ಒಟ್ಟು 12 ಕಡೆಗಳಲ್ಲಿ , 10 ದಾಸರು , 12 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೃಪಣ ಶ್ರೀಪಾದಾರ್ಚನೆಯನಿತ್ತು ಪ ಅಪಾರ ಜನುಮದ ಪಾಪೌಘ ಬೆನ್ನಟ್ಟಿ ತಾಪಗೊಳಿಸುತ್ತಿದೆ ಈ ಪರಿಭವದೊಳು ಅ.ಪ. ಪತಿತ ನಾನಾದರೂ ಪತಿತ ಪಾವನ ನೀನು ಪಶುಪತಿ ಪಾಪಹರ ಗತಿಹೀನರಿಗೆ ನೀನೆ ಗತಿದರ್ಶಕನೆಂದು ತುತಿಸುತ್ತಿಹುದು ವೇದತತಿ ಸಮ್ಮತವಾಗಿ 1 ಭವಭವದಲಿ ಬಂದು ಬವಣೆಗಳಲಿ ಬೆಂದು ಬಳಲಿದೆ ಭಕ್ತ ಬಂಧು ಭವಹರ ನೀನೆಂಬುದನು ಭವಿಗಳಿಂ ನಿತ್ಯ ಶ್ರವಣದಿ ಕೇಳಿ ನಿನ್ನವರವನೆನಿಸಿದೆ 2 ಗೌರಿ ಮನೋಹರ ಗೌರಾಂಗ ಭಕ್ತರು ದ್ಧಾರಿಯೆ ಶೂಲಧರ ಸಾರಿದೆ ನಿನ್ನಂಘ್ರಿವಾರಿಜಯುಗಳವ ಕಾರುಣ್ಯದಲಿ ನೋಡು ಅಭಯವ ನೀಡು 3 ಮುಪ್ಪುರಹರ ಮುಕ್ಕಣ್ಣ ಗಂಗಾಧರ ಮೃತ್ಯು ಮೃತ್ಯುವೆ ಶಂಕರಾ ಸರ್ಪಭೂಷಣ ಅಪಮೃತ್ಯು ನಿವಾರಣ ಕಪ್ಪುಗೊರಳ ಕೃತ್ತಿವಾಸ ಸುರೇಶ 4 ಅಜ ಸಂತನಧ್ವರ ಭಜನೆಯ ಕೆಡಿಸಿದ ವಿಜಯ ವಿಗ್ರಹ ಶರೀರ ಸುಜನರ ಹೃದಯಾಂಬುಜದಲ್ಲಿ ಮಿನುಗುವ ರಜದೂರ ಶ್ರೀಕಾಂತ ನಿಜಭಕ್ತ ಗುರುವರ 5
--------------
ಲಕ್ಷ್ಮೀನಾರಯಣರಾಯರು
ಕೃಪಿಗಳೊಳು ನಿನಗುಪಮೆ ಕಾಣೆನೊ ಸದಾ ಕೃಪಣವತ್ಸಲ ರಾಘವೇಂದ್ರಾ ಅಪರಿಮಿತ ಪಾಪೌಘ ಸÀಪದಿ ಪೋಗಾಡಿಸಿ ನೀ ಕೃಪಣ ಕಾಮಿತ ದಾತಾ - ಮನ್ನಾಥಾ ಪ ಮೋದತೀರ್ಥ ಮತೋದಧಿ ಸಂಜಾತಾ - ಮೋದ ಸಂಯುಕ್ತ ಸುಧಾ ಭೋಧಿಸಿ ಚಂದ್ರಿಕ ಭುಧಜನ ವೃಂದಕೆ ಉದಧಿನಂದನನಂತಿರುವೇ - ನಂದಕರ ಗುರುವೆ 1 ಕ್ಷಿತಿ ತಳದೊಳು ವರ ಯತಿಯ ರೂಪವ ಧರಿಸಿ ಪತಿತ ಪಾವನನೆನಿಸೀ ಸತತ ಸುಜನರ ಅತಿಹಿತದಲಿ ಪೊರೆವೊ ಮತಿವಂತ ಮನದಲೀಗ ಭಜಿಪೆ ತ್ವಚ್ಚರಣ2 ಧಿಟ ಗುರು ಜಗನ್ನಾಥ ವಿಠಲಪಾದ ಹೃತ್ಸಂ - ಪುಟದಿ ಭಜಿಸುತಲೀ ಶಿಷ್ಟಜನರ ಮನದಿಷ್ಟಾರ್ಥ ಸಲಿಸುವ ವÀಂ - ದ್ಯೇಷ್ಟದಾನದಿ ದಕ್ಷಾ - ಕಾಮಿತ ಕಲ್ಪವೃಕ್ಷಾ 3
--------------
ಗುರುಜಗನ್ನಾಥದಾಸರು
