ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಶಂಭು ಶಂಕರ ನಿಜಲಿಂಗಗೆ ಮಂಗಳಕುಂಭಿನೀಧರ ಭೂಷ ಲಿಂಗಗೆ ಮಂಗಳ ||ಮಂಡೀಯನಾದಿ ವ್ಯೋಮಕೇಶಗೆ ಮಂಗಳ |ರುಂಡಮಾಲೆಧರ ಈಶಗೆ ಮಂಗಳ 1 ತ್ರಿಪುಟ ತ್ರಿಪುರ ಸಂಹಾರಗೆ ಮಂಗಳ ವಿಪರೀತ ಪರಿಜ್ಞಾನ ಹರಗೆ ಮಂಗಳ 2 ಜ್ಞಾನದಾತನು ಗುರುನಾಥಗೆ ಮಂಗಳ |ಏನೆಂಬೆ ಗುರುಕೃಪೆ ನಿತ್ಯಗೆ ಮಂಗಳ 3
ವಾಣಿಯೆ ಪುಸ್ತಕಪಾಣಿಯೆ ಮಂಗಳ ವಾಣಿಯೆ ಬ್ರಹ್ಮನ ರಾಣಿಯೆ ವಂದಿಪೆ ಪ. ವೇದವಿದಿತೇ ತವ ಪಾದವ ಸ್ಮರಿಸುವ ಸಾಧನೆಯೆಲ್ಲವ ಮೋದದಿ ಪಾಲಿಸು 1 ಎನ್ನ ನಾಲಿಗೆಯಲ್ಲಿ ಚೆನ್ನಾಗಿ ನೆಲೆಗೊಂಡು ಅನೃತ ಬಾರದೋಲ್ ಘನ್ನೆ ನೀನಾಡಿಸು 2 ಪರಮಪಾವನ ಶೇಷಗಿರಿ ವಾಸನ ನಿಜ ಶರಣರ ಕಥೆ ಪೇಳ್ವ ಪರಿಜ್ಞಾನವಿತ್ತು ನೀಂ3