ನರಜನ್ಮ ವ್ಯರ್ಥವಲ್ಲವೇ | ಈ ಮೂಢರ |
ನರಜನ್ಮ ವ್ಯರ್ಥವಲ್ಲವೇ ಪ
ಗುರುಗಳ ಶರಣ್ಹೊಕ್ಕು ದಯ ಪಡಿಲಿಲ್ಲಾ |
ತರಣೋಪಾಯದ ನಿಜ ತಿಳಿದವನಲ್ಲಾ 1
ಘಟ್ಟಿಸಿ ಒಬ್ಬರ ಮನಿಯ ಮುಣಗಿಸಿ |
ಹೊಟ್ಟೆಯ ಬಿಟ್ಟನು ಅನ್ಯಾಯ ಘಳಿಸಿ 2
ಉತ್ತಮರಲ್ಲಿ ಅರಕ್ಷಣವಕ್ಕುಳ್ಳಿರನು |
ಲೆತ್ತ ಪಗಡಿಯಾಡಿ ಹೊತ್ತು ಗಳೆವನು 3
ವಾಸುದೇವನ ಸೇವೆಗಾಲಸ್ಯ ಹಿಡಿದಾ |
ಕಾಸಿನ ಆಶೆಗೆ ಎತ್ತಾಗಿ ದುಡಿವಾ 4
ಮಹಿಪತಿ ನಂದನ ಪ್ರಭುವಿನ ಮರತಾ |
ಸ್ವಹಿತದ ಹಾದಿಗೆ ಅವನು ಹೊರತಾ 5