ಗೋಪಾಲ ಹರಿ ವಿಠಲ ನೀ ಪಾಲಿಸಿವಳಾ ಪ ಪಾಪೌಘಗಳ ಕಳೆದು ಸುಪವಿತ್ರಳನೆ ಮಾಡಿಕೈ ಪಿಡಿದು ಪೊರೆಯಿವಳ | ಗೋಪಾಲ ಬಾಲ ಅ.ಪ. ನಿನ್ನ ಸೇವಿಸೆ ದಾಸ | ಘನ್ನ ದೀಕ್ಷೆಯ ಮನದಿಕನ್ಯೆ ಬಹು ಭಕ್ತಿಯಲಿ | ಬಿನ್ನವಿಸಿ ಇಹಳೊಮನ್ಯು ಸೂಕ್ತೋದಿತನೆ | ಚೆನ್ನ ತೈಜಸನಾಗಿಇನ್ನು ಪೇಳ್ದಂಕಿತವ | ಕನ್ಯೆ ಗಿತ್ತಿಹನೋ 1 ಪತಿಸೇವೆ ದೊರಕಿಸುತ | ಪತಿವ್ರತೆಯಳೆಂದೆನಿಸಿಅತುಳ ವೈಭವ ತೋರಿ | ಹಿತದಿಂದ ಪೊರೆಯೋವ್ರತತಿ ಜಾಸನ ಪಿತನೆ | ಗತಿಗೋತ್ರ ನೀನೆನಿಸಿಸುತೆಸಮಳ ಪೊರೆವುದಕೆ | ಮತಿ ಮಾಡೊ ಹರಿಯೇ 2 ತಾರತಮ್ಯ ಜ್ಞಾನ ಮೂರೆರಡು ಭೇದಗಳಸಾರತತ್ವಗಳುರುಹಿ | ಸಾರತಮ ನಿನ್ನಾಪಾರುಗಾಣದ ಮಹಿಮೆ | ಚಾರುಕೀರ್ತಿಸುವಂತೆತೋರೊ ಸನ್ಮಾರ್ಗವನು | ವಾರಿನಿಧಿ ಶಯ್ಯಾ 3 ಹರಿಗುರೂ ಸದ್ಭಕ್ತಿ | ಹಿರಿಯರಲಿ ಆಸಕ್ತಿಸರ್ವ ಕಾರ್ಯವು ಹರಿಯ ವರಸೇವೆಯೆಂಬಾವರಮತಿಯ ಕರುಣಿಸುತ | ಹರಿಯು ತಾನಿತ್ತುದನಹರುಷದಲಿ ಉಂಬಂಥ | ಅರಿವು ಕೊಡು ಸತತ 4 ಭಾವಜಾರಿಯ ತಾತ | ಪಾವಮಾನಿಯ ಪ್ರೀತಕೇವಲಾನಂದಮಯ | ಜೀವ ಪರತಂತ್ರಾಈ ವಿಧವು ಇರಲಾಗಿ | ನೀವೊಲಿಯಲಿನ್ಯಾರುಕಾವರನು ಕಾಣೆ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ತ್ರಾಹಿತ್ರಾಹಿ ಮಂತ್ರಾಲಯನಿಲಯ ಪ ತ್ರಾಹಿತ್ರಾಹಿ ಮಂತ್ರಾಲಯ ಗುರುವೆ ಸೂತ್ರನಪಿತಕೃಪಾಪಾತ್ರ ನೀನಹುದೊ1 ಧ್ಯಾನ ಮೌನ ಸುಜ್ಞಾನವಿಲ್ಲದಿಹ ದೀನ ಜನರುದ್ಧಾರ ಗಂಭೀರ 2 ವಸುಧೆಯೊಳಗೆ ದಶಪ್ರಮತಿ ಸುಶಾಸ್ತ್ರವ ಪ್ರಸರಿಸಿ ತೋರಿದ ಅಸಮಮಹಿಮನೆ3 ಮೂಕ ಬಧಿರ ಅಂಧಾದಿಗಳ ಕುಂದುಗಳ ವ್ಯಾಕುಲ ಹರಿಪ ಕೃಪಾಕರ ಮೂರ್ತೇ 4 ಕರುಣಶರಧಿ ಸಿರಿರಮಣನ ಭಕುತಾಗ್ರಣಿ ಸುಗುಣಗಣಾಭರಣಕೆಣೆಯೆ 5 ಬೇಡಿದಿಷ್ಟವ ನೀಡಿ ಕಾಪಾಡುವೆ ಈಡುಗಾಣೆ ನಿನಗೀ ನಾಡೊಳು ಇನ್ನು 6 ಇಂದು ಮುಂದು ಎನ್ನ ಕುಂದುಗಳೆಣಿಸದೆ ಕಂದನೆಂದು ಎನ್ನ ಮುಂದಕೆ ಕರೆಯೊ 7 ಕ್ಷೋಣಿಯೊಳಗೆ ನಿನಗಾರೆಣೆಕಾಣೆನೊ ವೀಣೆವೆಂಕಟ ನೀ ಸಂಕಟ ಹರಿಸೊ 8 ಪಾಲಿಸಯ್ಯ ಪ್ರಹ್ಲಾದ ವ್ಯಾಸ ಭೂ ನಲ್ಲ ನೀನಹುದೋ ಬಾಹ್ಲೀಕ ಪ್ರಭುವೇ 9 ಬಗೆ ಬಗೆ ಪಾಪೌಘಗಳನು ಕಳೆಯುವ ರಘುಪತಿಕಿಂಕರ ಶ್ರೀ ರಾಘವೇಂದ್ರ 10 ಪವನಾಂತರಾತ್ಮ ಶ್ರೀ ವೇಂಕಟೇಶ ಪದ ಕುವಲಯಕೆ ನೀ ಕುಮುದಬಾಂಧವ 11 ಶಂಕುಕರ್ಣ ಲಂಕೇಶನನುಜ ಶ್ರೀರಾಮ- ಕಿಂಕರನಕಳಂಕಮೂರುತೇ12 ಮರುತಮತಾಬ್ಧಿಯ ಸಾರಸುಧೆಯನಿತ್ತೆ ಉರಗಾದ್ರಿವಾಸವಿಠಲನ ದೂತ13
--------------
ಉರಗಾದ್ರಿವಾಸವಿಠಲದಾಸರು
