ಒಟ್ಟು 69 ಕಡೆಗಳಲ್ಲಿ , 32 ದಾಸರು , 59 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

3. ತಿರುವಂಗೂರು ಭೇರಿ ನಿಸ್ಸಾಳ ತಮ್ಮಟೆಗಳೆ ಗಿಡಿಮಡಿಯ ಭೋರೆಂಬ ವಾದ್ಯರವದಿ ಪ ಪರಾಕು ವಾರಿಸುವ ಪಾಠಕರ ಮೇಳದಿಂ ರಾಮನೂ ಅ.ಪ ಮುತ್ತು ನವರತ್ನ ಕೆತ್ತಿಸಿ ಬಿಗಿದಚಲ್ಲಣದ ಇತ್ತರದ ಸಮಕಟ್ಟಿನಾ ಝಲ್ಲಿಯಾ ಸುತ್ತ ಮುಖದಲಿ ಮಿನುಗುವರಳೆಲೆಯ ಢಾಳದಿಂ ದೊತ್ತಿಸಿದ ಕಡಿವಾಣದಾ ಮುಖಾರಂಬದಾ ಕತ್ತಿ ಸಿಂಗಾಡಿ ಕೆಡೆಯ ಬತ್ತಳಿಕೆ ಬಿಗಿ ದೊತ್ತಿ ಕುಣಿಕುಣಿದು ಬರುವಾ ತೇಜಿಯಾ ಅರ್ತಿಯಿಂ ರಾಮರಾವುತನೇರಿ ದೈತ್ಯವಿಪಿನಕ್ಕೆ ಪೊರಮಟ್ಟೈದಿದಾ ರಾಮನೂ 1 ಸುರರು ಫೌಜಾಗಿ ತೋರಲು ಸೋಮಸೂರಿಯರು ವರಛತ್ರವನುವಾಗಿ ಪಿಡಿದು ನಿಲಲೂ ಸರಸಿಜೋದ್ಭವನು ಸಾರಥಿಯಾಗಿ ನಡೆಸುತಿರೆ ವರರಥವ ಸಿಂಗರಸಿ ಹರಿ ಸ್ಮರಿಸಿ ತನ್ನಾ ವರವಾಹನವನೇರಿ ಚರಿಸುತುತ್ಸಾಹದಿಂ ತ್ವರದಿಂದ ನಡೆಯುತಿರಲೂ ಖರದೂಷಣ ತ್ರಿಶಿರ ಮಾರೀಚ ಮೃಗಕುಲವ ತರಿದು ಬೇಟೆಯನಾಡಿದಾ ರಾಮನೂ 2 ದಶಶಿರ ಕುಂಭಕರ್ಣ ಮೊದಲಾಗಿದ್ದ ಖ ಳರ ಖಂಡಿಸಿ ಕದನದಲ್ಲಿ ಗೆಲಿದೂ ಮರೆಹೊಕ್ಕ ವೀರವೈಷ್ಣವ ವಿಭೀಷಣನೆಂಬ ಶರಣನನು ಪರಿಪಾಲಿಸಿ ಜಗದೊಳೂ ಪರಿವುತಿಹ ಕಾವೇರಿ ಉತ್ತರದ ಭಾಗದಲಿ ಮೆರೆವ ತಿರುವಂಗೂರಿನಲೀ ಸುಖದಲೀ ಸ್ಮರರೂಪ ವೈಕುಂಠರಾಮ ಬೇಟೆಯನಾಡಿ ಪರಮ ಹರುಷದಿ ಬಂದು ನಿಂದ ಸಂಭ್ರಮದಿ 3
--------------
ಬೇಲೂರು ವೈಕುಂಠದಾಸರು
ನಾ ವಂದಿಸುವೆ ನಲಿದಾಡುವೇ ಪ ಪವಿತ್ರಳಾದೇ ನಿತ್ಯ ಪರಮಾತ್ಮನ ಕಂಡು ಕೃತಾರ್ಥಳಾದೇ 1 ವಜ್ರ ಮಂಟಪ ವೈಭವನೋಡಿದೆ ನೋಡಿ ಉಧೃತಳಾದೇ 2 ಸತ್ಯಧ್ಯಾನರು ಎತ್ತಿ ಮಾಡುವಂಥ | ಮಂಗಳಾರ್ತಿಯನೆ ಕಂಡೆನೇ ವಿಸ್ತರ ನೋಡಿದೆ3 ಕೊಂಡಾಡುವುದ ನಾ ಕೇಳಿದೆ ಹಿಂಡು ಪಡೆವುದ ನೋಡಿದೆ 4 ಮುಟ್ಟಿಪೂಜಿಸಿದ ಮೂರ್ತಿಯು ಮತ್ತೆ ಕುಬೇರನ ಅಳಕಾ ಪಟ್ಟಣವೇ ಪ್ರತ್ಯಕ್ಷ ಬಂದಿರುವುದಿಲ್ಲಿ 5 ಬೆಳ್ಳಿ ಭಂಗಾರದ ಮಿಳ್ಕೆ, ತಂಬಿಗಿ ಢಾಲಿಯನು ಕೈಯಲಿ ಜನರು ಕೊಂಡೊಯ್ವರು ಭಾಳಿರುವುದು 6 ಪ್ರತ್ಯಕ್ಷವೈಕುಂಠವೆನಿಪುದೂ ದಾಯಪಿಡಿವರೂ 10 ನೋಡಿ ಸಂತುಷ್ಟಳಾದೇ ಈ ಮಠದಲಿ 11 ಮತ್ಯಾರಿಗೀಡಿಲ್ಲನೋಡು ಸೃಷ್ಟಿವೊಳಗಿನವರಿಗೀಡಿಲ್ಲನೋಡು 12 ವಾದಿಮತದ್ವಾದಿನೀ ಸೋಲಿಸುವರು | ಮಾಯಮತಿಗಳ ಮಾಯಮಾಡುವರೂ ಪಾಠದಿಬೋಧಿಸುವರೂ 13 ಸುರಲೋಕ ಪೂಜ್ಯರಿವರೂ ಶಿರೋಮಣಿಯೆಂದು ಕರೆಸಿಕೊಳ್ಳುವರೂ 14
--------------
ಓರಬಾಯಿ ಲಕ್ಷ್ಮೀದೇವಮ್ಮ
(ಅಂ) ಪಾರ್ವತೀದೇವಿ ಉಮಾ ಕಾತ್ಯಾಯನೀ ಗೌರಿ ದಾಕ್ಷಾಯಣಿ | ಹಿಮವಂತ ಗಿರಿಯ ಕುಮಾರಿ ಪ ನಿತ್ಯ | ಅಮರವಂದಿತೆ ಗಜಗಮನೆ ಭವಾನಿ ಅ. ಪ. ಪನ್ನಗಧರನ ರಾಣಿ ಪರಮಪಾವನಿ | ಪುಣ್ಯಫಲ ಪ್ರದಾಯಿನಿ || ಪನ್ನಗವೇಣಿ ಶರ್ವಾಣಿ ಕೋಕಿಲವಾಣಿ | ಉನ್ನತ ಗುಣಗಣ ಶ್ರೇಣಿ | ಎನ್ನ ಮನದ ಅಭಿಮಾನ ದೇವತೆಯೆ | ಸ್ವರ್ಣಗಿರಿ ಸಂಪನ್ನೆ ಭಾಗ್ಯ ನಿಧಿ || ನಿನ್ನ ಮಹಿಮೆಯನು ಬಿನ್ನಾಣದಲಿ ನಾ | ಬಣ್ಣಿಸಲಳವೆ ಪ್ರಸನ್ನ ವದನಳೆ 1 ಮುತ್ತಿನ ಪದಕ ಹಾರ ಮೋಹನ ಸರ | ಉತ್ತಮಾಂಗದಲಂಕಾರ || ಜೊತ್ಯಾಗಿ ಇಟ್ಟ ಪಂಜರದೋಲೆ ವಯ್ಯಾರ | ರತ್ನಕಂಕಣದುಂಗುರ || ತೆತ್ತೀಸ ಕೋಟಿ ದೇವತೆಗಳ್ ಪೊಗಳುತ | ಸತ್ತಿಗೆ ಚಾಮರವೆತ್ತಿ ಪಿಡಿಯುತಿರೆ || ಸುತ್ತಲು ಆಡುವ ನರ್ತನ ಸಂದಣಿ | ಎತ್ತ ನೋಡಿದರತ್ತ ಕಥ್ಥೈ ವಾದ್ಯ2 ಕಂಚುಕ ತಿಲಕ | ನಾಸಿಕ || ಕಳಿತ ಮಲ್ಲಿಗೆ ಗಂಧಿಕ ಮುಡಿದ ಸೂಸುಕ | ಸಲೆ ಭುಜ ಕೀರ್ತಿಪಾಠಿಕ || ಇಳೆಯೊಳು ಮಧುರಾ ಪೊಳಲೊಳು ವಾಸಳೆ | ಅಳಿಗಿರಿ ವಿಜಯವಿಠ್ಠಲ ಕೊಂಡಾಡುವ || ಸುಲಭ ಜನರಿಗೆಲ್ಲ ಒಲಿದು ಮತಿಯನೀವ | ಗಳಿಕರ ಶೋಭಿತೆ ಪರಮಮಂಗಳ ಹೇ 3
--------------
ವಿಜಯದಾಸ
(ಈ) ಯತಿವರ್ಯರು ಶ್ರೀ ವ್ಯಾಸರಾಯರ ಸ್ತುತಿ ಇದಿರ್ಯಾರೊ ಗುರುವೆ ಸರಿಯಾರೊ ಯತಿಗೆ ಸಮರ್ಯಾರೊ ಪ ದುರುಳ ವಾದಿಗಳನ್ನು ಮರುಳು ಮಾಡೋರನ್ನ ತರಿದಟ್ಟಿ ಚಂದ್ರಿಕೆ ಗ್ರಂಥವ ರಚಿಸಿ ಧರಣಿ ಸುರರ ಪರಿವೃಢರ ಸುನಿಕರಕೆ ಪರಿಪರಿಯಲಿ ಉಪದೇಶಿಸುತಿಪ್ಪಗೆ 1 ಕನಕ ಕಶಿಪುತನಯನ ಘನ ಅಂಶದಿ ಫಣಿಗಣ ರಮಣನಾವೇಶದಿ ಪೊಳೆಯುತ ದಿನದಿನದಲಿ ಹರಿಮನ ತಣಿಸುತಲಿಹ ಘನ ಮಹಿಮನೆ ಶ್ರೀ ಯತಿಕುಲತಿಲಕಾ 2 ಉದ್ದಂಡ ವಿತಂಡಕೆ ಗಂಡುಸಿಂಹ ತರ್ಕದೆ ತಾಂಡವ ಯುಕ್ತಿಯ ದಂಡುಗಳನೆ ಕಟ್ಟಿಕೊಂಡು ತಾರ್ಕಿಕರ ಷಂಡಗಳನೆ ಖಂಡಿಸುತಿಹ ಯತಿಯೆ 3 ಬ್ರಹ್ಮಣ್ಯತೀರ್ಥರ ಕರಕಮಲದಿ ಪುಟ್ಟಿ ಬ್ರಹ್ಮಜನಕ ನರಸಿಂಹ ಮೂರುತಿಯ ಹೃ- ದ್ಗಂಹ್ವರದಲಿ ಧ್ಯಾನಿಸುತಿಹ ವ್ಯಾಸರಾ ಹೃದಯಾಂಬುಧಿಯೊಳು ಮೆರೆವಗೆ 4 ದಶದಿಶೆಯಲಿ ದಶರಥಸುತ ಮಹಿಮೆಯ ಕುಶಲದಿಂದಲಿ ಸಭೆಯೊಳಗೆ ಸ್ಥಾಪಿಸುತ ಹೊಸ ಹೊಸ ಬಿರುದು ಸಂದ್ಹೆಸರುವೆತ್ತಿರುವಂಥ ವಸುಧಿಯೊಳಗೆ ಸುಕರ ಸುಚರಿತೆಗೆ 5 ಹೊಳೆಯುತಲಿರುವ ರುಕ್ಮಿಣಿಪತಿ ಕೃಷ್ಣನು ನಲಿಯುತ ಕುಣಿಕುಣಿದಾಡುತಲಿಪ್ಪನು ಥಳಥಳಿಸುವ ರಾಮ ವೇದವ್ಯಾಸರು ನಿಮ- ಗಿಳೆಯೊಳಮೂಲ್ಯ ಪ್ರಸಾದವನೀವರು 6 ಅಡಿಗಡಿಗತಿ ದೃಢತರ ಯುಕ್ತಿಗಳಿಂದ ಸಡಗರದಿಂದಲಿ ಬಿಡದೆ ನುಡಿಯುತ ನಡದದ್ವೈತದಡವಿಯೊಳಗೆ ಪೊಕ್ಕು ಕೆಡಗುತಿಹ ನ್ಯಾಯಾಮೃತಾಚಾರ್ಯರಿಗೆ 7 ಶ್ರೀದವಿಠಲಗತಿ ಪ್ರೀಯರಾದ ಶ್ರೀ- ಪಾದರಾಯರಲಿ ಓದಿ ಗ್ರಂಥಗಳ ವಾದಿರಾಜ ವಿಜಯೀಂದ್ರ ಪ್ರಮುಖರಿಗೆ ಆದರದಲಿ ಪಾಠ ಹೇಳುತಲಿಪ್ಪಗೆ 8
--------------
ಶ್ರೀದವಿಠಲರು
