಯ ನಂಟು 4ಅಲ್ಲಿಗಲ್ಲಿಗೆ ಸುಖದು:ಖನೆಳಲುಬಿಸಲಲ್ಲಿಗಲ್ಲಿಗೆ ಪ್ರಿಯತರುವುಬಲ್ಲಿದರಿಂದಾಹ ಭಯದಂತೆ ಸೂಚಿಪಕಲ್ಲುಕೊಳ್ಳಗಳ ನಿರ್ಝರವುಕೊಲ್ವಾರಿನೃಪದೂತರೆಂಬ ಸೂಕರಮೋಹÀಹಲ್ಲೊಳಗಘಕೂಪದಿರವುಕ್ಷುಲ್ಲಕ ಪಿಸುಣರೆಂಬುವ ಋಕ್ಷಬಿಡಾಲಹೊಲ್ಲನಖಿಗಳ ಸಂಚರವು 5ಈಷಣತ್ರಯಯಂತ್ರ ಏಳು ಪ್ರಾಕಾರದಿದ್ವೇಷಿಗಳಿದ್ದ ದುರ್ಗಗಳುದೂಷಣ ಸ್ತುತಿ ಎಂಬ ಕಾಕಪಿಕೋಕ್ತಿ ಪ್ರದೋಷದ ಮಳೆ ಮಂಜುಗಳುನೈಷಧನುಂಡು ಕೊಬ್ಬಿದ ಇಂದ್ರಿಯಗೋಳಕಮೂಷಕಗಳಿಹ ಬಿಲಗಳುದೋಷ ದುರ್ವಾರ್ತೆ ದುರಿತವೆಂಬ ಕ್ರವ್ಯಾದಘೋಷಣ ಭಯಂಕರಗಳು 6ಈ ರೀತಿಕಾಂತಾರದಾಟುವ ಧೀರಗೆಮಾರುತಿ ಮತ ಪಕ್ಷ ಬೇಕುನಾರಾಯಣನೆ ಸರ್ವೋತ್ತಮನೆಂದೆಂಬತೋರ ಗಧಾಯುಧ ಬೇಕುಘೋರಾದ್ವೈತ ಕಕ್ಷವ ಛೇದಿಸುವ ಸುಕುಠಾರ ತತ್ವಗಳಿರಬೇಕುಸಾರಜÕಜನಪ್ರಭು ಪ್ರಸನ್ವೆಂಕಟಕೃಷ್ಣನಾರಸಿಂಹನಸ್ಮøತಿಬೇಕು7
--------------
ಪ್ರಸನ್ನವೆಂಕಟದಾಸರು
ಶ್ರೀನಾಥ ನಿನ್ನ ನಂಬಿದರಿಗೆ ಭವಭಯಮೇಣುಂಟೆ ಭಕ್ತರ ಪ್ರಾಣ ವೆಂಕಟರನ್ನ ಪ.ಅರಸು ಒಲಿದ ಮೇಲೆ ಪಿಸುಣರ ಭಯವುಂಟೆಕರಿಗಂಜಿಹರಿಗುಹೆಯ ಪೊಗುವುದುಂಟೆ-------------------------------------------- 1ಖಗಮಂತ್ರವಿರಲಹಿಯ ವಿಷ ತಾನುಂಟೆಮಗುಳೆ ಚಂಪಕರಸವ ಅಳಿ¬ೂಂಟಿ ಉಳಿವುಂಟೆನೆಗಳುಕರಿಯನು ಹಿಡಿದು ತಾನುಳಿಯಲುಂಟೆಜಗದೀಶ ನಿನ್ನ ನೆನೆದವಗೆ ಯಮನಪುರ ಉಂಟೆ 2ಘನ್ನಪರಸುಕೈಸೇರಿದಗೆ ದಾರಿದ್ರ್ಯ ಉಂಟೆಉನ್ನತ ವ್ಯಾಘ್ರ ಕೇಸರಿಗಳ ಸೆಣೆಸುವುದುಂಟೆಪನ್ನಗಾದ್ರಿವರದ ಪ್ರಸನ್ವೆಂಕಟೇಶೋಪಾಸಕನ್ನಿಗೆಸಂಚಿತಪಾಪಾಂಕುರದೋರುವುದುಂಟೆ3
--------------
ಪ್ರಸನ್ನವೆಂಕಟದಾಸರು
ಸಿರಿಸೊಕ್ಕಿ ಮರೆಯದೆ ಮುರವೈರಿಯಮರೆಹೋಗು ಮೊರೆಯಿಡು ಮರೆಯದೆ ಮನವೆ ಪ.ಶರೀರವು ಸೆರೆಮನೆ ಸರಿಕಾಣ ಜೀವಕ್ಕೆಸಿರಿಪಂಚಶರನವಸರಕೆ ಮೆಚ್ಚಿಸಿರಿಪತಿ ಶರಣಾನುಸರಣೆ ಭಕುತಿಜ್ಞಾನಸರಕಿಲ್ಲ ಸರಿಯಿತಾಯುಷ್ಯಿರವು ವ್ಯರ್ಥಾಯಿತು 1ಸತಿಸ್ನೇಹ ಸುತಮೋಹಾಶ್ರಿತ ಜನರನು ಬೇಡಿಸ್ಯಾತನೆಯ ಸುತ್ತಿಕೊಂಡು ಶಿಥಿಲಿಪಾಗಸತಿಇಲ್ಲ ಸುತರಿಲ್ಲಾಶ್ರಿತ ಸಹಾಯವಿಲ್ಲವೈವಸ್ವತ ಭೃತ್ಯಶತಕೆ ಈಷತ್ತೂ ಕೃಪೆಯಿಲ್ಲ 2ಪುಸಿನುಡಿ ಪಿಸುಣರ ಪೆಸರಿಸದಲೆನಿತ್ಯಪ್ರಸಾದರ ಪ್ರಸಾದವ ಪ್ರಸನ್ನೀಕರಿಸೆಪೊಸತಾಪೋಪಶಮನ ಪ್ರಸನ್ನವೆಂಕಟಪತಿಯಪ್ರಸಿದ್ಧರ ಪ್ರಸರದ ಪ್ರಸಂಗದೆ ಮುಕುತಿ 3
--------------
ಪ್ರಸನ್ನವೆಂಕಟದಾಸರು