ನಮೋ ನಮೋ ಸುಶೀಲೇಂದ್ರ | ಗುರುವರಿಯ ವೈಷ್ಣವ ಸುಮತವಾರಿಧಿ ಚಂದ್ರ | ಸಕುವಿ ಸಂಸ್ತುತ | ಅಮಿತ ಸದ್ಗುಣ ಸಾಂದ್ರ || ಸುಮತಾಹಿವೀಂದ್ರ ಪ ನಮಿಪ ಜನರಿಗೆ ಅಮರ ಭೂರುಹ ಸಮಸುಖಪ್ರದ ವಿಮಲ ಚರಿತನೆ ಯಮಿವರ್ಯ ಸುವೃತೀಂದ್ರ ಮಾನಸ ಕಮಲರವಿ ಮಹಿ ಸುಮನಸಾಗ್ರಣಿ ಅ.ಪ ಅಸಮ ಮಹಿಮೋದರ | ತವಸುಪ್ರಭಾವವ ಸುಜನ ವಂದಿತ ಸ್ವಶನ ಸುಮತೋದ್ಧಾರ || ದಯ ಪಾರವಾರ || ವಸುಧೆಯೊಳು ಮೊರೆಹೊಕ್ಕ ಜನರಿಗೆ ಕುಶಲಪ್ರದ ನೀನೆಂದು ಬುಧ ಜನ ಉಸುರುವದು ನಾ ಕೇಳಿ ನಿನ್ನ ಪದ ಬಿಸಜ ನಂಬಿದೆ ಪೋಷಿಸನುದಿನ 1 ದೀನಜನ ಸುಖದಾತ | ಸುಕೃತೀಂದ್ರ ಕೋಮಲ ಬಾಣಲೋಕ ವಿಖ್ಯಾತÀ || ದ್ವಿಜಕುಲಕೆ ನಾಥ || ಕ್ಷೋಣಿಯೊಳು ನೀ ಒಲಿದ ಮಾತ್ರದಿ ಮೌನಿವರ್ಯ ಶ್ರೀ ರಾಘವೇಂದ್ರರು ಸಾನುರಾಗದಿ ಸಲಹುವರು ಪವ ಮಾನ ಶಾಸ್ತ್ರ ಪ್ರವೀಣ ಜಾಣ 2 ಪಿಂಗಲೇಂದ್ರ ಪ್ರಕಾಶ | ಸುಪವಿತ್ರ ವರದತ ರಂಗಿಣಿ ತಟವಾಸ | ಸದ್ಧರ್ಮ ಸ್ಥಾಪಕ ಮಂಗಳಾಂಗ ಯತೀಶ | ಪಾಪೌಘನಾಶ || ತುಂಗವಿಕ್ರಮ ಶಾಮಸುಂದರನಂಘ್ರಿ ಕಮಲಕೆ ಭೃಂಗ ಭವಗಜಸಿಂಗ ಕರುಣಾ ಪಾಂಗದೀಕ್ಷಿಸೆ ಇಂಗಿತಜ್ಞರ ಸಂಗಪಾಲಿಸು 3
--------------
ಶಾಮಸುಂದರ ವಿಠಲ
ಪಶುಪತಿ ಬಂದ ಆನಂದದಿಂದ ಪ ಶಶಿಧರ ಶಂಕರ ಸುರಗಂಗಾಧರ ಅಸಮ ಸುಶೋಭಿತ ಜಟಾಜೂಟಧರ ಅ.ಪ ಕರÀದಿ ಧರಿಸಿದ ಡಮರುಗ ತ್ರಿಶೂಲ | ಸುಂದರವಾದ ವರಸಾರಂಗ ಸರಸಿಜಭವ ಕಪಾಲ | ಕೊರಳಲಿ ನೋಡೆ ಧರಿಸಿದ ಬಹುಪರಿ ರುಂಡಮಾಲಾ | ಕಿಡಿಗಣ್ಣಿನ ಫಾಲಾ ಗರಳಕಂಠ ಕರಿವರ ಚರ್ಮಾಂಬರ ಸ್ಮರ ಮದಪರಿಹರ 1 ರಜತಾಚಲ ಮಂದಿರವಾಸ | ಮಹೇಶ ಶಿವಕೃತ್ತಿವಾಸ ಭುಜಗಭೂಷಣ ಶೋಭಿತ ವರವೇಷ | ಭಕ್ತರ ಪೋಷ ಗಜಮುಖ ಜನಕ ಭೂತ ಗಣೇಶ ಪಾಪೌಘ ವಿನಾಶ ಕುಜನಾವಳಿ ಮದಗಜ ಮೃಗರಾಜನು ಸುಜನಜಾಲ ಪಂಕಜಹಿತ ದಿನಮಣಿ 2 ಸುರವರನಮಿತಚರಣನು ಬಂದ | ಶೋಭಿತವಾದ ಪರಿಪರಿ ಚಿತ್ರ ಭೂಷಣನು ಬಂದ | ಕೋರಿದವರ ಕರೆದೀವ ಕರುಣಾಭರಣನು ಬಂದ | ತಾನೊಲವಿಂದ ಚರಣ ಶರಣರಘ ಪರಿಹರಗೈಸುವ ಪುರಹರ ಶಂಕರ 3
--------------
ವರಾವಾಣಿರಾಮರಾಯದಾಸರು