ಅಧ್ಯಾಯ ಎರಡು ರಾಗ ಭೂಲೋಕವನು ಜೈಸುತ ಬಲದಿಂದಾ ಇಂದ್ರನೇ ಮೊದಲಾದ ಬೇಗಾ ದೇವೇಂದ್ರ ನಾಸನಕೆ 1 ಉಗ್ರಶಾಸನ ಮಾಡು ಮಾಡುವಂಥಾ ಉಗ್ರಶಾಶನ ಶೀಘ್ರದಿಂ ಹರಿಗೆ 2 ಬಿಡದೆ ದಯದಿ ಅನಂತ ಇಂಥ ಕಾಲಕೆ ಎಲ್ಲಿ `ಅನಂತಾದ್ರೀಶನೆ ' ನಿಂತು ನುಡಿದನು ಅಂತರಿಕ್ಷದಲಿ 3 ರಾಗ ಅಂಜಬೇಡಿರಂಜ ಬೇಡಿರೋ ನೀವಿನ್ನು ಮೇಲೆ ಪ ಪಂಜರದೊಳಗಿರುವೆ ನಿಮ್ಮನಂಜಿಸುವನ ಭಂಜಿಸುವೆನು ಅ.ಪ ಎಂದು ದ್ವೇಷ ಮಾಡುವನೋ ಅಂದಿಗವನ ಕೊಂದÀು ಬಿಡುವೆ 1 ದ್ವೇಷವನ್ನು ಮಾಡಿದವನು ಉಳಿಯ ಮುನ್ನ ಬಹಳ ದಿವಸ ಸತ್ಯ 2 ಪ್ರಹ್ಲಾದ ಇದ್ದ ಸ್ಥಳದಲ್ಲಿರುವೆ ನಾನು 3 ವಚನ ಶ್ರೀ ಲಲಾಮನವಾಣಿ ಕೇಳಿ ಉಳಿದವನಲ್ಲ ಕಾಲ ಹಿರಣ್ಯಕನಿಂದ ಬಾಲ ಕಾಲಕಾಗುವದೆಂದು ಕಾಲವನು ನೋಡುತಲೆ ಕಾಲಗಳೆದರು ಲೋಕಪಾಲಕರು ಎಲ್ಲಾ 1 ರಾಗ ಕೈಯಲಿಕೊಟ್ಟು ನಕ್ಕು ನುಡಿದಾನು 1 ಇರಲಿ ಬುದ್ಧಿವಂತನಾಗಲಿ ಪ್ರಸಿದ್ಧನಾಗಲಿ2 ಆಗ ಪ್ರಹ್ಲಾದನ್ನ ಕರದ್ಹೇಳಿದರು ಆಹ್ಲಾದದಿಂದಾ3 ಸಂಭ್ರಮದಿಂದ ಉತ್ತಮ ಶ್ರೀ ಹರಿನಿಂದಾ ಶಾಸ್ತ್ರ ನುಡಿದರು 4 ತ್ರೈವರ್ಗಿಕ ಶಾಸ್ತ್ರ ನುಡಿದರು 5 ಪಾಠಮಾಡಲಿಲ್ಲ ಸವಿದು ಹರಿ ಚರಿತಾಮೃತವನ್ನು ಸವಿ ಇನ್ನೊಂದನರಿಯಾ 6 ನುಡಿದನು ಅವನು ನವನೀತ ಧಾಂಗಿರುವಂಥಾದು ನವವಿಧ ಭಕ್ತಿ 7 ಅವರಿಗೆ ಮತ್ತಾರಿಗಾದರು ಅವನಂಜುವನಲ್ಲಾ 8 ಅವನು ಚಲುವ ನಂತಾದ್ರೀಶನಲ್ಲೆ ಛಲ ಬಿಟ್ಟನಲ್ಲಾ 9 ವಚನ ಕೂಡಿಸಿಕೊಂಡು ಮಂದ ಮುಂದ್ಹೇಳು ಇಷ್ಟುದಿನ ಒಂದು ಬಿಡದಲೆ ಹೀಗೆ ಅಂದ ಮಾತಿಗೆ ಮತ್ತೆ ಕಂದ ಪ್ರಹ್ಲಾದ ಹೀಗೆಂದನಾಗ 1 ರಾಗ ಬರೆಯಲಿಲ್ಲ ಓದಲಿಲ್ಲವೋ ಅಪ್ಪಯ್ಯ ನಾನು ಪ ಹರಿಯ ನಿಂದಿಸುವ ಶಾಸ್ತ್ರ ಬರೆಯಲ್ಹ್ಯಾಗೆ ಓದಲ್ಹ್ಯಾಗೆ ಅ.ಪ ಹರಿಯ ಗುಣಗಳನ್ನು ಮಾಡುವೆನು ಹರಿಯಪಾದ ಹರಿಯ ವಂದಿಸುವೆ ನಿತ್ಯಾ 1 ಅಂಥಾದು ಎನ್ನ ಮನಸು ಮನಸಿಲ್ಲೆ ವಿಷಯಗಳನ್ನು ನೆನೆಸುವೆ ಸುಹರಿಯ ರೂಪಾ2 ಗೆಳೆಯನಾದ ತಾನು ಅಂತರಂಗದಲ್ಲಿ ತಾನು ನಿಂತು ಪ್ರೇರಿಸುವ ಅಂತರಂಗದಂತೆ ಇರುವೆ 3 ವಚನ ಸಿಟ್ಟು ಮಾಡುತಲಿಂಥ ಥಟ್ಟನ್ಹೇಳಿರಿಯೆನಲು ಥಟ್ಟ ನಾವಲ್ಲ ಕೊಟ್ಟವರು ಕೊಟ್ಟ ಬುದ್ಧಿಯು ಅಲ್ಲ ರಾಗ ಕೇಳಿರಿ ನೀವೆಲ್ಲ ಭಾಳ ಭಕುತಿಯಲಿ ಕೇಳಿರಯ್ಯಾ ಪ ಬಾಳ ಮಾತುಗಳೇಕೆ ಹೇಳುವೆ ಸಾರಾಂಶ ಕೇಳಿರಯ್ಯಾ ಅ.ಪ ಅಲ್ಲ ಕೇಳಿರಯ್ಯಾ ದಿಟ್ಟಾಗಿ ಶ್ರೀ ಹರಿಯು ಕೊಟ್ಟ ಬುದ್ಧಿಯು ಇದು ಕೇಳಿರಯ್ಯ 1 ಶ್ರೀ ಜಗದೀಶನಿಂದೀ ಜಗ ತಿರಗೋದು ಕೇಳಿರಯ್ಯಾ 2 ಅನಂತಾದ್ರೀಶನು ತಾನೆ ಆಡುವದು ಕೇಳಿರಯ್ಯಾ 3 ವಚನ ದೈತ್ಯ ಅಡಿಯಿಟ್ಟು ನೀತಿಯಲಿ ಕಿಡಿಗಣ್ಣಿನೊಳು ನೋಡಿ ಒಡಲೊಳಗೆ ಸಿಟ್ಟಿನಲಿ ದೃಢವಾಗಿ ಇರುವಂಥ ಭೃತ್ಯರುಗಳಿಗೆ ನುಡಿದನೀಪರಿಯ 1 ರಾಗ ಕಡಿದ್ಹಾಕಿರೀತನ ||ಪಲ್ಲ|| ಬಗೆ ದುಷ್ಟಮಾತುಗ- ವಿಷ್ಣುವ ಸೊಗಸಾಗಿ ಪೂಜಿಸಿ ನಗುತಿಪ್ಪನ 1 ಸುತನಾಗದಿದ್ದರೂ ಸುತನವನೆ ಅತಿರಭಸದಲೆ ವಿಶ್ರುತವಾಗಿ ಹುಟ್ಟಿದ ವಿತತರೋಗ ತನಗ್ಹಿತವಾಗಿರುವದೇನು 2 ನಾನಾರೀತಿಗಳಿಂದ ಹಾನಿಯ ಅನಂತಾದ್ರೀಶನ ಧ್ಯಾನದಲ್ಲಿರುವನ 3 ರಾಗ ಆಗೆಲ್ಲ ಮಂದಿಗಳನ ನೆರಸಿದಾ1 ಮುರಿದು ಅವನ ಭಯ ಬಿಡಿಸಿದಾ 2 ಹರಿಯು ಬಂದು