ಹೋದುದಿನ್ಯಾರಿಗೆ ಹೇಳೋಣ
ಹೊಲಮೆದ್ದರಾರಿಗೆ ಹೇಳೋಣ ಪ
ಎದ್ದನು ದುರ್ಜನ ಬಿದ್ದಬಿನುಗು ಪ್ರಜೆ ಉದ್ದ
ಗುದ್ದಗಳೆಲ್ಲ ಸಮನಾಯಿತು
ಇದ್ದ ಹೆಣ್ಮಕ್ಕಳ ಮೈಮೇಲಕೆ ಒಂದು
ಉದ್ದಿನ ಕಾಳಷ್ಟು ಚಿನ್ನಗಳಿಲ್ಲ 1
ಕಂಚು ತಾಮ್ರವು ಮಾರಿಹೋಯಿತು
ಕೊಂಚ ತಣ್ಣೀರ ಕೊಳ್ಳಲಿಕ್ಕಿಲ್ಲ
ಸಂಚ ಕಾರವು ಪ್ರಾಣಕಾಯಿತು ನಾವಿನ್ನು
ಪಂಚತ್ವವ ನ್ನೈದಿದರೊಳ್ಳಿತು ಎಂಬರು 2
ಭೂರಿ ಹೇಮರಜತಗಳ ಮಾರಿಯಾಯಿತು
ಭಾರಿ ತೆರಿಗೆ ಶ್ರಮಸೀಮೆ ಪ್ರಜೆಗಳಿಗಾಯ್ತು
ಭೀಮನ ಕೋಣೆ ಲಕ್ಷ್ಮೀರಮಣನ ನಂಬಿ
ಭಿಕ್ಷೆಗೆ ಮನವ ತಾಳಿರಣ್ಣ 3