ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏನಾಯಿತು ರಂಗನೆ ನೋಡಿರಮ್ಮ-ನಿ-|ಧಾನಿಸಿ ಎನಗೊಂದು ಪೇಳಿರಮ್ಮ ಪಪುಟ್ಟಿದಾರಭ್ಯ ಕಣ್ಣ ಮುಚ್ಚನಮ್ಮ-ತಾನು |ಎಷ್ಟಾದರೂ ಮೊಲೆಯುಣ್ಣನಮ್ಮ ||ಸೊಟ್ಟಾದ ಮುಖ ಮೇಲಕ್ಕೆತ್ತನಮ್ಮ-ಹೀಗೆ |ಎಷ್ಟು ಹೇಳಲಿ ಬಾಯ ಮುಚ್ಚನಮ್ಮ 1ಕಾಯಇದ್ದಂತಿದ್ದು ಹೆಚ್ಚಿತಮ್ಮ-ಹೆತ್ತ |ತಾಯಿಯ ಬಲವಿಲ್ಲದಾಯಿತಮ್ಮ ||ನೋಯೆ ನೋಟಕೆಅಬ್ಧಿಬತ್ತಿತಮ್ಮ-ಅವನ |ಬಾಯಿಯೊಳಗೆವಿಶ್ವತೋರಿತಮ್ಮ2ಅತ್ಯಂತ ಮಾತುಗಳನಾಡಿದನಮ್ಮ-ಮುಂದೆ |ಸತ್ಯವು ಕುದುರೆಯನೇರುವನಮ್ಮ ||ನಿತ್ಯನಿರ್ದೋಷಪುರಂದರವಿಠಲ ತನ್ನ-|ಭಕ್ತರ ಸಲಹುವದೇವನಮ್ಮ 3
--------------
ಪುರಂದರದಾಸರು
ದೇವರನಾಮ - ಶ್ರೀ ಸೇತುಮಾಧವ ಸ್ತೋತ್ರ62-1ಸೇತುಮಾಧವ ವಿಭುವೇ | ನಿನ್ನಯ ದಿವ್ಯವೃತತಿಜ ಪದಯುಗಳ |ಸತತ ನಂಬಿದೆ ಎನ್ನ ಹಿತದಿ ಪಾಲಿಸಿ ಸದಾಕೃತ ಕೃತ್ಯ ಧನ್ಯನ ಮಾಡಿ ಸಲಹೋ ಸ್ವಾಮಿ ಪಪುಟ್ಟಿದಾರಭ್ಯ ನಿನ್ನ | ನಾಮವ ಒಂದು |ತೃಟಿಯು ಭಜಿಸಲಿಲ್ಲವೋ |ವಿಠ್ಠಲರಾಯ ಪರಮೇಷ್ಟಿಯ ಪಿತ ಎನ್ನಕಷ್ಟಗಳಳಿದು ಸಲಹೋ ಸರ್ವೋತ್ಕøಷ್ಟ ||ಕೃಷ್ಣ ಕೃಷ್ಣಾವರದ ಅಜಮಿಳಭ್ರಷ್ಟತನವ ಎಣಿಸದೇ ಬಹುನಿಷ್ಟವಿಪ್ರಸುಧಾಮಗೊಲಿದತ್ರಿಧಾಮ ನಮೋ ಮಧ್ವೇಷ್ಟಪಾಹಿ1ಸೇತು ಸರ್ವಾಶ್ರಯನೇ | ನೀನೊಬ್ಬನೇ |ಮುಕ್ತಾ ಮುಕ್ತಾಶ್ರಯನು |ತ್ರಾತನೀನೇವೆ ಯೆಂದರಿತವರ ಭೀತಿಹರಪಾತ ಸರ್ವೋತ್ತಮ ಜಗದೇಕ ಈಶದ್ಯುಧರಾ ಪಾತಾಳ ಸರ್ವಾಧಾರನಾಗಿಹಪ್ರಭುವೇ ನಿನ್ನಯ ಅತಿ ಅಗಾಧಸುಮಹಿಮೆ ಅನಂತವು |ಮೋದಮಯ ದಶಶತಸಹಸ್ರಾನಂತರೂಪನೇ ||2ಹೀನಮಂದನು ನಾನೆಂದು | ದೂರನೀ ||ಎನ್ನ ಮಾಡದೇ ಸಲಹೋ |ಎನ್ನ ಹಿರಿಯರು ನಿನ್ನಚ್ಛನ್ನ ಭಕ್ತರೋಘನದಯಾಂಬುಧೇ ಗಂಗಾಜನಕ ಪಾವನ ನಾಮಾ |ಮನೋವಾಕ್ಕಾಯದಿ ನಿಂತು ಎನ್ನೊಳುನೀನೆ ಮಾಡಿ ಮಾಡಿಸುವುದೆಲ್ಲನಿನಗೆ ಸುಪ್ರೀತಿಯಾಗಲೋ ಮುಕ್ -ಕಣ್ಣ ವಿಧಿಪ ಶ್ರೀ ಪ್ರಸನ್ನ ಶ್ರೀನಿವಾಸ ಶ್ರೀಶ || 3
--------------
ಪ್ರಸನ್ನ ಶ್ರೀನಿವಾಸದಾಸರು
ಪ್ರಸನ್ನ ಗೋಪೀವಲ್ಲಭ ಕೃಷ್ಣ ಅಂಕಿತಪದ144ಪ್ರಸನ್ನ ಗೋಪೀವಲ್ಲಭ ಕೃಷ್ಣ ಶರಣುನೀ ಸಲಹೊ ಇವಳನ್ನು ಸುಹೃದ ಕರುಣಾಳೊ |ಬೇಸರ ವಿಲ್ಲದೆಪತಿಗುರುಸೇವಾ ಸದ್ರತಿಶ್ರೀಶ ನಿನ್ನಲಿ ಭಕ್ತಿ ಸಜ್ಞಾನ ಬೆಳೆಸೊ ಪಪುಟ್ಟಿದಾರಭ್ಯ ಬಹು ಕಷ್ಟಮೋಹದಲ್ಲಿದ್ದುನೆಟ್ಟಗೆ ಬಂದಿಹಳಿಲ್ಲಿ ನಿನ್ನ ದಯದಿಂದ |ವಿಷ್ಣು ಭಕ್ತಿ, ಜ್ಞಾನ, ವೈರಾಗ್ಯ ಆರೋಗ್ಯಇಷ್ಟ ಸಂಪತ್ತುಗಳ ಇತ್ತು ಪಾಲಿಪುದು || ಪ್ರಸನ್ನ||ನೀಪಾಲು ಬೆಣ್ಣೆಯ ಕೊಂಡು ಸುಜನರ ಕಾಯ್ದಿಗೋಪಿಕಾ ಸ್ತ್ರೀಯರ ಭಕ್ತಿಗೆ ವೊಲಿದಿ |ವಿಪ್ರಸತಿ ಪ್ರೇಮದಲಿ ಕಳುಹಿಸಿದ ಅವಲಕ್ಕಿಶ್ರೀಪನೀ ಸ್ವೀಕರಿಸಿ ಸೌಭಾಗ್ಯ ವಿತ್ತಿ 1ಸೌಂದರ್ಯಸಾರನಮೊ ಜಗದೇಕ ವಂದ್ಯ ವಿಭು,ಸತ್ಯಾ ರಕ್ಮಿಣಿಯುತನೆ ಷಣ್ಮಹಿಷಿಸೇವ್ಯ|ನಿರ್ದೋಷಗುಣಗಣಾರ್ಣವ ಸರ್ವೋತ್ತಮನಮೊಪದುಮಭವ ಪಿತ ಶ್ರೀ ಪ್ರಸನ್ನ ಶ್ರೀನಿವಾಸ 2
--------------
ಪ್ರಸನ್ನ ಶ್ರೀನಿವಾಸದಾಸರು