ಉಳಿಸಿದಾ3 ಸರ್ಪಶಯನ ಬಂದು ಭಯವಾ ಬಿಡಿಸಿ4 ವಿಷವ ತಂದು ಯತ್ನದಿಂದ ಕುಡಿಸಿದಾ ಹರಿ ತಾ ವಿಷವಮೃತ ಮಾ ಡಿ ಸೌಖ್ಯ ಬಡಿಸಿದಾ 5 ಘಟ್ಟ್ಯಾಗ್ಹಿಡಿದು ಶ್ರೀಹರಿ ಸಾಕಿದಾ 6 ತಾನೆ ತಾರಿ ಸಿದಾ7 ಶೀತಾಗಿ ಸೌಖ್ಯ ಬಡಿಸದಾ 8 ನಾನಾರೀತಿಯಿಂದಲವನನು ಸರಿಸಿದಾ ಅಚ್ಯುತನಂತಾದ್ರೀಶನು ಸೌಖ್ಯ ಸುರಸಿದಾ 9 ವಚನ ಮಾಡಿದರಿವಗೆ ಇನ್ನದೇನು ಪಾಯವುಯೆಂದು ಮಾನಿತರು ಗುರುಗಳಾ ದಾನವೇಂದ್ರ ನೀನು ದೀನನಾಗುವದು ಮುಂದೆ ನೀನು ತಿಳಿಯೊ
--------------
ಅನಂತಾದ್ರೀಶ - ಕಥನಕಾವ್ಯಗಳು
ಇಷ್ಟು ದಿನ ಇಂಥ ಸುಖ ಕಾಣಲಿಲ್ಲಕೃಷ್ಣ ಈ ದಿನ ನೋಡಿ ತುಷ್ಟನಾದೆನೊ ದೇವಾ ಪ ಆಟಗಳು ಸುಖವಲ್ಲ ಕೃಷ್ಣ ನೋಟಗಳು ಸುಖವಲ್ಲಪಾಠಗಳು ಸುಖವಲ್ಲ ಕೂಟವಲ್ಲತೋಟದೊಳು ರವಿಸುತನ ಕೂಟದೊಳು ಗೋಪಿಯರಆಟಕದ ಕೊಳಲೂದೊ ನೋಟ ಸ್ಮರಣೆಗೆ ತರುವೆ 1 ಏನು ಸೌಂದರ್ಯವೊ ಕೃಷ್ಣ ಏನು ಸೌಭಾಗ್ಯವೊಧೇನುಪಾಲನ ನೋಟಕಾಶ್ಚರ್ಯವೊನಾನು ಒಲ್ಲೆನು ಸೀದಾ ಆಣೆ ಮಾಡುವೆನೀಗಧೇನು ಮುಖ ಸಮ ತೋರಿ ಧ್ಯಾನ ತಪ್ಪಿಸೋ ಜಗದಿ 2 ಇಂದು ಬಾಯೊಳಗಿಟ್ಟುಮಂದಹಾಸವ ಮಾಡುತಿಂದಿರೇಶಕಂದರ್ಪಸಮರೂಪದಿಂದ ನೋಡುವೆನೀಗಸಿಂಧುನೊಳು ಮುಳುಗಿದೆನು ನಂದಬಾಲಕನೆ 3
--------------
ಇಂದಿರೇಶರು
ಉತ್ಥಾನ ದ್ವಾದಶಿಯ ದಿವಸ (ಕಾರ್ತೀಕ ಶುದ್ಧ ದ್ವಾದಶಿಯ ಉತ್ಸವ) ರಂಭೆ ಮಾನಿನೀ ಈತನಾರೆಂದೆನೆಗೆ ಪೇಳೆ ಮಾನಿನೀ ಪ. ಮಾನಿನೀಮಣಿ ಈತನ್ಯಾರೆ ಕರು ಣಾನಿಧಿಯಂತಿಹ ನೀರೆ ಹಾ ಹಾ ಭಾನುಸಹಸ್ರ ಸಮಾನಭಾಷಿತ ಮ- ಹಾನುಭಾವನು ಸುಪ್ರವೀಣನಾಗಿಹ ಕಾಣೆ 1 ಭಯಭಕ್ತಿಯಿಂದಾಶ್ರಿತರು ಕಾಣಿ- ಕೆಯನಿತ್ತು ನುತಿಸಿ ಪಾಡಿದರು ನಿರಾ- ಮಯ ನೀನೇ ಗತಿಯೆಂದೆಲ್ಲವರು ಹಾ ಹಾ ಭಯನಿವಾರಣ ಜಯ ಜಯವೆಂದು ನುತಿಸೆ ನಿ- ರ್ಭಯ ಹಸ್ತ ತೋರುತ ದಯಮಾಡಿ ಪೊರಟನೆ2 ಭೂರಿ ವಿಪ್ರರ ವೇದ ಘೋಷದಿಂದ ಸ್ವಾರಿಗೆ ಪೊರಟ ವಿಲಾಸ ಕೌಸ್ತು- ಚಾರುಕಿರೀಟಕೇಯೂರಪದಕಮುಕ್ತಾ ಹಾರಾಲಂಕಾರ ಶೃಂಗಾರನಾಗಿರುವನು3 ಸೀಗುರಿ ಛತ್ರ ಚಾಮರದ ಸಮ ವಾಗಿ ನಿಂದಿರುವ ತೋರಣದ ರಾಜ ಭೋಗ ನಿಶಾನಿಯ ಬಿರುದ ಹಾ ಹಾ ಮಾಗಧ ಸೂತ ಮುಖ್ಯಾದಿ ಪಾಠಕರ ಸ- ರಾಗ ಕೈವಾರದಿ ಸಾಗಿ ಬರುವ ಕಾಣೆ4 ಮುಂದಣದಲಿ ಶೋಭಿಸುವ ಜನ ಸಂದಣಿಗಳ ಮಧ್ಯೆ ಮೆರೆವ ತಾರಾ ವೃಂದೇಂದುವಂತೆ ಕಾಣಿಸುವ ಹಾಹಾ ಕುಂದಣ ಖಚಿತವಾದಂದಣವೇರಿ ಸಾ- ನಂದದಿ ಬರುವನು ಮಂದಹಾಸವ ಬೀರಿ5 ತಾಳ ಮೃದಂಗದ ರವದಿ ಶ್ರುತಿ ವಾಲಗ ಭೇರಿ ರಭಸದಿ ಜನ ಜಾಲ ಕೂಡಿರುವ ಮೋಹರದಿ ಹಾಹಾ ಸಾಲು ಸಾಲಾಗಿ ಬೊಂಬಾಳ ದೀವಟಿಗೆ ಹಿ- ಲಾಲು ಪ್ರಕಾಶದಿ ಲೋಲನಾಗಿಹ ಕಾಣೆ 6 ಊರ್ವಶಿ:ಈತನೆ ಭಾಗ್ಯನಿಧಿ ನೋಡೆ ನೀ ಮುದದಿಪ. ಈತನೆ ಈರೇಳು ಲೋಕದ ದಾತ ನಾರಾಯಣ ಮಹಾ ಪುರು- ವಿನುತ ನಿ- ರ್ಭೀತ ನಿರ್ಗುಣ ಚೇತನಾತ್ಮಕಅ.