ಒಟ್ಟು 5 ಕಡೆಗಳಲ್ಲಿ , 3 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(2) ರಾಮಾನುಜರು ಬೇಡಿಕೊಂಬುವೆನು ನಿಮ್ಮ ರಾಮಾನುಜರೆ ಬೇಡಿಕೊಂಬುವೆನು ನಿಮ್ಮಾ ಪ ಪಾಡಿ ಹಿಗ್ಗುವ ಸುಖವ ಸಂತತ ಕಮಲ ಮಧ್ಯದೊ ಳಾಡುತೆನ್ನನು ರಕ್ಷಿಸೆನುತಲಿ ಅ.ಪ ಚರಮ ಶ್ಲೋಕವ ಬೋಧಿಸಿ ಅಷ್ಟಾಕ್ಷರಿಯೊ ಳಿರುವ ಗೋಪ್ಯವ ತೋರಿಸಿ ಗೈವುತ ಪ್ರಣವ ಶಬ್ದದಿ ಬೆರಸಿ ನಿನ್ನನೆ ಭಜಿಸಿ ಸ್ಮರಿಸುತ ಪರಮನಾಗುವ ಮತಿಯ ತ್ವರಿತದಿ 1 ಅಷ್ಟಮದಗಳು ಎನ್ನನೂ ಬಂಧಿಸಿ ಮಾಯಾ ಅಷ್ಟಪಾಶದಿ ನೊಂದೆನೊ ದುಷ್ಟಕಾಮಾದಿಗಳ ಭ್ರಾಂತಿಯು ಕಟ್ಟ ನರಕದಿ ಕೆಡಹಿ ಸುಡುತಿದೆ ಭ್ರಷ್ಟಗುಣಗಳ ದೂರಸೇರಿಸಿ ಶ್ರೇಷ್ಠಮುಕ್ತಿಯ ಪಡೆವ ವಿರತಿಯ 2 ಜ್ಯೋತಿ ಜ್ಯೋತಿಯ ನಿಲ್ಲಿಸಿ ಹೂಬಳ್ಳಿಯೊಳ್ ಜ್ಯೋತಿನೋಡು ಪೂಜಿಸಿ ಮಾತೆ ಮಾತುಳ ಪಾಲಕಾನುಜ- ಸತಿ ಸುತ ಬಂಧು ಮಿತ್ರ ವ್ರಾತ ಸಂಗಡಬಂಧಬಿಟ್ಟು ಪು ನೀತನಾಗಲಿಬೇಕು ಎನುತಲಿ 3 ಯಾದವಾದ್ರಿಯ ವಾಸನೆ ಭಕ್ತರನೆಲ್ಲ- ಮೋದದಿಂದಲಿಯಾಳ್ವನೇ ಮೇದಿನೀಮಹದೇವಪುರವರ ನಾದಶ್ರೀಗುರುರಂಗ ನಿನ್ನ ಸು- ಪಾದನಂಬಿದ ರಂಗದಾಸನ ಪರಮಯೋಗಿಯು ಎನ್ನಿಸೆನುತಲಿ 4 ಅಷ್ಟಾಕ್ಷರದ್ವಯದರ್ಥದಿ ನಿಷ್ಠಾಪರನಾಗಿ ಮನದಿ ನಿರುತಂ ಜಪಿಸಲ್ ಇಷ್ಟಾರ್ಥವು ಸಿದ್ಧಿಸುತಂ ಅಷ್ಟಮನೋಳ್ಬೆರದುನಿಲ್ವನಿದು ಸಿದ್ಧಾಂತಂ ಕಂದ
--------------
ರಂಗದಾಸರು
ಗಾಳಿಗಿಟ್ಟ ದೀಪಕಾಣಿರೋ ಈ ಸಂಸಾರ ಗಾಳಿಗಿಟ್ಟ ದೀಪಕಾಣಿರೋ ಪ ಗಾಳಿಗಿಟ್ಟ ದೀಪಕಾಣಿರೋ ಬೀಳು ಜಗದ ಬಾಳು ಎಲ್ಲ ನೀಲಶಾಮನ ಪಾದನಂಬಿ ಕಾಲನಾಳಿನ ದಾಳಿ ಗೆಲಿಯಿರೋ ಅ.ಪ ಸೂತ್ರಬೊಂಬೆಯಂತೆ ಕುಣಿಯುವ ಈ ದೇಹವೆಂಬ ತುಂಬಿ ತುಳುಕುವ ಆ ಗಾಳಿ ನಿಮಗೆ ಸೂತ್ರಧಾರಿಯ ಭಜಿಸಿ ಭವದ ಯಾತ್ರೆ ಜಯವ ಪೊಂದಿರಯ್ಯ 1 ಮಾಯೆಯಿಂದ ಕಲ್ಪಿಸಿರುವ ಈ ಮಾಯಕಲ್ಪ ಮಾಯೆಯೊಳಗೆ ಲಯಿಸುತಿರುವ ಆ ಮಾಯಗಾರ ಮಾಯದಾಟ ಆಡುತಿರುವ ತಿಳಿರೋ ನಿಜವ ಮಾಯತುಂಬಿ ಮಾಯಬೆಳಗಿ ಮಾಯಜಗವೆನಿಸಿ ತೋರ್ಪ ಮಾಯಮಹಿಮನ ಮರೆಯಬಿದ್ದು ಮಾಯಮೃತ್ಯು ಗೆಲ್ಲಿರಯ್ಯ 2 ವಿಷಮಕನಸಿನಂತೆ ತೋರುವ ಈ ಇಂದ್ರಜಾಲ ಹಸನಗೆಡಿಸಿ ನಿಮಿಷದಡಗುವ ಈ ಹೇಯ ಮಲ ಅಸಮಸುಖಕೆ ಬೆಂಕಿಹಚ್ಚುವ ಪಾಪಕೊಂಡವ ಅಸಮಜ್ಞಾನದಿಂದ ದಾಂಟಿ ವಸುಧೆಗಧಿಕ ಶ್ರೀರಾಮಪಾದ ಕುಸುಮಕ್ಹೊಂದಿ ನಿರ್ಮಲೆನಿಸಿ ಎಸೆವಮೋಕ್ಷ ಪಡೆಯಿರಯ್ಯ 3
--------------
ರಾಮದಾಸರು
ನಿತ್ಯ ನಿರುಪಮ ನಿತ್ಯ ಎನ್ನ ಚಿತ್ತದಿ ನಿಲಿಸು ಪ ಮರವೆ ಮಾಯದೆ ಕೆಟ್ಟ ಪರದೆಯೋಳ್ಸದಾ ಬೆರೆದು ಶ್ವಾನಸೂಕರನಂತೆ ಚರಿಸಿದೆ ಧರೆಭೋಗ ನೆಚ್ಚಿ ನರಜನ್ಮ ವಿವರಿಸಿ ನೋಡದೆ ಮರುಳತನದಿ ನರಕಿಯಾದೆ 1 ಮೃತ್ಯುಗೀಡಾದೆ ತವಭೃತ್ಯನೆನಿಸದೆ ಸುತ್ತಿ ಸುತ್ತಿ ಇಹ್ಯಕೆ ಪರಕೆ ಕತ್ತೆಯಂತೆ ತಿರುಗಿ ತಿರುಗಿ ಮರ್ತು ನಿನ್ನ ಚರಣ ಮತ್ರ್ಯದಿ ನಿತ್ಯಸುಖವ ಪಡೆಯದ್ಹೋದೆ 2 ಆದದ್ಹಾಗಿಹೋಯಿತಭವ ವೇದಾಗಮ್ಯ ಪದುಮನಾಭ ಪಾದನಂಬಿದೆ ಪಾಲಿಸಿನ್ನು ಮೋದದೆನ್ನನೆತ್ತಿ ಶ್ರೀರಾಮ 3
--------------
ರಾಮದಾಸರು
ನಿನ್ನ ನೋಡಿ ಧನ್ಯನಾದೆನೋ ಓ ಲಕ್ಷ್ಮೀರಮಣಾಮನ್ನಿಸೆನ್ನ ಮರೆಯ ಹೊಕ್ಕೆನೊ ಪನ್ನಗೇಂದ್ರಶಯನ ನಿನ್ನಪಾದನಂಬಿದೆನ್ನ ಮನ್ನಿಸದೆಮರೆವರೇನೋ ಘನ್ನ ಓ ಶ್ರೀ ಕೃಷ್ಣಮೂರ್ತಿ ಪಲಾಲಿಸೆನ್ನ ಮಾತನೊಂದನೂಶ್ರೀಕೃಷ್ಣಮೂರ್ತಿ ಪಾಲಿಸೆನ್ನಪ್ರೀತಿಯಿಂದಿನ್ನೂ ಬಾಲಬುದ್ಧಿಯಿಂದ ಗೈದಹಾಳುಕೃತ್ಯವನ್ನು ಮರೆತು ಕಾಲನೊಶಕೆಕೊಡಿಸದೆನ್ನ ಪಾಲಿಸಯ್ಯ ಲಕ್ಷ್ಮೀರಮಣ 1ಒಡೆಯ ನೀನೆಂದೆಂಬುದರಿಯದೆಓ ಲಕ್ಷ್ಮೀರಮಣ ಮಡುವಧುಮುಕಿದಾನೆಯಂತಾದೆಒಡಲ ಸುಖವೆ ಬಯಸಿಗೈವಪಿಡಿದ ಮಡದಿ ಮಕ್ಕಳೆಂಬಕಡು ಮಮತೆಯಿಂದ ನಿನ್ನಅಡಿಯ ಭಜಿಸದಾದೆ ಕೃಷ್ಣಾ 2ಮೋಸಹೋದೆನಿನಿತು ತಿಳಿಯದೇ ಶ್ರೀಕೃಷ್ಣಮೂರ್ತಿಗಾಸಿಯಾದೆ ಮಾಯಾಕೊಳಗಾದೆಆಸೆ ಪಾಶಗಳಲಿ ಸಿಕ್ಕಿ ಈಸು ಸುಖವನಿನಿತು ಕಾಣೆಕೇಶವಾ ಗೋವಿಂದ ನಿನ್ನದಾಸನೆನಿಸೆ ಲಕ್ಷ್ಮೀರಮಣ 3
--------------
ಗೋವಿಂದದಾಸ
ಬಾರೋ ಮನೆಗೆ ಮಾಧವಾ | ದೇವರ ದೇವ |ಬಾರೋ ಮನೆಗೆ ಮಾಧವಾ ಪಬಾರೋ ಮನೆಗೆ ದಯಾ | ತೋರೋ ಎನಗೆ ಜೀಯಾ |ವಾರಿಜನಯನಾ ಓ | ಕ್ಷೀರಾಭ್ದಿ ಶಯನನೇ ||ಬಾರೋ|| 1ವೇದ ಗೋಚರ ನಿನ್ನಾ |ಪಾದನಂಬಿದ ಎನ್ನಾ |ಆದರಿಸೈ ಕರುಣೋದಯ ಮೂರುತೀ ||ಬಾರೋ|| 2ಸಿಂಧುವಸನದೀಶಾ | ಸುಂದರಾಂಗ ವಿಲಾಸ |ಇಂದಿರೆಯರಸ ಗೋ | ವಿಂದದಾ¸Àನ ನಂದಾ ||ಬಾರೋ|| 3
--------------
ಗೋವಿಂದದಾಸ