ನೃತ್ಯವನವಧರಿಸು ಮಾಯೆಯ ನ್ಯತ್ಯವನವಧರಿಸು ಪ
ಕೃತ್ಯವು ಶ್ರೀಹರಿ ಕಟ್ಟಳೆಯಾಗಲು ಅ.ಪ
ಸ್ವರವೆನೆ ಪ್ರಣವದ ಸೌಮ್ಯದ ನಾದವು
ಯೆರಡೊಂದೆಂದರೆ ಈಶನು ಪ್ರಕೃತಿಯು 1
ಮರ್ದಳವೆಂದರೆ ಮೊದಲ ಮಹತ್ತದು
ಮಾನಿನಿ ಮಾಯೆಯೆಂದೆನಿಪಳು2
ರಂಗವು ನಿನ್ನಯ ರತಿಕರ ನೋಟವು
ಸಂಗಿಸೆ ನಮ್ಮಯ ಶಿರದಲಿ ಕುಣಿವಳು 3
ಭಂಗಿಸಿ ಭಂಗಿಸಿ ಭವದಲಿ ಮೆಟ್ಟುತ
ಹಿಂಗದ ರೀತಿಗೆ ಹೀಗಾಡುವಳು4
ಮುಂಗುಡಿಯೆಂದರೆ ಮೊದಲಹಂಕಾರವು
ತೊಂಗುತ ಭೂತಂಗಳ ಸಾಗಿಪುದು 5
ಮೊದಲಿನ ಕೊನೆಗಳು ಮಾತ್ರೆಗಳೈದವು
ವೊದಗಿದ ಭೂತಗಳೊಡಲಾಗುವವು 6
ನಡದೀ ಕೊನೆಗಳು ನೂಕುತ ಬೆಳೆಯಲು
ನೆಡುವವು ವೃಕ್ಷದ ನಿಡುಬೇರುಗಳು 7
ಒಡೆದಾ ಭೂತಗಳೊಂದೊಂದೈದವು
ಬಿಡದವ ಬೆರಸುತ ಬಹುವಾಗುವವು 8
ಇಂತೀ ಲೋಕಗಳೀರೇಳೆಂತಲು
ನಿಂತೇ ಕುಣಿವಳು ನಿನ್ನಯ ಮಾಯೆಯು 9
ಆಗಲು ಪ್ರಾಣಿಗಳಮಿತಗಳಿವರೊಳು
ಭೋಗದ ಬಯಕೆಯೆ ಬಹು ರಾಗಗಳು10
ಲಯೆಗಳು ಕ್ರಿಯೆಗಳು ಲೋಕಗಳತಿಗಳುನಿಯಿಮಿಸಿ ತಿರುಪತಿ ನಾಯಕ ನಿಂತವು11