ಪ. ಮಂದರ ಪೊತ್ತ ಭೂನಿತಂಬಿನಿಯ ಪ್ರೀತ ಮಾನವಮೃಗಾಧಿಪ ತ್ರಿವಿಕ್ರಮ ದಾನಶಾಲಿ ದಶಾನನಾರಿ ನ- ವೀನ ವೇಣುವಿನೋದ ದೃಢ ನಿ- ರ್ವಾಣ ಪ್ರವುಢ ದಯಾನಿಧಿ ಸಖಿ 1 ವಾರಿಜಾಸವಾನವಂದಿತ ಶ್ರೀಪಾದಯುಗ್ಮವ ತೋರಿಕೊಂಬುವ ಸಂತತ ಕೇರಿಕೇರಿಯ ಮನೆಗಳಲಿ ದಿ- ವ್ಯಾರತಿಯ ಶೃಂಗಾರ ಭಕ್ತರ- ನಾರತದಿ ಉದ್ಧಾರಗೈಯಲು ಸ್ವಾರಿ ಪೊರಟನು ಮಾರಜನಕನು 2 ಮುಗುದೆ ನೀ ನೋಡಿದನು ಕಾಣಿಕೆಯ ಕ- ಪ್ಪಗಳ ಕೊಳ್ಳುವನು ತಾನು ಬಗೆಬಗೆಯ ಕಟ್ಟೆಯೊಳು ಮಂಡಿಸಿ ಮಿಗಿಲು ಶರಣಾಗತರ ಮನಸಿನ ಬಗೆಯನೆಲ್ಲವ ಸಲ್ಲಿಸಿ ಕರುಣಾ ಳುಗಳ ದೇವನು ಕರುಣಿಸುವ ನೋಡೆ3 ರಂಭೆ :ದೃಢವಾಯಿತೆಲೆ ನಿನ್ನ ನುಡಿಯು ಸುರ ಗಡಣ ಓಲಗಕೆ ಇಮ್ಮಡಿಯು ಜನ- ರೊಡಗೂಡಿ ಬರುತಿಹ ನಡೆಯು ಹಾ ಹಾ ಮೃಡ ಸರೋಜ ಸುರಗಡಣ ವಂದಿತ ಕ್ಷೀರ ಕಡಲ ಶಯನ ಜಗದೊಡೆಯನಹುದು ಕಾಣೆ1 ಮದಗಜಗಮನೆ ನೀ ಪೇಳೆ ದೇವ ಸದನವ ಪೊರಡುವ ಮೊದಲೇ ಚಂದ- ನದ ಪಲ್ಲಂಕಿಯ ತಂದು ಮ್ಯಾಲೆ ಹಾ ಹಾ ಮುದದಿಂದ ಬಾಲಕರೊದಗಿ ಸಂತೋಷದಿ ಚದುರತನದಿ ಪೋಗುವನು ಪೇಳೆಲೆ ನೀರೆ2 ಊರ್ವಶಿ: ನಾರೀಮಣಿ ನೀ ಕೇಳೆ ಚಕ್ರೋತ್ಸವ ಶ್ರೀರಮಾಧವನ ಲೀಲೆ ಘೋರ ದೈತ್ಯಕುಠಾರ ಲಕ್ಷ್ಮೀ ನಾರಾಯಣನ ಬಲಕರ ಸರೋಜದಿ ಸೇರಿ ಕುಳಿತ ಗಂಭೀರ ದಿನಪನ ಭೂರಿತೇಜದಿ ಮೆರೆವುದದು ತಿಳಿ1 ದೊರೆಯು ಬರುವನು ಎಂದು ಎಲ್ಲರಿಗೆ ಗೋ- ಚರಿಸುವನೊಲಿದು ಇಂದು ತರ ತರದ ಆರತಿಗಳನು ನೀವ್ ಧರಿಸಿ ನಿಂದಿರಿಯೆಂದು ಜನರಿಗೆ- ಚ್ಚರಿಗೆಗೋಸುಗ ಮನದ ಭಯವಪ- ಹರಿಸಿ ಬೇಗದಿ ಪೊರಟು ಬಂದುದು ರಂಭೆ :ಸರಸಿಜನಯನೆ ನೀ ಪೇಳೆ ಸೂರ್ಯ ಕಿರಣದಂತಿಹುದೆಲೆ ಬಾಲೆ ಸುತ್ತಿ ಗೆರಕವಾಗಿಹುದು ಸುಶೀಲೆ ಆಹಾ ಹರಿಯ ವೈಕುಂಠ ನಗರದಂತೆ ಜ್ಯೋತಿ ವಿ- ಸ್ತರವಾಗಿ ಸುತ್ತಿನೊಳ್ ಮೆರೆವುದಿದೇನೆಲೆ 1 ಊರ್ವಶಿ:ಸಾದರದಲಿ ನೀ ಕೇಳೆ ಕಾರ್ತಿಕ ಶುದ್ಧ ದ್ವಾದಶಿಯೊಳಗೆ ಬಾಲೆ ಮಾಧವನ ಪ್ರೀತ್ಯರ್ಥವಾಗಿ ಶು- ಭೋದಯದಿ ಸಾಲಾಗಿ ದೀಪಾ ರಾಧನೆಯ ಉತ್ಸಹದ ಮಹಿಮೆಯ ಸಾದರದಿ ನೀ ನೋಡೆ ಸುಮನದಿ1 ನಿಗಮಾಗಮದ ಘೋಷದಿ ಸಾನಂದ ಸು- ತ್ತುಗಳ ಬರುವ ಮೋದದಿ ಬಗೆ ಬಗೆಯ ನರ್ತನ ಸಂಗೀತಾ ದಿಗಳ ಲೋಲೋಪ್ತಿಯ ಮನೋಹರ ದುಗುಮಿಗೆಯ ಪಲ್ಲಂಕಿಯೊಳು ಕಿರು2 ನಗೆಯ ಸೂಸುತ ನಗಧರನು ಬಹ ಚಪಲಾಕ್ಷಿ ಕೇಳೆ ಈ ವಸಂತ ಮಂ- ಟಪದಿ ಮಂಡಿಸಿದ ಬೇಗ ಅಪರಿಮಿತ ಸಂಗೀತ ಗಾನ ಲೋ- ಲುಪನು ಭಕ್ತರ ಮೇಲೆ ಕರುಣದಿ ಕೃಪೆಯ ಬೀರಿ ನಿರುಪಮ ಮಂಗಲ ಉಪಯಿತನು ತಾನೆನಿಸಿ ಮೆರೆವನು3 ಪಂಕಜಮುಖಿ ನೀ ಕೇಳೆ ಇದೆಲ್ಲವು ವೆಂಕಟೇಶ್ವರನ ಲೀಲೆ ಶಂಕರಾಪ್ತನು ಸಕಲ ಭಕ್ತಾ ಕರ ಚ ಕ್ರಾಂಕಿತನು ವೃಂದಾವನದಿ ನಿ ಶ್ಯಂಕದಿಂ ಪೂಜೆಯಗೊಂಡನು4 ಕಂತುಜನಕನಾಮೇಲೆ ಸಾದರದಿ ಗೃ- ಹಾಂತರಗೈದ ಬಾಲೆ ಚಿಂತಿತಾರ್ಥವನೀವ ಲಕ್ಷ್ಮೀ ಕಾಂತ ನಾರಾಯಣನು ಭಕುತರ ತಿಂಥಿಣಿಗೆ ಪ್ರಸಾದವಿತ್ತೇ- ಕಾಂತ ಸೇವೆಗೆ ನಿಂತ ಮಾಧವ5