ಶುಭ ಯೋಗಿ ಪುಂಗಗೆ | ಮಂಗಳಂ ಪಾಪೌಘ ಭಂಗಗೆ | ಮಂಗಳಂ ಯಾಳಗಿಯ ದೊರೆ ರಾಮಲಿಂಗನಿಗೆ ಪ ಮೋದದಲಿ ದತ್ತಾವಧೂತನು ಪೇಳಿದನು ಶ್ರೀಕಪಿಲ ಮುನಿವರ |ಗಾಧಿಯಂ ಮಣಿಚೂಲ ಶೈಲದ ಗುಹದಿ ತಪಮಾಡಿ ||ಮೇದಿನಿಯ ಜನರಿಂಗೆ ಸಹಜದಿ ವೇದ ವೇದಾರ್ಥವನು ಬೋಧಿಸಿ |ಭೇದ ಬುದ್ಧಿಯ ಬಿಡಿಸಿ ಕೃಪೆಯನು ಮಾಡಿ ಪೊರೆ ಎಂದು 1 ಕಪಿಲಮುನಿ ಲಿಂಗಾಂಬಿಕೆಗೆ ತಾ ಸ್ವಪ್ನದಲಿ ಪೇಳಿದನು ನಿಶ್ಚಯ |ಅಪರಿಮಿತ ವರ ಕೊಡುವ ಬೆಟ್ಟದ ರಾಮಲಿಂಗೇಶ ||ತಪವು ಮಾಡಲು ಕೊಡುವ ನೀ ತಪವು ಮಾಡೆಂದು ಪೇಳಿದ |ಗುಪಿತ ಮೂಲವ ತೋರಿ ಬೋಧಿಸಿ ಸುಖವ ಪಡೆ ಎಂದ 2 ಮೊದಲು ಲಿಂಗಾಂಬಿಕೆಯು ಮನದಲಿ ನೆನೆದು ಬೆಟ್ಟದ ರಾಮಲಿಂಗನ | ಪದುಳದಿಂ ಸೇವಾ ಪ್ರದಕ್ಷಿಣೆ ಭಕ್ತಿಭಾವದಲಿ |ಮುದದಿ ಪ್ರಾರ್ಥಿಸೆಗೈದು ಎನ್ನಗೆ ಸುತನ ಕೊಡಬೇಕೆಂದು ಪ್ರಾರ್ಥಿಸೆ | ಸದಮಲಾತ್ಮರಾಮಲಿಂಗನು ಜನಿಸುತಿಹನೆಂದ 3 ಸತಿ ಲಿಂಗಾಂಬೆ ಗರ್ಭದೊಳುಪಾವನಾತ್ಮಕ ಜನಿಸಿ ಬೆಳೆದುದ್ದಾಮ ಆನಂದಾಭ್ಧಿಯೊಳು ಸ- |ದ್ಭಾವದಿಂ ಮಣಿಚೂಲ ಶೈಲದಿ ತಪವನೆಸಗಿದಗೆ 4 ಕೆಲವು ದಿನ ಮಣಿಚೂಲ ಶೈಲದ ಗುಹೆಯೊಳಗೆ ತಪಗೈಯುತಿರೆ ಶ್ರೀಮಲಹರಿಯು ಪ್ರತ್ಯಕ್ಷರೂಪದಿ ಮಂತ್ರ ಬೋಧಿಸಿದ ||ಚೆಲುವ ರಾಮಪ್ಪಯ್ಯ ಮನದಲಿ ಹರುಷವಂ ಕೈಕೊಂಡು ಸಿದ್ಧಿಯಫಲವ ಪಡೆದನು ಮಂತ್ರ ಮಹಯೋಗಾದಿ ಸಿದ್ಧಿಗಳ 5 ಗೌತಮಾನ್ವಯದಲ್ಲಿ ಜನಿಸಿ ಸುಕೀರ್ತಿ-ಪಡೆದಪ್ಪಯ್ಯ ಗುರುವರ |ಮಾತು ಮಾತಿಗೆ ರಾಮಲಿಂಗನ ನೆನೆ ನೆನೆದು ಮನದಿ ||ಸಾತಿಶಯ ಮಣಿಚೂಲ ಶೈಲವ ಸೇರಿ ಕಂಡಿಹ ರಾಮಲಿಂಗನ |ಮಾತು ತಿಳುಹಿಸಿ ಗ್ರಹಕೆ ಕರಕೊಂಡು ಬಂದಿಹಗೆ 6 ಪರಮ ತಾರಕ ಮಂತ್ರ ಕರ್ಣದೊಳೊರೆದ ಗುರು ಅಪ್ಪಯ್ಯ ಮೂರ್ತಿಯ | ಚರಣವನು ಧ್ಯಾನಿಸುತೆ ಮಹಾ ವಾಕ್ಯಾರ್ಥ ಶೋಧಿಸಿದ | ಪರಿಪರಿಯ ವೇದಾರ್ಥವನು ಬಹು ಹರುಷದಿಂ ಶಿಷ್ಯರಿಗೆ ಬೋಧಿಸಿ | ನಿರುತ ಬ್ರಹ್ಮಾಕಾರ ವೃತ್ತಿಯೊಳಿರುವ ಶರಣಂಗೆ 7 ಪಂಚಲಿಂಗವು ಪಂಚ ತೀರ್ಥಗಳುಳ್ಳ ಯಾಳಗಿ ಕ್ಷೇತ್ರದಲಿ ಪ್ರ- |ಪಂಚವನು ಪರಮಾರ್ಥ ಬುದ್ಧಿಯಲಿಂದ ನೆರೆಗೈದು ||ವಂಚನಿಲ್ಲದ ರಾಮಲಿಂಗ ವಿರಂಚಿ ಭಾವದೊಳಿರ್ದು ಜನರಿಗೆಹಂಚಿಕೆಯ ಪೇಳಿದನು ಇಲ್ಲಿಗೆ ಗಂಗೆ ಬರುತಿಹಳು 8 ಇಂದು ವೇದ ರಸೈಕ ಶಕದ ವಿಕಾರಿವತ್ಸರ ದಕ್ಷಿಣಾಯನ |ಛಂದದಾಶ್ವೀನ ಶುದ್ದ ಸಪ್ತಮಿ ಸೌಮ್ಯ ವಾಸರದಿ ||ಸುಂದರದ ಜ್ಯೇಷ್ಠರ್ಕ ವೃಶ್ಚಿಕ ರಾಶಿ ಶುಭದಿನ ತೃತಿಯ ಪ್ರಹರದಿಹೊಂದಿದನು ಸುಸಮಾಧಿ ಸುಖವನು ರಾಮಗುರುವರನು 9 ಸುರರು ಅಂಬರಕೇರಿ ಪುಷ್ಪದ ಮಳೆಯ ಸುರಿದರು ಹರುಷದಿಂದಲಿಪರಮ ವಿಸ್ಮಯವಾಗೆ ಸುರದುಂದುಭಿಯ ಧ್ವನಿಕೇಳಿ || ಹರುಷ ದಿಂದಲಿ ಶಿರವ ನಲಿಯುತ ದೇವ ಗಣಿಕೆಯರು ನೃತ್ಯ ಮಾಡುತ ತರ ತರದಿ ಜಯ ಘೋಷ ಮಾಡುತ ಜನ ಸಹಿತವಾಗಿ 10|| ಜಯ ಜಯತು ಜಯ ನಿರ್ವಿಕಾರಗೆ ಜಯ ಜಯತು ಜಯ ನಿರ್ವಿಶೇಷಗೆ | ಜಯ ಜಯತು ನಿಃಸೀಮ ಪರಮಾನಂದ ರೂಪನಿಗೆ || ಜಯ ಜಯತು ಭಕ್ತಾಭಿಮಾನಿಗೆ ಜಯ ಜಯತು ಮಹ ಸಿದ್ಧ ವರದಗೆ | ಜಯ ಜಯತು ಸಿಂಧಾಪುರದ ಸಖರಾಮ ಗುರುವರಗೆ 11
--------------
ಗುರುರಾಮಲಿಂಗ
ಶ್ರೀ ಕೃಷ್ಣವೇಣಿ ಕಲ್ಯಾಣೀ ಪಂಕಜಾಸನ ಸ್ವೀಕೃತ ಬುಧ ಶ್ರೇಣೀ ನೀ ಕೃಪೆÉಯಿಂದ ಮಹಾಕೃತು ಹರಿಯ ನಿ ಜಾಕೃತಿ ತೋರ್ದೂರಿಕೃತ ದುರಿತೇ ಪ ಸುಜನ ಮಾತೆ ಶಮಲ ಸಂಕೂಲ ನರ್ಧೂತೆ ಸುಮನಸ ಜನ ಸನ್ನುತೆ ಸನ್ಮೋದ ದಾತೆ ವಿಮಲ ಸದ್ಗುಣ ಸಂಭೃತೆ ನಮಿಸುವೆ ತ್ವತ್ಪದÀ ಕಮಲಯುಗಳಿಗನು ಪಮ ಸುಂದರೆ ಭ್ರಮೆಗೊಳಿಸುವ ದುರ್ಮಮ ಕಳೆದು |ಸೋ ತ್ತಮರ ಪದಾಬ್ಜಕೆ ಭ್ರಮರನೆನಿಸಿ ಮಾರಮಣನ ದುಹಿತ್ರೆ 1 ಮದಗಜಯಾನೆ ಪಿಕಗಾನೆ ಉಭಯಾನೆ ಮಾನಿನಿ ಮದನಾರಿ ಜಟಜಸೊನೆ ಪಾಪೌಘದಹನೆ ಮುದವ ಕೊಡು ಎಮಗೆ ನಿ ೀನೆ ಮದಡನರನು ಒಂದು ದಿನ ಮಜ್ಜನವ ವಿಧಿಸೆ ಶರೀರದಿ ಹುದುಗಿದ ಪಾಪಗಳುದುರಿಸಿ ಕಾಲನ ಸದನವ ಹೋಗಗೊಡದುದಧಿ ಮಥನ ಪದ ಪದುಮವ ತೋರ್ಪೆ 2 ನೀಲ ಪುನತ ಹೃತ್ಕುಮುದಾ ಭೇಶೇ ಅನುದಿನ ಪೂರೈಸೇ ಜನನಿಯೆನ್ನ ದುರ್ಗುಣವೆಣಿಸದೆ | ಮಾ ತನು ಲಾಲಿಸು ಸುಹೃದ್ವನರುಹದಲಿ ಶ್ರೀ ವನತೆಯರಸ ಜಗನ್ನಾಥ ವಿಠಲನ ಅನವರತ ನಿಲಿಸು ಘನ ಮಾಂಗಲ್ಯೇ 3
--------------
ಜಗನ್ನಾಥದಾಸರು
ಶ್ರೀ ಶ್ರೀಪಾದರಾಜರು ಕಾಪಾಡು - ಕಾಪಾಡು ಶ್ರೀ ಪಾದರಾಯ ಪ ಪಾಪೌಘಗಳನಳಿದು ಶ್ರೀಪತಿಯ ತೋರೀ ಅ.