ಒಟ್ಟು 11 ಕಡೆಗಳಲ್ಲಿ , 4 ದಾಸರು , 10 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಂದು ಸುದಿವಸ ನೋಡಿ ಕಂಡೆವು ಕಣ್ಣಾರೆ ಚಂದವಾಗಿ ಗುರು ಪೂರ್ಣಮಾಡಿದ ಮನೋಹರ ಧ್ರುವ ಕೇಳದಾ ಕೇಳಿದೆವು ಫೇಳಿಸುವದೆನ್ನೊಳಗೆ ಹೇಳೇನೆಂದರೆ ಬಾರದು ಸುಳವು ಇನ್ನೊಬ್ಬರಿಗೆ ತಾಳಮೃದಂಗ ಭೇರಿ ಭೋರಿಡುತ ಒಳ ಹೊರಗೆ ತಿಳಿದೇನಂದರದೇ ನೋಡಿ ಉಲುವು ತಾ ತನ್ನೊಳಗೆ 1 ಕಾಣದ ಕಂಡೆವು ಖೂನ ತಾ ಕಣ್ಣಿನ ಕೊನೆಯೊಳಗೆ ಪ್ರಾಣ ಪಾವನ್ನವಾಯಿತು ಪುಣ್ಯ ಪ್ರಭೆಯೊಳಗೆ ಭಾನುಕೋಟಿತೇಜ ಧನ್ಯಗೈಸಿದ ಎನಗೆ ಸ್ವಾನುಭವದ ಸುಖ ಎದುರಿಟ್ಟಿತು ಜಗದೊಳಗೆ 2 ನುಡಿಯು ಕೇಳಿದಂಥ ನುಡಿಗೇಳಿದೆವಿಂದು ಕಡಿಗಾಯಿತು ನೋಡಿ ಹುಟ್ಟಿಬಾಯ ಜನ್ಮಸಂದು ವಿಡಿದು ಗುರುಪಾದ ಜನ್ಮಸಾರ್ಥಕಾಯಿತಿಂದು ಪಡೆದ ಮಹಿಪತಿ ನಿಜಾನಂದ ವಸ್ತುವಂದು 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕಣ್ಣಾರೆ ಕಂಡೆವಿಂದು ಪುಣ್ಯತೇಜೋರಾಶಿಯ ಬಣ್ಣಬಣ್ಣದಲಿ ಭಾಸುವ ಪ್ರಭೆಯ ಧ್ರುವ ಹೇಳಲಿಕ್ಕೆ ಬಾರದು ಹೊಳೆವ ಪ್ರಕಾಶವು ಥಳಥಳಿಸುತಿಹುದು ಒಳಹೊರಗೆ ಝಳಿಝಳಿಸುತಿಹದು ಮೊಳೆಮಿಂಚಿನ ಪರಿ ಸುಳವ್ಹುದೋರಿತು ಕಳೆವರದೊಳಗೆ 1 ಒದಗಿಬಂತಿದಿರಿಟ್ಟು ಮೊದಲಿನ ಪುಣ್ಯದ ಫಲ ಸಾಧಿಸಿ ಕಂಡೆ ಸುಖಸದೋದಿತವ ಹಾದಿ ಸಿಲ್ಕಿತು ನೋಡಿ ಆದಿ ಅನಾದಿಯ ಭೇದಿಸಿತು ಮನಸು ನಿಜಬೋಧವ 2 ಭಾವ ಬಲಿದು ನೋಡಿ ದೇವಾಧಿದೇವನ ಸುವಿದ್ಯ ಸುರಸವ ಸವಿಸವಿದು ಪಾವನ್ನವಾಯಿತು ಮಹಿಪತಿ ಜೀವನವುಕಾವಕರುಣ ಗುರುದಯದಿಂದ3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕೊರವಂಜಿ ಪದ ಬಾರೆ ಸತ್ಯಭಾಮೆ ತೋರೆ ನಿಮ್ಮ ಸುಹಸ್ತದ ಠೇವೆ ಧ್ರುವ ಸರ್ಕನೆ ಬಾರವ್ವಾ ಅರಿಕ್ಯುಳ್ಳ ಗರತಿ ಕರವ ಕೊರವತಿ ತಾರ್ಕಣ್ಯ ಬರುತಾದ ಪರಮ ಸುವಾರ್ತಿ ತರ್ಕರಹಿತ ವಸ್ತು ಕರಕೊ ಸುಮೂರ್ತಿ 1 ಓಯವ್ವ ಅವ್ವ ಬಾರೆ ನಮ್ಮವ್ವ ದೈವುಳ್ಳ ಗರತಿ ನೀನವ್ವ ದೈವ ಬರುದೆ ನಿನ್ನೊಳಗವ್ವ ಕೈದೋರೆ ಕೈದೋರೆ ಕೈದೋರೆ ನಿಮ್ಮ 2 ಕೈದೋರೆ ಕೈದೋರೆ ಕೈದೋರೆ ನಿಮ್ಮ ಕೈಯ ಲಕ್ಷಣ ನೋಡಿ ಹೇಳುವೆನಮ್ಮ ಅಯ್ಯ ಬರುತಾನೆ ಆಶೇಲಿ ನಿಮ್ಮ ಕೈಗೊಟ್ಟು ಕೇಳೆ ನಿಜ ಗುಹ್ಯವರ್ಮ 3 ಸುಳ್ಳು ಮಾತನಾಡಿ ಒಡಲ ಹೊರಳವಲ್ಲ ಬಲ್ಲಷ್ಟು ಬೊಗಳುವೆ ವಿಷಯ ದಾಸ್ಯವಳಲ್ಲ ಉಳ್ಳಷ್ಟು ಹೇಳುವೆ ಕೇಳೆ ಶಿವ ಸೊಲ್ಲ ಹೇಳುವ ಮಾತಿದು ಘನ ಗುರು ತಾ ಬಲ್ಲ 4 ಕೊರವಂಜಿ ಮಾತಿದು ಕಿವಿಗೊಟ್ಟು ಕೇಳಮ್ಮ ಬರುತಾನ ಉದರಲಿ ಹುಟ್ಟಿ ಸಗುಣ ನಿಮ್ಮ ತಾರಿಸುವ ಸ್ವಾಮಿ ಪತಿತ ಪಾವನ ನಿಮ್ಮ ಹರಷದೋರುವ ನಿತ್ಯಾನಂದೋ ಬ್ರಹ್ಮ 5 ಎಂದ ಮಾತನೆ ಕೇಳಿ ಬಂದಳು ಭಾವೆಮ್ಮ ಚೆಂದ ಉಳ್ಳ ಸುರಸ ವಾಕ್ಯ ಕೇಳಿದಳೊಮ್ಮೆ ಬಂದು ಹರುಷದಿ ಪೂರ್ಣ ಸಂದಿಸಿಟ್ಟಳು ಪ್ರೇಮ ಒಂದೆ ನಿಜಸುಮಾತ್ಹೇಳ್ಯೆಂದಳು ನೇಮ 6 ಎಲ್ಲಿಂದ ಬಂದೆವ್ವ ಸೊಲ್ಲ ಬೀರುತ ಶಿವ ಬಲ್ಲ ಮಹಿಮಳೆಂದು ನಾನರಿಯೆನವ್ವ ಇಲ್ಲೆವೆ ಕಂಡೆ ನಾ ಸೊಲ್ಲಿನ ಮಹಿಮರು ಎಲ್ಲ ನೆಲೆನಿಭೇಳೌವ್ವ 7 ಸರಿಯ ಬಂದರ ನಿನ್ನ ಮರಿಯೆನವ್ವ ಎಂದು ಖರೆ ಉಳ್ಳ ಮಾತನೆ ಹೇಳೆ ನಿಜ ಒಂದು ಹಿರಿಯರಗೀ ಮಾತು ಸರಿಯ ಬಾವ್ಹಾಂಗಿಂದು ಬೀರವ್ವ ನಿಜಸಾರವಿಂದು 8 ಲಕ್ಷ ಎಂಬತ್ತುನಾಲ್ಕು ಗ್ರಾಮವ ನೋಡಿ ಲಕ್ಷಿಸುತ ಬಂದ ಲಕ್ಷಣ ನಿಜಗೂಡಿ ಲಕ್ಷುಮಿ ಕರದೋರುತದ ನಿಮ್ಮೊಳೊಡಮೂಡಿ ಅಕ್ಷಯಾನಂದ ಬರುತಾನೆ ಇದರಿಡಿ 9 ಕರ ಕೊಟ್ಟಳು ಸುಶೀಲೆ ವರ ಕೃಪೆಯಲಿ ಕೊರವಂಜಿ ಮಾತಲಿ ಅರಿತಳು ತಾ ತನ್ನಲಿ ಪರಮಾನಂದ ಲೀಲೆ ಬೆರದಳು ಕೇಳಿ 10 ನುಡಿಯುವ್ವ ಸಲಲಿತವಾದ ನಿಜವಾಕ್ಯ ಬಡುವಂತೆ ಹರುಷವು ನೋಡಿ ತ್ರಯಲೋಕ್ಯ ಬಡಸವ್ವ ನನಗಿಂದು ಇದೆ ನಿಜ ಮುಖ್ಯ ಕುಡಲಿಕ್ಕೆ ನಿನಗಿದು ಶಕ್ಯ 11 ಮನದಂತೆಯಾದರ ನೆನದೇನವ್ವ ನಿಮ್ಮ ಅನುಕೂಲಾಗುವ ಪುಣ್ಯ ಪೂರ್ವಾರ್ಜಿತ ನಮ್ಮ ಸಾನುಕೂಲಾಗುವಂತೆ ಬೇಡಿಕೊಳ್ಳಮ್ಮ ನೆನಿ ಎಕನಾತಿ ಎಲ್ಲಮ್ಮ 12 ಒಡಮೂಡಿ ಬಂದರ ಉಡಿಯ ತುಂಬೇನವ್ವ ಜಡಿತಾಭರಣದುಡಿಗಟ್ಟೆ ನಿನಗವ್ವ ಹಿಡಿಯದೆ ಅನುಮಾನ ನುಡಿ ನಿಜ ಸಾರವ್ವ ಕುಡಲಿಕ್ಕೆ ನಿಧಾನದವ್ವ 13 ಕೈಯ ಲಕ್ಷಣದಲಿ ಶ್ರೇಯ ತೋರುತಲ್ಯದ ದಯ ಉಳ್ಳ ಮಹಿಮದ ಸೋಹ್ಯ ಬೀರುತಲ್ಯದ ಭಯವಿಲ್ಲದ ಭಾಗ್ಯ ಅಚಲ ತಾನಾಗ್ಯದ ಜಯಜಯಕಾರ ಭಾಸುತದ 14 ಪುಣ್ಯ ಪ್ರಭೆಯ ಚೆನ್ನಾಗಿ ಭಾಸುತಲ್ಯದೆ ಕಣ್ಣಿಗೆ ಸುಚಿನ್ಹ ಹೊಳವುತದೆ ಚಿನ್ನುಮಯದ ಸುಪುತ್ಥಳಿ ಬರುತದೆ ಬಣ್ಣ ಬಣ್ಣದ ಸುಖ ಬೀರುತದೆ 15 ಅಂಗದೊಳಗ ನಿಮ್ಮ ರಂಗ ಬರುತಾನಮ್ಮ ಕಂಗಳಿಗಿದರಿಡುತದೆ ಹರುಷವು ನಿಮ್ಮ ಭವ ಬಂಧದ ದುಷ್ಕರ್ಮ ಮಂಗಳಕರಾನಂದೊ ಬ್ರಹ್ಮ 16 ನಿನ್ನ ಭಾಗ್ಯಕ ಸರಿ ಇಲ್ಲೆ ಸಂಜೀವನಿ ಚೆನ್ನಾಗಿ ಕೇಳೆ ನೀ ಭಾವೆಗುಣಮಣಿ ಧನ್ಯವಾಯಿತು ನಿನ್ನಂದೆವೆ ಯತಿಮುನಿ ನಿನ್ನೊಳಗುಂಟು ದೇವಶಿಖಾಮಣಿ 17 ಭಾವೆ ನಿನ್ನಿಂದ ಪಾವನ್ನವಾಯಿತು ಜಗ ದೇವಾಧಿದೇವ ಮೂಡುವ ನಿನ್ನೊಳಗೀಗ ಕಾವಕರುಣ ಪ್ರತ್ಯಕ್ಷವಾಗುವ ಯೋಗ ಸುವಿದ್ಯ ಭಾಸುವ ದಿವ್ಯಭೋಗ 18 ಉಂಡ ಊಟ ಕಂಡ ಕನಸು ಪಿಂಡಲಕ್ಷಣ್ಹೇಳುವೆ ಮಂಡಲೊಳಗ ಮಂಡಿಸಿಹ್ಯ ಮಹಿಮೆ ನೀನಗ್ಹೇಳುವೆ ಹಿಂಡದೈವದೊಡಿಯ ನಿನ್ನೊಡಲೊಳಗ ತಾಳುವೆ ಪಂಡಿತರಿಗೆ ಪ್ರಿಯವಾದಾಗ್ಯ ಖಂಡನೀನೆ ಬಾಳುವೆ 19 ನೀನೆ ಜಗಕ ತಾರಿಸುವ ದೈವದೋರಿಕುಡುವೆ ನೀನೆ ಭಕ್ತಜನರ ಜನ್ಮಸಾರ್ಥಕವು ಮಾಡುವೆ ಜ್ಞಾನಗಮ್ಯವಾದ ವಸ್ತುಹಿಡದು ನೀನೆ ಕುಡುವೆ ನಿತ್ಯ ಆಡುವೆ 20 ಅಮ್ಮ ನಿಮ್ಮೊಳು ಘಮ್ಮನ್ಹೊಳುವ ತಮ್ಮ ಬರುತಾನ ಸುಮ್ಮಾನಿಹ್ಹಾ ಸಮೀಪಲೆ ಧಿಮ್ಮ ಹಿಡಿದ ಹಮ್ಮಿನೊಳು ಘುಮ್ಮವಾದರು ಬ್ರಹ್ಮಾದಿಗಳೆ ನಮ್ಮ ನಿಮ್ಮದೆಂಬು ಭ್ರಮೆ ಸುಮ್ಮನ್ಯಾಕಿದೊ ಅಮ್ಮಕೇಳೆ 21 ಬಯಕಿ ಲಕ್ಷಣ ನಿನ್ನ ಹೇಳ್ಹೆನವ್ವಾ ತಾಯಿ ಮಾಯಿಕ ಗುಣ ಸುಟ್ಟು ತಿಂದೇನೆಂಬುದು ಬಾಯಿ ಕೈಕಚ್ಚಿಲೆ ಶುದ್ದಿಲ್ಲಾದವರ ತಾಳದು ಸೋವಿ ಐರಾವತ ಬರುತಾನ ನಿನ್ನೊಳು ಪನ್ನಂಗಶಾಯಿ 22 ಬಾಹ್ಯನಿಷ್ಟರ ಕಂಡು ಬದಿಗೆ ಬರಗುಡಿ ನೀನು ಅಹಂಭಾವಕ ಹೇಸಿ ವಾಕರಿಸುವೆ ನೀನು ಗುಹ್ಯ ಹೇಳುವೆ ನಾನು ಸಾಹ್ಯ ಮಾಡುವ ಶ್ರೀಗುರು ತಾನು 23 ಕಾಮಕ್ರೋಧ ಕರದು ತಿಂದೇನೆಂಬುದು ಬಯಕಿ ನೇಮದಿಂದಲಿ ಮದ ಮತ್ಸರನೆ ನೂಕಿ ಪ್ರೇಮವಿಲ್ಲದವರ ಎಂದಿಗಾದರ ಸೋಕಿ ವರ್ಮಿಕರಿಗೆ ನೀ ಕೈಯಗುಡುವಾಕಿ 24 ಆಸಿ ಎಂಬುದು ಅಟ್ಟುಅರದೇನೆಂಬುದು ಬ್ಯಾಗ ಹುಸಿನುಡಿವೆಂಬದು ಹುರವಾದೀಗ ಹಸನಾದ ಬಯಕೀದು ಋಷಿ ಮುನಿಗಳ ಯೋಗ ಲೇಸು ಲೇಸು ನಿನ್ನ ಅಂತರಂಗ 25 ಧನ್ಯವಾದ ರಾಜಯೋಗವ ಬಯಸುದು ಉನ್ಮನವಾಗಿ ಊರ್ಜಿತವಾದೇನೆಂಬುದು ಸ್ವಾನುಭವದ ಸುಖ ಸೂರ್ಯಾಡೇನೆಂಬುದು ಭಿನ್ನ ಭೇದಕ ಕಣ್ಣ ತ್ಯರಿಯದಿದು 26 ವಾಸುದೇವನ ಭಕ್ತಿ ಆಶ್ರೈಸೇನೆಂಬುದು ಶ್ವಾಸೋಚ್ಛ್ವಾಸಕ ಒಮ್ಮೆ ಬಯಸುವುದು ವಿಷಯ ಪ್ರಪಂಚಕ ಹೇಸಿ ತಾ ಜರೆವುದು ಕುಸುಮನಾಭನ ಸೇವೆ ಇಚ್ಛಿಸುವದು 27 ಒಮ್ಮೆ ಸರಸ್ವತಿ ಕೂಡ ಸರಸಾಡೇನೆಂಬುದು ಒಮ್ಮೆ ಲಕ್ಷುಮಿ ಕೂಡ ಲೋಲಾಡೇನೆಂಬುದು ಒಮ್ಮೆ ಪಾರ್ವತಿ ಕೂಡ ಪವಡೀಸೆನೆಂಬುದು ಒಮ್ಮೆ ಏನುನೊಲ್ಲ್ಯೆನೆಂಬುದು 28 ಹೇಳೇನೆಂದರೆ ನಿನ್ನ ಬಯಕಿಯ ಉಲ್ಹಾಸ ತಿಳಿಯದಿನ್ನೊಬ್ಬರಿಗ ಗರ್ಭದ ಸುವಾಸ ಉಲವುತದೆ ನಿನ್ನೊಳು ಸುಪ್ರಕಾಶ ಥಳಥಳಗುಡುತಿಹ್ಯ ಬಾಲವೇಷ 29 ಧನ್ಯ ಧನ್ಯ ನಿನ್ನ ಗರ್ಭಹೊಳುವ ಹೊಂಬಣ್ಣವು ಒಡಲು ನಿನ್ನ ಪುಣ್ಯ ಪಾವನ್ನವು ಧನ್ಯ ಧನ್ಯ ನಿನ್ನ ದರುಷಣದ ಜೀವನವು ಧನ್ಯ ಧನ್ಯ ನಿನ್ನ ಕಂಡ ಜನರ ಜೀವಪ್ರಾಣವು 30 ಭಾವೆ ನಿನ್ನಿಂದ ಖ್ಯಾತಿಪಡೆದ ಪ್ರಹ್ಲಾದನು ದೇವ ದೇವ ಬಂದು ಸ್ತಂಭದೊಳು ಮೂಡಿದನು ಆವಾವ ಠಾವಿನೊಳು ಬಂದು ರಕ್ಷಿಸಿದನು ಜೀವ ಜೀವ ತಾನೆ ಅಗಿ ಪ್ರಾಣನುಳಹಿದನು 31 ನಿನ್ನ ಬಲಗೊಂಡು ದ್ರೌಪದಿಯ ಖ್ಯಾತಿಪಡೆದಳು ಪುಣ್ಯ ಉಳ್ಳ ಮಹಿಮನಂಘ್ರಿ ಕಣ್ಣಾರ ಕಂಡಳು ಚೆನ್ನಾಗಿ ಬಂದು ಸ್ವಾಮಿ ಲಜ್ಜೆಗಾಯ್ದು ಸಭೆಯೊಳು ಬಣ್ಣ ಬಣ್ಣ ವಸ್ತ್ರ ಪೂರಿಸಿದಾನೇಕಗಳು 32 ಸ್ತುತಿಯು ಮಾಡಲು ನಿನ್ನ ಯತಿಮುನಿಗಳವಲ್ಲ ಗತಿಯ ಪಡೆದರು ಸಕಲ ಮುನಿಜನರೆಲ್ಲ ಅತಿ ಹರುಷವು ಕೂಡಿದರು ಜಗದೊಳಗ್ಯಲ್ಲ ಹಿತದೋರುತಿದೆ ವಸ್ತು ಮಯವೆಲ್ಲ 33 ಹೊಳೆವ ಸುಳಿವ ಚೆಲುವ ನಿನ್ನೊಳಗ ನಲುವನೆ ಕಳವಿಲೊಯಿದ ವೇದನುಳುಹಿದವನು ಬೆಳೆವನೆ ಭಾರ ತಾಳಿದವನು ಉಲುವನೆ ನೆಲವ ಗೆದ್ದ ಬಲಿಯು ನಿನ್ನೊಳಗೆ ಒಲುವನೆ 34 ಸೀಳಿ ದೈತ್ಯನ ಕೊಂದ ಶೂರ ಘಮಗುಡತಾನೆ ಅಳದು ಭೂಮಿಯ ಕೊಂಡು ಬೆಳದವ ಬರುತಾನೆ ತಿಳಿದು ಪಿತರ ಸೂಡುಕೊಂಡವ ಬರುತಾನೆ ಬಲುಪರಾಕ್ರಮದವ ತೋಳುತಾನೆ 35 ತಾಂ ಸಂಚರಿಸ್ಹ್ಯಾನ ನಿನ್ನೊಳಗ ಮೂಡಿ ಬರುತಾನೆ ಬ್ಯಾಗೆ ನಗುತ ಬರುತಾನೆ ಈಗ ಕೈಯಗೊಟ್ಟು ಬರುತಾನೆ ನಿನಗೆ 36 ಸಾಧೀಸಿ ಕೇಳೆ ಕಿವಿಗೊಟ್ಟು ಒದುಗುವ ತಾಂ ಇದರಿಟ್ಟು ಉದಿಯವಾಗುವ ದಯವಿಟ್ಟು ಸದ್ಬಕ್ತರಿಗೆ ಕೈಯಗೊಟ್ಟು 37 ಹುಟ್ಟುವ ಶಿಶುವಿನ ಘಟಣಿಯ ಬಹಳ ಗುಟ್ಟೊಡಿಯಲು ತಾಂ ಮುಟ್ಟನು ತಾಳ ಕಟ್ಟುವ ದೈತ್ಯರ ದಿಟ್ಟ ಮಾ ಸಾಳ ದೃಷ್ಟಿಸಿ ನೋಡುವ ನಿಷ್ಠರ ಮೇಳ 38 ಶಿಶುವಿನ ಲಕ್ಷಣ ಬಲು ಅಗಾಧ ಪರಿ ಮಾಟವು ಋಷಿಗಳ ಬೋಧ ಹಸು ನೀರಡಿಸರವುದು ಶ್ರೀಪಾದ ಬಸುರಿನ ಬಯಕಿದು ಬಲುಸುಸ್ವಾದ 39 ಘಮಗುಡುತದೆ ಅನಾಹತದ ಧ್ವನಿಯು ಕ್ರಮ ತಿಳಿವದು ಸುಯೋಗದ ಮನಿಯು ಧಿಮಿಗುಡುತದ ಆನಂದದ ಖಣಿಯು ಭ್ರಮ ಬಿಡಿಸುವ ಘನ ಚಿಂತಾಮಣಿಯು 40 ಹುಟ್ಟಿ ಬರುತಾನಿವ ಶಿಷ್ಟರ ಮನಿಲಿವ ದುಷ್ಟ ಮರ್ದನ ದೇವ ನಿಷ್ಠರಿಗೆ ಕಾವ ಎಷ್ಟೆಂದ್ಹೇಳಲವ್ವ ಸೃಷ್ಟಿಗಧಿಕನಿವ ಮುಟ್ಟಿ ಮುದ್ರಿಸುವ ದಿಟ್ಟೆದೆ ಕೂಸವ್ವ 41 ವರ್ಣಿಸಲಾಗದು ಶಿಶುವಿನ ವಿವರಣ ದಣಿಯಿತು ಕೊಂಡಾಡಿ ವೇದಸುಪುರಾಣ ಖೂನ ತಿಳಿಯದು ತಾನು ಶಾಸ್ತ್ರಕ ಸಂಪೂರ್ಣ ದ್ಯಾನ ಮೋನಕ ದೂರಗಮ್ಯ ಸ್ಥಾನ 42 ಗುಟ್ಟು ತಿಳಿಯದ ವಸ್ತು ಹುಟ್ಟಿಬಾಹುದು ಕೇಳಿ ಉಂಟಾಗುವದು ನಿನ್ನೊಳು ನೆನದಾಗಳೆ ಘಟ್ಯಾಗಿ ಅನುಭವಿಸುತ ನೀನೆ ಬಾಳೆ ದೃಷ್ಟಿಯೊಳೀಗುಟ್ಟು ಆರೀಗ್ಹೇಳೆ 43 ಬಸುರು ಬಯಕೆಂಬುದು ಹೆಸರಿಸಲಳವಲ್ಲ ಹಸನಾಗಿ ಅನುಭವಿಸುವ ಪುರುಷನೆ ಬಲ್ಲ ವಾಸುದೇವನ ಕಾಣದಿಹ್ಯದೆ ಕಣ್ಣಲ್ಲ ಆಸಿ ಅಳಿದವರೆ ತಾಂ ತಿಳಿದರೆಲ್ಲ 44 ಹುಟ್ಟುವ ಲಕ್ಷಣ ಕೇಳೆ ನೀ ಕಿವಿಗೊಟ್ಟು ಮುಟ್ಟಿ ಮುದ್ರಿಸಿಹ್ಯ ಗುರು ಕಟಾಕ್ಷವ ಕೊಟ್ಟು ಇಟ್ಟುಕೊ ಈ ಮಾತು ಆರಿಗ್ಹೇಳೆ ಬಿಟ್ಟು ಗಂಟು ಕಟ್ಟಿದ ಮಾತು ಹೇಳೆಬಿಟ್ಟು 45 ಆಲಕ್ಷವೆಂಬ ಸುನಕ್ಷತ್ರದಲಿ ಪುಟ್ಟಿ ಸುಲಕ್ಷಣದಲಿ ಬರುತಾನೆ ಜಗಜಟ್ಟಿ ನೆಲಯುಗೊಂಡಾಡಿಸಿ ಮನಮುಟ್ಟಿ 46 ಜನ್ಮನಾಮೆಂಬುದು ಕೂಸಿನ ನಿರ್ಗುಣ ಸಮಸ್ತರಿಗೆ ನಡವ ನಾಮವೆ ಸಗುಣ ಬ್ರಹ್ಮಾನಂದದಿ ಲೋಲ್ಯಾಡುವ ಪರಿಪೂರ್ಣ ಕಮಲನಯನ ಸ್ವಾಮಿ ರಮಾರಮಣ 47 ಕೂಸು ಎಂದರ ತಾನು ಕೂಸು ಎನಲಾಗದು ವಾಸವಾಗ್ಯಾಡುದು ವಿಶ್ವಲಿದು ಹೆಸರನೇಕಪರಿಯಲಿ ಕರಿಸಿಕೊಂಡು ಲೇಸು ಲೇಸಾಗಿ ತಾ ಆಡುವುದು 48 ಹಿಂದ ಅಡಿದ ಆಟ ಮಂದದೆ ಆಡುದು ಎಂದಿಗ್ಯದರ ಗುಟ್ಟು ತಿಳಿಯಗುಡುದು ಒಂದಿಸಿದವರ ತನ್ನೊಳು ಕೂಡಿಕೊಂಬುದು ಒಂದೆ ವಸ್ತುವಾಗಿ ತೋರುವುದು 49 ಹೇಳುವೆ ಕೇಳೆ ಶಿಶುವಿನ ಆಟ ತಿಳಿಯಲು ಜಗದೊಳು ಬಲು ಅವ್ಹಾಟ ನೆಲಿ ತಿಳಿದವರಿಗೆ ತೋರುದದು ನೀಟ ನಲಿನಲಿದಾಡುವ ಸಲಲಿತದಾಟ 50 ಒಮ್ಮೆ ನೀರನೆ ಚಲಿಪಿಲಿ ಮಾಡುವ ಒಮ್ಮೆ ಬಾಗಿ ಜಗನೆಗುವ ಒಮ್ಮೆ ಹಲ್ಲಿಲೆ ಬೇರನೆ ಅಗಳುವ ಒಮ್ಮೆ ಬರುತಲಿ ಗುರುಗುಡುವ 51 ಒಮ್ಮೆ ಬಲು ಗಿಡ್ಡಾಗಿ ತೋರುವ ಒಮ್ಮೆ ಪರಾಕ್ರಮ ಹಿಡುವ ಒಮ್ಮೆ ವನದೊಳಗಾಡುತ ಹೋಗುವ ಒಮ್ಮೆ ಕಡವ ಬೆಣ್ಣೆಯ ಮೆಲುವ 52 ಒಮ್ಮೆ ಬತ್ತಲೆ ತ್ರಿಪುರದಲಿ ಸುಳಿವ ಒಮ್ಮೆ ಏರುವ ತಾ ಹಯವ ಒಮ್ಮೊಮ್ಮಾಗುವ ತಾನೆವೆ ಸಗುಣವ ಒಮ್ಮೊಮ್ಮಾಗುವ ನಿರ್ಗುಣವ 53
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಜೋ ಜೋ ಧ್ರುವ ತೊಟ್ಟಿಲ ಕಟ್ಟಿ ನಟ್ಟನಡುಮಧ್ಯ ಜಗಜಟ್ಟಿ ತೊಟ್ಟಿಲ ತೂಗಿರೆ ಮನಮುಟ್ಟಿ 1 ಧ್ಯಾನಧಾರಣದರಳೆಲೆ ಮಾಡಿ ಕರ್ನಕುಂಡಲ ಲಯಲಕ್ಷವಿಡಿ ಕರುಣನ ಪಾಡಿ 2 ತೋಳತಾಯಿತವಿಡಿ ನೋಡಿ 3 ಜಡಿತಾಭರಣದುಡುಗಿಯ ನೀಡಿ ಶ್ರೀ ಸರ್ವೋತ್ತಮನ ಪಾಡಿ 4 ನಿತ್ಯ ಆನಂದಮೂರ್ತಿಯ ತೂಗಿ ಪತಿತ ಜೀವನಪಾವನ್ನವಾಗಿ ಚಿತ್ತಮನಬುದ್ಧಿ ಏಕತ್ವವಾಗಿ ಭಕ್ತವತ್ಸಲನ ತೊಟ್ಟಿಲ ತೂಗಿ 5 ಅದೃಷ್ಟದಲಿ ಸದೃಷ್ಟವಾಗಿ ಸದ್ಬ್ರಹ್ಮಾನಂದ ಸದ್ಗುರುಯೋಗಿ ಮೂರ್ತಿಯ ತೂಗಿ 6 ಜೀವನಮೂರ್ತಿಯ ಪಾಡಿ ಘನ ಕೂಡಿ 7
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಮನೋಮಲಹರವಾಗುದು ಗುರು ಬೋಧದಿಂದ ತನ್ನ ತಾಂ ತಿಳಿಯಲು ಶುದ್ಧ ಬುಧ ಆಹಿರಿ ಧ್ರುವ ಅಂತರಂಗವು ನೋಡಿ ಜರೆವದು ಬಹಿರವಿ ಬೆರೆದು ನೋಡಿಲು ಘನವಸಂತವು ಗುರುಹಸ್ತ ಸ್ಪರ್ಶದಿಂದಲಿ ಕಲ್ಯಾಣ ಅರಿಯಲಾತ್ಮಾನುಭವ ಮುಕ್ತಿಗೆ ದಾರಿಯಯ್ಯ 1 ಸಾಧನವ ಮಾಡಿ ಸದ್ಗತಿಯಕಾಂಬೋದವು ಧನ್ಯ ಧನ್ಯವಾಹುದು ಙÁ್ಞನುಪದೇಶಲಿ ತಿಳಿಯಲಗಾಧ ಬಳಿಲಿ ಶ್ರೀಗುರುವಿನ ಸಕಲಾಭರಣ ಇದೇ ಸದ್ಗುರು ಕೃಪೆಯಯ್ಯ2 ಧ್ಯಾಯಿಸುವ ಆತ್ಮಾರಾಮ ಕ್ರಿಯವರಿದು ಪಯಸ್ವನಿ ಜಿಹ್ವದಲಿ ಗುರುಸ್ಮರಣೆಯು ನಾಟಿ ಗುರುಪಾದ ಹೃದಯದಲಿ ಸಾಳಂಗವನು ಮಾಡಿ ಪಾವನ್ನವಾದ ಮಹಿಪತಿ ಗುರುವಿನ ಪಾಡಿ3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ವಿಶೇಷ ಸಂದರ್ಭದ ಹಾಡು ಶ್ರೀ ವರದೇಂದ್ರಾಖ್ಯಾನ ಉತ್ಸವ ವರ್ಣನೆ 39 ಇರುಳುಹಗಲು ತವಸ್ಮರಿಸುತಲಿಹ ಭಕು - ತರಿಗಿಹ ಪರಸುಖಸುರಿಸುವ ಶ್ರೀ ಗುರು ಪ ಲಿಂಗಸುಗುರುನಿವಾಸ ಭಕ್ತ ಜಂಗುಳಿ ದುರಿತವಿನಾಶ ಮಂಗಳ ಚರಿತ ಮೌನೀಶ ವಿಹಂಗವಾಹನ ನಿಜದಾಸ 1 ಸಿರಿ ವಸುಧಿಜಾಪತಿ ಪದದೂತ ವಸುಧಿಯೊಳಗೆ ವಿಖ್ಯಾತ ಸುಮನಸರ ಸುವಂಶಜನೀತ 2 ಸುದರುಶನ ಮಾಲಾ ಕಲುಷ ನಿರ್ಮೂಲಾ 3 ವಾಯುಮತಾಬ್ಧಿವಿಹಾರಾ ಕಾಷಾಯ ಕಮಂಡಲಧಾರಾ ಮಾಯಿ ಜಲಜ ಚಂದಿರ ಗುರುರಾಯರ ಮಹಿಮೆಯಪಾರಾ 4 ಪಂಡಿತಮಂಡಲಭೇಶ ಪಾಖಂಡಿಮತೋರುಗವೀಶ ಕುಲಿಶ ತನ್ನ ತೊಂಡನೆಂದವರಘನಾಶ 5 ತಿಮಿರ ತರಣಿಯೊ ಕನಳನೀ ಮುನಿಯೋ 6 ಸುರನದಿಪತಿಯೊ ಧೈರ್ಯದಿ ಭೂಭತ್ಪತಿಯೊ ಚಾತುರ್ಯದಿ ವರಬ್ರಹ್ಮಸ್ಪøತಿಯೊ 7 ದಾನದಿರವಿಜನೆನಿಪನು ಸುವಿಧಾನದಿ ಕ್ಷಿತಿಯ ಪೋಲುವನು ಮೌನದಿ ಶುಕಮುನಿವರನು ಅಸಮಾನಯೋಗಿ ಎನಿಸುವನು 8 ಹರಿಸ್ಮರಣಿಯಲಿರುತಿರುವ ನರಹರಿನಿಂದಿಪ ಮತತರಿವ ಹರಿಪನೆಂಬರೆ ಪೊರೆವ ಶ್ರೀ ಹರಿಯಿವರಗಲದಲಿರುವ9 ಪ್ರಾಣೇಶ ದಾಸರೆನಿಪರು ಶ್ರೀ ಶ್ರೀನಿವಾಸನ ವಲಿಸಿಹರು ಜ್ಞಾನಿಗಳಿಗೆಅತಿ ಪ್ರೀಯರು ಅಸಮಾನದಾಸರೆನಿಸುವರು 10 ವರಕÀವಿ ಶ್ರೀ ಜಗನ್ನಾಥಾರ್ಯರ ಕರುಣ ಪಡೆದನವರತ ಧರಣಿಯೊಳಗೆ ವಿಖ್ಯಾತ ನರಹರಿ ಯಸ್ಮರಿಸುತಿಹ ನಿರುತ 11 ಹಿಂದಿನಸುಕೃತದಿ ಫಲದಿ ವರದೆಂದ್ರಾರ್ಯರು ವಂದಿನದಿ ಚಂದದಿ ದಾಸಗೃಹದಿ ನಡೆತಂದರು ಬಹುಸಂಭ್ರಮದಿ12 ಬಿನ್ನೈಸಿದ ಭಕುತಿಂದ ಮುನಿಮಾನ್ಯದರುಶನದಿಂದ ಧನ್ಯಧನ್ಯನಾನೆಂದ ಪಾವನ್ನವಾಯ್ತು ಕುಲವೆಂದ 13 ದಾಸಾರ್ಯರ ಭಕುತಿಯನು ನಿರ್ದೋಷವಾದ ಙÁ್ಞನವನು ತೋಷಬಡುತ ಮುನಿವರನು 14 ಶ್ರೇಷ್ಠನಾದಯತಿವರನು ಉತ್ಕøಷ್ಟವಾದಸ್ಥಳವನ್ನು ನಮಗೆನುತಿಹನು15 ದೇಶಕರಿಂಗಿತವರಿದು ವರದಾಸಾರ್ಯರು ಕೈಮುಗಿದು ಈ ಶರೀರತಮ್ಮದೆಂದು ಮಧ್ವೇಶಾರ್ಪಣವೆಂತೆಂದು 16 ತಪ್ಪದೆ ಸರ್ವದೇಶದಲಿ ತಾಕಪ್ಪವ ಕೊಳುತಲ್ಲಲ್ಲಿ 17 ಸಿರಿ ನಿಲಯನಂಘ್ರಿ ಸ್ಮರಿಸುತಲಿ ಕಳೇವರ ತ್ಯಜಿಸಿದರಲ್ಲಿ ಆಬಳಿಕ ಲಿಂಗಸುಗೂರಲ್ಲಿ 18 ತುಲಸಿ ವೃಕ್ಷರೂಪದಲ್ಲಿ ಇಲ್ಲಿನೆಲೆಸಿಹವೆಂದು ಸ್ವಪ್ನದಲಿ ಗಂಜಿಯ ಮರಡಿಯಲಿ ಇದ್ದಶಿಲೆ ತರಿಸೆಂದು ಪೇಳುತಲಿ 19 ಬಣವಿಯ ತ್ವರ ತೆಗೆಸುತಲಿ ತರುಮನುಜನಸರಿನೋಡುತಲಿ ಮುನಿ ವಚನವನಂಬುತಲಿ ಶಿಲೆಯನು ತಂದಿರಿಸಿದರಿಲ್ಲಿ 20 ಪುರುದಲಾಗಯಿರುತಿಹನು ತ್ವರದಿಂದಲಿ ಕಳುಹಿದನು ನರಹರಿ ಸಾಲಿಗ್ರಾಮವನು 21 ವರಪುಣ್ಯ ಕ್ಷೇತ್ರದಲಿಂದ ಮುನಿವರ ತಾನಿಲ್ಲಿಗೆ ಬಂz ಶರಣರ ಪಾಲಿಪೆನೆಂದ ಸುಖಗರೆಯುತ ಅಲ್ಲಿಯೆ ನಿಂದ 22 ಸುಂದರಪಾದುಕೆಗಳನು ಪುಣೆಯಿಂದಿಲ್ಲಿಗೆ ತರಿಸಿದನು ವಂದಿಸುವವರ ಘಗಳನ್ನು ತ್ವರದಿಂದ ತರಿದು ಪೊರೆಯುವನು 23 ದಾಸಕುಲಾಗ್ರಣಿಯನಿಪ ಪ್ರಾಣೇಶ ಕರಾರ್ಚಿತ ಮುನಿಪ ದೇಶಿಕ ವರರೆಂದೆನಿಪ ರಘುಜೇಶ ಪದಾಂಬುಜ ಮಧುಪ 24 ವೃಂದಾವನದಿ ನಿಂದಿರುವ ರಾಘವೇಂದ್ರರ ಧ್ಯಾನದಲಿರುವ ಅಂದಣೇರಿ ತಾಮೆರೆವ ಭಕ್ತವೃಂದವ ಕಾದುಕೊಂಡಿರುವ 25 ಪ್ರತಿಗುರುವಾಸರದಲ್ಲಿ ಜನತತಿ ಸಂಭ್ರಮದಿಂದಿಲ್ಲಿ ಮಿತಿಯಿಲ್ಲದೆ ಭಕುತಿಯಲಿ ನಲಿಯುತ ವಾಲ್ಗೈಸುವರಿಲ್ಲಿ 26 ಪ್ರತಿ ಪ್ರತಿ ವತ್ಸರದಲ್ಲಿ ಗ್ರೀಷ್ಮಋತು ಆಷಾಢಮಾಸದಲ್ಲಿ ತಿಥಿ ಷಷ್ಟಿಯ ದಿವಸದಲಿ ದ್ವಿಜತತಿ ಸುಭೋಜನ ವಿಲ್ಲಿ 27 ಮರುದಿವಸದ ಸಂಭ್ರಮವು ಶ್ರಿಂಗರಿಸಿದ ರಥದುತ್ಸವವು ಪರಿಪರಿ ಜಸಂದಣಿಯು ಇದು ವರಣಿಪುದಕೆ ದುಸ್ತರವು 28 ಯತಿವರ ಪರಮಾನಂದದಿಂದ ರಥವೇರಿ ಬರುವದು ಚಂದ ಅತಿಹರುಷದಿ ಜನವೃಂದಗುರು ಸ್ತುತಿಮಾಳ್ಪದು ಮುದದಿಂದ 29 ಝಾಂಗಟಿ ದಮ್ಮುಡಿಯು ಕಾಲುಗೆಜ್ಜೆಕಟ್ಟಿದಡಿಯುದಿವ್ಯ ಮೇಲು ಸರದ ಪದನುಡಿಯು 30 ಭೇರಿ ಭಜಂತ್ರಿ ತುತ್ತೂರಿಗಂಭೀರದಿ ಹೊಡೆವನಗಾರಿ ಅಂಬರ ಮೀರಿ 31 ಪರಿ ಪರಿಧೂಪಗಳು ಫಲÀಗಳನೈವೇದ್ಯಗಳು ಮಂಗಳ ಕರ್ಪೂರ ದೀಪಗಳು 32 ಥಳಿಪ ಪತಾಕಿ ಬೆತ್ತಗಳು ಮಿಗಿಲು 33 ಸಂತಜನರ ಜಯಘೋಷ ಅತ್ಯಂತ ಮನಕೆ ಸಂತೋಷ ಕುಣಿಯುತಿಹ ಶೀಶ 34 ಕಂತುಪಿತನದಯದಿಂದ ಇಲ್ಲಿ ನಿಂತಿಹ ಸುರರಾನಂದ ಎಂತೊರಣಿಪೆ ಮತಿಮಂದ ದುರಂತ ನಿಮ್ಮಯ ಗುಣವೃಂದ 35 ಸುವಿನಯದಿಂದ ನಮಿಸುವರು ಭಯವನು, ಈಡಾಡುವರು ತಮ್ಮಬಯಕೆ ಪೂರೈಸಿಕೊಳ್ಳುವರು 36 ಜ್ವರಛಳಿ ವ್ಯಾಧಿ ಪೀಡಿತರು ಮತ್ತುರಗವೃಶ್ಚಿಕದಂಶಿಕರು ಕುಂಟರು ಬಧಿರÀರು 37 ಪರಿಪರಿಗ್ರಹಪೀಡಿತರು ಬಹುಪರಿ ಶುಭಕಾಮಿಪ ಜನರು ಪೊರೈಸಿಕೊಂಬುವರು 38 ಸಾಷ್ಟಾಂಗದಿ ವಂದಿಪರು ಅಭಿಷ್ಟೇಯ ಪಡೆದುಕೊಳ್ಳುವರು ಕಷ್ಟಗಳನು ನೀಗುವರು ಸಂತುಷ್ಟರಾಗಿ ತೆರಳುವರು 39 ಇದುಪುಣ್ಯಕ್ಷೇತ್ರ ವೆನಿಸಿತು ಶ್ರೀಪದುಮೇಶಗಾವಾಸಾಯ್ತು ಮುದದಿಂದನಲಿಯುವರಾಂತು 40 ಈಸುಪದ ಪೇಳ್ವನೆಧನ್ಯ ಜಗದೀಶನ ತುತಿಸಿದ ಪುಣ್ಯ ದೇಶಿಕಪತಿ ಮುನಿಮಾನ್ಯ ವರದೇಶ ವಿಠಲಾಗ್ರಗಣ್ಯ 41
--------------
ವರದೇಶವಿಠಲ
ಶ್ರೀ ರಾಮಚಂದ್ರ ರಘುರಾಮಾ ರಘುರಾಮಾ ಕರವ ಎನ್ನಫ ಓಡಿಸಿ ಪೊರೆ ಪ ಕ್ಷಿತಿ ಭಾರಕೆÀ ಖಳ ತತಿ ಸಂಹರಿಸಲು ದ್ವಿತಿಯ ಯುಗದಿ ದಶರಾಥಸುತನೆನಿಸಿದ 1 ಶಿಲೆಯಾದ ಅಹಲ್ಯೆಯ ತುಳಿದ ಪಾದದಿಂ ಕಲುಷಿತ ಕಳೆದುಸಿರದೆ ಸಲುಹಿದ ಕರುಣಿ 2 ಧನುಮುರಿದು ಕ್ಷೋಣಿ ಕುಮಾರಿಯ ಪಾಣಿ ಪಿಡಿದ ಮೂರುತಿಯೇ 3 ಪ್ರೀತಿಯಿಂದ ರವಿಜಾತನ ಭ್ರಾತಗೆ ಭೀತಿಯ ಬಿಡಿಸಿದ ವಾತಜ ನಮಿತ 4 ದುರುಳ ದುಶ್ಯಾಸನನ ಧುರದಿ ತರಿದು ಘನ ಸುರರಿಗೆ ಸೌಖ್ಯವಗರೆದ ಮಹಾತ್ಮ 5 ನಿನ್ನ ದರುಶನದಿಲೆನ್ನ ಜನ್ಮ ಪಾವನ್ನವಾಯತೈ ಸನ್ನುತ ಮಹಿಮಾ6 ಶಿಂಧಶತಪುರ ಮಂದಿರ ಶಾಮ ಸುಂದರವಿಠಲ ಬಂಧುರ ಚರಿತ 7
--------------
ಶಾಮಸುಂದರ ವಿಠಲ
ಶ್ರೀರಾಮ ಜಯರಾಮ ಜಯ ಜಯತು ರಾಮ ಶ್ರೀರಾಮ ಜಯರಾಮ ಜಯ ಜಯತು ರಾಮ ಪ ನಮೋ ರಾಮಚಂದ್ರ ಸದಾಪೂರ್ಣಾನಂದ ನಮೋ ಸುಗುಣ ಸಾಂದ್ರ ಕೌಸಲ್ಯಕಂದ ನಮೋ ರಾಘವೇಂದ್ರ ಸೀತಾ ಕುಮುದ ಚಂದ್ರ ನಮೋ ಅಜಭವೇಂದ್ರಾದ್ಯಖಿಲ ಸುರವಂದ್ಯ 1 ನಿನ್ನ ಉದಯದಿರವಿಯು ಉನ್ನತಿಯನೈದಿಹನು ಘನ್ನತೆಯ ಪೊಂದಿಹರು ಕೌಸಲ್ಯದಶರಥರು ನಿನ್ನ ಅನುಜರು ಜಗದಿ ಪರಮ ಪಾವನ್ನರು ನಿನ್ನರಸಿ ಶ್ರೀಸೀತೆ ತ್ರೈಲೋಕ್ಯ ಮಾತೆ 2 ನಿನ್ನ ಕರುಣದಿ ಹನುಮ ಬ್ರಹ್ಮತ್ವ ವೈದಿದನು ನಿನ್ನ ನಾಮದಿ ವ್ಯಾಧ ವಾಲ್ಮೀಕನಾದ ನಿನ್ನ ಪದರಜ ಸೋಂಕಿ ಶಿಲೆಯಬಲೆಯಾದುದು ನಿನ್ನ ಪ್ರೇರಣೆಯಿಂದ ಪ್ರಣವೆ ಜ್ವಾಲಾಯಿತು 3 ನಿನ್ನ ಪ್ರೇಮದಿ ಶಬರಿ ಮುನ್ನ ಸವಿನೋಡಿ ಫಲ ನಿನ್ನ ಪದಕರ್ಪಿಸಲು ಘನಪದವಿಯಿತ್ತೆ ನಿನ್ನ ಸಖ್ಯವನೆ ಬೆರಸಿದವ ಸುಗ್ರೀವನು ಧನ್ಯವಾಗಿರುತಿಪ್ಪ ನಿಹಪರಂಗಳಲಿ 4 ನಿನ್ನ ದಾಸ್ಯವನೈದಿ ಅನಂತ ಕಪಿವರರು ಉನ್ನತೋನ್ನತ ಯೋಗ್ಯತೆಗಳ ಪಡೆದಿಹರು ನಿನ್ನ ದ್ವೇಷದಿ ರಾವಣಾದಿಗಳು ಮಡಿದರು ನಿನ್ನ ಪೊಂದಿದ ವಿಭೀಷಣ ರಾಜ್ಯಪಡೆದ 5 ಸುರರು ಕೃತ ಪುಟಾಂಜಲಿಯಲ್ಲಿ ಸ್ಥಿತರಾಗಿ ಇರುತಿಹರು ನಿನ್ನಾಜ್ಞದಿ ಇತರ ಮನುಜರ ತೆರದಿ ಪಿತನಾಜ್ಞೆ ಪಾಲಿಸಲು ವ್ರತವನೇ ಕೈಕೊಂಡು ವನಕೈದಿದೆ 6 ಜಾನಕಿಯು ಅವಿಯೋಗಿ ನಿನ್ನ ಬಳಿಯಿರುತಿರಲು ವಾನರರ ಭಲ್ಲೂಕಗಳ ಸೇನೆನೆರಹಿ ಕಾನನವ ಸಂಚರಿಸಿ ಖಳರನ್ನು ಮೋಹಿಸಿದೆ ಶ್ರೀನಿಧಿಯೆ ತವ ಲೀಲೆ ಬಹು ಚೋದ್ಯವು 7 ತಾಮಸರ ಸಂಹರಿಸಿ ಭೂಮಿ ಭಾರವನಿಳಿಸಿ ನೇಮದಿಂ ಕೈಕೊಂಡು ರಾಜ್ಯವನ್ನು ಪ್ರೇಮದಿಂ ಪಾಲಿಸಿದೆ ಪ್ರಜೆಗಳನು ವಿಧವಿಧದಿ ತಾಮರಸಜನ ಪ್ರಾರ್ಥನೆಯ ಮನ್ನಿಸಿ 8 ನಿನ್ನ ರಾಜ್ಯವೆ ಸಕಲ ಸುಖದ ಸಾಮ್ರಾಜ್ಯವು ನಿನ್ನ ಯಾಙ್ಞವೆ ವೇದವಾಣಿಯಿಂದಧಿಕವು ನಿನ್ನನಂತವತಾರಗಳ ಚರಿತೆ ಸೋಜಿಗವು