--------------
ತುಪಾಕಿ ವೆಂಕಟರಮಣಾಚಾರ್ಯ
ಓಂ ನಮೋ ಸಕಲ ಮಂಗಲದಾಯಕ |ಘನ್ನ ಮಹಿಮ ಶ್ರೀ ಗಣನಾಯಕ |ನಿನ್ನ ಕೀರ್ತಿ ಪಾಠವ ಭಕ್ತರ |ಇನ್ನು ಮಾಡೋ ನಿರ್ವಿಘ್ನದಿ ಮುಕ್ತರ 1 ನಿರ್ಜರ ವಾಣಿ |ಬಂದು ಸನ್ಮತಿ ನೀಡುತ ಶಾರದಾ |ಇಂದು ವದನೆ ರಕ್ಷಿಸು ಶಾರದಾ 2 ನಿರ್ಜರ ರಂಜನಾ |ಕೃಪೆ ಯಲಿ ರಕ್ಷಿಸು ದೋರಿ ನಿರಂಜನಾ 3 ಸಚ್ಚಿದಾನಂದಾ ವಿಗೃಹ ಮೂರುತಿ |ಅಚ್ಯುತಾನಂತ ಮಂಗಲ ಕೀರುತಿ |ಎಚ್ಚರಿ ಸೆನಗೆ ಭಕ್ತಿಯ ಸ್ಪಾದವಾ |ನಿಚ್ಚ ರಕ್ಷಿಸು ತೋರುತ ಪಾದವಾ 4
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಕಣ್ಮನಕೆ ಆನಂದ ಇಂದಿನದಿ ಕೇಳೀ |ಮನ್ಮನೋರಥ ಮುಂದೆ | ಪೋಗಿ ಸೇರಿಹುದು ಪ ಮಧ್ವ ಸರಸಿಯ ತಟದಿ | ಮಧ್ವಮುನಿ ಸದ್ವಂದ್ಯಮಧ್ವೇಶ ಶಿರಿ ಕೃಷ್ಣ | ನರ್ಚಿಸುತ ನಿತ್ಯಮಧ್ವಮತ ಸಾಮ್ರಾಜ್ಯ | ಪೀಠದಲಿ ಭೂಷಿತರುವಿಶ್ವೇಶ ತೀರ್ಥರಿಗೆ | ವಂದಿಪೆನು ಸತತ 1 ಮಧ್ವ ಸಿದ್ಧಾಂತಗಳ | ಉತ್ಕರ್ಷ ಭೋದಿಸುತವಿದ್ವಜ್ಜನಾರಾಧ್ಯ | ಪಾಠಶಾಲಾವರ್ಧಂತಿ ಹತ್ತಾರು | ನಾಲ್ಕೊರ್ಷ ಉತ್ಸವದಿಅದ್ಯಕ್ಷ ವಿಶ್ವೇಶ | ತೀರ್ಥರನುಗ್ರಹಿಸೇ 2 ಅನಂತೇಶ ಸನ್ನಿಧಿಲಿ | ಅನುಮಾನ ತೀರ್ಥರಿಂದಾನಂತ ಸತ್ ಜ್ಞಾನ | ರಶ್ಮಿ ಸೂಸುತಲೀ |ಜ್ಞಾನ ಕಾರ್ಯವು ಗುರು | ಗೋವಿಂದ ವಿಠಲನಪ್ರೀಣನಕೆ ಜರುಗಿಹುದ | ನೋಡವನೆ ಧನ್ಯ 3
--------------
ಗುರುಗೋವಿಂದವಿಠಲರು
ಕೃಷ್ಣತಾತ ಮ'ಪತಿರಾಯರ ಭಜಿಸೊಅಭಿಮಾನವ ತ್ಯಜಿಸೊ ಅನುಮಾನವ ತ್ಯಜಿಸೊ ಪರಾಜವೈಭವದ ಭೋಗಗಳನುಭ'ಸಿ ಶ್ರೀ ಹರಿಯ ಸ್ಮರಿಸಿಭೋಗದೊಳಗೆ ತ್ಯಾಗದ ಪಾಠವ ಕಲಿಸಿ ಕೊಡುಗೈದೊರೆಯೆನಿಸಿಯೋಗಬಂದತಕ್ಷಣ ವೈಭವ ತ್ಯಜಿಸಿ ಯೋಗಿಯನಾಶ್ರೈಸಿಯೋಗಾಭ್ಯಾಸದಿ ಬೇಗ ಹರಿಯ ಒಲಿಸಿ ಅವನೊಳು ಮನಬೆರೆಸಿ 1ಹರಿಯಧ್ಯಾನಕನುಕೂಲವಾದ ಮೆಟ್ಟಾ ಹುಡಕುತುತಾಹೊರಟಾವರಕಾಖಂಡಿಕಿ ಕ್ಷೇತ್ರದಿ ಕಾಲಿಟ್ಟಾ 'ಶ್ರಾಂತಿಗೆ ಕುಳಿತಾಅರೆನಿ'ುಷದಿ ಹರಿಧ್ಯಾನದಿ ಮೈಮರೆತಾ ಸಮಾಧಿ ಇಳಿಯುತಾವರೃಮುನಿಗಳು ತಪವಗೈದಮೆಟ್ಟಾ ಎನುತಲಿಯೆ ನಿಂತಾ 2ಹಗಲು ಇರಳು ಹರಿಧ್ಯಾನದಿ ತಾ ಮುಳುಗಿ ಅಲ್ಲಿರುತಿರಲಾಗಿ ನಗೆ ಮುಖದಲಿ ಝಗಝಗ ಕಾಂತಿಯು ಬೆಳಗಿ ಸುತ್ತಲು ಬೆಳಕಾಗಿಜಗದಜನಕೆ ಅದು ಅತಿ ಅಚ್ಚರಿಯಾಗಿ ಯೋಗಿಗೆ ಶಿರಬಾಗಿಬಗೆ ಬಗೆ ಭಕುತರು ಬಂದರು ತಾವಾಗಿ ಮ'ಪತಿಮಹಾಯೋಗಿ 3ಅಷ್ಟಸಿದ್ಧಿಗಳು ನೆಲೆಸಿದವಾಗಲ್ಲಿ ಆಶ್ರಮ ಬಾಗಿಲಲಿಎಷ್ಟು ಭಕುತಿಜನ ಬಂದರು ಸ'ತಲ್ಲಿ ಇಷ್ಟಾರ್ಥ ಕರದಲಿಮೃಷ್ಟಾನ್ನ ಭೋಜನ ಪ್ರತಿದಿನದಲ್ಲಿ ನಡೆುತು ಸಮತೆಯಲಿಇಷ್ಟವಾದ ಆಧ್ಯಾತ್ಮಿಕ ಮಾರ್ಗದಲಿ ಉಪದೇಶ ಪಡೆಯುತಲಿ 4
--------------
ಭೂಪತಿ ವಿಠಲರು
