ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಂದೊಡನಾಡುವೆ ಎಂದರ್ಥಿಬಡುವೆ ಎಂದಿಗೆ ತಕ್ರ್ಕೈಸಿ ಸಂತೋಷಬಡುವೆ ಪ ಉತ್ಸವ ಮಂಟಪದೊಳಗೆ ಕುಳಿತು ಭಕ್ತ ವತ್ಸಲನೆಂದು ನುತಿಸಿಕೊಂಬನ ಕೂಡ 1 ಸಕಲ ಭೂಷಿತನಾಗಿ ಅಜಹರ ಸುರಮುನಿ ನಿಕರ ಕೈಯಿಂದ ಸ್ತುತಿಸಿಕೊಂಬನ ಕೂಡ 2 ಆಪೋಹಿಷ್ಠಾ ಮಯೋಭುವನೆಂಬೋ ಮಂತ್ರ ಆ ಪುರೋಹಿತರಿಂದ ಕಲಿತುಕೊಂಬನ ಕೂಡ 3 ನಾಲ್ವತ್ತುಮೂರು ಪದಂಗಳು ಮಾಡೆಂದು ಹೇಳಿದ ಹೇಮಾದ್ರಿ ಶಿಖರಾಕಾರನಕೂಡೆ 4 ದಂಡಿಗೆ ಕರೆದಲ್ಲಿ ಕೊಟ್ಟು ಅಮೃತದ ಕರ ಮಂಡೆಯಲ್ಲಿಟ್ಟ ಮಹಮಹಿಮನ ಕೂಡ 5 ಪಲ್ಲಕ್ಕಿ ಏರಿ ಪವಳಿಯ ಸುತ್ತಿ ಸರ್ರಗೆ ನಿಲ್ಲದೆ ಗುಡಿಪೊಕ್ಕ ನಿರ್ಮಳನ ಕೂಡ6 ವಾರಶನಿ ಚತುರ್ದಶಿ ಕೃಷ್ಣಪುಷ್ಯದಿ ಈ ರೀತಿಯಲಿ ಕೂಡ ಇಂದಿರೇಶನ ಕೂಡ 7 ರೌದ್ರಿ ಸಂವತ್ಸರ ಅರ್ಧರಾತ್ರಿಯಲಿ ಭದ್ರ ಮೂರುತಿಯಾದ ಭವಹರ ಕೂಡ 8 ಗುರುಪುರಂದರ ಉಪದೇಶನ ಬಲದಿಂದ ಸಿರಿ ವಿಜಯವಿಠ್ಠಲನ ಚರಣ ತಕ್ರ್ಕೈಸಿ 9
--------------
ವಿಜಯದಾಸ
ಕನಸು ಕಂಡೆನು ನಾನು ಸಂತೋಷದಿ| ಕನಸು ಕಂಡೆನು ನಾನು ಅರನಿಮಿಷದೊಳು ಹರಿಯ ಮನಸಿನಲಿ ಸ್ಮರಿಸಿ ಮಹಾರೂಪವನು ಕೂಡ ಪ ವೆಂಕಟರಮಣನ ಯಾತ್ರೆಗೆ ಹೋದ್ಹಾಗೆ ಶಂಕೆ ಇಲ್ಲದೆ ಪರಶಿಜನಕ ಕಂಡ್ಹಾಗೆ ಬಿಂಕದಿಂದಲಿ ದೇವಸ್ಥಾನ ಪವಳಿಯ ಸುತ್ತ ಅಂಕುರಾರ್ಪಣ ಧ್ವಜಸ್ತಂಭದಲಿ ನಿಂತ್ಹಾಗೆ 1 ಅಡಗಿ ಶಾಲೆಯ ಅನ್ನಪೂರ್ಣೆಯನ್ನು ಕಂಡ್ಹಾಗೆ ದೃಢದಿ ಶ್ರೀನಿವಾಸ ದೇವರ ನೋಡಿದ್ಹಾಗೆ ಕಡು ಹರುಷದಲಿ ತೊಟ್ಲ ತೀರ್ಥ ಸೇವಿಸದ್ಹಾಗೆ ಸಡಗರದ ಮಧ್ಯರಂಗದಲಿ ನಿಂತ್ಹಾಗೆ 2 ಶಿರzಲ್ಲಿ ಕಿರೀಟ ಲಲಾಟ ತಿಲಕ ವಿಟ್ಟ್ಹಾಗೆ ಕೊರಳೊಳ್ ಮುತ್ತೀನಹಾರ ಪದಕ ತೋರಿದ ಹಾಗೆ ಕರದಲ್ಲಿ ಶಂಖಚಕ್ರ ಧರಿಸಿ ಕೊಂಡಿರುವ ಹಾಗೆ ಉರದಲ್ಲಿ ಶಿರಿಲಕುಮಿ ವಾಸವಿದ್ಹಾಗೆ 3 ಹೊನ್ನ ಹೊಸ್ತಿಲ ದಾಟಿ ವಳಗ್ಹೋಗಿ ನಿಂತ್ಹಾಗೆ ಚಿನ್ಮಯನ ರೂಪವನು ಚಿಂತಿಸಿದ ಹಾಗೆ ಅನ್ನ ಪ್ರಸಾದಾತಿ ರಸದÉೂೀಶಿ ಕೊಟ್ಹಾಗೆ ಪನ್ನ ಗಾದ್ರಿ ವಾಸನ ಕಣ್ಣಿಂದ ನೋಡಿದ್ಹಾಗೆ 4 ನಡುವಿನಲಿ ಒಡ್ಯಾಣ ಪೀತಾಂಬರವನುಟ್ಹಾಗೆ ಯಡಬಲದಿ ಜಯು ವಿಜಯ ನಿಂತಿರೋಹಾಗೆ ಪೊಡವಿಯೊಳ್ 'ಹೆನ್ನೆವಿಠ್ಠಲ’ ವೆಂಕಟೇಶನ್ನ ಕಡು ಹರುಷದಲಿ ಕಂಡು ಕೈಮುಗಿದು ನಿಂತ್ಹಾಗೆ 5