ಪ. ನಾಡಿನೊಳು ಪೆಸರಾದ ಮೂಡಲಾದ್ರಿಗೆ ಪೋಪಮೂಡಬಾಗಿಲ ಕಾಯ್ವ ಪ್ರಾಣನಾಶ್ರಯಿಸೀ |ಮೂಡಬಾಗಿಲ ಪುರದಿ ನರಸಿಂಹ ಕ್ಷೇತ್ರದಲಿ |ಈಡು ಇಲ್ಲದೆ ಮೆರೆವ ಯತಿ _ ಸಾರ್ವಭೌಮಾ 1 ಹತ್ತಾರು ನಾಲ್ಕಾದ ಶಾಕಪ್ರತಿ ದಿನದಲ್ಲಿಉತ್ತಮೋತ್ತಮಗಿತ್ತು ಉಂಬ ಮಹಿಮಾ |ಕೃತ್ರಿಮ ಸ್ವಭಾವ ನೃಪ ಪರಿಕಿಸಲು ಪೋಗೆ ಹರಿಮತ್ತೊದಗಿಸಿದ ವ್ಯಾಳ್ಯಕ್ಕೆ ಹರಿಕೃಪಾ ಪಾತ್ರ 2 ವಿಪ್ರ ಬ್ರಹ್ಮತ್ಯವನು ಶಂಖದುದಕದಿ ಕಳೆಯೆಅಪ್ರಬುದ್ಧರು ನಗಲು ಗೆರೇಣ್ಣೆ ವಸನಾ |ಕ್ಷಿಪ್ರ ಶುದ್ದಿಯಗೈದೆ ಪ್ರೋಕ್ಷಿಸುತ ಶಂಖದಲಿಅಪ್ರಮೇಯನ ಕರುಣ ನಿನ್ನೊಳೆಂತುಂಟೋ 3 | ಅಹವು ರಾತ್ರಿಗಳಭಿಧ ಆದಿತ್ಯ ಸಂಸ್ಥಿತನುಅಹರ್ನಿಶೀ ನರನಾಡಿ ಸ್ಥಿತನಾಗಿಹಾ |ಬೃಹತಿ ನಾಮಕಗನ್ನ ಋಗ್ರಹಸ್ಯವನರುಪಿಬೃಹತಿ ಸಾಸಿರಗಳಿಪ ಸಂಧಾನವಿತ್ತೂ 4 ವಾದಿಗಳ ಎದೆಶೂಲ ವಾದ ಗ್ರಂಥದಿ ಪೂರ್ಣಬೋಧ ಶಿಷ್ಯರ ಹಿತವ ಕಾದು ಜಗದೀ |ವೇದ ವೇದ್ಯನು ಗುರು ಗೋವಿಂದ ವಿಠ್ಠಲನಪಾದ ಧೃವ ಧ್ಯಾನದಲಿ ಮೆರೆಯುತಿಹ ಗುರುವೇ 5
--------------
ಗುರುಗೋವಿಂದವಿಠಲರು
ಶ್ರೀಶೈಲದೊಳಗಿಪ್ಪ ಸ್ವಾಮಿ ಪುಷ್ಕರಣಿ ಇತಿ ಹಾಸವ ದಿಲೀಪನೃಪ ಬೆಸಗೊಳಲು ಕೇಳಿ ದು ಕೇಳಿ ಸಂತೋಷಿಸುವುದು ಪ ಮುನಿಕುಲೋತ್ತಮ ನೆನಿಸಿ ದುರ್ವಾಸಋಷಿ ದಿಲೀ ಪನ ಸದನವೈದಿರಲು ಕೇಳಿ ಸಂತೋಷದಲಿ ಮುಗಿದು ವಿಜ್ಞಾಪಿಸಿದನು ಋಷಿಗೆ ಅನಿಮಿಷೇಶಾ ವೆಂಕಟನ ನಾಮಧೇಯ ಕುಂ ಭಿಣಿ ಯೊಳಿಪ್ಪಾಖ್ಯಾನ ತೀರ್ಥಗಳ ವೈಭವಗ ದುರ್ವಾಸ ಪೇಳೊದಗಿದಿ 1 ಕೇಳು ರಾಜೇಂದ್ರ ವೆಂಕಟ ಪರ್ವತನು ಮೇರು ಶೈಲಾತ್ಮಜನು ವಾಯು ಶೇಷರ ಸುಸಂವಾದ ಸ್ವರ್ಣ ಮುಖರೀ ತೀರದಿ ಬೀಳಲ್ಕೆ ನೊಂದು ಪ್ರಾರ್ಥಿಸಿದ ಶೇಷನು ಎನ್ನ ಮ್ಯಾಲೆ ಮಲಗಿಪ್ಪ ತೆರದಂತೆ ದಯದಿಂ ನೀನೆ ಶೇಷಾದ್ರಿಯೆನಿಸುತಿಹುದು 2 ಈ ನಗೋತ್ತಮದಾದಿ ಮಧ್ಯಾವಸಾನ ಪ್ರ ಸೂನು ಫಲ ಸಂಯುಕ್ತ ಸಾನುಗಳ ಸುರುಚಿಕೋ ಪುಷ್ಕರಣಿ ತೀರ್ಥದ ತಟದಲಿ ಶ್ರೀನಿವಾಸನು ಬಂದು ನಿಂತ ಕಾರಣವೆನಗೆ ನೀನರುಪುವುದು ಯೆಂದು ಬೆಸಗೊಳಲು ದುರ್ವಾಸ ನೃಪಗೆ ಹರುಷೋದ್ರೇಕದಿ 3 ತೀರ್ಥೋತ್ತಮತ್ವ ಸಾಪೇಕ್ಷಿಯಿಂದಲಿ ಬ್ರಹ್ಮ ಪತ್ನಿ ಪೂರ್ವದಲಿ ಬ್ರಹ್ಮಾವರ್ತ ದೇಶದೊಳ ಪುಲಸ್ತಾಖ್ಯ ಮುನಿಪ ತತ್ತೀರದಲಿ ತಪವಗೈವೆನೆಂದೆನುತ ಬರೆ ಪುತ್ರನೆಂದರಿದು ಮನ್ನಿಸದಿರಲು ಕೋಪದಲಿ ನಿಷ್ಫಲವಯೈದಲೆಂದು ನುಡಿದ 4 ನದ್ಯೋತ್ತಮತ್ವ ಜಾಹ್ನವಿಗಿರಲಿ ಗುಣಗಳಿಂ ಸ್ವರ್ಧುನಿಯು ನೀಚಳಾದರೆಯು ಸರಿ ಲೋಕ ಪ್ರ ಪಾದ ಪ್ರಸಾದದಿಂದ ವಾಗ್ದೇವಿ ನುಡಿಗಳು ಭ ವದ್ವಂಶರೆಲ್ಲ ರಾಕ್ಷಸರಾಗಿ ಬಹಳ ವಿ ಪದಕೆರಗಿ ಬಿನ್ನೈಸಿದ 5 ಅನಭಿಜ್ಞ ಲೋಕೋಪಕಾರ ತಪವೆಂದರಿಯ ದನುಚಿತೋಕ್ತಿಗಳನಾಡಿದೆ ಮಯಾಕೃತದೋಷ ಮುನಿವರನು ಸಂಪ್ರಾರ್ಥಿಸೆ ಪುನರಪಿ ವಿಶಾಪವಿತ್ತಳು ಪ್ರಸನ್ಮುಖಳಾಗಿ ಜನಿಸಲೀ ಭವದ ಪ್ರಾಂತಕ್ಕೆವರ ವಿಭೀ ಭಗವದ್ಧ್ಯಾನಪರಳಾದಳು 6 ತೀರ್ಥೋತ್ತಮತ್ವ ಸಾಪೇಕ್ಷಯಿಂ ವಾಗ್ದೇವಿ ಮತ್ತು ತಪದಿ ಪ್ರೀತಿಗೊಳಿಸಲ್ಕೆ ದೇವದೇ ಬಿನ್ನೈಸಿದಳು ವಾಂಛಿತವನು ವ್ಯರ್ಥವಾಯಿತು ತಪವು ಬಹ್ಮ ಶಾಪದಲಿ ತೀ ರ್ಥೋತ್ತಮತ್ವವು ಕರುಣಿಸೆಂದು ಕೇಳ್ದುದಕೆ ಪ್ರ ಇನಿತೆಂದು ಕಾರುಣ್ಯಸಿಂಧು 7 ನದಿಯರೂಪಕೆ ಬ್ರಹ್ಮಶಾಪ ನಿನಗಾಯಿತ ಲ್ಲದೆ ಸರೋವರಕೆ ಬ್ಯಾರಿಲ್ಲ ಪುಷ್ಕರಣಿಗಳೊ ಸ್ವಾಮಿ ಪುಷ್ಕರಣಿ ಎನಿಸಿ ವಿಧಿಪತ್ನಿ ಶೇಷನೋದ್ದೇಶ ತ್ವತ್ ಸನ್ನಿಧಾ ನದಿ ವಾಸವಾಹೆ ಸಂದೇಹವಿಲ್ಲಿದಕೆ ಸ ಸಜ್ಜನರಿಗಖಿಳಾರ್ಥವೀವೆನೆಂದ 8 ಮೂರುವರೆ ಕೋಟಿ ತೀರ್ಥಗಳು ಭುವನತ್ರಯದೊ ಳಾರಾಧಿಸಿದರೆಯೆನ್ನ ಸ್ವಸ್ವ ಪಾಪೌಘ ಪರಿ ಧನುರ್ಮಾಸ ಸಿತಪಕ್ಷದ ಈರಾರುದಿನದಲರುಣೋದಯಕೆ ತೀರ್ಥ ಪರಿ ವಾರನೈದಿರಿ ಶುದ್ಧರಾಗುವಿರಿಯೆಂದು ತ ಪ್ರೇಷ್ಯತ್ವ ವಾಣಿಗಿತ್ತ 9 ವಾಣಿದೇವಿಯು ತೀರ್ಥರೂಪಳಾಗಲು ಕೃಷ್ಣ ವೇಣಿಸಮ ಬಕುಳ ಮಾಲಿಕೆ ತೀರ್ಥ ಭೂಮಾಭಿ ಹರಿಗೆ ನೈವೇದ್ಯರಚಿಸಿ ಪಾನೀಯ ಧೀ ಭೋಗ ಪತ್ನಿ ಪೂರ್ವದಿ ಸನ್ನಿ ಧಾನದಲ್ಲಿಪ್ಪೆನೆಂದೆನುತ ಪ್ರಾರ್ಥಿಸೆ ಶೇಷ ತಾನಿತ್ತ ಕಮಲಾಕಾಂತನು 10 ಸ್ವಾಮಿ ಪುಷ್ಕರಣಿ ನವತೀರ್ಥಮಾನಿಗಳಿಗೆ ಸು ಧಾಮವೆನಿಸುವಳು ತತ್ತನ್ನಾಮಗಳು ಪೇಳ್ವೆ ಅಗ್ನಿಯನು ಋಣವಿಮೋಚನಿ ಈ ಮಹಾ ವಾಯು ತೀರ್ಥಗಳ ಸುಸ್ನಾನಲ ಕ್ಷ್ಮೀ ಮನೋಹರನ ದರುಶನ ತತ್ವ್ರಸಾದಾತ್ರ ಅಲ್ಪಾಧಿಕಾರಿಗಳಿಗೆ 11 ಕವಿಭಿರೀಡಿತ ಪೂಜ್ಯನೆನಿಸುವನು ಪದ್ಮಸಂ ಭವನು ಪೂಜಕನೆನಿಪ ನೈವೇದ್ಯಕರ್ತೃ ಭಾ ಶರ್ವಶಕ್ರಾರ್ಕ ಮುಖ್ಯ ದಿವಿಜಗಣವಿಹರೆಂದು ಚಿಂತಿಸದೆ ಮರೆದು ಮಾ ನವರೆ ವರ್ತಿಪರೆಂದು ತಿಳಿವವನು ಘೋರ ರೌರವ ಧರಾತಳದೊಳೆಂದ 12 ಮೇರುನಂದನ ವೈಕುಂಠಾದ್ರಿಶತಯೋಜನದ ಮೇರೆಯೊಳು ಪುಣ್ಯತೀರ್ಥಗಳಿಪ್ಪವಲ್ಲೆಲ್ಲ ಮುಖ್ಯಾಮುಖ್ಯ ಭೇದದಿಂದ ನೂರೆಂಟು ತೀರ್ಥಗಳು ಮುಖ್ಯವೆನಿಸುವುವಿದರೊ ಳಾರುತ್ತಮೋತ್ತಮವುಗಳ ನಾಮ ಪೇಳ್ವೆನು ಕು ತುಂಬರ ಆಕಾಶಗಂಗ 13 ವಸುರುದ್ರ ಕಾಣ್ವಗ್ನಿ ಮನ್ವಿಂದ್ರಯಮ ಸೋಮ ಬಿಸರುಹ ಪ್ರೀಯ ನವಪ್ರಜ ಆಶ್ವಿನಿಗಳು ಶುಕ ಜಗಜ್ಜಾಡ್ಯಹರ ಬಾರ್ಹಸ್ವತಿ ದಶಪ್ರಚೇತಸ ಗರುಡ ಶೇಷವಾಸುಕಿಯು ಹೈ ಬ್ಬಸುರ ನಾರದ ವೈಶ್ವದೇವ ಸ್ವಾಹಾಸ್ವಧಾ ಹಸ್ತಿ ನಾರಾಯಣಾದಿ ಪಂಚ 14 ಶಿವರೂಪಿ ದೂರ್ವಾಸ ಪೇಳ್ದನಿನಿತೆಂದು ಜಾ ಹ್ನವಿಯೊಳಬ್ದ ಸ್ನಾನಫಲ ಧನುರ್ಮಾಸದೊಳು ವಾಗ್ದೇವಿ ಶುಕ್ಲಪಕ್ಷ ದ್ವಾದಶಿ ದಿವಸದಿ ಶುಚಿರ್ಭೂತನಾಗಿ ಸಂತೋಷದಲಿ ವಿವರಾಗ್ರಜೋದಯದಿ ಸ್ನಾನವನು ಮಾಡೆ ಐ ಶಿಷ್ಯನೆಂದರಿದು ದಯದಿ 15 ನಾರದ ಮುನೀಂದ್ರನುಪದೇಶದಿಂ ದಕ್ಷನ ಕು ಮಾರಕರು ಸಾಹಸ್ರ ತಮ್ಮ ತಮ್ಮಾಶ್ರಮದ ದಾಕ್ಷಣ್ಯವೆನಿಸುತಿಹ್ಯದು ಭೈರವಾಷ್ಟ ತೀರ್ಥ ಸಿದ್ಧಿಪ್ರದಾಯಕ ಕು ಮಾರಧಾರಿಕ ಪಶ್ಚಿಮದಲಿಹವು ಎಂಟಧಿಕ ತೀರ್ಥಾದ್ರಿಯೆನಿಸುತಿಹುದು 16 ತಾ ತಿಳಿ ಪುದಿತಿಹಾಸ ಶೌನಕಾದ್ಯರಿಗೆ ವರ ಪುಷ್ಕರಣಿಮಹಿಮೆ ಪ್ರೀತಿಯಿಂದಲಿ ತಿಳಿದು ಪಠಿಸುವವರಿಗೆ ಜಗ ನ್ನಾಥ ವಿಠಲ ಮನೋವಾಂಛಿತಗಳಿತ್ತು ಪುರು ಹೂತ ಲೋಕದಲಿ ಸುಖಬಡಿಸಿ ಪ್ರಾಂತಕೆ ತನ್ನ ಪುರವನೈದಿಪ ಕೃಪಾಳು17
--------------
ಜಗನ್ನಾಥದಾಸರು
ಹರಿ ಹರಿ ಗೋವಿಂದ ಯನಬಾರದೇ ಪ್ರಾಣಿ ಪ ಹರಿ ಹರಿ ಗೋವಿಂದಯನಲು ಭಕುತಿಯಲಿ | ಹರಿಸುವ ಪಾಪೌಘವನು ಸಾರಂಗ ಪಾಣೀ 1 ವೃತ ತಪ ಸಾಧನದಿಂದಲೀ ನಿಲುಕದ ನಿಜಗತಿಯಾ| ಕ್ಷೀತಿಯೋಳು ಸುಲಭದಿ ಕೊಡುವನು ದೀನಾಭಿಮಾನಿ 2 ತಂದೆ ಮಹಿಪತಿ ಕಂದಗ ಸಾರಿದ ಯಚ್ಚರ ನೀ | ಛಂದದಿ ಇಹಪರ ನೀವದು ಯದುರಾಜ ಸ್ಮರಣೀ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಶ್ರೀಮತೇ ಶ್ರೀರಾಮಸೋದರಾ ಶ್ರಿತಜನಮಂದಾರ ಪಪಾಮರಪಾಪೌಘ ಪತಿತಬದ್ಧಜೀವೋದ್ಧಾರ ಶುಭಕರನಾಮನಿತ್ಯವಿಭೂತಿದಾಯಕಪ್ರೇಮನಿಧಿ ಭವಭೀತಿ ಪರಿಹರ 1ದಿವ್ಯ ಕಾಷಾಯಾಂಬರಾನ್ವಿತದೇವರಾಜ ಸುವಾಕ್ಯ ಮಾತುಸವ್ಯಸಾಚಿ ಸೂತ ನಿರ್ಮಿತಶಾಸ್ತ್ರಭಾಷ್ಯ ಪ್ರೋಕ್ತ ಯತಿವರ 2ದಂಡಿತಾಖಿಲ ಖಂಡಿತಾಪರಿಮಂಡಲ ತ್ರಿದಂಡ ಕರಗಳಮಂಡಿತಾ ವನಮಾಲ ತುಲಸೀಮೂಲದಾಸಯುತ ಶ್ರೀ ಭಾಷ್ಯಕಾರ 3
--------------
ತುಳಸೀರಾಮದಾಸರು