ಕೋಪಿಸದಿರು ಸ್ವಾಮಿ ಶ್ರೀ ನರಸಿಂಹ ಪ. ಕೋಪಿಸದಿರು ಕರುಣಾಪಯೋನಿಧಿಯೆ ಮ- ಹಾಪರಾಧಗಳನು ಲೇಪಗೊಳಿಸದಿರು ಅ.ಪ. ಮಧ್ವ ವಲ್ಲಭ ನಿನ್ನ ಸೇವೆಯ ನಡಸುವ ಮಧ್ಯ ಮಧ್ಯದೊಳೆದ್ದು ಹೋದ ತಪ್ಪು ಶುದ್ಧಿಯಿಲ್ಲದ ತಪ್ಪು ಸೂಕ್ತಿ ಪಾಠಗಳೊಳಾ- ಬದ್ಧ ಬರುವ ತಪ್ಪೆನಿದ್ದರು ಕ್ಷಮಿಸಿನ್ನು 1 ಸಂಸಾರ ಲಂಪಟನಾಗಿ ಬಳಲುವೆನು ಕಂಸಾರಿ ನಿನಗಿನ್ನು ಪೇಳ್ವದೇನು ಹಂಸವಾಹನ ಪೀಠ ಹಲಧರನನುಜನೆ ಸಂಶಯಿಸದೆ ಎನ್ನ ಕಾಯೊ ಕಮಲನಾಭ 2 ಪತಿತಜನರಿಗಧಿಪತಿಯಾಗಿರುವೆ ನಾನು ಮತಿಹೀನನೆಂಬುದ ಬಲ್ಲಿ ನೀನು ಪಾದ ಪದ್ಮವೆ ಇನ್ನು ಗತಿ ಎಂದು ನಂಬಿದನ ಮೇಲೆ ಮುನಿಸಿನ್ನೇನು 3 ಪಾತಕ ಕಡಲೊಳು ಪೊರಳುತ ನೆರಳುತ ಯಾತರಿಂದಲು ಏಳಲಾರದಿನ್ನು ಶ್ರೀ ತರುಣಿಯವರ ನಿನ್ನ ಸೇರಿದ ಜಗ ನ್ನಾಥ ದಾಸರ ಪಾದದವಲಂಬಗೊಂಡೆನು 4 ಶ್ರೀಶ ಶೇಷಗಿರೀಂದ್ರ ವಾಸ ನಿನ್ನನೆ ನಂಬಿ ದಾಸ ಕೂಟದಿ ಸೇರಿಕೊಂಡಿಹೆನು ಣಾ ಸಮುದ್ರನೆ ಎನ್ನ ಕಾವದುಚಿತವಿನ್ನು 5
--------------
ತುಪಾಕಿ ವೆಂಕಟರಮಣಾಚಾರ್ಯ
ಗಂಗಾ ಜನಕ ವಿಠಲ | ಅಂಗನೆಯ ಪೊರೆಯೋ ಪ ಮಂಗಳಾಂಗನೆ ದೇವ | ರಂಗ ಭವಹಾರೀ ಅ.ಪ. ವೈರಾಗ್ಯ ಭಾಗ್ಯಗಳ | ಹಾರೈಸುವಂತೆಸಗೋಸಾರಸುಖ ಸಾಂದ್ರ ಹರಿ | ಮಾರಮಣ ದೇವಾ |ಘೋರ ಭವವೆನಿಪ ಕೂ | ಪಾಠ ದಾಟಿಸೊ ಹರಿಯೆಕಾರುಣ್ಯ ಶರಧಿತವ | ಓರೆ ನೋಟದಲೀ1 ಗಣನೆಗೊಳಗಾಗದಿಹ | ಜನನ ಮರಣವು ಬರಲಿತನು ಮನದ ಸಂತಾಪ | ಅಣು ಬೃಹತು ಇರಲೀಗುಣ ಪೂರ್ಣ ಶ್ರೀಹರಿಯೆ | ಗಣನೆಗದು ಸಿಗದ ತೆರಅನನುತನೆ ನಿನ್ನ ಕಾರುಣ್ಯ ಒಂದಿರಲೀ 2 ಅಂಗನೆಗೆ ಸ್ವಪ್ನದಲಿ | ಗಂಗೆ ಮೀಯಿಸಿ ಬಾಲಸಂಗದಲಿ ಧವಳಾಖ್ಯ | ಗಂಗೆ ಸೋಪಾನಾಭಂಗ ವಿಲ್ಲದೆ ಯೇರಿ | ಮಂಗಳಾಂಗೆರ ಕಂಡುಶಿಂಗರದಿ ಪೂಜಿಸಿಹ | ಅಂಗನಾ ಮಣಿಯಾ 3 ಉಚ್ಚ ನೀ ಚಂಗಳನು | ಸ್ವಚ್ಛ ತಿಳಿಸುತ್ತಿವಳಕೃಚ್ಛ್ರಕೇ ಒಲಿಯುತ್ತ | ಲಕ್ಷ್ಮೀ ರಮಣಾಅಚ್ಚ ಭಕುತಿ ಜ್ಞಾನ | ನಿಚ್ಚಳದ ಮನವಿತ್ತುಸಚ್ಚಿದಾನಂದಾತ್ಮ | ಉಚ್ಚಳೆಂದೆನಿಸೋ 4 ವಿಷ್ಣು ಪದಿಧರಸಖನೆ | ದಶರಥಾತ್ಮಜ ಹರಿಯೆಯಶವಂತೆ ಗೃಹಿಣಿ ತವ | ಎಸೆವಪದ ಬಿಸಜವನು ಹಸನು ಸೇರಿಸೊಗುರೂ ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ದಾಸರೆಂದರೆ ಪುರಂದರದಾಸರಯ್ಯ ಪ ವಾಸುದೇವ ಕೃಷ್ಣನ್ನ ಸೂಸಿ ಪೂಜಿಸುವಅ.ಪ ಗ್ರಾಸಕಿಲ್ಲದೆ ಪೋಗಿ ಪರರ ಮನೆಗಳ ಪೊಕ್ಕುದಾಸನೆಂದು ತುಲಸಿ ಮಾಲೆ ಧರಿಸಿಬೇಸರಿಲ್ಲದೆ ಅವರ ಕಾಡಿ ಬೇಡಿ ಬಳಲಿಸುತಕಾಸುಗಳಿಸುವ ಪುರುಷನವ ದಾಸನೇ 1 ಡಂಭಕದಿ ಹರಿಸ್ಮರಣೆಮಾಡಿ ಜನರಾ ಮುಂದೆಸಂಭ್ರಮದಿ ತಾನುಂಬ ಊಟ ಬಯಸಿಅಂಬುಜೋದ್ಭವ ಪಿತನ ಆಗಮಗಳರಿಯದಲೆತಂಬೂರಿ ಮೀಟಲವ ಹರಿದಾಸನೇ 2 ಯಾಯವಾರವ ಮಾಡಿ ವಿಪ್ರರಿಗೆ ಮೃಷ್ಟಾನ್ನಪ್ರೀಯದಲಿ ತಾನೊಂದು ಕೊಡದ ಲೋಭಿಮಾಯ ಸಂಸಾರದಲಿ ಮಮತೆ ಹೆಚ್ಚಾಗಿಟ್ಟುಗಾಯನವ ಮಾಡಲವ ದಾಸನೇನೈಯ3 ಪಾಠಕನ ತೆರದಲ್ಲಿ ಪದಗಳನೆ ತಾ ಬೊಗಳಿಕೂಟ ಜನರ ಮನವ ಸಂತೋಷಪಡಿಸಿಗೂಟ ನಾಮಗಳಿಟ್ಟುಕೊಂಡ್ಹಿರಿಯ ತಾನೆನುತ,ತೂಟಕವ ಮಾಡಲವ ದಾಸನೇನೈಯ4 ಪುರಂದರ ದಾಸರಿವರೈಯ 5