--------------
ಹೆನ್ನೆರಂಗದಾಸರು
ಹರಿಯ ಪಟ್ಟದರಾಣಿ ನಿಮ್ಮ ಸಿರಿಚರಣಕ್ಕೆ ನಾ ಶರಣೆಂಬೆಧರಣಿ ಒರೆಸಮ್ಮ ದುರಿತಘಮ್ಮ ಹರಿಸುದಮ್ಮ ಪ. ಧನಧಾನ್ಯವಿತ್ತು ಮತ್ರ್ಯರ ಪೊರೆವೆ ಎಂದೆಂದುಮನೆಗಿಂಬುಕೊಟ್ಟು ರಕ್ಷಿಸಿದೆದಿನದಿನದಿ ಚರಣವಿಟ್ಟರೆ ನೊಂದುಕೊಳೆ ನಿನ್ನಗುಣಕೆ ಭೂದೇವಿ ಸರಿಗಾಣೆ ಸಕಲಮುನಿ-ಜನರ ಪೊರೆವುದು ನಿಮ್ಮಾಣೆ ನಾರಾಯಣ ಬಂದುನಿನ್ನ ಸಲಹುವ ಪ್ರವೀಣೆ1 ನಿತ್ಯ ಸಮಸ್ತಪರ್ವತಭಾರವ ನೀ ತಾಳ್ವೆಉತ್ತಮ ತ್ರಿವಿಕ್ರಮನ ರಥೋತ್ಸವವೆ ಮೊದಲಾದಪವಿತ್ರಾಂಕುರಾರ್ಪಣಕೆ ನೀ ಬಂದು ವರಿಯಸುತ್ತಿನ ಪವಳಿಯೊಳಗೆ ನಿಂದು ನಮಗೆಮುಕ್ತಿ ಪದವೀವುದಕೆ ಬಾ ಕೃಪಾಸಿಂಧು 2 ಕೊಂಡ ಸಿರಿ ಹಯವದನಹರಿಯಕರ ಕರಿಭೇರುಂಡ ಸಿರಿಗೆ ಸರಿಯೆನಿಸಿನಿನ್ನನ್ನು ಪೊರೆಯುತಲಿಹನು ಕಂಡಾ3
--------------
ವಾದಿರಾಜ
ವೃಂದಾವನದೇವಿ ನಮೋನಮೋ-ಚೆಲ್ವ-|ಮಂದರಧರನ ಮನಃ ಪ್ರಿಯಳೆ ಪನಿನ್ನ ಸೇವಿಸಿ ಉದಕವನು ಎರೆಯಲು |ಮುನ್ನ ಮಾಡಿದ ಪಾಪವಳಿಯುವುದು ||ಎನ್ನ ಇಪ್ಪತ್ತೊಂದು ಕುಲದವರಿಗೆ ಎಲ್ಲ |ಉನ್ನತ ವೈಕುಂಠಪದವೀವಳೆ 1ಒಂದೊಂದು ದಳದಲಿ ಒಂದೊಂದು ಮೂರುತಿ |ಸಂದಣಿನೆವೆ ಬಹು ಗುಪಿತದಲಿ ||ಬಂದು ಕುಂಕುಮ ಶಂಖಚಕ್ರವಿರಿಸಿದರೆ |ತಂದೆ ನಾರಾಯಣ ಕರೆದೊಯ್ಯುವ 2ಹರಿಗೆ ಅರ್ಪಿಸಿದ ತುಳಸಿ ನಿರ್ಮಾಲ್ಯವ |ಕೊರಳೊಳು ಧರಿಸಿ ಕರ್ಣದೊಳಿಟ್ಟರೆ ||ದುರಿತರಾಶಿಗಳೆಲ್ಲ ಅಂಜಿ ಓಡುವುವು ಶ್ರೀ-|ಹರಿಯು ತನ್ನವರೆಂದು ಕೈಪಿಡಿವ 3ಹತ್ತು ಪ್ರದಕ್ಷಿಣಿ ಹತ್ತು ವಂದನೆ ಮಾಡೆ |ಉತ್ತಮ ವೈಕುಂಠ ಪದವೀವಳು ||ಭಕ್ತಿಯಿಂದಲಿ ಬಂದು ಕೈಮುಗಿದವರನು |ಕರ್ತೃನಾರಾಯಣ ಕರೆದೊಯ್ವನು 4ಆವಾವ ಪರಿಯಲಿ ಸೇವೆಯ ಮಾಡಲು |ಪಾವನ ವೈಕುಂಠಪದವೀವಳೆ ||ದೇವ ಶ್ರೀಪುರಂದರವಿಠಲರಾಯನ |ದೇವಿ ನಿನ್ನ ಮುಟ್ಟಿತ್ರಾಹಿಎಂಬೆ5
--------------
ಪುರಂದರದಾಸರು