ನಿನ್ನಯವತಾರಕ್ಕು ಮೂಲಕ್ಕಭೇದವು 9 ನಿನ್ನ ಮಹಿಮಾ ಜಲಧಿಯೊಳು ರಮೆಯು ಮುಳುಗಿಹಳು ನಿನ್ನ ಸ್ತುತಿಗೈವ ನಾಲ್ಮೊಗನು ನಾಲ್ಮೊಗದಿಂ ನಿನ್ನ ಧ್ಯಾನದಿ ಸದಾ ಮೋದಿಪನು ಮಾರುತನು ನಿನ್ನನೇ ಪಾಡುವರು ಅಜಪವನ ಪತ್ನಿಯರು 10 ನಿನ್ನ ನಾಮವ ಸವಿದು ಭವನು ನಲಿನಲಿಯುತಿಹ ಖಗರಾಜ ರತಿ ವರ್ಣಿಸುವರು ಚನ್ನೆ ಪಾರ್ವತಿಯು ವಾರುಣಿಯು ಸೌಪರ್ಣಿಯು ಚನ್ನಾಗಿ ಪಾಡುವರು ನಿನ್ನ ಗುಣಗಳನು 11 ಸುರರು ನಾರದಾದಿ ಋಷಿವರರು ವಂದಿಸುತ ಭಕ್ತಿಯಲಿ ನಿನ್ನ ಪದಗಳಿಗೆ ಅಂದದಲಿ ವೀಣಾ ಸುಗಾನ ಸಂಗೀತದಲಿ ಒಂದೊಂದೇ ಮಹಿಮೆಗಳ ಪೊಗಳಿ ಕುಣಿಯುವರು 12 ಸುಖತೀರ್ಥಮುನಿರಾಜ ಗುರುರಾಘವೇಂದ್ರಾರ್ಯ ಅಕಳಂಕ ವgದೇಂದ್ರ ಯತಿಸಾರ್ವಭೌಮರು ಮುಕುತಿದಾಯಕ ನಿನ್ನ ಪದಕಮಲ ಪೂಜಿಸುತ ಪ್ರಖರ ಕಿರಣದಿ ಜಗವ ಬೆಳಗುತ್ತಲಿಹರು 13 ತಾಳತಂಬೂರಿ ಸಮ್ಯಾಳದಿಂದಲಿ ಕೂಡಿ ಕಾಲುಗೆಜ್ಜೆಯ ಕಟ್ಟಿ ಮೇಲು ಸ್ವರದಿಂದ ಮೇಲಾದ ಭಕ್ತಿಯಲಿ ವಾಲ್ಗೈಸುತಿಹರು 14 ನಿನ್ನ ಲೀಲೆಯ ಕಥೆಯು ಮುಕ್ತಿಗೆ ಸತ್ಪಥವು ನಿನ್ನ ನಾಮದ ಮಹಿಮೆ ನಿಗಮಗಮ್ಯ ನಿನ್ನ ಚರಣೋದಕವು ತ್ರಿಜಗಪಾವನ್ನವು ನಿನ್ನ ನೇಮವೇ ಸೃಷ್ಟಿ ಸ್ಥಿತಿಲಯಕೆ ಕಾರಣವು 15 ನಿನ್ನ ನಾಮದಿ ಭರದಿ ಶುಕನು ಕುಣಿದಾಡುತಿಹ ನಿನ್ನ ಧ್ಯಾನದಿ ಯೋಗಿವೃಂದ ಸಂದಿಪು (ದು) ನಿನ್ನ ರೋಷದಿ ಅಜಭವಾದ್ಯರು ತೃಣರು 16 ಮೂರ್ತಿ ಕಣ್ಣಿಗಲ್ಹಾದಕರ ನಿನ್ನಂಘ್ರಿ ಸೇವೆ ಸಾಮ್ರಾಜ್ಯಗಿಂ ಪರತರವು ನಿನ್ನ ನಾಮದ ರುಚಿಯು ಅಮೃತಕಿಂತಧಿಕ 17 ನಿನ್ನ ಧ್ಯಾನವೆ ಸಕಲ ಸಾಧನದ ಸಾರವು ನಿನ್ನ ಗುಣಗಾನವೆ ಶಾಸ್ತ್ರಗಳ ಭೂಷಣವು ನಿನ್ನ ಮಹಿಮಾರಹಿತ ಕಾವ್ಯವಗ್ರಾಹ್ಯವು ನಿನ್ನ ಲೀಲಾ ರಹಿತ ಶಾಸ್ತ್ರವೆ ಕುಶಾಸ್ತ್ರ 18 ನಿನ್ನ ನಾಮಧ್ಯಾನವೇ ದೇಹ ಸಾರ್ಥಕವು ನಿನ್ನ ನಾಮವೆ ವಿವಿಧ ರೋಗನಿರ್ಮೂಲಕವು ನಿನ್ನ ನಾಮವೆ ದುರಿತರಾಶಿಗೆ ಪಾವಕವು ನಿನ್ನ ನಾಮವೆ ಸಕಲಭವಬಂಧ ಮೋಚಕವು 19 ರೇಣು ತೃಣ ಕಾಷ್ಟದಲಿ ನಿನ್ನ ದಯಪರಮೇಷ್ಠಿಯಿಂದಿರುವೆಗಳಲಿ ನಿನ್ನ ಪ್ರೇಮದಿ ನಲಿದ ಮಂದಮತಿ ವಂದ್ಯನು ನಿನ್ನಲ್ಲಿ ಮಮತೆಯಿಲ್ಲದವದೂಷಿತನು 20 ಅಜಭವಗಿರೀಶಾ ಭಜಕÀಜನ ದಾಸಾ ಸುಜನಮನತೋಷಾ ಕುಜನ ಮನಕ್ಲೇಶ ದ್ವಿಜತತಿಯ ಪೋಷ, ರಜನಿಚರನಾಶ ರಜತಪುರಧೀಶ, ಭುಜಗÀಗಿರಿ ವಾಸ 21 ತಂದೆ ತಾಯಿಯು ನೀನೆ, ಬಂಧು ಬಳಗವು ನೀನೆ ಹಿಂದು ಮುಂದು ನೀನೆ, ಎಂದೆಂದು ನೀನೆ ಬಂದಭಯ ಪರಿಹರಿಸಿ ಕುಂದದಲೆ ಕಾಯ್ವಸಂ - ಬಂಧಿಗನÀು ಆಪ್ತ ಗೋವಿಂದ ನೀನೆ 22 ಸೃಜಿಸಿದವನು ನೀನೆ ಪೋಷಿಸಿದವನು ನೀನೆ ನಿಜಗತಿಯ ಜೀವರಿಗೆ ನೀಡುವವÀನು ನೀನೆ ಅಜಪಿತನೆ ನಿನ್ನ ಪದ ಭಜನೆ ಮಾಳ್ಪವರನ್ನು ನಿಜವಾಗಿ ಕಾಪಾಡಿ ಪೊರೆವ ಪ್ರಭುನೀನೆ 23 ಕೊಡುವವನು ನೀನೆ ಕೋಳುವವನು ನೀನೆ ಅಡಿಗಡಿಗೆ ಸುಖದುಃಖ ನೀಡುವವ ನೀನೆ ಕೊಡುವದಾತನು ನೀನೆ ಕೊಟ್ಟದ್ದು ಕೊಂಡರೆ ಹೊಡಕೊಂಡು ಅಳುವದ್ಯಾತಕೆ ಮೂಢಪ್ರಾಣಿ 24 ಈ ಪೊಡವಿಯೊಳು ಮೊದಲು ನಾನು ಬಹು ಕಾಲದಿ ಕೌಪೀನ ಸಹ ಯನ್ನ ಸಂಗಡಿರಲಿಲ್ಲ ಈ ಪೊಡುವಿಯನು ಬಿಟ್ಟು ನಾ ಪೋಪಕಾಲಕ್ಕು ಈ ಪರಿಯೆ ಪೋಪೆನೆಂಬುದು ಸಟಿಯು ಅಲ್ಲ 25 ಗಾಡಿ ವಾಜಿಯು ಮತ್ತೆ ಬೆಡಗಿನ ವಸನಗಳು ಕೇಡುಯಿಲ್ಲದವಾ ಭರಣ ವಸ್ತುಗಳು ನಾಡಿನೊಳು ಬಹುಮನ್ನಣೆಯು ಯೆಂಬರೆಲ್ಲೆನ್ನ ಕೂಡಬರಬಹುದಾದುದೊಂದುಯಿಲ್ಲ 26 ಎಷ್ಟುಗಳಿಸಿದರೆನ್ನ ಹೊಟ್ಟೆಗೊಂದೇ ರೊಟ್ಟಿ ಸೃಷ್ಟಿಪತಿ ನಿನ್ನಂಘ್ರಿ ನಿಷ್ಠೆ ತೊರೆದು ಕಷ್ಟ ನಷ್ಟಗಳನ್ನು ಸಹಿಸಿ ನಿಷ್ಠ್ಠುರನಾಗಿ ದುಷ್ಟತನದಿಂದ ನಾನಿಷ್ಟುಪರಿಗಳಿಸಿ 27 ದಾನಧರ್ಮಗಳಿಲ್ಲ ವÀ್ರತನೇಮಗಳುಯಿಲ್ಲ ಆನಮಿಸಿಕೊಡಲಿಲ್ಲ ಮಾನಿ ವಿಪ್ರರಿಗೆ ಧೇನುಪಾಲನೆ ನಿನ್ನಧ್ಯಾನವನ್ನೇ ಮರೆದು ಶ್ವಾನನÀಂದದಿ ಕಾದು ಕೊಂಡು ಕುಳಿತಿಪ್ಪೆ 28 ವಾರನಾರಿಯರಲ್ಲಿ ವೇಷಧಾರಿಗಳಲ್ಲಿ ಸೊರೆಮಾಡಿದೆ ಕರ್ಣನೆನಿಸ ಬೇಕೆಂದು ಶ್ರೀರಮಾಪತಿ ನಿನ್ನ ಚರಣ ಕಮಲಗಳನ್ನು ಆರಾಧಿಪರಿಗೆ ನಾರುವ್ವಿ ಕೊಡಲಿಲ್ಲ 29 ಸತಿಸುತರು ಹಿತÀದವರು ಹಿತವ ಮೇಲ್ತೋರಿದು - ರ್ಗತಿಗೆನ್ನ ಗುರಿಮಾಡುತಿಪ್ಪರಲ್ಲದಲೇ ಪರ - ಗತಿಗೆ ಸಾಧನ ತೋರ್ಪರಾರು ಯನಗಿಲ್ಲ 30 ಈ ಮಹಾಜ್ವರದಿಂದ ನೊಂದು ನಿನ್ನನು ನೆನೆವೆÉ ನಾಮಹಾಭಕ್ತಿಯಲಿ ನಂಬಿದವನಲ್ಲ ನಾ ಮಾಡಿದ ಪಾಪರಾಶಿಗಳ ಪರಿಹರಿಸಿ ಪ್ರೇಮದಿಂದಲಿ ಪೊರೆಯೋ ಪರಮಕರುಣಿ 31 ರೋಗವನೆ ಹೆಚ್ಚಿಸು ನಿರೋಗಿಯನು ಮಾಡು ಭವ ರೋಗದಿಂದಗತೀ ಕಡೆದಾಂಟಿಸು ಯೋಗಿವರ ನಿನ್ನಿಚ್ಛೆ ಹೇಗೆÀಮಾಡಿದರುಸರಿ ಆಗದೆಳ್ಳಿನಿತು ಸಂಕೋಚವೆನಗೆ 32 ನೀಕೋಟ್ಟಕವಚವಿದು ನೀ ತೆಗೆದು ಹಾಕಲ್ಕೆ ನಾಕೆಟ್ಟುದುದುಯೇನು ಕರುಣಾಳುವೆ ಈ ಕವಚ ಕೆಲಕಾಲ ಬಿಟ್ಟಮಾತ್ರಕೆ ಮುಂದೆ ನೂಕಬೇಡೆನ್ನ ಮನ ಪಾಪಗಳ ಕಡೆಗೆ 33 ತನುಮನವು ನಿನ್ನದು ಧನಧಾನ್ಯ ನಿನ್ನದು ವನಿತೆ ನಿನ್ನವಳು ಮನೆ ಮಾರು ನಿನ್ನದು ದೇವ ಎನಗಾಪ್ತರೆಂಬುವರು ನಿನ್ನದಾಸರು ರಾಮ ಎನದೆಂಬ ವಸ್ತುವೆಲ್ಲವು ನಿನ್ನದು 34 ನಿನ್ನ ನಂಬಿದಯನೆಗೆ ಪಾಪದಂಜಿಕೆಯಿಲ್ಲ ಪುಣ್ಯದಾಶೆಯು ಇಲ್ಲ ಪರಮಪುರುಷ ನಿನ್ನ ಪ್ರೇರಣೆಯಿಂದ ಯನಿ
--------------
ವರದೇಶವಿಠಲ
ಹರಿ ಹರಿ ಹರಿಯೆನ್ನಿ ಹರಿಯ ನೆನವಿಗೊಮ್ಮೆ ತನ್ನಿ ಧ್ರುವ ಹಿಡಿದು ನಿಜ ಒಂದು ¥ಥ ಪಡೆಯಬೇಕು ಸ್ವಹಿತ ನೋಡಿ ಗೂಢಿನೂಳು ಗುರುತ ಕೊಡುವ ನೋಡಿ ಗುರುನಾಥ ಒಡಯನಹುದಯ್ಯನೀತ ಪೊಡವಿಯೊಳು ಶ್ರೀನಾಥ ಮಾಡಿ ಭಕ್ತಿ ಏಕಚಿತ್ತ ಕೂಡಿ ಜ್ಞಾನಸನ್ಮತ 1 ಹಿಡಿದು ನೀವು ಗುರುಪಾದ ಮಾಡಬ್ಯಾಡಿ ಭೇದ ಕಡಿಯಬೇಕು ಕಾಮಕ್ರೋಧ ಕೂಡಿ ನಿಜಸುಭೋದ ಬೋಧ ಗೂಢಗುಪ್ತವಾಗಿಹ್ಯದ ಕೊಂಡಾಡುತಿಹ್ಯ ವೇದ ಬಿಡದೆ ಮಹಿಮೆ ನಿರ್ಗುಣದ 2 ನಾವು ನೀವುವೆಂಬ ನುಡಿ ಗೋವಿಸುವದೀಡ್ಯಾಡಿ ಹ್ಯಾವ ಹೆಮ್ಮೆಹಿಡಿಯಬ್ಯಾಡಿ ಭಾವ ಬಲಿದು ಪೂರ್ಣ ನೋಡಿ ಕಾವ ಕರುಣನ ಕೂಡಿ ಭವಬಂಧನ ನೀಗಿ ಬಿಡಿ ಪಾವನ್ನವಾದ ನೋಡಿ ಮಹಿಪತಿ ನಿಜಗೂಡಿ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸಂಗವಿಡಿಸು ರಂಗಾ ವಿಬುಧರಹಿಂಗದೆ ನಿನ್ನಯ ನಾಮ ಪಾಡ್ವ ಭಕುತರ ಪ.ಸಂಗವಿಡಿಯೆಭವಹಿಂಗುವ ಲೆಕ್ಕದಅಂಗವಣೆಯನರಿತಂಗವಿವೇಕದಿಲಿಂಗವಪುವಿಭಂಗ ವಿಚಾರಕೆರಂಗಿ ವಿಷಯಭಯ ನುಂಗುವರ 1ಹರಿದಿನ ನಿಶಿಜಾಗರದ್ಯಶನಂಗಳಮರೆದಂಬುಜಾಕ್ಷನ ಬಿರುದೊಕ್ಕಣಿಸುತಮರುದಂಶರ ಮತವರಿದಿತರಾಗಮಜರಿದುವಿರತಿಯಲಿ ಪಿರಿದಪ್ಪರ2ಬೆನ್ನಬಿಡದೆ ಊರು ಬನ್ನವಬಡಿಸಲುತನ್ನ ವಿಮಲಮತಿಯನ್ನು ಬಿಸಾಡದೆಅನ್ಯವಧುವಿಗೆ ಬಿನ್ನವಿಸದೆ ಪಾವನ್ನವ ಮಾಳ್ಪ ಮಾನವರ 3ಸರಿಸ ಸಮನಿಹ ಹರುಷಪಡೆನುತಲಿಸುರಸಂಪದಕೆ ಮನವಿರಿಸಿ ಪರಂಪರಾಅರಸಪದವಿ ಓಕರಿಸಿ ಪರೇಶನಸ್ಮರಿಸಿ ಪದಾಬ್ಜವ ಸ್ಮರಿಸಿಪ್ಪರ 4ಅರಿಸಖರೊಳು ಸಮವೆರಸಿ ನೋಡುತಹರಿಯಿರಿಸಿದೊಲಂಗೀಕರಿಸಿ ನಿರಂತರಪರಸನ್ನ ವೆಂಕಟಗಿರೀಶ ನಾಮಾಸ್ತ್ರವಧರಿಸಿ ಸಂಸಾರವ ಉತ್ತರಿಸುವರ 5
--------------
ಪ್ರಸನ್ನವೆಂಕಟದಾಸರು