--------------
ವ್ಯಾಸರಾಯರು
ದಿನಗಳನು ಕಳೆವ ಜನರೆ ಸುಜನರು ವನಜನಾಭನ ದಾಸರ ಸಮಾಗಮದಿಂದ ಪ. ಅರುಣೋದಯದಲೆದ್ದು ಆಚಮನ ಕೃತಿಯಿಂದ ಪರಿಶುದ್ಧರಾಗಿ ಇಹಪರಗಳಿಂದ ಎರಡುವಿಧ ಸುಖವೀವ ಗುರುಮಧ್ವಮುನಿವರನ ಪರಮಮತವಿಡಿದು ಹರಿಕಥಾಮೃತ ಸವಿದು 1 ಸ್ನಾನವನು ಮಾಡಿ ಸಂಕಲ್ಪಪೂರ್ವಕದಿ ಸಂ- ಧ್ಯಾನ ಗಾಯಿತ್ರಿ ಗುರು ಮಂತ್ರ ಜಪವು ಭಾನುನಾಮಕನಾದ ಪರಮಾತ್ಮನಂಘ್ರಿಯನು ಧ್ಯಾನವನು ಮಾಡಿ ಅಧ್ಯಯನ ಪಾಠಗಳಿಂದ 2 ವಾಸುದೇವ ಅಡಿಗಡಿಗೆ ನೆನೆದು ಪಾವಕಗೆ ಪ್ರಾತರಾಹುತಿಯನಿತ್ತು ಭಾವಜ್ಞರಲಿ ಸಕಲಪುರಾಣಗಳ ಕೇಳಿ ಹೂವು ಶ್ರೀತುಲಸಿವನಗಳ ಸೇವೆಯನು ಮಾಡಿ 3 ನದನದಿಗಳಲಿ ಸ್ನಾನವನು ಮಾಡಿ ಕಂಠÀದಲಿ ಪದುಮಾಕ್ಷಿ ಶ್ರೀತುಲಸಿ ಮಾಲೆಗಳನು ಮುದದಿಂದ ಧರಿಸಿ ಮಧ್ಯಾಹ್ನ ಕಾಲದಿ ಬ್ರಹ್ಮ ಯ- ಜ್ಞ ದೇವ ಋಷಿ ಪಿತೃಗಳ ತೃಪ್ತಿಯನು ಬಡಿಸಿ4 ಸಾವಧಾನದಿ ತಂತ್ರಸಾರೋಕ್ತ ವಿಧಿಯಿಂದ ದೇವಪೂಜೆಯ ಮಾಡಿ ದೇವೇಶಗೆ ನೈವೇದ್ಯಗಳನಿಟ್ಟು ನಿತ್ಯತೃಪ್ತಗೆ ವೈಶ್ವ- ದೇವ ಬಲಿಹರಣ ಅತಿಥಿ ಪೂಜೆಗಳಿಂದ 5 ಪರಮ ಹರುಷದಿಂದ ದೇವ ಪ್ರಸಾದವನು ವರ ಮಾತೃ ಪಿತೃ ಸೋದರರು ಸಹಿತ ಪರಮ ಸಖರ ಪಂಙÂ್ತ ಪಾವನರೊಡಗೂಡಿ ನರಹರೆ ಎನುತ ಭೋಜನ ಮಾಡಿ ಮೋದಿಸುತ 6 ಸಾಯಾಹ್ನದಲಿ ಸಂಧ್ಯಾನ ಗಾಯಿತ್ರಿ ಜಪ ಶ್ರೀಯರಸನಂಘ್ರಿ ಸೇವೆಯನು ಮಾಡಿ ವಾಯುಸಖನೊಳಗಾಹುತಿಯನಿತ್ತು ಲಕ್ಷ್ಮೀನಾ- ರಾಯಣನ ಗುಣಗಳನು ಪೊಗಳುತಲಿ 7 ತನುಮನವÀ ಶ್ರೀಹರಿಯಾಧೀನವ ಮಾಡಿ ಅನುಸರಿಸಿ ಭಾಗ್ಯಬಡತನ ಎಣಿಸದೆ ಮನವರಿತು ಹರಿಕೊಟ್ಟುದು ತನ್ನದಲ್ಲದೆ ಅಧಿಕ ಅಣುಮಾತ್ರ ಬಾರದೆಂದು ಅಲ್ಪ ಸಂತುಷ್ಟನಾಗಿ8 ಈ ವಿಧದಿ ಅನುದಿನವಾಚರಿಸಿ ರಾತ್ರಿಯಲ್ಲೊಂದು ಜಾವ ಜಾವಕೆ ಎದ್ದು ನೆರೆಹೊರೆಯು ಕೇಳ್ವಂತೆ ಪಾವನ ಚರಿತ್ರ ಹಯವದನನ ನೆನೆದು 9
--------------
ವಾದಿರಾಜ
ನಲಿನಲಿದರು ದ್ವಾರಕಾಪುರದಿ ನಳಿನನಾಭ ಶ್ರೀ ರುಕ್ಮಿಣಿ ಕಲ್ಯಾಣದಿ ಪ. ಜಲರುಹಲೋಚನೆ ಚೆಲುವೆ ಶ್ರೀ ರುಕ್ಮಿಣಿ ಸಲಲಿತಾಂಗನ ನೋಡಿ ವಲುವಿನಲಿ ಕುಳಿತಿರೆ ಅ.ಪ. ಅಂಬರದಲಿ ಭೇರಿ ವಾದ್ಯಗಳೆಸಗೆ ತುಂಬುರು ನಾರದರು ಗಾನವ ಪಾಡೆ ಸಂಭ್ರಮದೊಳು ಮಾಂಗಲ್ಯ ಬಂಧನ ಮಾಡೆ ಅಂಬುಜೋದ್ಭವ ರುಕ್ಮಿಣಿ ಕಂಠದೊಳು 1 ವಿಪ್ರರು ವೇದ ಮಂತ್ರವ ಪಠಿಸೆ ಸ್ವ ಪ್ರಕಾಶ ರುಕ್ಮಿಣಿ ಕರಪಿಡಿಯೆ ಕೃಷ್ಣಾ ಅಪ್ರಮೇಯನೆಂದು ಸ್ತುತಿ ಪಾಠಕರು ಪೊಗಳೆ ಕ್ಷಿಪ್ರದಿ ವಿಪ್ರರಿಗೆ ದಕ್ಷಿಣೆ ತಾಂಬೂಲವೀಯೆ 2 ದೇವಕಿ ವಸುದೇವನಿಗ್ಹರುಷವನಿತ್ತು ದೇವ ಶ್ರೀ ಶ್ರೀನಿವಾಸ ಭಕ್ತ ಜನಾಶ್ರಿತ ಕಾವ ಸಕಲ ಜೀವರ ಹೃದಯನಿವಾಸ ದೇವ ಯಶೋದೆ ನಂದ ಕಂದನ ನೋಡಿ 3
--------------
ಸರಸ್ವತಿ ಬಾಯಿ