ಪ್ರಾಣೇಶನೆನ್ನೊಳಗೆ ಕೇಣವಾಂತಿಹನೇಕೆ
ಗೋಣಬಿಗಿವಂತಾಗೆ ನಾಣದೇಕೆ
ಇಲ್ಲದುದನಿವನೊಳಾಂ ಸೊಲ್ಲಿಸಿದೆನೇನಮ್ಮ
ಕಲ್ಲೆದೆಯಿದೇವೆಳ್ವೆ ನಲ್ಲನಿವಗೆ
ಕಂಡಸುದ್ದಿಯ ಪೇಳೆ ಕೆಂಡದಂತಾಗುವರೆ
ಕಂಡುದಿಲ್ಲಕ್ಕಟೀ ಭಂಡತನವ
ನ್ಯಾಯವನು ಸೂಚಿಸಲು ನೋಯುವಂತಾಡುವರೆ
ಜಾಯೆಯೊಳಗೀತೆರದನ್ಯಾಯಮರರೆ
ಕಪಟನಾಟಕ ಸೂತ್ರಧಾರನಿವನೆ
ಸುಪವಿತ್ರ ಕೇಳೆನ್ನ ಪ್ರಾಣಸಖನೆ
ತಪನವಂಶಾಬ್ಧಿ ರಾಕೇಂದುವಿವನೆ
ವಿಪುಲ ಶೇಷಾದ್ರೀಶನೆನಿಪ ವರನೆ