ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪಾದ ಚಿಂತನವು ಕ್ಷಣದಲಿ ಶೋಧಿಪುದು ಮತಿಯ ತಾರಕ ಪ ಮೋದತೀರ್ಥರ ಭೇದಮತ ಅನು ವಾದ ಮಾಡಿದ ಶ್ರೀಜಯತೀರ್ಥರ ಅ.ಪ ಈ ಜಗದೊಳಗಿನ ರಾಜಕೀಯದ ಸೋಜಿಗ ಜೀವನವನೆ ತೊರೆದು ರಾಜೀವೋದ್ಭವನಯ್ಯನ ಚರಣಾಂ ಬೋಜ ನಿರತ ಯತಿರಾಜರ ತಾರಕ 1 ಕಾಕುಮತಗಳನೇಕಗಳನು ನಿ ರಾಕರಿಪ ಗ್ರಂಥಗಳನು ರಚಿಸಿ ಲೋಕೋತ್ತರನಿಗೆ ನ್ಯಾಯಸುಧೆಯಭಿ ಷೇಕವ ಮಾಡಿದ ಟೀಕಾಚಾರ್ಯರ 2 ವಿಧಿ ಫಾ ಲಾಕ್ಷನುತ ಶ್ರೀಕೃಷ್ಣನ ಪೂಜಕ ದುಷ್ಟ ಪಕ್ಷ ನಿರಾಸದಲಿ ಅತಿ ದಕ್ಷ ದೀಕ್ಷ ಅಕ್ಷೋಭ್ಯರ ಕುವರರ 3
--------------
ವಿದ್ಯಾಪ್ರಸನ್ನತೀರ್ಥರು
ಭಳಿರೆ ನಿಮ್ಮಯ ಗುಣವ ವರ್ಣಿಸಲಳವೆಜಲಧಿಸಮಗಂಭೀರ ಜಯತೀರ್ಥವರ್ಯ ಪ. ನಿನ್ನ ಕೃತಿಯೆಂಬಂಜನವ ದೃಷ್ಟಿಯೊಳಿಟ್ಟುಸನ್ನ್ಯಾಯ ವಿವೃತ್ತಿ ಮತ ಭೇದಗಳಲ್ಲಿಪನ್ನಂಗಶಯನನ ಭಕ್ತಿಯಿಂದ ಪ್ರ-ಸನ್ನವನೆ ಮಾಡಿ ಪುರುಷಾರ್ಥವೀವುದೊ 1 ಆವ ಪರಿಯಿಂದ ಅರ್ಜುನನು ರಣದೊಳು ಪೊಕ್ಕುದೇವನುದರದಿ ಕಂಡನೀ ವಿಶ್ವರೂಪಆವಂದದಿ ಗುರು ಶ್ರೀಮದಾನಂದತೀರ್ಥರಭಾವಗಳನೆ ತಿಳಿದೆ ಭಾಷ್ಯಾದಿಗಳಲಿ 2 ಬುಧರು ನಿನ್ನಯ ನ್ಯಾಯಸುಧೆಯ ಶ್ರವಣವ ಸ-ವಿದು ಉದ್ಧರಿಸಿ ಮೋಹಂಗಳ ಮುಪ್ಪುಗಳ ಕಳೆದುಒಂದಧಿಕ ಬಲದಿಂದ ಒದ್ದು ಮಾಯಿ ದಿತಿಜರನುಒದಗಿ ಕಾಮವೆಂಬ ಕ್ಷುಧೆಗಳ ಅಳಿವರೊ 3 ಮಧ್ವರಾಯರೆಂಬುದು ಮತ್ತೊಂದು ರೂಪದಲಿಇದ್ದು ನುಡಿದಂದದಲಿ ಸಿದ್ಧಾಂತವನು ನೀ ಉದ್ಧರಿಸಿ ಲೋಕದಲಿಅದ್ವೈತ ಮತದವರ ಉದ್ಯೋಗದಿಂದ ಬಲುಮುಗ್ಧರನು ಮಾಡಿದೆ4 ಬರಿದೆ ಮಾತುಗಳಿಂದ ಬಂದ ವಿದ್ಯಾರಣ್ಯನಮರುಳು ಮಾಡಿದೆ ಗ್ರಂಥsÀಕರಣದಿಂದ ಪರರನರಿಗಳನು ಮಾಡಿದಾಶ್ಚರ್ಯ ಕಾರಣಪುರುಷವರ ಹಯವದನನ ಪಾದಸರಸಿಜಭೃಂಗ 5
--------------
ವಾದಿರಾಜ